AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಯಂಕೃತಾಪರಾಧ.. ಸಾಲ ವಸೂಲಿ ಮಾಡದೆ SBIಗೆ ಭಾರಿ ಮುಖಭಂಗ

ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಎಂದರೆ ಭಾರತೀಯ ಸ್ಟೇಟ್​ ಬ್ಯಾಂಕ್​. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್​ ಬ್ಯಾಂಕ್​ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ. ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್​ ಇನ್​ವೆಸ್ಟರ್ಸ್​ ಸರ್ವಿಸ್​ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್​ ಬ್ಯಾಂಕ್​ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್​ಲೈನ್​ ಕ್ರೆಡಿಟ್​ ಅಸೆಸ್​ಮೆಂಟ್​) ba1 ನಿಂದ ba2ಗೆ ಹಿಂಬಡ್ತಿ […]

ಸ್ವಯಂಕೃತಾಪರಾಧ.. ಸಾಲ ವಸೂಲಿ ಮಾಡದೆ SBIಗೆ ಭಾರಿ ಮುಖಭಂಗ
ಎಸ್​ಬಿಐ
KUSHAL V
| Edited By: |

Updated on: Aug 26, 2020 | 1:34 PM

Share

ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಎಂದರೆ ಭಾರತೀಯ ಸ್ಟೇಟ್​ ಬ್ಯಾಂಕ್​. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್​ ಬ್ಯಾಂಕ್​ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ.

ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್​ ಇನ್​ವೆಸ್ಟರ್ಸ್​ ಸರ್ವಿಸ್​ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್​ ಬ್ಯಾಂಕ್​ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್​ಲೈನ್​ ಕ್ರೆಡಿಟ್​ ಅಸೆಸ್​ಮೆಂಟ್​) ba1 ನಿಂದ ba2ಗೆ ಹಿಂಬಡ್ತಿ ನೀಡಿದೆ.

ಸಾಲ ವಸೂಲಾತಿ ಕಳಪೆ, ಭವಿಷ್ಯ ನಿರಾಶಾದಾಯಕ ದೇಶದ ಪ್ರಸಕ್ತ ಆರ್ಥಿಕ ಸ್ಥಿತಿಗತಿ ಕುಂಠಿತವಾಗಿರೋ ಹಿನ್ನೆಲೆಯಲ್ಲಿ ಸಾಲಗಾರರಿಂದ ಸಾಲದ ಮೊತ್ತವನ್ನು ಸಮಪರ್ಕವಾಗಿ ವಸೂಲಾತಿ ಮಾಡಲು ಸ್ಟೇಟ್​ ಬ್ಯಾಂಕ್​ಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೂಡೀಸ್​ ಸಂಸ್ಥೆಯು SBI ರೇಟಿಂಗ್​ ಅನ್ನು ba2ಗೆ ಇಳಿಸಿದೆ ಎಂದು ವರದಿಯಾಗಿದೆ. ಕಳೆದ ಜೂನ್​ ತಿಂಗಳಿಂದ ಸ್ಟೇಟ್​ ಬ್ಯಾಂಕ್​ ನೀಡಿರುವ ಶೇಕಡಾ 9.5ರಷ್ಟು ಸಾಲಗಳ ಮರುಪಾವತಿಗೆ ಆಗಸ್ಟ್​ 31ರ ವರೆಗೆ ತಾತ್ಕಾಲಿಕ ತಡೆ (ರೀಪೇಮೆಂಟ್​ ಮೊರಟೋರಿಯಂ) ನೀಡಲಾಗಿದೆ.

ಜೊತೆಗೆ, ಮುಂಬರುವ ಒಂದು ಅಥವಾ ಒಂದೂವರೆ ವರ್ಷದವರೆಗೆ SBIನ ಈ ರೇಟಿಂಗ್​ ಬದಲಾಗುವ ಸಾಧ್ಯತೆ ತೀರಾ ವಿರಳವಾಗಿದೆ ಎಂದು ಮೂಡೀಸ್​ ತಿಳಿಸಿದೆ. ಈ ಹಿಂಬಡ್ತಿಯಿಂದ ಬ್ಯಾಂಕ್​ನ ಸ್ವತ್ತಿನ ಗುಣಮಟ್ಟ (ಅಸೆಟ್​ ಕ್ವಾಲಿಟಿ) ಮತ್ತು ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧಯತೆಯೂ ಇದೆ. ಇದರಿಂದ ಕಳೆದ ಎರಡು ವರ್ಷಗಳಿಂದ ಬ್ಯಾಂಕ್​ ಗಳಸಿರುವ ಆರ್ಥಿಕ ಏಳಿಗೆಗೆ ಹಿನ್ನಡೆಯಾಗಲಿದೆ ಎಂದು ಮೂಡೀಸ್​ ಮಾಹಿತಿ ನೀಡಿದೆ.

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ