AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸದ ವಿಚಾರಕ್ಕೆ ಜಗಳ, ಪಕ್ಕದ ಮನೆ ಮಹಿಳೆಯ ತಲೆ ಕತ್ತರಿಸಿದ ವ್ಯಕ್ತಿ

ಕಸದ ವಿಚಾರದಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆ ತಲೆ ಕತ್ತರಿಸಿರುವ ಘಟನೆ ಜಾರ್ಖಂಡ್​ನ ಡುಮ್ಕಾದಲ್ಲಿ ನಡೆದಿದೆ. ಸಣ್ಣ ವಿಚಾರಕ್ಕೆ ಯುವಕನೊಬ್ಬ ಮಹಿಳೆಯ ಶಿರಚ್ಛೇದ ಮಾಡಿ, ಆಕೆಯ ಪತಿಯ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ, ಸ್ಥಿತಿ ಗಂಭೀರವಾಗಿದೆ. ಆರೋಪಿ ಫುಲ್ಚಂದ್ ಸಾಹ್ ಅಪರಾಧವನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಕಬ್ರಿಸ್ತಾನ್ ರಸ್ತೆಯ ಬಳಿಯ ಕೆವತ್ಪಾರದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ನಡೆದಿದೆ, ಅಕ್ಕಪಕ್ಕದ ಮನೆಯವರಾದ ವಿಮಲಾ ದೇವಿ ಮತ್ತು ರಾಗ್ನಿ ಝಾ ನಡುವಿನ ದ್ವೇಷವು ಉಲ್ಬಣಗೊಂಡಿತ್ತು.

ಕಸದ ವಿಚಾರಕ್ಕೆ ಜಗಳ, ಪಕ್ಕದ ಮನೆ ಮಹಿಳೆಯ ತಲೆ ಕತ್ತರಿಸಿದ ವ್ಯಕ್ತಿ
ಕ್ರೈಂ Image Credit source: Adobe Stock
ನಯನಾ ರಾಜೀವ್
|

Updated on:May 15, 2025 | 2:30 PM

Share

ಜಾರ್ಖಂಡ್​, ಮೇ 15: ಕಸದ ವಿಚಾರ ತಾರಕಕ್ಕೇರಿ ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆ ತಲೆ ಕತ್ತರಿಸಿರುವ ಘಟನೆ ಜಾರ್ಖಂಡ್​ನ ಡುಮ್ಕಾದಲ್ಲಿ ನಡೆದಿದೆ. ಸಣ್ಣ ವಿಚಾರಕ್ಕೆ ಯುವಕನೊಬ್ಬ ಮಹಿಳೆಯ ಶಿರಚ್ಛೇದ ಮಾಡಿ, ಆಕೆಯ ಪತಿಯ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ, ಸ್ಥಿತಿ ಗಂಭೀರವಾಗಿದೆ. ಆರೋಪಿ ಫುಲ್ಚಂದ್ ಸಾಹ್ ಅಪರಾಧವನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.

ಕಬ್ರಿಸ್ತಾನ್ ರಸ್ತೆಯ ಬಳಿಯ ಕೆವತ್ಪಾರದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ನಡೆದಿದೆ, ಅಕ್ಕಪಕ್ಕದ ಮನೆಯವರಾದ ವಿಮಲಾ ದೇವಿ ಮತ್ತು ರಾಗ್ನಿ ಝಾ ನಡುವಿನ ದ್ವೇಷವು ಉಲ್ಬಣಗೊಂಡಿತ್ತು. ಪೊಲೀಸ್ ವರದಿಗಳ ಪ್ರಕಾರ, ಹೊಸದಾಗಿ ನಿರ್ಮಿಸಲಾದ ಪಿಸಿಸಿ ರಸ್ತೆಯಲ್ಲಿ ಕಸ ಎಸೆಯುವ ವಿಚಾರದಲ್ಲಿ ಇಬ್ಬರೂ ಆಗಾಗ ಜಗಳವಾಡುತ್ತಿದ್ದರು. ಬುಧವಾರ, ವಾಗ್ವಾದ ಭುಗಿಲೆದ್ದಿತು, ವಿಮಲಾ ಅವರ ಪತಿ, ಶಿಕ್ಷಕ ಮನೋಜ್ ಸಿಂಗ್ ಅವರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದಾಗ ಜಗಳ ತೀವ್ರವಾಗಿತ್ತು.

ಫುಲ್ಚಂದ್ ಸಾಹ್ ತನ್ನ ತಂದೆ ಲಾಲ್ಚಂದ್ ಸಾಹ್ ಮತ್ತು ಇಬ್ಬರು ಸಹೋದರರೊಂದಿಗೆ ಸ್ಥಳಕ್ಕೆ ಬಂದಾಗ ಪರಿಸ್ಥಿತಿ ಮತ್ತಷ್ಟು ಹೆದಗೆಟ್ಟಿತ್ತು, ಕೋಪದ ಭರದಲ್ಲಿ, ಫುಲ್ಚಂದ್ ಕತ್ತಿಯನ್ನು ಹೊರತೆಗೆದು ವಿಮಲಾ ದೇವಿಯ ಮೇಲೆ ಹಲ್ಲೆ ನಡೆಸಿ, ಒಂದೇ ಏಟಿನಿಂದ ಆಕೆಯ ತಲೆಯನ್ನು ಕತ್ತರಿಸಿ ಹಾಕಿದ್ದಾನೆ. ನಂತರ ಮನೋಜ್ ಸಿಂಗ್ ಮೇಲೆ ದಾಳಿ ಮಾಡಿ ತೀವ್ರ ಗಾಯಗಳನ್ನು ಮಾಡಿದ್ದಾನೆ.

ಇದನ್ನೂ ಓದಿ
Image
ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ:ಪ್ರಾಣಕಳೆದುಕೊಂಡ ಪ್ರಿಯಕರ
Image
ತನ್ನ ಕುಟುಂಬ ಸದಸ್ಯರು, ಪ್ರೇಯಸಿ ಸೇರಿ ಐವರನ್ನು ಕೊಂದ ಅಫಾನ್
Image
ಪ್ರಿಯಕರ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ
Image
ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಪ್ರಿಯಕರ ದುರಂತ ಸಾವು!

ಮತ್ತಷ್ಟು ಓದಿ: ಮಣಿಪುರ: ವ್ಯಕ್ತಿಯ ಶಿರಚ್ಛೇದ, ಹಲವು ಮನೆಗಳಿಗೆ ಬೆಂಕಿ ಹಚ್ಚಿದ ಗುಂಪು

ಮನೋಜ್‌ಗೆ ಆಳವಾದ ಗಾಯಗಳಾಗಿದ್ದು, ಹೆಚ್ಚಿನ ಪ್ರಮಾಣದ ರಕ್ತ ನಷ್ಟವಾಗಿದೆ. ಅವರನ್ನು ಫುಲೋ ಜಾನೋ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಫುಲ್ಚಂದ್ ಸ್ಥಳದಿಂದ ಪರಾರಿಯಾಗಿದ್ದನು ಆದರೆ ನಂತರ ದುಮ್ಕಾದ ನಗರ ಠಾಣಾದಲ್ಲಿ ಶರಣಾದನು, ಅಲ್ಲಿ ಅವನನ್ನು ವಶಕ್ಕೆ ಪಡೆಯಲಾಯಿತು. ದಾಳಿಗೆ ಬಳಸಿದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡರು ಮತ್ತು ವಿಮಲಾ ದೇವಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ತನಿಖೆ ಮುಂದುವರೆದಿದ್ದು, ಕ್ರೂರ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿದೆ.

ಆಸ್ಪತ್ರೆಯಿಂದ ಮಾತನಾಡಿದ ಮನೋಜ್ ಸಿಂಗ್, ತಮ್ಮ ಪತ್ನಿ ಮತ್ತು ರಾಗ್ನಿ ಝಾ ನಡುವಿನ ಜಗಳದ ಬಗ್ಗೆ ಮಾತನಾಡಿದ್ದಾರೆ. ಫುಲ್ಚಂದ್ ಮತ್ತು ಅವರ ಕುಟುಂಬವು ಝಾ ಅವರನ್ನು ಬೆಂಬಲಿಸುತ್ತಿತ್ತು. ಘಟನೆಯನ್ನು ಪ್ರತ್ಯಕ್ಷದರ್ಶಿಯಾಗಿದ್ದ ವಿಮಲಾ ದೇವಿಯ ಮಗಳು, ಅಪಾಯದಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಅಡಗಿಕೊಂಡಿದ್ದಾಗಿ ಹೇಳಿದ್ದಾರೆ.

ಇಷ್ಟೊಂದು ಸಣ್ಣ ವಿವಾದವು ಇಷ್ಟೊಂದು ಭಯಾನಕ ಘಟನೆಗೆ ಕಾರಣವಾಗಬಹುದು ಎಂದು ತಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾಳೆ. ಈ ಘಟನೆಯು ಸಮುದಾಯದಲ್ಲಿ ಭಯವನ್ನು ಹುಟ್ಟುಹಾಕಿದೆ, ಪೊಲೀಸರು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲು ಮತ್ತು ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:27 pm, Thu, 15 May 25