AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಸ್ತೆಯಲ್ಲಿ ವಿಶ್ರಾಂತಿಗಾಗಿ ಮಲಗಿದ ಹೆಬ್ಬುಲಿ; ಅರ್ಧ ಗಂಟೆ ಚಂದ್ರಾಪುರ ಹೆದ್ದಾರಿ ಬಂದ್

 'ಮಾಮಾ ಮೆಲ್' ಎಂಬ ಹೆಸರಿನ ಹುಲಿ ಮಹಾರಾಷ್ಟ್ರದ ಚಂದ್ರಾಪುರ-ಮುಲ್ ರಾಷ್ಟ್ರೀಯ ಹೆದ್ದಾರಿ 930ರಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಮಲಗಿತ್ತು. ಅಗಡಿ ಫೈರ್‌ಲೈನ್ ಪ್ರದೇಶದಲ್ಲಿ ನಡೆದ ಈ ಘಟನೆಯಿಂದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ತಡೋಬಾ ಬಫರ್ ವಲಯದ ಬಳಿಯಿರುವ ಈ ಪ್ರದೇಶವು ವನ್ಯಜೀವಿಗಳ ಆವಾಸಸ್ಥಾನಕ್ಕೆ ಹೆಸರುವಾಸಿಯಾಗಿದೆ. ಎತ್ತುಗಳನ್ನು ಬೇಟೆಯಾಡಿದ ನಂತರ ಆ ಹುಲಿ ರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿತ್ತು.

ನಡುರಸ್ತೆಯಲ್ಲಿ ವಿಶ್ರಾಂತಿಗಾಗಿ ಮಲಗಿದ ಹೆಬ್ಬುಲಿ; ಅರ್ಧ ಗಂಟೆ ಚಂದ್ರಾಪುರ ಹೆದ್ದಾರಿ ಬಂದ್
Tiger Sleeping On Road In Chandrapur
ಸುಷ್ಮಾ ಚಕ್ರೆ
|

Updated on: Nov 27, 2025 | 3:22 PM

Share

ಮುಂಬೈ, ನವೆಂಬರ್ 27: ಮಹಾರಾಷ್ಟ್ರದ (Maharashtra) ಚಂದ್ರಾಪುರ- ಮುಲ್ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹುಲಿಯೊಂದು (Tiger) ಮಲಗಿತ್ತು. ಎರಡು ಎತ್ತುಗಳನ್ನು ಬೇಟೆಯಾಡಿದ ಬಳಿಕ ಆ ಹುಲಿ ಹೈವೇಯಲ್ಲೇ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಈ ಪ್ರದೇಶವು ತಡೋಬಾ-ಅಂಧಾರಿ ಹುಲಿ ಮೀಸಲು ಪ್ರದೇಶದ (ಟಿಎಟಿಆರ್) ಬಫರ್ ವಲಯಕ್ಕೆ ಹೊಂದಿಕೊಂಡಿರುವುದರಿಂದ, ವನ್ಯಜೀವಿಗಳು ಇಲ್ಲಿ ಯಾವಾಗಲೂ ಓಡಾಡುತ್ತಿರುತ್ತವೆ.

‘ಮಾಮಾ ಮೆಲ್’ ಎಂಬ ಈ ಹುಲಿ ತನ್ನ ದಿಟ್ಟ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ ಅವುಗಳ ಶಬ್ದ, ಜನರ ಗಲಾಟೆಯ ಬಗ್ಗೆ ತಲೆಕೆಡಿಸಿಕೊಳ್ಳದ ಈ ಹುಲಿ ತನ್ನಷ್ಟಕ್ಕೆ ತಾನು ಆರಾಮಾಗಿ ರಸ್ತೆಯ ಮಧ್ಯೆ ಮಲಗಿತ್ತು. ಈ ಹುಲಿ ಹೆದ್ದಾರಿಯ ಸಮೀಪದಲ್ಲಿ ಎರಡು ಎತ್ತುಗಳನ್ನು ಬೇಟೆಯಾಡಿತ್ತು. ಬೇಟೆಯಾಡಿದ ನಂತರ ಆ ಪ್ರದೇಶದಲ್ಲಿ ಸುತ್ತಾಡುತ್ತಿತ್ತು. ಬಳಿಕ ಹೆದ್ದಾರಿಯ ಮಧ್ಯದಲ್ಲಿ ವಿಶ್ರಾಂತಿ ಪಡೆಯಲು ಕುಳಿತಿತು.

ಹುಲಿ ರಸ್ತೆಯ ಮಧ್ಯದಲ್ಲಿ ಶಾಂತವಾಗಿ ಕುಳಿತಿದ್ದರಿಂದ, ಚಂದ್ರಾಪುರದಿಂದ ಮುಲ್‌ಗೆ ಮತ್ತು ಮುಲ್‌ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳು ಎರಡೂ ಬದಿಗಳಲ್ಲಿ ನಿಂತವು. ಸುಮಾರು ಅರ್ಧ ಗಂಟೆಗಳ ಕಾಲ ಸಂಚಾರವನ್ನು ನಿಲ್ಲಿಸಬೇಕಾಯಿತು. ಅರಣ್ಯ ಅಧಿಕಾರಿಗಳು ವಾಹನಗಳು ಮತ್ತು ಹುಲಿಯ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು, ರಸ್ತೆಯಲ್ಲಿ ಅನಗತ್ಯ ಜನಸಂದಣಿ ಇರದಂತೆ ನೋಡಿಕೊಂಡರು. ಹುಲಿಯನ್ನು ಓಡಿಸುವ ಬದಲು, ಅದು ತಾನಾಗಿಯೇ ಕಾಡಿಗೆ ಹೋಗುತ್ತದೆಯೇ ಎಂದು ಕಾದು ಕುಳಿತರು. ಸುಮಾರು ಅರ್ಧ ಗಂಟೆ ಸದ್ದಿಲ್ಲದೆ ಕುಳಿತ ನಂತರ ಆ ಹುಲಿ ರಸ್ತೆಯಿಂದ ಎದ್ದು ತನ್ನಷ್ಟಕ್ಕೆ ತಾನೇ ಕಾಡಿನ ಕಡೆಗೆ ನಡೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More