AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಯಂಕೃತಾಪರಾಧ.. ಸಾಲ ವಸೂಲಿ ಮಾಡದೆ SBIಗೆ ಭಾರಿ ಮುಖಭಂಗ

ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಎಂದರೆ ಭಾರತೀಯ ಸ್ಟೇಟ್​ ಬ್ಯಾಂಕ್​. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್​ ಬ್ಯಾಂಕ್​ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ. ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್​ ಇನ್​ವೆಸ್ಟರ್ಸ್​ ಸರ್ವಿಸ್​ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್​ ಬ್ಯಾಂಕ್​ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್​ಲೈನ್​ ಕ್ರೆಡಿಟ್​ ಅಸೆಸ್​ಮೆಂಟ್​) ba1 ನಿಂದ ba2ಗೆ ಹಿಂಬಡ್ತಿ […]

ಸ್ವಯಂಕೃತಾಪರಾಧ.. ಸಾಲ ವಸೂಲಿ ಮಾಡದೆ SBIಗೆ ಭಾರಿ ಮುಖಭಂಗ
ಎಸ್​ಬಿಐ
KUSHAL V
| Edited By: ಸಾಧು ಶ್ರೀನಾಥ್​|

Updated on: Aug 26, 2020 | 1:34 PM

Share

ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಎಂದರೆ ಭಾರತೀಯ ಸ್ಟೇಟ್​ ಬ್ಯಾಂಕ್​. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್​ ಬ್ಯಾಂಕ್​ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ.

ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್​ ಇನ್​ವೆಸ್ಟರ್ಸ್​ ಸರ್ವಿಸ್​ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್​ ಬ್ಯಾಂಕ್​ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್​ಲೈನ್​ ಕ್ರೆಡಿಟ್​ ಅಸೆಸ್​ಮೆಂಟ್​) ba1 ನಿಂದ ba2ಗೆ ಹಿಂಬಡ್ತಿ ನೀಡಿದೆ.

ಸಾಲ ವಸೂಲಾತಿ ಕಳಪೆ, ಭವಿಷ್ಯ ನಿರಾಶಾದಾಯಕ ದೇಶದ ಪ್ರಸಕ್ತ ಆರ್ಥಿಕ ಸ್ಥಿತಿಗತಿ ಕುಂಠಿತವಾಗಿರೋ ಹಿನ್ನೆಲೆಯಲ್ಲಿ ಸಾಲಗಾರರಿಂದ ಸಾಲದ ಮೊತ್ತವನ್ನು ಸಮಪರ್ಕವಾಗಿ ವಸೂಲಾತಿ ಮಾಡಲು ಸ್ಟೇಟ್​ ಬ್ಯಾಂಕ್​ಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೂಡೀಸ್​ ಸಂಸ್ಥೆಯು SBI ರೇಟಿಂಗ್​ ಅನ್ನು ba2ಗೆ ಇಳಿಸಿದೆ ಎಂದು ವರದಿಯಾಗಿದೆ. ಕಳೆದ ಜೂನ್​ ತಿಂಗಳಿಂದ ಸ್ಟೇಟ್​ ಬ್ಯಾಂಕ್​ ನೀಡಿರುವ ಶೇಕಡಾ 9.5ರಷ್ಟು ಸಾಲಗಳ ಮರುಪಾವತಿಗೆ ಆಗಸ್ಟ್​ 31ರ ವರೆಗೆ ತಾತ್ಕಾಲಿಕ ತಡೆ (ರೀಪೇಮೆಂಟ್​ ಮೊರಟೋರಿಯಂ) ನೀಡಲಾಗಿದೆ.

ಜೊತೆಗೆ, ಮುಂಬರುವ ಒಂದು ಅಥವಾ ಒಂದೂವರೆ ವರ್ಷದವರೆಗೆ SBIನ ಈ ರೇಟಿಂಗ್​ ಬದಲಾಗುವ ಸಾಧ್ಯತೆ ತೀರಾ ವಿರಳವಾಗಿದೆ ಎಂದು ಮೂಡೀಸ್​ ತಿಳಿಸಿದೆ. ಈ ಹಿಂಬಡ್ತಿಯಿಂದ ಬ್ಯಾಂಕ್​ನ ಸ್ವತ್ತಿನ ಗುಣಮಟ್ಟ (ಅಸೆಟ್​ ಕ್ವಾಲಿಟಿ) ಮತ್ತು ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧಯತೆಯೂ ಇದೆ. ಇದರಿಂದ ಕಳೆದ ಎರಡು ವರ್ಷಗಳಿಂದ ಬ್ಯಾಂಕ್​ ಗಳಸಿರುವ ಆರ್ಥಿಕ ಏಳಿಗೆಗೆ ಹಿನ್ನಡೆಯಾಗಲಿದೆ ಎಂದು ಮೂಡೀಸ್​ ಮಾಹಿತಿ ನೀಡಿದೆ.

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!