AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕಾನೂನುಗಳ ವರದಿಯನ್ನು ಬಹಿರಂಗಗೊಳಿಸಿ: ಮುಖ್ಯ ನ್ಯಾಯಮೂರ್ತಿಗೆ ಸಮಿತಿ ಸದಸ್ಯರ ಪತ್ರ

ಸಮಿತಿಯ ಸದಸ್ಯನಾಗಿ ವಿಶೇಷವಾಗಿ ರೈತ ಸಮುದಾಯವನ್ನು ಪ್ರತಿನಿಧಿಸುತ್ತಾ ರೈತರು ಪ್ರಸ್ತಾಪಿಸಿದ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಮತ್ತು ಆಂದೋಲನ ಮುಂದುವರಿದಿದೆ ಎಂದು ನನಗೆ ನೋವಾಗಿದೆ" ಎಂದು ರೈತ ಗುಂಪು ಶೆಟಕರಿ ಸಂಘಟನೆಯ ಸದಸ್ಯರಾದ ಘನ್ವತ್ ಬರೆದಿದ್ದಾರೆ.

ಕೃಷಿ ಕಾನೂನುಗಳ ವರದಿಯನ್ನು ಬಹಿರಂಗಗೊಳಿಸಿ: ಮುಖ್ಯ ನ್ಯಾಯಮೂರ್ತಿಗೆ ಸಮಿತಿ ಸದಸ್ಯರ ಪತ್ರ
ಎನ್​.ವಿ.ರಮಣ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Sep 07, 2021 | 5:53 PM

Share

ದೆಹಲಿ: ಕೃಷಿ ಕಾನೂನುಗಳ (farm laws) ಕುರಿತು ಸುಪ್ರೀಂಕೋರ್ಟ್ (Supreme Court)  ನೇಮಿಸಿದ ಸಮಿತಿಯ ಸದಸ್ಯರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ (NV Ramana) ಅವರಿಗೆ ಪತ್ರ ಬರೆದಿದ್ದು ಈ ವಿಷಯದ ಕುರಿತು ಸಲ್ಲಿಸಿದ ವರದಿಯನ್ನುಬಹಿರಂಗಗೊಳಿಸಬೇಕೆಂದು ಕೋರಿದರು. ಸಮಿತಿಯು ತನ್ನ ವರದಿಯನ್ನು ಈ ವರ್ಷದ ಮಾರ್ಚ್‌ನಲ್ಲಿ ಸಲ್ಲಿಸಿತ್ತು. “ವರದಿಗೆ ಗೌರವಾನ್ವಿತ ಸುಪ್ರೀಂಕೋರ್ಟ್ ಯಾವುದೇ ಗಮನ ನೀಡಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಸಮಿತಿಯಲ್ಲಿ ರೈತ ಸಮುದಾಯವನ್ನು ಪ್ರತಿನಿಧಿಸಲು ನಾಮನಿರ್ದೇಶನಗೊಂಡ ಅನಿಲ್ ಘನ್ವತ್ (Anil Ghanwat)ಬರೆದಿದ್ದಾರೆ. ಹರ್ಯಾಣದ ಕರ್ನಾಲ್‌ನಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಪೋಲಿಸ್ ಲಾಠಿ ಪ್ರಹಾರದ ನಂತರ ರೈತರು ನಡೆಸಿದ ದೀರ್ಘ ಚಳುವಳಿಯ ಉಲ್ಬಣಗೊಳ್ಳುವಿಕೆಯ ನಡುವೆಯೇ ಘನ್ವತ್ ಅವರ ಪತ್ರ ಬಂದಿದೆ. ಕರ್ನಾಲ್ ನಲ್ಲಿ ಇಂದು ರೈತರು ಮತ್ತು ಆಡಳಿತದ ನಡುವೆ ಮಾತುಕತೆ ನಡೆಸಿದ್ದಾರೆ . ರೈತರು ಯೋಜಿಸಿದ ಕಿಸಾನ್ ಮಹಾಪಂಚಾಯತ್ ನಡೆಸದಂತೆ ಆಡಳಿತವು ದೊಡ್ಡ ಕೂಟಗಳನ್ನು ನಿಷೇಧಿಸುವ ನಿಷೇಧದ ಆದೇಶಗಳನ್ನು ವಿಧಿಸಿದೆ. ಆದರೆ ರೈತರು ಬಿಟ್ಟುಕೊಡಲು ಸಿದ್ಧರಿಲ್ಲ. ಇಡೀ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಈ ವರ್ಷ ಜನವರಿಯಲ್ಲಿ ದೇಶದಾದ್ಯಂತ ಪ್ರತಿಭಟನೆಗಳನ್ನು ಆರಂಭಿಸಿದ ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿತು ಮತ್ತು ಕಾನೂನುಗಳ ಬಗ್ಗೆ ವರದಿ ಮಾಡಲು ಸಮಿತಿಯನ್ನು ರಚಿಸಿತ್ತು.

ಸಮಿತಿಯ ಸದಸ್ಯನಾಗಿ ವಿಶೇಷವಾಗಿ ರೈತ ಸಮುದಾಯವನ್ನು ಪ್ರತಿನಿಧಿಸುತ್ತಾ ರೈತರು ಪ್ರಸ್ತಾಪಿಸಿದ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಮತ್ತು ಆಂದೋಲನ ಮುಂದುವರಿದಿದೆ ಎಂದು ನನಗೆ ನೋವಾಗಿದೆ” ಎಂದು ರೈತ ಗುಂಪು ಶೆಟಕರಿ ಸಂಘಟನೆಯ ಸದಸ್ಯರಾದ ಘನ್ವತ್ ಬರೆದಿದ್ದಾರೆ.

ಸಮಿತಿಯು ಎಲ್ಲಾ ಪಾಲುದಾರರಿಂದ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಒಳಗೊಂಡಿದೆ ಮತ್ತು ವರದಿಯು “ರೈತರ ಎಲ್ಲಾ ಆತಂಕಗಳನ್ನು” ಪರಿಹರಿಸಿದೆ ಎಂದು ಅವರು ಹೇಳಿದರು. “ಈ ಶಿಫಾರಸುಗಳು ಈಗ ನಡೆಯುತ್ತಿರುವ ರೈತರ ಆಂದೋಲನವನ್ನು ಪರಿಹರಿಸಲು ದಾರಿ ಮಾಡಿಕೊಡುತ್ತದೆ ಎಂದು ಸಮಿತಿ ವಿಶ್ವಾಸ ಹೊಂದಿದೆ” ಎಂದು ಅವರು ವರದಿಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಕೋರಿದರು.

“ಗೌರವಾನ್ವಿತ ಸುಪ್ರೀ ಕೋರ್ಟ್‌ಗೆ ವಿನಮ್ರವಾಗಿ ಮನವಿ ಮಾಡುತ್ತೇನೆ, ಅದರ ಶಿಫಾರಸುಗಳ ಅನುಷ್ಠಾನಕ್ಕಾಗಿ ವರದಿಯನ್ನು ಶಾಂತಿಯುತವಾಗಿ ಪರಿಹರಿಸುವ ಮೂಲಕ ರೈತರ ತೃಪ್ತಿಗಾಗಿ ಬಿಡುಗಡೆ ಮಾಡಿ” ಎಂದು ಅವರು ಹೇಳಿದರು.

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ರೈತರ ಗುಂಪು ಇಂದಿನ ಪ್ರತಿಭಟನೆಗಳಿಗೆ ಕರೆ ನೀಡಿತು. ಕಾನೂನುಗಳನ್ನು ರದ್ದುಗೊಳಿಸುವುದರ ಜೊತೆಗ ಅವರು ಪ್ರತಿಭಟನಾಕಾರರ ತಲೆಗೆ ಹೊಡೆಯಲು ಪೋಲಿಸರಿಗೆ ಆದೇಶಿಸಿದ ಕರ್ನಾಲ್ ನ ಐಎಎಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೋರಿದರು. ಆಗಸ್ಟ್ 28 ರಂದು ರೈತರ ಮೇಲೆ ಪೊಲೀಸ್ ನಡೆಸಿದ ಲಾಠಿ ಪ್ರಹಾರದಲ್ಲಿ ಹತ್ತು ಜನರು ಗಾಯಗೊಂಡರು.

ಇದನ್ನೂ ಓದಿ: Karnal Kisan Mahapanchayat ಕರ್ನಾಲ್ ತಲುಪಿದ ಹರ್ಯಾಣದ ರೈತರು; ಬೃಹತ್ ಪ್ರತಿಭಟನೆಗೆ ಮುನ್ನ ಎಸ್​​ಕೆಎಂ ಮುಖಂಡರನ್ನು ಚರ್ಚೆಗೆ ಕರೆದ ಜಿಲ್ಲಾಡಳಿತ

ಇದನ್ನೂ ಓದಿ: Haryana: ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ; ಪಾದಯಾತ್ರೆ ಹೊರಟ ರೈತ ಪ್ರತಿಭಟನಾಕಾರರು- ಮುಖ್ಯಾಂಶಗಳು ಇಲ್ಲಿದೆ

( Make Farm Laws Report Public Supreme Court appointed panel Member written to Chief Justice of India NV Ramana)

Follow Us
Web contact
Web contact

TV9 Kannada

Read More
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!