AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಗವದ್ಗೀತೆಯ ಶ್ಲೋಕ ತಪ್ಪಾಗಿ ಅನುವಾದ: ಎಕ್ಸ್​​ನಲ್ಲಿ ಕ್ಷಮೆ ಕೇಳಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

Himanta Biswa Sharma: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಗವದ್ಗೀತೆಯ ಶ್ಲೋಕವನ್ನು ತಪ್ಪಾಗಿ ಭಾಷಾಂತರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಬಿಸ್ವಾ ಶರ್ಮಾ ಅವರು ಅವರು ಎಕ್ಸ್​​ನಲ್ಲಿ​​​ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಈ ವಿಚಾರವಾಗಿ ಭಾರಿ ಟೀಕೆಗೆ ಒಳಲಾಗಿದ್ದ ಬಿಸ್ವಾ ಶರ್ಮಾ ಅವರು ಕ್ಷಮೆ ಕೇಳಿದ್ದಾರೆ.

ಭಗವದ್ಗೀತೆಯ ಶ್ಲೋಕ ತಪ್ಪಾಗಿ ಅನುವಾದ: ಎಕ್ಸ್​​ನಲ್ಲಿ ಕ್ಷಮೆ ಕೇಳಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Follow us
ಅಕ್ಷಯ್​ ಪಲ್ಲಮಜಲು​​
|

Updated on:Dec 29, 2023 | 12:53 PM

ದಿಸ್ಪುರ್, ಡಿ.29: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಅವರು ಭಗವದ್ಗೀತೆಯ ಶ್ಲೋಕವನ್ನು ತಪ್ಪಾಗಿ ಭಾಷಾಂತರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಬಿಸ್ವಾ ಶರ್ಮಾ ಅವರು ಅವರು ಎಕ್ಸ್​​ನಲ್ಲಿ​​​ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಈ ವಿಚಾರವಾಗಿ ಭಾರಿ ಟೀಕೆಗೆ ಒಳಲಾಗಿದ್ದ ಬಿಸ್ವಾ ಶರ್ಮಾ ಅವರು ಕ್ಷಮೆ ಕೇಳಿದ್ದಾರೆ. ಬಿಸ್ವಾ ಶರ್ಮಾ ಅವರು ಸಾಮಾಜಿಕ ಜಾಲತಾಣ ನಿರ್ವಹಕರು ಮುಖ್ಯಮಂತ್ರಿಗಳು ಪ್ರತಿ ದಿನ ಭಗವದ್ಗೀತೆಯ ಈ ಶ್ಲೋಕಗಳನ್ನು ಹೇಳುತ್ತಾರೆ ಎಂದು ಶ್ಲೋಕ ಸಮೆತವಾಗಿ ಪೋಸ್ಟ್​​​ ಮಾಡಿದ್ದರು. ಈ ಶ್ಲೋಕ ತಪ್ಪಾಗಿ ಬರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸಲಾಗಿದೆ.

ವಾಡಿಕೆಯಂತೆ ನಾನು ಪ್ರತಿದಿನ ಬೆಳಿಗ್ಗೆ ನನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಭಗವದ್ಗೀತೆಯ ಒಂದು ಶ್ಲೋಕವನ್ನು ಅಪ್‌ಲೋಡ್ ಮಾಡುತ್ತೇನೆ. ಇಲ್ಲಿಯವರೆಗೆ, ನಾನು 668 ಶ್ಲೋಕಗಳನ್ನು ಪೋಸ್ಟ್ ಮಾಡಿದ್ದೇನೆ. ಇತ್ತೀಚೆಗೆ ನನ್ನ ತಂಡದ ಸದಸ್ಯರೊಬ್ಬರು ಅಧ್ಯಾಯ 18 ಶ್ಲೋಕದ 44ರಿಂದ ತಪ್ಪಾದ ಅನುವಾದದೊಂದಿಗೆ ಶ್ಲೋಕವನ್ನು ಪೋಸ್ಟ್ ಮಾಡಿದ್ದಾರೆ. ತಪ್ಪು ಗಮನಕ್ಕೆ ಬಂದ ಕೂಡಲೇ ಟ್ವೀಟ್ ಡಿಲೀಟ್ ಮಾಡಿದ್ದೇನೆ. ತಪ್ಪನ್ನು ಗಮನಿಸಿದ ತಕ್ಷಣ ನಾನು ಪೋಸ್ಟ್​​ನ್ನು ಅಳಿಸಿದ್ದೇನೆ. ಈ ಪೋಸ್ಟ್​​ನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಗೀತೆಯ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಎಂಬ ಇತರ ಮೂರು ಜಾತಿಗಳಿಗೆ ಸೇವೆ ಸಲ್ಲಿಸುವುದು ಶೂದ್ರರ ಕರ್ತವ್ಯ ಎಂದು ತಪ್ಪಾಗಿ ಬರೆದಿರುವುದು, ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಮತ್ತು ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಅವರು ಪ್ರತಿ ಭಾರತೀಯ ಪ್ರಜೆಯನ್ನು ಸಮಾನವಾಗಿ ಕಾಣುವ ಪ್ರತಿಜ್ಞೆಯನ್ನು ಪೂರೈಸುತ್ತಿಲ್ಲ ಎಂದು ಸಿಎಂ ಬಿಸ್ವಾ ಶರ್ಮಾ ವಿರೋಧ ತೀವ್ರ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಜೀವಂತ; ಅಪ್ರಾಪ್ತೆಗೆ ಮದ್ವೆ ಮಾಡಲು ಖತರ್ನಾಕ್ ಪ್ಲ್ಯಾನ್ ‌ಮಾಡಿದ ಕುಟುಂಬಸ್ಥರು

ಬಿಸ್ವಾ ಶರ್ಮಾ ಅವರ ಮನಸ್ಥಿತಿ ಇದರಿಂದ ಅರ್ಥವಾಗುತ್ತದೆ. ಅಸ್ಸಾಂ ಸಿಎಂ ತಮ್ಮ ಸಮಾಜದ ದೃಷ್ಟಿಕೋನವನ್ನು ವಿವರಿಸಿದ್ದಾರೆ.ಕೃಷಿ, ಹಸು ಸಾಕಣೆ ಮತ್ತು ವಾಣಿಜ್ಯವು ವೈಶ್ಯರ ನೈಸರ್ಗಿಕ ಕರ್ತವ್ಯಗಳು ಮತ್ತು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಸೇವೆ ಸಲ್ಲಿಸುವುದು ಶೂದ್ರರ ನೈಸರ್ಗಿಕ ಕರ್ತವ್ಯವಾಗಿದೆ ಎಂದು ನಿಮ್ಮ ಪೋಸ್ಟ್​​ ಹೇಳುತ್ತದೆ. ಆದರೆ ನೀವು ಸಾಂವಿಧಾನಿಕ ಸ್ಥಾನವನ್ನು ಹೊಂದಿರುವ ನಿಮ್ಮ ಪ್ರತಿಜ್ಞೆ ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಕಾಣುಬೇಕಿತ್ತು. ಇದ್ದರಿಂದಲೇ ನಿಮ್ಮ ವಿಚಾರಧರೆಗಳೇನು ಎಂದು ತಿಳಿಯುತ್ತದೆ. ಇನ್ನು ಕೆಲವು ವರ್ಷಗಳಿಂದ ಅಸ್ಸಾಂನ ಮುಸ್ಲಿಮರು ಎದುರಿಸುತ್ತಿರುವ ದುರದೃಷ್ಟಕರ ಕ್ರೌರ್ಯವನ್ನು ಇದು ಪ್ರತಿಬಿಂಬಿಸುತ್ತದೆ. ಹಿಂದುತ್ವವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Fri, 29 December 23

ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ
ಅಯೋಧ್ಯೆ ರಾಮ ಮಂದಿರದ ರಾಮ ದರ್ಬಾರ್​​ನಲ್ಲಿ ಪಾಲ್ಗೊಂಡ ಸಿಎಂ ಯೋಗಿ