AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನನ್ನು ಕಳೆದುಕೊಂಡರೆ ಆಗುವ ನೋವು ಎಂಥದ್ದೆಂದು ನನಗೆ ಅರ್ಥವಾಗುತ್ತದೆ; ರಾಹುಲ್​ ಗಾಂಧಿಗೆ ಸ್ಪಂದಿಸಿದ ಬಿಜೆಪಿ ಸಂಸದ

ದೆಹಲಿ: ನಿನ್ನೆ (ಜನವರಿ 2) ಸಂಸತ್ತು ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು. ಅದು ಬಿಜೆಪಿ ಸಂಸದ ಕಮಲೇಶ್​ ಪಾಸ್ವಾನ್​ ಮತ್ತು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯ (Congress Leader Rahul Gandhi) ನಡುವಿನ ಒಂದು ಸನ್ನಿವೇಶ.  ಬಜೆಟ್​ ಅಧಿವೇಶನಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ ಕೋವಿಂದ್​ ಮಾಡಿದ್ದ ಭಾಷಣದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ದೇಶದ ಎಲ್ಲ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುತ್ತಿದ್ದೀರಿ. ಇದಕ್ಕೆ […]

ಅಪ್ಪನನ್ನು ಕಳೆದುಕೊಂಡರೆ ಆಗುವ ನೋವು ಎಂಥದ್ದೆಂದು ನನಗೆ ಅರ್ಥವಾಗುತ್ತದೆ; ರಾಹುಲ್​ ಗಾಂಧಿಗೆ ಸ್ಪಂದಿಸಿದ ಬಿಜೆಪಿ ಸಂಸದ
ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್​ ಮತ್ತು ರಾಹುಲ್​ ಗಾಂಧಿ
TV9 Web
| Updated By: Lakshmi Hegde|

Updated on:Feb 03, 2022 | 11:16 AM

Share

ದೆಹಲಿ: ನಿನ್ನೆ (ಜನವರಿ 2) ಸಂಸತ್ತು ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು. ಅದು ಬಿಜೆಪಿ ಸಂಸದ ಕಮಲೇಶ್​ ಪಾಸ್ವಾನ್​ ಮತ್ತು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯ (Congress Leader Rahul Gandhi) ನಡುವಿನ ಒಂದು ಸನ್ನಿವೇಶ.  ಬಜೆಟ್​ ಅಧಿವೇಶನಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ ಕೋವಿಂದ್​ ಮಾಡಿದ್ದ ಭಾಷಣದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ದೇಶದ ಎಲ್ಲ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುತ್ತಿದ್ದೀರಿ. ಇದಕ್ಕೆ ಖಂಡಿತ ಸೂಕ್ತ ಪ್ರತಿಕ್ರಿಯೆ ಪಡೆಯುತ್ತೀರಿ ಎಂದು ಎಚ್ಚರಿಕೆ ನೀಡಿದರು.  ಅಷ್ಟೇ ಅಲ್ಲ,  ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂದಿರಾ ಗಾಂಧಿ) 32 ಗುಂಡೇಟು ತಿಂದರು. ನನ್ನ ತಂದೆ (ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ)ಯವರ ದೇಹವೂ ಛಿದ್ರವಾಗಿ ಹೋಯಿತು. ಆ ನೋವು ಏನೆಂದು ನನಗೆ ಗೊತ್ತು. ನೀವು ಅನಗತ್ಯವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತೀದ್ದೀರಿ. ಇದನ್ನು ನೀವು ಇಲ್ಲಿಗೆ ನಿಲ್ಲಿಸದೆ ಇದ್ದರೆ, ಸಮಸ್ಯೆಯನ್ನು ಸೃಷ್ಟಿಸುತ್ತೀರಿ ಎಂದು ಹೇಳಿದರು.  ನಿನ್ನೆ ಸಂಸತ್ತಿನಲ್ಲಿ ಮಾತನಾಡಿದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ದೇಶೀಯ ನೀತಿಗಳು ಮತ್ತು ವಿದೇಶಿ ನೀತಿಗಳು ದೋಷಪೂರಿತವಾಗಿವೆ. ಇದರಿಂದಾಗಿಯೇ ಚೀನಾ-ಪಾಕಿಸ್ತಾನ ದೇಶಗಳು ಒಟ್ಟಾಗಿ ಭಾರತದ ಮೇಲೆ ಆಕ್ರಮಣ ಮಾಡುವಂತಾಗುತ್ತಿದೆ ಎಂದು ಆರೋಪಿಸಿದರು.  

ರಾಹುಲ್​ ಗಾಂಧಿಯ ಈ ಮಾತುಗಳಿಗೆ ಸ್ಪಂದಿಸಿ, ಪ್ರತಿಕ್ರಿಯೆ ನೀಡಿದ ಬಿಜೆಪಿ ಎಂಪಿ ಕಮಲೇಶ್​ ಪಾಸ್ವಾನ್​, ನನಗೆ ತಂದೆಯನ್ನು ಕಳೆದುಕೊಂಡವರ ನೋವು ಎಂಥದ್ದು ಎಂಬುದು ಅರ್ಥವಾಗುತ್ತದೆ. ನನ್ನ ತಂದೆಯನ್ನೂ ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ. ರಾಹುಲ್​ ಗಾಂಧಿ ಹೇಳುತ್ತಿದ್ದಾರೆ ಅವರ ತಂದೆಯನ್ನು ಕೊಲ್ಲಲಾಯಿತು ಎಂದು. ಹಾಗೇ, ನನ್ನ ತಂದೆಯವರನ್ನೂ ರ್ಯಾಲಿಯಲ್ಲಿ ಹತ್ಯೆಮಾಡಲಾಯಿತು. ಆ ಸಂದರ್ಭದಲ್ಲಿ ಆಗುವ ಶಾಕ್​, ನೋವು, ದುಃಖ ಏನೆಂಬುದು ನನಗೆ ಗೊತ್ತು ಎಂದು ಹೇಳಿದರು. ಕಮಲೇಶ್​ ಪಾಸ್ವಾನ್​ ತಂದೆ ಓಂ ಪ್ರಕಾಶ್​ ಪಾಸ್ವಾನ್​. ಅವರು ಉತ್ತರಪ್ರದೇಶದ ಮಣಿರಾಮ್​ ಕ್ಷೇತ್ರದ ಶಾಸಕರಾಗಿದ್ದರು. 1996ರಲ್ಲಿ ಬನ್ಸ್​ಗಾಂವ್​​ನಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕಮಲೇಶ್​ ಪಾಸ್ವಾನ್​​ ತಮ್ಮ ಮಾತಿಗೆ ಸ್ಪಂದಿಸಿದ ಬಳಿಕ ಮತ್ತೆ ಮಾತನಾಡಿದ ರಾಹುಲ್ ಗಾಂಧಿ, ಪಾಸ್ವಾನ್​ ಜಿ ಅವರಿಗೆ ದಲಿತರ ನೋವು ಗೊತ್ತು. 3 ಸಾವಿರ ವರ್ಷಗಳಿಂದ ದಲಿತರನ್ನು ತುಳಿಯುತ್ತಿರುವವರು ಯಾರೆಂಬುದು ಅವರಿಗೆ ತಿಳಿದಿದೆ. ಆದರೆ ಅದನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ನನಗೆ ಅವರ ಬಗ್ಗೆ ಹೆಮ್ಮೆಯಿದೆ.  ನನ್ನೊಂದಿಗೆ ಅವರು ಹೃತ್ಪೂರ್ವಕವಾಗಿ ಮಾತನಾಡಿದರು. ಆದರೆ ಅವರು ಇರಬೇಕಾದ ಪಕ್ಷ ಬಿಜೆಪಿಯಲ್ಲ ಎಂದು ಹೇಳಿದರು.  ಮತ್ತೆ ರಾಹುಲ್ ಗಾಂಧಿಯವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಪಾಸ್ವಾನ್​,  ನಾನು ಬಿಜೆಪಿಯಲ್ಲಿ ಇರಬಾರದಿತ್ತು ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ನೆನಪಿರಲಿ, ನಾನು ರಾಹುಲ್​ ಗಾಂಧಿಯವರ ಮಾತುಗಳಿಗೆ ಪ್ರತಿಕ್ರಿಯೆ ಕೊಡಲು ಸಾಧ್ಯವಾಗಿದ್ದು ನಾನು ಸಂಸದನಾಗಿದ್ದಕ್ಕೆ. ನನ್ನ ಬಿಜೆಪಿ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್​ ನೀಡಿದ್ದಕ್ಕೆ ನಾನೂ ಮೂರು ಬಾರಿ ಸಂಸದನಾದೆ. ಇನ್ನೂ ಹೆಚ್ಚಿನದನ್ನು ಪಕ್ಷದಿಂದ ಬಯಸುವುದು ಯಾಕಾಗಿ? ಎಂದು ಹೇಳಿದರು.

ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು; ಪತ್ನಿ ಸ್ಥಳದಲ್ಲೇ ಜಲಸಮಾಧಿ -ಪತಿ ಪಾರು

Published On - 9:58 am, Thu, 3 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ