AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಯಂಕೃತಾಪರಾಧ.. ಸಾಲ ವಸೂಲಿ ಮಾಡದೆ SBIಗೆ ಭಾರಿ ಮುಖಭಂಗ

ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಎಂದರೆ ಭಾರತೀಯ ಸ್ಟೇಟ್​ ಬ್ಯಾಂಕ್​. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್​ ಬ್ಯಾಂಕ್​ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ. ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್​ ಇನ್​ವೆಸ್ಟರ್ಸ್​ ಸರ್ವಿಸ್​ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್​ ಬ್ಯಾಂಕ್​ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್​ಲೈನ್​ ಕ್ರೆಡಿಟ್​ ಅಸೆಸ್​ಮೆಂಟ್​) ba1 ನಿಂದ ba2ಗೆ ಹಿಂಬಡ್ತಿ […]

ಸ್ವಯಂಕೃತಾಪರಾಧ.. ಸಾಲ ವಸೂಲಿ ಮಾಡದೆ SBIಗೆ ಭಾರಿ ಮುಖಭಂಗ
ಎಸ್​ಬಿಐ
KUSHAL V
| Edited By: ಸಾಧು ಶ್ರೀನಾಥ್​|

Updated on: Aug 26, 2020 | 1:34 PM

Share

ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಎಂದರೆ ಭಾರತೀಯ ಸ್ಟೇಟ್​ ಬ್ಯಾಂಕ್​. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್​ ಬ್ಯಾಂಕ್​ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ.

ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್​ ಇನ್​ವೆಸ್ಟರ್ಸ್​ ಸರ್ವಿಸ್​ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್​ ಬ್ಯಾಂಕ್​ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್​ಲೈನ್​ ಕ್ರೆಡಿಟ್​ ಅಸೆಸ್​ಮೆಂಟ್​) ba1 ನಿಂದ ba2ಗೆ ಹಿಂಬಡ್ತಿ ನೀಡಿದೆ.

ಸಾಲ ವಸೂಲಾತಿ ಕಳಪೆ, ಭವಿಷ್ಯ ನಿರಾಶಾದಾಯಕ ದೇಶದ ಪ್ರಸಕ್ತ ಆರ್ಥಿಕ ಸ್ಥಿತಿಗತಿ ಕುಂಠಿತವಾಗಿರೋ ಹಿನ್ನೆಲೆಯಲ್ಲಿ ಸಾಲಗಾರರಿಂದ ಸಾಲದ ಮೊತ್ತವನ್ನು ಸಮಪರ್ಕವಾಗಿ ವಸೂಲಾತಿ ಮಾಡಲು ಸ್ಟೇಟ್​ ಬ್ಯಾಂಕ್​ಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೂಡೀಸ್​ ಸಂಸ್ಥೆಯು SBI ರೇಟಿಂಗ್​ ಅನ್ನು ba2ಗೆ ಇಳಿಸಿದೆ ಎಂದು ವರದಿಯಾಗಿದೆ. ಕಳೆದ ಜೂನ್​ ತಿಂಗಳಿಂದ ಸ್ಟೇಟ್​ ಬ್ಯಾಂಕ್​ ನೀಡಿರುವ ಶೇಕಡಾ 9.5ರಷ್ಟು ಸಾಲಗಳ ಮರುಪಾವತಿಗೆ ಆಗಸ್ಟ್​ 31ರ ವರೆಗೆ ತಾತ್ಕಾಲಿಕ ತಡೆ (ರೀಪೇಮೆಂಟ್​ ಮೊರಟೋರಿಯಂ) ನೀಡಲಾಗಿದೆ.

ಜೊತೆಗೆ, ಮುಂಬರುವ ಒಂದು ಅಥವಾ ಒಂದೂವರೆ ವರ್ಷದವರೆಗೆ SBIನ ಈ ರೇಟಿಂಗ್​ ಬದಲಾಗುವ ಸಾಧ್ಯತೆ ತೀರಾ ವಿರಳವಾಗಿದೆ ಎಂದು ಮೂಡೀಸ್​ ತಿಳಿಸಿದೆ. ಈ ಹಿಂಬಡ್ತಿಯಿಂದ ಬ್ಯಾಂಕ್​ನ ಸ್ವತ್ತಿನ ಗುಣಮಟ್ಟ (ಅಸೆಟ್​ ಕ್ವಾಲಿಟಿ) ಮತ್ತು ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧಯತೆಯೂ ಇದೆ. ಇದರಿಂದ ಕಳೆದ ಎರಡು ವರ್ಷಗಳಿಂದ ಬ್ಯಾಂಕ್​ ಗಳಸಿರುವ ಆರ್ಥಿಕ ಏಳಿಗೆಗೆ ಹಿನ್ನಡೆಯಾಗಲಿದೆ ಎಂದು ಮೂಡೀಸ್​ ಮಾಹಿತಿ ನೀಡಿದೆ.

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು