Jammu Kashmir Election Results 2024: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​​ನಲ್ಲಿ ಗೆದ್ದು ಬೀಗಿದ ಸಿಪಿಎಂ ನಾಯಕ ತರಿಗಾಮಿ

ಸಿಪಿಎಂ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ತರಿಗಾಮಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರಳಿ ಪಡೆಯಲು ಒತ್ತು ನೀಡಿದರು. ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳೂ ಅವರ ಗೆಲುವಿಗೆ ಕಾರಣವಾಗಿವೆ. ಅವರ ಗೆಲುವು ನಿಶ್ಚಿತವಾಗಿತ್ತು. ಇಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ತರಿಗಾಮಿಗೆ ಬೆಂಬಲ ನೀಡಿದ್ದವು.

Jammu Kashmir Election Results 2024: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​​ನಲ್ಲಿ ಗೆದ್ದು ಬೀಗಿದ ಸಿಪಿಎಂ ನಾಯಕ ತರಿಗಾಮಿ
ಎಂವೈ ತರಿಗಾಮಿ
Follow us
|

Updated on: Oct 08, 2024 | 9:00 PM

ಶ್ರೀನಗರ ಅಕ್ಟೋಬರ್ 08: ಸಂಪೂರ್ಣ ರಾಜ್ಯತ್ವಕ್ಕಾಗಿ ಪ್ರಚಾರ ಮಾಡಿದ ಮತ್ತು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಮೇಲೆ ಕೇಂದ್ರದ ದೌರ್ಜನ್ಯದ ಬಗ್ಗೆ ಮಾತನಾಡಿದ ಸಿಪಿಎಂ (CPM) ನಾಯಕ ಎಂವೈ ತರಿಗಾಮಿ (MY Tarigami) ಅವರು ನಿಷೇಧಿತ ಜಮಾತ್-ಎ-ಇಸ್ಲಾಮಿ (JI) ಸದಸ್ಯ ಸಯರ್ ಅಹ್ಮದ್ ರೇಶಿ ಅವರನ್ನು 7,800 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಕುಲ್ಗಾಮ್ (Kulgam) ಕ್ಷೇತ್ರದಿಂದ ಐದನೇ ಬಾರಿಗೆ ಗೆದ್ದಿದ್ದಾರೆ. ತರಿಗಾಮಿ ಅವರು 33,634 ಮತಗಳನ್ನು ಪಡೆದಿದ್ದು 7,838 ಅಂತರದಿಂದ ಗೆದ್ದು ಗೆಲುವಿನ ನಗೆ ಬೀರಿದ್ದಾರೆ. ಚುನಾವಣೆಯಲ್ಲಿ ಅವರ ಸಮೀಪದ ಪ್ರತಿಸ್ಪರ್ಧಿ ರೇಶಿ 25,796 ಮತಗಳನ್ನು ಪಡೆದಿದ್ದಾರೆ. ಈ ಗೆಲುವಿನ ಮೂಲಕ ಸಿಪಿಎಂ ನಾಯಕ 1996 ರಿಂದ ಈ ಸ್ಥಾನದಿಂದ ಸತತವಾಗಿ ಗೆದ್ದಿದ್ದಾರೆ.

ಸಿಪಿಎಂ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ತರಿಗಾಮಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರಳಿ ಪಡೆಯಲು ಒತ್ತು ನೀಡಿದರು. ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳೂ ಅವರ ಗೆಲುವಿಗೆ ಕಾರಣವಾಗಿವೆ. ಅವರ ಗೆಲುವು ನಿಶ್ಚಿತವಾಗಿತ್ತು. ಇಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ತರಿಗಾಮಿಗೆ ಬೆಂಬಲ ನೀಡಿದ್ದವು.

ಕೆಂಪು ಧ್ವಜಗಳನ್ನು ಹೊತ್ತ ದ್ವಿಚಕ್ರವಾಹನಗಳೊಂದಿಗೆ ತೆರೆದ ವಾಹನದಲ್ಲಿ ಸಂಚರಿಸಿದ ಅವರ ಪ್ರಚಾರವು ಗಮನಾರ್ಹ ಗಮನ ಸೆಳೆಯಿತು. ಕಾಶ್ಮೀರಿ ಯುವಕರಲ್ಲಿ ತೀವ್ರ ನಿರುದ್ಯೋಗ ಮತ್ತು ಸೇಬು ರೈತರು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ರಾಷ್ಟ್ರೀಯ ವಿಷಯಗಳ ಮೇಲೆ ಅವರು ತಮ್ಮ ಅಭಿಯಾನವನ್ನು ನಡೆಸಿದ್ದರು.

ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮತ್ತು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಅವರನ್ನು ತಿಂಗಳುಗಳ ಕಾಲ ಗೃಹಬಂಧನದಲ್ಲಿರಿಸಲಾಗಿತ್ತು. ಸುಪ್ರೀಂಕೋರ್ಟ್‌ನ ಅನುಮತಿಯೊಂದಿಗೆ, ಆಗಿನ ಸಿಪಿಎಂ ಪ್ರಧಾನ ಕಾರ್ಯದರ್ಶಿ ದಿವಂಗತ ಸೀತಾರಾಮ್ ಯೆಚೂರಿ ಅವರು ತರಿಗಾಮಿ ಅವರನ್ನು ಅವರ ನಿವಾಸಕ್ಕೆ ಭೇಟಿ ಮಾಡಿ ಕಾಶ್ಮೀರಿಗಳ ದುಃಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು.

ತರಿಗಾಮಿ ಅವರು ನವದೆಹಲಿಗೆ ಆಗಮಿಸಿದ ನಂತರ, ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ರಾಜ್ಯತ್ವವನ್ನು ಮರುಸ್ಥಾಪಿಸಲು ಬಲವಾಗಿ ಪ್ರತಿಪಾದಿಸಿದರು, ಇದು ರಾಷ್ಟ್ರೀಯ ಗಮನವನ್ನು ಸೆಳೆಯಿತು.

ವೋ, ಜೋ ತರಿಂಗಂ ವಾಲಾ ಎಂಬ ಪ್ರಶ್ನೆಯಿಂದ ಬದಲಿತು ಹೆಸರು

ಪತ್ರಿಕಾಗೋಷ್ಠಿಯಲ್ಲಿ, ಸುದ್ದಿ ಸಂಸ್ಥೆಯೊಂದರ ಪತ್ರಕರ್ತ ಮೊಹಮ್ಮದ್ ಯೂಸುಫ್ ಬಂಧನದ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಅವರಲ್ಲಿ ಕೇಳಿದ್ದರು. ಆಗ ಶೇಖ್ ಅಬ್ದುಲ್ಲಾ “ವೋ ಜೋ, ತರಿಗಂ ವಾಲಾ?” (ತರಿಗಂನವರಾ?) ಎಂದು ಮರು ಪ್ರಶ್ನೆ ಮಾಡಿದ್ದರು. ಅಂದಿನಿಂದ, ಮಾಧ್ಯಮಗಳು ಮೊಹಮ್ಮದ್ ಯೂಸುಫ್ ಹುಟ್ಟಿದ ಹಳ್ಳಿಯ ಹೆಸರನ್ನೇ ಅವರ ಹೆಸರಿನ ಜತೆ ಸೇರಿಸಿ ಮೊಹಮ್ಮದ್ ಯೂಸುಫ್ ತರಿಗಾಮಿ ಎಂದು ಬರೆಯಲು ಪ್ರಾರಂಭಿಸಿದವು.

ರೈತ ಕುಟುಂಬದಲ್ಲಿ ಜನಿಸಿದ ತರಿಗಾಮಿ ಅವರ ಬಾಲ್ಯವು ಕಷ್ಟದಿಂದ ಕೂಡಿದ್ದಾಗಿತ್ತು. ಅದಕ್ಕೆ ಕಾಶ್ಮೀರದಲ್ಲಿ ಆಗ ಇದ್ದ ರಾಜಕೀಯ ಅಸ್ಥಿರತೆಯೇ ಮುಖ್ಯ ಕಾರಣ. ಸಂಘರ್ಷದಿಂದ ಕೂಡಿದ ಜೀವನದಲ್ಲಿ ಅವರಿಗೆ ತಮ್ಮ ಬಿಎ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 1975 ರಲ್ಲಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅವರ ಗರ್ಭಿಣಿ ಪತ್ನಿ ಅವರು ರಾಜಕೀಯ ಕೈದಿಯಾಗಿದ್ದಾಗ ನಿಧನರಾದರು. ಇದರ ಬೆನ್ನಲ್ಲೇ ಸರ್ಕಾರ ಅವರಿಗೆ ಒಂದು ತಿಂಗಳ ಪೆರೋಲ್ ನೀಡಿದೆ. ಆದಾಗ್ಯೂ, ಕೇವಲ ಮೂರು ದಿನಗಳ ನಂತರ ಅವರನ್ನು ಮತ್ತೆ ಬಂಧಿಸಲಾಯಿತು.

ಜನಪ್ರಿಯ ನಾಯಕ

ಸಿಪಿಎಂನ ಮಾಜಿ ರಾಜ್ಯ ಕಾರ್ಯದರ್ಶಿಯಾಗಿದ್ದ ತರಿಗಾಮಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಲೆಕ್ಕವಿಲ್ಲದಷ್ಟು ಕ್ರೂರ ಚಿತ್ರಹಿಂಸೆಗಳನ್ನು ಎದುರಿಸಿದರು. ಮಾಜಿ ಸಿಪಿಎಂ ನಾಯಕ ಅಬ್ದುಲ್ ಕಬೀರ್ ವಾನಿಯ ಪ್ರಭಾವದಿಂದ ಅವರು ಕಮ್ಯುನಿಸ್ಟ್ ಆದರು. 18 ನೇ ವಯಸ್ಸಿನಲ್ಲಿ, ಅವರು, ಅವರ ಸ್ನೇಹಿತ ಮತ್ತು ಪ್ರಸ್ತುತ ಸಿಪಿಎಂ ರಾಜ್ಯ ಕಾರ್ಯದರ್ಶಿ ಗುಲಾಂ ನಬಿ ಮಲಿಕ್ ಅವರನ್ನು ಅನಂತನಾಗ್ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ಬಂಧಿಸಲಾಯಿತು.

ನಂತರ ಅವರು ಸ್ಥಳೀಯ ಕಮ್ಯುನಿಸ್ಟ್ ಗುಂಪಿನ ಕ್ರಾಂತಿಕಾರಿ ವಿದ್ಯಾರ್ಥಿಗಳು ಮತ್ತು ಯುವ ಒಕ್ಕೂಟದ ಭಾಗವಾದರು. ರೈತ ಮುಖಂಡ ಅಬ್ದುಲ್ ಖಾದ್ರಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದ ವಿವಿಧ ರೈತ ಪ್ರತಿಭಟನೆಗಳಲ್ಲಿ ತರಿಗಾಮಿ ಭಾಗವಹಿಸಿದ್ದರು. ಸಿಪಿಎಂಗೆ ಸೇರಿದ ನಂತರ ಅವರು ಹಿರಿಯ ನಾಯಕ ರಾಮ್ ಪ್ಯಾರೆ ಸರ್ರಾಫ್‌ಗೆ ನಿಕಟರಾದರು ಮತ್ತು ಅವರ ಆಪ್ತರಾದರು.

1967 ರಲ್ಲಿ ಬಲವಂತದ ಅಕ್ಕಿ ಸಂಗ್ರಹಣೆಗೆ ವಿರುದ್ಧವಾಗಿ ರೈತರ ಹಕ್ಕುಗಳ ಹೋರಾಟಕ್ಕಾಗಿ ಜೈಲುವಾಸ ಅನುಭವಿಸಿದಾಗ ತರಿಗಾಮಿ ಅವರ ರಾಜಕೀಯ ಜೀವನವು ಮಹತ್ವದ ತಿರುವು ಪಡೆಯಿತು. ಒಂದು ಅವಧಿಯವರೆಗೆ, ಅವರು ನಕ್ಸಲೈಟ್ ಗುಂಪಿನ ಸಿಪಿಐ ಮಾರ್ಕ್ಸ್‌ವಾದಿ-ಲೆನಿನಿಸ್ಟ್‌ನೊಂದಿಗೆ ಕೆಲಸ ಮಾಡಿದರು ಮತ್ತು ಜೈಲಿನಲ್ಲಿ ಕ್ರೂರ ಚಿತ್ರಹಿಂಸೆ ಅನುಭವಿಸಿದರು.

ಇದನ್ನೂ ಓದಿ: ಹರ್ಯಾಣ ಚುನಾವಣೆ: ಕಾಂಗ್ರೆಸ್ ಕೈಯಿಂದ ಜಾರಿದ ಜಾಟ್, ಜಿಲೇಬಿ

2005 ರಲ್ಲಿ ಆಗಿನ ಶಿಕ್ಷಣ ಸಚಿವ ಗುಲಾಂ ನಬಿ ಲೋನ್ ಅವರು ಶ್ರೀನಗರದ ತುಳಸಿಬಾಗ್ ಪ್ರದೇಶದ ನಿವಾಸದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಕೊಲ್ಲಲ್ಪಟ್ಟರು. ತರಿಗಾಮಿ ಅವರ ಮನೆಗೂ ಹೊಂಚು ಹಾಕಲಾಗಿದ್ದು, ಅಪ್ರಚೋದಿತ ಗುಂಡಿನ ದಾಳಿಯಿಂದ ಬದುಕುಳಿದರು. ಕೃಷಿ ಭೂಮಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿಸಲು ದೇಶಾದ್ಯಂತದ ಜನರಿಗೆ ಅವಕಾಶ ನೀಡುವ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದ್ದು ಗಮನಾರ್ಹವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!