AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಕ್ಕೆ 3 ಬಾರಿ ಇರಿಯಲಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು, ಸೌರಭ್ ಮರಣೋತ್ತರ ವರದಿ

ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆಯ ಮರಣೋತ್ತರ ವರದಿ ಬಹಿರಂಗಗೊಂಡಿದೆ. ಹೃದಯಕ್ಕೆ 3 ಬಾರಿ ಇರಿಯಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು ಎಂದು ವರದಿ ಹೇಳಿದೆ. ಸೌರಭ್ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸೌರಭ್​ಗೆ ಮತ್ತು ಬರುವ ಔಷಧಿ ತಿನ್ನಿಸಿ ಪ್ರಜ್ಞೆ ತಪ್ಪಿಸಿ ಹತ್ಯೆ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶದ ಟ್ರಿಪ್​ಗೆಂದು ತೆರಳಿದ್ದರು. ಸೌರಭ್​ನನ್ನು ಕೊಲೆ ಮಾಡಿ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್​ನಲ್ಲಿ ಸಿಮೆಂಟ್​ ಜತೆಗೆ ಹಾಕಿ ಸೀಲ್ ಮಾಡಲಾಗಿತ್ತು.

ಹೃದಯಕ್ಕೆ 3 ಬಾರಿ ಇರಿಯಲಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು, ಸೌರಭ್ ಮರಣೋತ್ತರ ವರದಿ
ಸಾಹಿಲ್
ನಯನಾ ರಾಜೀವ್
|

Updated on: Mar 23, 2025 | 2:10 PM

Share

ಮೀರತ್, ಮಾರ್ಚ್​ 23: ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದ ಸೌರಭ್ ರಜಪೂತ್ ಹತ್ಯೆಯ ಮರಣೋತ್ತರ ವರದಿ ಬಹಿರಂಗಗೊಂಡಿದೆ. ಹೃದಯಕ್ಕೆ 3 ಬಾರಿ ಇರಿಯಾಗಿತ್ತು, ತಲೆಯನ್ನು ದೇಹದಿಂದ ಬೇರ್ಪಡಿಸಲಾಗಿತ್ತು ಎಂದು ವರದಿ ಹೇಳಿದೆ. ಸೌರಭ್ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸೌರಭ್​ಗೆ ಮತ್ತು ಬರುವ ಔಷಧಿ ತಿನ್ನಿಸಿ ಪ್ರಜ್ಞೆ ತಪ್ಪಿಸಿ ಹತ್ಯೆ ಮಾಡಿದ್ದರು. ಬಳಿಕ ಹಿಮಾಚಲ ಪ್ರದೇಶದ ಟ್ರಿಪ್​ಗೆಂದು ತೆರಳಿದ್ದರು. ಸೌರಭ್​ನನ್ನು ಕೊಲೆ ಮಾಡಿ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್​ನಲ್ಲಿ ಸಿಮೆಂಟ್​ ಜತೆಗೆ ಹಾಕಿ ಸೀಲ್ ಮಾಡಲಾಗಿತ್ತು.

ಎರಡೂ ಕೈಗಳನ್ನು ಮಣಿಕಟ್ಟಿನಿಂದ ಕತ್ತರಿಸಲ್ಪಟ್ಟಿತ್ತು, ಕಾಲುಗಳು ಹಿಂದಕ್ಕೆ ಬಾಗಿದ್ದವು. ಸೌರಭ್ ಅವರ ಸಾವು ತೀವ್ರ ಆಘಾತ ಮತ್ತು ಭಾರಿ ರಕ್ತದ ನಷ್ಟದಿಂದ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮುಸ್ಕಾನ್​ ಸೌರಭ್ ಹೃದಯಕ್ಕೆ ಚೂಫಾದ ಚಾಕುವಿನಿಂದ ಮೂರು ಬಾರಿ ಆಳವಾಗಿ ಇರಿದಿದ್ದರು. ಬಳಿಕ ತಲೆಯನ್ನು ದೇಹದಿಂದ ಕತ್ತರಿಸಿದ್ದರು. ಬಳಿಕ ಕೈಗಳನ್ನು ಕತ್ತರಿಸಿದ್ದರು. ನಂತರ ಡ್ರಮ್​ಗೆ ಹಾಕಬೇಕಿದ್ದರೆ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಲಾಗಿತ್ತು.

ಸೌರಭ್ ಕುಟುಂಬದ ವಿರೋಧದ ಹೊರತಾಗಿಯೂ ಮುಸ್ಕಾನ್​ಳನ್ನು 2016ರಲ್ಲಿ ವಿವಾಹವಾಗಿದ್ದರು. 2019ರಲ್ಲಿ ತನ್ನ ಕ್ಲಾಸ್​ಮೇಟ್ ಸಾಹಿಲ್​ನನ್ನು ವಾಟ್ಸಾಪ್​ ಗ್ರೂಪ್ ಮೂಲಕ ಭೇಟಿಯಾದರು. ಮಾರ್ಚ್​ 4ರಂದು ಮುಸ್ಕಾನ್ ಹಾಗೂ ಸಾಹಿಲ್ ಪ್ಲ್ಯಾನ್ ಮಾಡಿ ಸೌರಭ್​ನನ್ನು ಹತ್ಯೆ ಮಾಡಿದ್ದರು. ಅವರು ಬದುಕಿದ್ದಾರೆಂದು ಬಿಂಬಿಸಲು ಕುಟುಂಬದವರಿಗೆ ಆತನ ಮೊಬೈಲ್​ನಿಂದ ಸಂದೇಶ ಕಳುಹಿದ್ದಳು.

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ನಿತ್ಯ ಹಲವು ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಸೌರಭ್ ರಜಪೂತ್ ಹತ್ಯೆ ಮಾಡಿ, ಆರೋಪಿ ಮುಸ್ಕನ್ ರಸ್ತೋಗಿ ಮತ್ತು ಆಕೆಯ ಪ್ರೇಮಿ ಸಾಹಿಲ್ ಶುಕ್ಲಾ ಹಿಮಾಚಲ ಪ್ರದೇಶಕ್ಕೆ ಟ್ರಿಪ್​ಗೆ ಹೋಗಿದ್ದರು. ಅಲ್ಲಿ ಅವರೇನು ಮಾಡಿದ್ದಾರೆ ಎನ್ನುವ ಬಗ್ಗೆ ಕ್ಯಾಬ್​ ಚಾಲಕ ಅಜಬ್ ಸಿಂಗ್ ಮಾಹಿತಿ ನೀಡಿದ್ದಾರೆ. ಇಬ್ಬರ ನಡವಳಿಕೆಯೂ ಸಾಮಾನ್ಯವಾಗಿತ್ತು, ಅವರು ಯಾವುದೋ ಘೋರ ಅಪರಾಧ ಮಾಡಿದ್ದಾರೆಂದು ತೋರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:ಮೀರತ್: ಸೌರಭ್​ನನ್ನು ಕೊಲೆ ಮಾಡಿ ಹಿಮಾಚಲಕ್ಕೆ ಟ್ರಿಪ್​ಗೆ ಹೋಗಿ ಸಾಹಿಲ್, ಮುಸ್ಕಾನ್ ಮಾಡಿದ್ದೇನು?

ಇಂಡಿಯಾ ಟುಡೇ ಜತೆಗೆ ಮಾತನಾಡಿದ ಚಾಲಕ, ಶಿಮ್ಲಾ ಮತ್ತು ಮನಾಲಿಗೆ ಪ್ರವಾಸ ಮಾಡುವಾಗ ಮುಸ್ಕಾನ್ ಮತ್ತು ಸಾಹಿಲ್ ಪರಸ್ಪರ ಹೆಚ್ಚು ಮಾತನಾಡಲಿಲ್ಲ. ಮುಸ್ಕಾನ್ ಗೆ ತನ್ನ ತಾಯಿಯಿಂದ ಎರಡು ಬಾರಿ ಮಾತ್ರ ಕರೆ ಬಂದಿತ್ತು. ಹಿಲ್ ಪ್ರತಿದಿನ ಎರಡು ಬಾಟಲಿ ಮದ್ಯ ಕುಡಿಯುತ್ತಿದ್ದರೆ, ಮುಸ್ಕಾನ್ ಮೂರು ಕ್ಯಾನ್ ಬಿಯರ್ ಕುಡಿಯುತ್ತಿದ್ದರು ಎಂದು ಕ್ಯಾಬ್ ಚಾಲಕ ಮಾಹಿತಿ ನೀಡಿದ್ದಾರೆ.

ಇಬ್ಬರೂ ಕೂಡ ಹೋಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಿದರು. ಅವರು ಹೋಳಿ ಆಚರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸುತ್ತಿದ್ದು, ಕೊಲೆಯ ಹಿಂದಿನ ಸತ್ಯವನ್ನು ಹೊರಗೆಳೆಯಲು ಪ್ರಯತ್ನಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್