ಭಾರತದ 10 ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ ಪೋರ್ಬ್ಸ್​; ನಂ.1 ಸ್ಥಾನದಲ್ಲಿ ಮುಕೇಶ್ ಅಂಬಾನಿ.. ಇನ್ನುಳಿದಂತೆ ಯಾರೆಲ್ಲ ಇದ್ದಾರೆ ನೋಡಿ..

ಫೋರ್ಬ್ಸ್​ ನಿಯತಕಾಲಿಕ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಹಾಗೇ ಅದಾನಿ ಗ್ರೂಪ್​​ನ ಚೇರ್​​ಮನ್​ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಪೋರ್ಬ್ಸ್​ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಈ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಆಸ್ತಿ ಮೌಲ್ಯ 50.5 ಬಿಲಿಯನ್ ಡಾಲರ್​. ಹಾಗೇ, ಮೂರನೇ ಸ್ಥಾನದಲ್ಲಿ […]

ಭಾರತದ 10 ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ ಪೋರ್ಬ್ಸ್​; ನಂ.1 ಸ್ಥಾನದಲ್ಲಿ ಮುಕೇಶ್ ಅಂಬಾನಿ.. ಇನ್ನುಳಿದಂತೆ ಯಾರೆಲ್ಲ ಇದ್ದಾರೆ ನೋಡಿ..
ಮುಕೇಶ್​ ಅಂಬಾನಿ (ಸಂಗ್ರಹ ಚಿತ್ರ)
Follow us
|

Updated on:Apr 07, 2021 | 6:00 PM

ಫೋರ್ಬ್ಸ್​ ನಿಯತಕಾಲಿಕ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಹಾಗೇ ಅದಾನಿ ಗ್ರೂಪ್​​ನ ಚೇರ್​​ಮನ್​ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಪೋರ್ಬ್ಸ್​ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಈ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಆಸ್ತಿ ಮೌಲ್ಯ 50.5 ಬಿಲಿಯನ್ ಡಾಲರ್​. ಹಾಗೇ, ಮೂರನೇ ಸ್ಥಾನದಲ್ಲಿ ಎಚ್​ಸಿಎಲ್​ ಸಂಸ್ಥಾಪಕ ಶಿವ ನಾದರ್ ಇದ್ದಾರೆ.

ದೇಶದಲ್ಲಿ ಕೊರೊನಾ ಬಿಕ್ಕಟ್ಟಿದ್ದರೂ ಸ್ಟಾಕ್​ ಮಾರ್ಕೆಟ್​ನಲ್ಲಿ ಈ ಶ್ರೀಮಂತರ ಆಸ್ತಿ ಮೌಲ್ಯ ಊಹೆಗೂ ನಿಲುಕದಷ್ಟು ಏರಿಕೆಯಾಗಿದೆ. ಕಳೆದ ವರ್ಷ 102 ಇದ್ದ ಬಿಲಿಯನೇರ್​ಗಳ ಸಂಖ್ಯೆ ಈ ಬಾರಿ 140ಕ್ಕೆ ಏರಿದೆ ಎಂದು ಪೋರ್ಬ್ಸ್​ ತಿಳಿಸಿದೆ. ಇನ್ನು ಮುಕೇಶ್ ಅಂಬಾನಿ ಇಡೀ ಏಷ್ಯಾದಲ್ಲೇ ನಂ.1 ಶ್ರೀಮಂತ. ತೈಲೋದ್ಯಮದಿಂದ-ಟೆಲಿಕಾಂ ಕ್ಷೇತ್ರದವರೆಗೆ ಅವರ ಗಳಿಕೆ ಇದೆ. ಈ ಕಾರಣಕ್ಕೆ ಅವರು ಅನೇಕ ವರ್ಷಗಳಿಂದಲೂ ಶ್ರೀಮಂತರ ಪಟ್ಟಿಯಲ್ಲಿ ನಂಬರ್​ 1ರ ಸ್ಥಾನದಲ್ಲೇ ಇದ್ದಾರೆ. ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ ಈ ಹಿಂದೆ ಎರಡನೇ ಸ್ಥಾನದಲ್ಲಿದ್ದು, ಇದೀಗ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಎರಡನೇ ಸ್ಥಾನಕ್ಕೆ ಅದಾನಿ ಏರಿದ್ದಾರೆ. ಅದಾನಿಯವರ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 5ಪಟ್ಟು ಹೆಚ್ಚಾಗಿದೆ ಎಂದು ಪೋರ್ಬ್ಸ್​ ತಿಳಿಸಿದೆ.

ಇಲ್ಲಿದೆ ನೋಡಿ ಪೋರ್ಬ್ಸ್ ಪಟ್ಟಿ ಮಾಡಿದ ಭಾರತದ 10 ಜನ ಶ್ರೀಮಂತರ ಹೆಸರು ಮತ್ತು ಅವರ ಆಸ್ತಿ ಮೌಲ್ಯ: ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ): 84.5 ಬಿಲಿಯನ್ ಡಾಲರ್ ಗೌತಮ್ ಅದಾನಿ (ಅದಾನಿ ಗ್ರೂಪ್ ಚೇರ್​ಮೆನ್​)-50.5 ಬಿಲಿಯನ್ ಡಾಲರ್ ಶಿವ್ ನಾದರ್ (ಎಚ್​ಸಿಎಲ್​ ಟೆಕ್ನಾಲಜೀಸ್​​ನ ಸಂಸ್ಥಾಪಕ, ಚೇರ್​ಮೆನ್​)-23.5 ಬಿಲಿಯನ್ ಡಾಲರ್ ರಾಧಾಕೃಷ್ಣನ್​ ದಮಾನಿ (ಡಿ-ಮಾರ್ಟ್ ಸಂಸ್ಥಾಪಕ)-16.5 ಬಿಲಿಯನ್ ಡಾಲರ್ ಉದಯ್​ ಕೋಟಾಕ್​ ( ಕೋಟಾಕ್ ಮಹೀಂದ್ರಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ)- 15.9 ಬಿಲಿಯನ್ ಡಾಲರ್ ಲಕ್ಷ್ಮೀ ಮಿತ್ತಲ್​(ವಿಶ್ವದ ಅತಿದೊಡ್ಡ ಉಕ್ಕುತಯಾರಿಕಾ ಕಂಪನಿ ಆರ್ಸೆಲರ್​ ಮಿತ್ತಲ್​ನ ಅಧ್ಯಕ್ಷ, ಸಿಇಒ)- 14.9 ಬಿಲಿಯನ್ ಡಾಲರ್ ಕುಮಾರ್ ಬಿರ್ಲಾ( ಆದಿತ್ಯ ಬಿರ್ಲಾ ಚೇರ್​ಮೆನ್​)-12.8 ಬಿಲಿಯನ್ ಡಾಲರ್ ಸೈರಸ್ ಪೂನವಾಲಾ (ಪೂನಾವಾಲಾ ಗ್ರೂಪ್​ನ ಅಧ್ಯಕ್ಷ)-12.7 ಬಿಲಿಯನ್ ಡಾಲರ್ ದಿಲೀಪ್​ ಸಾಂಘ್ವಿ (ಸನ್ ಫಾರ್ಮಾಸ್ಯುಟಿಕಲ್ಸ್ ಸ್ಥಾಪಕ)-10.9 ಬಿಲಿಯನ್ ಡಾಲರ್ ಸುನೀಲ್ ಮಿತ್ತಲ್​ ಮತ್ತು ಕುಟುಂಬ (ಭಾರತಿ ಎಂಟರ್​ಪ್ರೈಸಸ್​ ಸ್ಥಾಪಕ-ಚೇರ್​ಮೆನ್​)-10.5 ಬಿಲಿಯನ್ ಡಾಲರ್

ಇದನ್ನೂ ಓದಿ: KSRTC BMTC Strike: ಮಾರ್ಚ್​ ತಿಂಗಳ ಸಂಬಳ ರಿಲೀಸ್ ಆಗುತ್ತೆ.. ಆದ್ರೆ, ಸ್ವಲ್ಪ ತಡವಾಗುತ್ತೆ: ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ

ಮುಂಬೈ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಘಟನೆಯ ಸೂತ್ರಧಾರ ಸಚಿನ್ ವಾಜೆ ಎಂದು ಶಂಕೆ, ಸಿಸಿಟಿವಿ ಚಿತ್ರಣಗಳು ಏನು ಹೇಳುತ್ತಿವೆ?

(Mukesh Ambani Indias richest Person according to Forbes list)

Published On - 1:37 pm, Wed, 7 April 21

ತಾಜಾ ಸುದ್ದಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ