AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಲ್ಪದರಲ್ಲೇ ತಪ್ಪಿತು ದೊಡ್ಡ ದುರಂತ; ಹಳಿ ಬಿಟ್ಟು ಪ್ಲಾಟ್​ಫಾರ್ಮ್​​ ಮೇಲೆ ನುಗ್ಗಿದ ರೈಲು, ನೀರಿನ ಅಂಗಡಿ ಧ್ವಂಸ

ಲೋಕೋ ಕ್ಯಾಬಿನ್​​ನಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಬ್ರೇಕ್​ ಫೇಲ್ ಆಯಿತು ಎಂದು ಲೋಕೋಪೈಲಟ್​ ಹೇಳಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ತನಿಖೆ ನಡೆಯಲಿದೆ ಎಂದು ಪಿಆರ್​ಒ ತಿಳಿಸಿದ್ದಾರೆ.

ಸ್ವಲ್ಪದರಲ್ಲೇ ತಪ್ಪಿತು ದೊಡ್ಡ ದುರಂತ; ಹಳಿ ಬಿಟ್ಟು ಪ್ಲಾಟ್​ಫಾರ್ಮ್​​ ಮೇಲೆ ನುಗ್ಗಿದ ರೈಲು, ನೀರಿನ ಅಂಗಡಿ ಧ್ವಂಸ
ಪ್ಲಾಟ್​ಫಾರ್ಮ್​ಗೆ ಡಿಕ್ಕಿ ಹೊಡೆದ ರೈಲು
TV9 Web
| Edited By: |

Updated on:Apr 25, 2022 | 10:38 AM

Share

ಲೋಕಲ್​ ಟ್ರೇನ್​ವೊಂದು ಪ್ಲಾಟ್​ಫಾರ್ಮ್​​​ಗೆ ನುಗ್ಗಿ, ಅದರ ತುದಿಯಲ್ಲಿ ಇದ್ದ ಬಫರ್​​ಗೆ ಡಿಕ್ಕಿ ಹೊಡೆದ ಘಟನೆ ಚೆನ್ನೈನ ಬೀಚ್​ ರೈಲ್ವೆ ಸ್ಟೇಶನ್​​ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಪ್ಲಾಟ್​ಫಾರ್ಮ್​​ನ ಮೇಲಿದ್ದ ಐಆರ್​ಸಿಟಿಸಿಗೆ ಸೇರಿದ ನೀರು ಮಾರಾಟ ಅಂಗಡಿಗೆ ಹಾನಿಯಾಗಿದೆ. ಅಂದಹಾಗೇ, ಇದೊಂದು ಸಬ್​ಅರ್ಬನ್​ (ಅಲ್ಲೇ ಸ್ಥಳೀಯವಾಗಿ ಸಂಚರಿಸುವ) ರೈಲಾಗಿದ್ದು, ಘಟನೆ ನಡೆದಾಗ ಅದರೊಳಗೆ ಪ್ರಯಾಣಿಕರು ಇರಲಿಲ್ಲ. ಆದರೆ ಪ್ಲಾಟ್​ಫಾರ್ಮ್​ ಮೇಲೆ ಒಂದಷ್ಟು ಮಂದಿ ನಿಂತಿದ್ದರು ಎಂದು ವರದಿಯಾಗಿದೆ.  ಇದೊಂದು ಎಲೆಕ್ಟ್ರಿಕಲ್​ ಮಲ್ಟಿಪಲ್​ ಯುನಿಟ್​ ಆಗಿದ್ದು,  ಬೀಚ್​ ಸ್ಟೇಶನ್​​ನಿಂದ ಹೊರಟ ಸಂದರ್ಭದಲ್ಲಿ ರೈಲಿನಲ್ಲಿ ವಿದ್ಯುತ್​ ಅಡಚಣೆಯುಂಟಾಗಿ ಬ್ರೇಕ್​ ಫೇಲ್​ ಆಗಿದ್ದರಿಂದ ಹೀಗಾಯಿತು. ಸಂಜೆ ಸುಮಾರು 4.25ರ ಹೊತ್ತಿಗೆ ಘಟನೆ ನಡೆದಿದೆ. ಲೋಕೋ ಪೈಲಟ್ ಶಂಟರ್ ಶಂಕರ್ ಎಂಬುವರು ರೈಲು ಚಾಲನೆ ಮಾಡುತ್ತಿದ್ದರು ಎಂದು ರೈಲ್ವೆ ಪೊಲೀಸ್​ ತಿಳಿಸಿದ್ದಾರೆ.

ಈ ರೈಲು  ಬೀಚ್​ ಸ್ಟೇಶನ್​​ನಿಂದ  ಚೆಂಗಲ್ಪಟ್ಟುವಿಗೆ ಹೋಗಬೇಕಿತ್ತು. ಸಂಜೆ 4.35ರ ಹೊತ್ತಿಗೆ ಬೀಚ್​ ಸ್ಟೇಶನ್​​ ಬಿಡಬೇಕಿತ್ತು. ಹಾಗೇ, ರೈಲು ನಿಧಾನಕ್ಕೆ ಚಲಿಸುತ್ತಿತ್ತು. ಪ್ಲಾಟ್​ಫಾರ್ಮ್​ನ ತುತ್ತತುದಿಗೆ ಹೋಗುವಷ್ಟರಲ್ಲಿ ಲೋಕೊ ಪೈಲಟ್​ ಶಂಕರ್​ ನಿಯಂತ್ರಣ ಕಳೆದುಕೊಂಡರು. ಒಮ್ಮೆಲೇ ರೈಲಿನ ವೇಗ ಜಾಸ್ತಿ ಆಗಿ ಪ್ಲಾಟ್​ಫಾರ್ಮ್​ಗೆ ಹೊಡೆಯಿತು. ಹೀಗಾಗಿ ರೈಲಿನ ಮೊದಲ ಕೋಚ್​ (ಮೋಟಾರ್​ ಕೋಚ್​) ಪ್ಲಾಟ್​ಫಾರ್ಮ್​​ ಮೇಲೆ ಹತ್ತಿತು. ಟ್ರೇಲರ್​ ಕೋಚ್​ ಪ್ಲಾಟ್​ಫಾರ್ಮ್​ ಗೋಡೆಗೆ ಹೊಡೆಯಿತು. ಶಂಕರ್​ ರೈಲಿನಿಂದ ಜಿಗಿದು ಪಾರಾದರು. ಅವರಿಗೆ ಯಾವುದೇ ಗಾಯವಾಗಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆದ ಬಳಿಕ ರೈಲು ಸಂಚಾರದಲ್ಲಿ ಅಡಚಣೆಯಾಗಿಲ್ಲ. ಎಂದಿನಂತೆ ರೈಲು ಸಂಚಾರ ನಡೆದಿದೆ. ಲೋಕೋ ಕ್ಯಾಬಿನ್​​ನಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಬ್ರೇಕ್​ ಫೇಲ್ ಆಯಿತು ಎಂದು ಲೋಕೋಪೈಲಟ್​ ಹೇಳಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ತನಿಖೆ ನಡೆಯಲಿದೆ. ಹಾಗೇ, ಬೀಚ್​ ಸ್ಟೇಶನ್​​ನಲ್ಲಿ ಹಾಳಾದ ಪ್ಲಾಟ್​ಫಾರ್ಮ್​ ರಿಪೇರಿ ಕಾರ್ಯವೂ ನಡೆಯುತ್ತಿದೆ ಎಂದು ದಕ್ಷಿಣ ರೈಲ್ವೆ ಚೆನ್ನೈ ವಿಭಾಗದ ಪಿಆರ್​ಒ ಎಲುಮಲೈ ತಿಳಿಸಿದ್ದಾರೆ.  ನಿನ್ನೆ ಭಾನುವಾರ ಆಗಿದ್ದರಿಂದ ಜನರೂ ಕಡಿಮೆಯಿದ್ದರು. ಆದರೆ ಬೇರೆ ವಾರಗಳಲ್ಲಿ ಪ್ಲಾಟ್​ಫಾರ್ಮ್​​ನಲ್ಲಿ, ಅದರಲ್ಲೂ ಐಆರ್​ಸಿಟಿಸಿಯ ನೀರಿನ ಅಂಗಡಿ ಬಳಿ ತುಂಬ ಜನ ಇರುತ್ತಾರೆ. ಅಪಘಾತ ಆಗುವ ಸಂದರ್ಭದಲ್ಲಿ ರೈಲು ತುಂಬ ನಿಧಾನವಾಗಿ ಸಂಚರಿಸುತ್ತಿತ್ತು ಎಂದು ಘಟನೆ ವೇಳೆ ಸ್ಥಳದಲ್ಲಿದ್ದ ಜನರು ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Stock Market Updates: ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ ತಲ್ಲಣ; ಟಾಟಾ ಸ್ಟೀಲ್ ಷೇರು ತಲಾ 50 ರೂ. ಕುಸಿತ

Published On - 10:37 am, Mon, 25 April 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ