AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon 2021: ಇಂದಿನಿಂದ ಕೇರಳದಲ್ಲಿ ಮುಂಗಾರು; ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಇಲ್ಲಿದೆ

Monsoon 2021 Forecast: ಕೃಷಿ ಪ್ರಧಾನ ಭಾರತಕ್ಕೆ ಮುಂಗಾರು ಮಳೆಯೇ ಆಧಾರ. ಅದನ್ನು ಗಾಳಿಯ ವೇಗ, ನಿರಂತರ ಮಳೆಯಾಗುವ ಗುಣಲಕ್ಷಣ ಮತ್ತು ಮೋಡಗಳ ಸಾಂದ್ರತೆಯನ್ನು ಪರಿಗಣಿಸಿ, ಮುಂಗಾರು ವಿದ್ಯಮಾನ ನಿರ್ಧರಿಸಲಾಗುತ್ತದೆ. ಗುರುವಾರ ಸಂಜೆಯ ವೇಳೆಗೆ ಮತ್ತೊಮ್ಮೆ ಮುಂಗಾರು ಅಂದಾಜು ವರದಿಯನ್ನು ಪ್ರಕಟಿಸುವುದಾಗಿ IMD ಪ್ರಧಾನ ನಿರ್ದೇಶಕ ಎಂ ಮಹಾಪಾತ್ರ ತಿಳಿಸಿದ್ದಾರೆ.

Monsoon 2021: ಇಂದಿನಿಂದ ಕೇರಳದಲ್ಲಿ ಮುಂಗಾರು; ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಇಲ್ಲಿದೆ
ಇಂದಿನಿಂದ ಕೇರಳದಲ್ಲಿ ಮುಂಗಾರು; ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಇಲ್ಲಿದೆ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on: Jun 03, 2021 | 9:43 AM

ಕೊಚ್ಚಿ: ನೈಋತ್ಯ ಮುಂಗಾರು ವಾಡಿಕೆಯಂತೆ ಕೇರಳಕ್ಕೆ ಇಂದು ಪ್ರವೇಶಿಸುವ ಸಾಧ್ಯತೆಯಿದೆ. ಅದರೆ ಇದು ಎರಡು ದಿನ ವಿಳಂಬವಾಗಿ ಬರುತ್ತಿದೆ. ಮುಂಗಾರು ಮಳೆ ದೇಶದಾದ್ಯಂತ ಜುಲೈ 5ರ ವೇಳೆಗೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಪುನರ್​ವಿಮರ್ಷಿತ ಅಂದಾಜಿನಲ್ಲಿ ತಿಳಿಸಿದೆ. ಮುಂಗಾರು ವಾಡಿಕೆಯಂತೆ ಕೇರಳಕ್ಕೆ ಇಂದು ಪ್ರವೇಶಿಸಲಿದ್ದು, ಅದರ ಗುಣಲಕ್ಷಣವಾಗಿ ಕರ್ನಾಟಕದಲ್ಲಿ ಮೋಡ, ತುಂತುರು ಮಳೆ ಆರಂಭವಾಗಿದೆ.

ಕೇರಳದಲ್ಲಿ ಸದ್ಯಕ್ಕೆ ನೈಋತ್ಯ ಬೀಸುಗಾಳಿ ಬಲವಾಗಿ ಬೀಸುತ್ತಿದ್ದು, ಗುರುವಾರ ರಾಜ್ಯದಲ್ಲಿ ಮುಂಗಾರು ಪ್ರವೇಶಿಸುವುದಕ್ಕೆ ಹವಾಮಾನ ಹದವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department -IMD) ಪ್ರಕಟಣೆಯಲ್ಲಿ ತಿಳಿಸಿದೆ. ಕೃಷಿ ಪ್ರಧಾನ ಭಾರತಕ್ಕೆ ಮುಂಗಾರು ಮಳೆಯೇ ಆಧಾರ. ಅದನ್ನು ಗಾಳಿಯ ವೇಗ, ನಿರಂತರ ಮಳೆಯಾಗುವ ಗುಣಲಕ್ಷಣ ಮತ್ತು ಮೋಡಗಳ ಸಾಂದ್ರತೆಯನ್ನು ಪರಿಗಣಿಸಿ, ಮುಂಗಾರು ವಿದ್ಯಮಾನ ನಿರ್ಧರಿಸಲಾಗುತ್ತದೆ. ಗುರುವಾರ ಸಂಜೆಯ ವೇಳೆಗೆ ಮತ್ತೊಮ್ಮೆ ಮುಂಗಾರು ಅಂದಾಜು ವರದಿಯನ್ನು ಪ್ರಕಟಿಸುವುದಾಗಿ IMD ಪ್ರಧಾನ ನಿರ್ದೇಶಕ ಎಂ ಮಹಾಪಾತ್ರ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಹೀಗಿದೆ: ಪಶ್ಚಿಮ ಮಾರುತಗಳು ದಕ್ಷಿಣ ಅರಬ್ಬೀ ಸಮುದ್ರದ ತಟದಲ್ಲಿ ಕೆಳ ಹಂತದಲ್ಲಿ ಬಲಗೊಂಡಿದ್ದು, ಆಳವಾಗಿದೆ. ಹಾಗಾಗಿ ಪ್ರಾದೇಶಿಕ ಮಳೆ ಪ್ರಮಾಣ ಕೇರಳದಲ್ಲಿ ಹೆಚ್ಚಾಗಿದೆ. ಕೇರಳ ಕರಾವಳಿಯಲ್ಲಿ ಮತ್ತು ಸಮೀಪದ ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಮೋಡಗಳ ಸಾಂದ್ರತೆ ಹೆಚ್ಚಾಗಿದೆ. ಇದರಿಂದ ಮುಂದಿನ 24 ಗಂಟೆಯಲ್ಲಿ ಕೇರಳಾದ್ಯಂತ ಮಳೆ ಸುರಿಯಲಿದೆ.ಅದುವೇ ಮುಂಗಾರು ಆರಂಭ ಎಂದು ಉಪಗ್ರಹ ಚಿತ್ರಗಳನ್ನಾಧರಿಸಿ IMD ನಿಖರ ಮಾಹಿತಿ ನೀಡಿದೆ.

ಮಂಗಳವಾರ IMD ಬಿಡುಗಡೆಗೊಳಿಸಿದ ವರದಿಯನುಸಾರ ಎರಡನೆಯ ದೀರ್ಘಾವಧಿ ಅಂದಾಜಿನಲ್ಲಿ ಈ ಬಾರಿ ಮುಂಗಾರು ಪ್ರಮಾಣ ಶೇ. 101ರಷ್ಟಿರಲಿದೆ. ಇದು ಎರಡು ವರ್ಷಗಳ ದೀರ್ಘಾವಧಿ ಸರಾಸರಿ (LPA) ಮಳೆ ಪ್ರಮಾಣದ ಆಧಾರದಲ್ಲಿದೆ. LPA ಅಂದ್ರೆ ದೀರ್ಘಾವಧಿ ಮಳೆ ಸರಾಸರಿ 88 ಸೆಂಟಿ ಮೀಟರ್ ಪ್ರಮಾಣದಲ್ಲಿರುತ್ತದೆ. ಇದನ್ನು 1961ರ ಮತ್ತು 2010ರ ನಡುವೆ ಜೂನ್​ ಮತ್ತು ಸೆಪ್ಟೆಂಬರ್ ತಿಂಗಳಲ್ಲಾದ ​ಮಳೆಯನ್ನಾಧರಿಸಿ ಲೆಕ್ಕ ಹಾಕಲಾಗಿದೆ.

2020 ಮತ್ತು 2019 ಮುಂಗಾರು ಸಾಲಿನಲ್ಲಿ LPA ಮಳೆ ಸರಾಸರಿ ಅನುಕ್ರಮವಾಗಿ 110 % ಮತ್ತು 109 % ಪ್ರಮಾಣದಲ್ಲಿತ್ತು. 1996, 1997 ಮತ್ತು 1998 ಮುಂಗಾರು ಸಾಲಿನಲ್ಲಿ 103.4 %, 102.2 % ಮತ್ತು 104 % ಪ್ರಮಾಣದ ಮಳೆಯಾಗಿತ್ತು.

ಜೂನ್​ ನಿಂದ ಸೆಪ್ಟೆಂಬರ್​ ವರೆಗಿನ ನಾಲ್ಕು ತಿಂಗಳ ಮುಂಗಾರು ಸಾಲಿನಲ್ಲಿ ಭಾರತದಲ್ಲಿ ಶೇ. 70ರಷ್ಟು ಮಳೆಯಾಗುತ್ತದೆ. ಇದು ಅಕ್ಕಿ, ಸೋಯಾಬೀನ್, ಹತ್ತಿ ಬೆಳೆಗೆ ನಿರ್ಣಾಯಕವಾಗಿರುತ್ತದೆ. ಕಳೆದ ಎರಡು ವರ್ಷಗಳಿಂದ ಇದು ಉತ್ತಮವಾಗಿದೆ. ಕೊವಿಡ್​ ಸೋಂಕು ಕಾಲದಲ್ಲೂ ಕಳೆದ ವರ್ಷ ಉತ್ತಮ ಮಳೆಯಾಗಿ ರೈತಾಪಿ ರ್ಗಕ್ಕೆ ಆಶಾದಾಯಕವಾಗಿತ್ತು. ಈ ವರ್ಷವೂ ಇದೇ ನಿರೀಕ್ಷೆಯಲ್ಲಿದೆ ರೈತಾಪಿ ವರ್ಗ.

(Monsoon 2021 onset in Kerala today: says forecast by M Mohapatra director general India Meteorological Department IMD)

Monsoon 2021: ಸೋಮವಾರದಂದು ಕೇರಳ ಪ್ರವೇಶಿಸಲು ಸಜ್ಜಾದ ಮುಂಗಾರು; ಬಲಗೊಳ್ಳುತ್ತಿದೆ ನೈರುತ್ಯ ಮಾರುತ

ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ
ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ
ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು
ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು