AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯೊಳಗೆ ಹಿರಿಯ ವಕೀಲರ ಪತ್ನಿಯ ಬರ್ಬರ ಹತ್ಯೆ; ಪಕ್ಕದ ಚೇರ್​​ನಲ್ಲಿದ್ದ ಸಹಾಯಕ!

ಮೊಹಾಲಿಯಲ್ಲಿ ಹಿರಿಯ ವಕೀಲರ ಪತ್ನಿ ಭೀಕರವಾಗಿ ಕೊಲೆಯಾಗಿದ್ದಾರೆ. ಪಂಜಾಬ್‌ನ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರ ಪತ್ನಿ ಇಂದು ಮೊಹಾಲಿಯಲ್ಲಿರುವ ಅವರ ನಿವಾಸದಲ್ಲಿ ಕೊಲೆಯಾಗಿ ಪತ್ತೆಯಾಗಿದ್ದಾರೆ. ದರೋಡೆ ಮಾಡುವ ಉದ್ದೇಶದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ 12 ವರ್ಷಗಳಿಂದ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸದಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಯೊಳಗೆ ಹಿರಿಯ ವಕೀಲರ ಪತ್ನಿಯ ಬರ್ಬರ ಹತ್ಯೆ; ಪಕ್ಕದ ಚೇರ್​​ನಲ್ಲಿದ್ದ ಸಹಾಯಕ!
Crime News
ಸುಷ್ಮಾ ಚಕ್ರೆ
|

Updated on: Dec 30, 2025 | 10:52 PM

Share

ಮೊಹಾಲಿ, ಡಿಸೆಂಬರ್ 30: ಪಂಜಾಬ್‌ನ ಮೊಹಾಲಿಯಲ್ಲಿ ನಡೆದ ಒಂದು ಹೈ ಪ್ರೊಫೈಲ್ ಕೊಲೆ (Murder) ಆಘಾತವನ್ನು ಸೃಷ್ಟಿಸಿದೆ. ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೃಷ್ಣ ಕುಮಾರ್ ಗೋಯಲ್ ಅವರ ಪತ್ನಿ ಅಶೋಕ್ ಕುಮಾರಿ ಗೋಯಲ್ ಅವರನ್ನು ಅವರ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಆ ಮನೆಯ ಕೆಲಸದಾಕೆಯೇ ಈ ಕೊಲೆಯನ್ನು ಮೊದಲು ನೋಡಿದವರು.

ಇಂದು ಬೆಳಿಗ್ಗೆ ಆ ಮನೆಯ ಕೆಲಸದಾಕೆ ಕೆಲಸಕ್ಕೆ ಬಂದಾಗ ಪದೇ ಪದೇ ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಬಾಗಿಲು ಒಡೆದಾಗ, ಅಶೋಕ್ ಕುಮಾರಿ (66) ಒಳಗೆ ಶವವಾಗಿ ಪತ್ತೆಯಾಗಿದ್ದು, ಆಕೆಯ ಸಹಾಯಕನಾದ ನೀರಜ್ (25) ಎಂಬಾತನನ್ನು ಕುರ್ಚಿಗೆ ಕಟ್ಟಿಹಾಕಲಾಗಿತ್ತು. ಆ ಮನೆಗೆ ಹಾಲು ನೀಡುವ ಹಾಲಿನ ವ್ಯಾಪಾರಿಗೆ ನಾಳೆ ಹಾಲು ಹಾಕಬೇಡಿ ಎಂದು ಅಶೋಕ್ ಕುಮಾರಿ ಹಿಂದಿನ ದಿನವೇ ಹೇಳಿದ್ದರು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಮಗಳಿಗೆ ಗಾಳ, ಅಮ್ಮನಿಗೆ ಬೆಂಕಿ: ತಲೆಮರೆಸಿಕೊಂಡಿದ್ದ ಆಸಾಮಿ ಅಂದರ್

ದರೋಡೆ ಮಾಡುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಮನೆಯ ಸಹಾಯಕನನ್ನು ಕಟ್ಟಿ ಹಾಕಿ ಆಭರಣ ಮತ್ತು ನಗದು ದೋಚಿದ್ದಾರೆ. ಕೊಲೆ ನಡೆದಾಗ ಕೃಷ್ಣ ಕುಮಾರ್ ಗೋಯಲ್ ಮಸ್ಕತ್‌ನಲ್ಲಿದ್ದರು. ಅವರು ತಮ್ಮ ಮಗಳನ್ನು ಭೇಟಿ ಮಾಡಲು ಹೋಗಿದ್ದರು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೃಷ್ಣ ಕುಮಾರ್ ಗೋಯಲ್ ಅವರ ಪತ್ನಿಯೇ ಕೊಲೆಯಾದ ಮಹಿಳೆ. ಈ ಕೊಲೆ ನಡೆದ ಸ್ಥಳದಲ್ಲಿದ್ದ 25 ವರ್ಷದ ಸಹಾಯಕ ನೀರಜ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದರೋಡೆಕೋರರು ಆ ಮಹಿಳೆಯನ್ನು ಕೊಂದು ಸಹಾಯಕನನ್ನು ಏಕೆ ಹಾಗೇ ಬಿಟ್ಟರು? ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: 3 ಕೋಟಿ ರೂ. ವಿಮೆ ಹಣ ಪಡೆಯಲು, ತಂದೆಗೆ ಹಾವು ಕಚ್ಚಿಸಿದ ಮಕ್ಕಳು

ನೀರಜ್ ದರೋಡೆಕೋರನು ತನ್ನ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಪೊಲೀಸರಿಗೆ ಅವನ ತಲೆಯ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ಇದು ಅನುಮಾನವನ್ನು ಹುಟ್ಟುಹಾಕಿತು. ಹೀಗಾಗಿ ಅವರು ಅವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ