ಪುಣೆ: ಹೆದ್ದಾರಿಯ ಹೋಟೆಲ್​ ಬಳಿ ಕೊಯ್ತಾ ಗ್ಯಾಂಗ್​ ಲೀಡರ್​ ಅವಿನಾಶ್​ ಧನ್ವೆಯನ್ನು ಗುಂಡಿಕ್ಕಿ ಹತ್ಯೆ

ಪುಣೆ-ಸೋಲಾಪುರ ಹೆದ್ದಾರಿಯ ಹೋಟೆಲ್​ ಬಳಿ ದುಷ್ಕರ್ಮಿಗಳು ಕೊಯ್ತಾ ಗ್ಯಾಂಗ್​ ಲೀಡರ್​ ಅವಿನಾಶ್​ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಊಟ ಮಾಡುತ್ತಿದ್ದಾಗ ಐವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ಪುಣೆ: ಹೆದ್ದಾರಿಯ ಹೋಟೆಲ್​ ಬಳಿ ಕೊಯ್ತಾ ಗ್ಯಾಂಗ್​ ಲೀಡರ್​ ಅವಿನಾಶ್​ ಧನ್ವೆಯನ್ನು ಗುಂಡಿಕ್ಕಿ ಹತ್ಯೆ
ಕೊಯ್ತಾ ಗ್ಯಾಂಗ್​ ಲೀಡರ್ ಹತ್ಯೆ
Follow us
|

Updated on: Mar 18, 2024 | 2:05 PM

ಕೊಯ್ತಾ ಗ್ಯಾಂಗ್​ ಲೀಡರ್​ ಅವಿನಾಶ್​ ಧನ್ವೆಯನ್ನು ಪುಣೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಹೋಟೆಲ್​ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವಿನಾಶ್ ಇಂದಾಪುರ ಬಳಿಯ ಪುಣೆ-ಸೋಲಾಪುರ ಹೆದ್ದಾರಿಯಲ್ಲಿರುವ ರಸ್ತೆ ಬದಿಯ ಹೋಟೆಲ್​ನಲ್ಲಿ ಇತರ ಮೂವರೊಂದಿಗೆ ಊಟ ಮಾಡುತ್ತಿದ್ದಾಗ ಜನರ ಗುಂಪೊಂದು ಗುಂಡಿಕ್ಕಿ ಹತ್ಯೆ ಮಾಡಿದೆ. ಮೃತರನ್ನು ಆಳಂದಿ ಮೂಲದ ಅವಿನಾಶ ಬಾಲು ಧನ್ವೆ (34) ಎಂದು ಗುರುತಿಸಲಾಗಿದೆ.

ನಗರದಿಂದ ಸುಮಾರು 150 ಕಿಮೀ ದೂರದಲ್ಲಿರುವ ಪುಣೆ-ಸೋಲಾಪುರ ರಸ್ತೆಯಲ್ಲಿರುವ ಜಗದಂಬಾ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇಂದಾಪುರ ಪೊಲೀಸರ ಪ್ರಕಾರ, ಧನ್ವೆ ತನ್ನ ಮೂರ್ನಾಲ್ಕು ಸಹಚರರೊಂದಿಗೆ ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಢರಪುರಕ್ಕೆ ತೆರಳುತ್ತಿದ್ದ.

ಸಂಜೆ ಇಂದಾಪುರ ಬಳಿಯ ಪುಣೆ-ಸೋಲಾಪುರ ರಸ್ತೆಯಲ್ಲಿರುವ ಜಗದಂಬಾ ಹೋಟೆಲ್‌ನಲ್ಲಿ ತಂಗಿದ್ದರು. ಇಬ್ಬರು ಆರೋಪಿಗಳು ಬಂದೂಕುಗಳನ್ನು ಮರೆಮಾಚುವ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡು ಹೊಟೇಲ್ ಒಳಗೆ ಪ್ರವೇಶಿಸಿದ್ದಾರೆ. ಯಾವುದೇ ಭಯವಿಲ್ಲದೆ ಅವರು ಧನ್ವೆ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ.

ಮತ್ತಷ್ಟು ಓದಿ: ಜೋರು ಸೌಂಡ್​ ಇಟ್ಟು ಅಂಗಡಿಯಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಹಲ್ಲೆ: ಮೂವರ ಬಂಧನ

ಗುಂಡು ಹಾರಿಸಿದ ನಂತರ ಐದರಿಂದ ಆರು ಮಂದಿ ಒಳ ನುಗ್ಗಿ ಕೊಯ್ತ ಮತ್ತಿತರ ಕಬ್ಬಿಣದ ಆಯುಧಗಳಿಂದ ಧನ್ವೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹೋಟೆಲ್ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ದಾಖಲಾಗಿದೆ.

ಪ್ರಕರಣದ ಆರೋಪಿಗಳ ಪತ್ತೆಗೆ ಪುಣೆ ಗ್ರಾಮಾಂತರ ಪೊಲೀಸರು ಐದು ತಂಡಗಳನ್ನು ರಚಿಸಿದ್ದಾರೆ. ಸಂಬಂಧಿತ ಸೆಕ್ಷನ್‌ಗಳಡಿ ಇಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ