AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಯೋಗಿ ಆದಿತ್ಯನಾಥ್ ಆದೇಶ; ದೇಗುಲ, ಮಸೀದಿಗಳಲ್ಲಿ ಹಾಕಲಾಗಿದ್ದ ಧ್ವನಿವರ್ಧಕಗಳನ್ನೆಲ್ಲ ತೆಗೆಯುತ್ತಿರುವ ಪೊಲೀಸರು

ಕಳೆದ ಕೆಲವು ದಿನಗಳಿಂದಲೂ ವಿವಿಧ ಠಾಣೆಗಳ ಪೊಲೀಸರು ಟ್ವಿಟರ್​​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ದೇಗುಲ, ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನು ಖುದ್ದಾಗಿ ಪೊಲೀಸರೇ ತೆಗೆದು ಹಾಕುತ್ತಿರುವುದನ್ನು ನೋಡಬಹುದು.

ಸಿಎಂ ಯೋಗಿ ಆದಿತ್ಯನಾಥ್ ಆದೇಶ; ದೇಗುಲ, ಮಸೀದಿಗಳಲ್ಲಿ ಹಾಕಲಾಗಿದ್ದ ಧ್ವನಿವರ್ಧಕಗಳನ್ನೆಲ್ಲ ತೆಗೆಯುತ್ತಿರುವ ಪೊಲೀಸರು
ಉತ್ತರ ಪ್ರದೇಶದಲ್ಲಿ ಧ್ವನಿವರ್ಧಕ ತೆರವು ಅಭಿಯಾನ
TV9 Web
| Edited By: |

Updated on: Apr 27, 2022 | 4:16 PM

Share

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆದೇಶದಂತೆ, ರಾಜ್ಯಾದ್ಯಂತ ಧಾರ್ಮಿಕ ಪ್ರದೇಶಗಳಲ್ಲಿ ಹಾಕಲಾಗಿದ್ದ ನೂರಾರು ಧ್ವನಿವರ್ಧಕಗಳನ್ನು ತೆಗೆಯಲಾಗಿದೆ ಮತ್ತು ಸಾವಿರಾರು ಲೌಡ್​ಸ್ಪೀಕರ್​​ಗಳ ಶಬ್ದಗಳನ್ನು ನಿಯಂತ್ರಿಸಲಾಗಿದೆ ಎಂದು ಆ ರಾಜ್ಯದ ಪೊಲೀಸರು ತಿಳಿಸಿದ್ದಾರೆ. ಈಗಂತೂ ಬಹುತೇಕ ರಾಜ್ಯಗಳಲ್ಲಿ ಹನುಮಾನ್ ಚಾಲೀಸಾ-ಆಜಾನ್​, ಧ್ವನಿವರ್ಧಕ ಗಲಾಟೆಯೇ ಹೆಚ್ಚಾಗಿದೆ. ಅದರಲ್ಲೂ ದೆಹಲಿಯ ಜಹಾಂಗೀರ್​ಪುರಿಯಲ್ಲಿ ಹನುಮಜಯಂತಿ ಮೆರವಣಿಗೆಯಂದು ಗಲಭೆ ನಡೆದ ಮೇಲೆ ಉತ್ತರ ಪ್ರದೇಶ ಮುಖ್ಯಮಂತ್ರಿ ಸಭೆ ನಡೆಸಿ ಹೀಗೊಂದು ಖಡಕ್​ ಆದೇಶ ನೀಡಿಬಿಟ್ಟಿದ್ದರು. ಕೆಲವು ಧಾರ್ಮಿಕ ಪ್ರದೇಶಗಲ್ಲಿ ಅಕ್ರಮವಾಗಿ ಧ್ವನಿವರ್ಧಕಗಳನ್ನು ಹಾಕಲಾಗಿದೆ. ಹಾಗೇ, ಇನ್ನೂ ಕೆಲವು ಕಡೆಗಳಲ್ಲಿ ಅನುಮತಿ ಪಡೆದು ಹಾಕಿದ್ದರೂ ನಿಗದಿತ ಡೆಸಿಬಲ್​ಗಿಂತ ಜಾಸ್ತಿ ಶಬ್ದ ಬರುವಂತೆ ಇಡಲಾಗಿದೆ. ಅಕ್ರಮವಾಗಿ ಹಾಕಿರುವ ಲೌಡ್​ಸ್ಪೀಕರ್​ ತೆಗೆದು ಹಾಕಬೇಕು ಮತ್ತು ಉಳಿದ ಧ್ವನಿವರ್ಧಕಗಳ ಶಬ್ದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಮತ್ತು, ಇನ್ಯಾರಿಗೂ ಮೈಕ್​ ಅಳವಡಿಸಿಕೊಳ್ಳಲು ಹೊಸದಾಗಿ ಅವಕಾಶ ನೀಡಬಾರದು ಎಂದೂ ಹೇಳಿದ್ದರು.

ಬರುವ ತಿಂಗಳು ಮುಸ್ಲಿಮರ ಈದ್​ ಮತ್ತು ಹಿಂದುಗಳ ಅಕ್ಷಯ ತೃತೀಯಾ ಹಬ್ಬಗಳು ಬಹುತೇಕ ಒಟ್ಟಿಗೇ ನಡೆಯುತ್ತವೆ. ಈ ಹೊತ್ತಲ್ಲಿ ಯಾವುದೇ ಕೋಮು ಗಲಭೆಗೆ ಅವಕಾಶ ಕೊಡಬಾರದು ಎಂದು ಯೋಗಿ ಆದಿತ್ಯನಾಥ್​ ಸೂಚಿಸಿದ್ದಾರೆ. ಇನ್ನು ಧ್ವನಿವರ್ಧಕಗಳನ್ನು ಧಾರ್ಮಿಕ ಪ್ರದೇಶಗಳಿಂದ ತೆಗೆದು ಹಾಕುವ ಬಗ್ಗೆ, ವಿವಿಧ ಧಾರ್ಮಿಕ ಮುಖಂಡರ ಬಳಿ ಚರ್ಚಿಸಲಾಗಿದ್ದು, ಈಗ ಪೊಲೀಸರು ಅವುಗಳನ್ನು ತೆಗೆದು ಹಾಕುವ ಮತ್ತು ಶಬ್ದ ನಿಯಂತ್ರಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ವಿವಿಧ ಠಾಣೆಗಳ ಪೊಲೀಸರು ಟ್ವಿಟರ್​​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ದೇಗುಲ, ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನು ಖುದ್ದಾಗಿ ಪೊಲೀಸರೇ ತೆಗೆದು ಹಾಕುತ್ತಿರುವುದನ್ನು ನೋಡಬಹುದು. ಯುಪಿ ಪೊಲೀಸರ ಈ ಕ್ರಮವನ್ನು ಹಲವು ಧಾರ್ಮಿಕ ಮುಖಂಡರು ಹೊಗಳಿದ್ದಾರೆ. ಇನ್ನು ಮದುವೆ ಮನೆಗಳಲ್ಲಿ, ಧಾರ್ಮಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ಇಡುವವರು ಶಬ್ದದ ಪ್ರಮಾಣ ಎಷ್ಟಿಡಬೇಕು ಎಂಬುದನ್ನೂ ಪೊಲೀಸರು ನಿಗದಿಪಡಿಸಿ, ಆ ಸಂಬಂಧ ಕರಪತ್ರಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ: IPL 2022: ಈ ಐಪಿಎಲ್​ನಲ್ಲಿ ಮುಂಬೈ- ಚೆನ್ನೈ ಕಳಪೆ ಪ್ರದರ್ಶನ ನೀಡಲು ಕಾರಣವೇನು ಗೊತ್ತಾ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ