AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಡ್ರಗ್ಸ್ ಮಾಫಿಯಾ ಕೇಸ್: ನಟಿಯೊಬ್ಬರನ್ನ ಬಂಧಿಸಿದ NCB

ಕೆಲತಿಂಗಳಿಂದ ಸಾಕಷ್ಟು ಸದ್ದು ಮಾಡಿ ತಣ್ಣಗಾಗಿದ್ದ ಡ್ರಗ್ಸ್ ಮಾಫಿಯಾ ಕೇಸ್ ಇದೀಗ ಮತ್ತೆ ಸುದ್ದಿಯಾಗ್ತ್ತಿದೆ. ಇದೀಗ ನಟಿಯೊಬ್ಬರು ಲಿಸ್ಟ್​ಗೆ ಹೊಸದಾಗಿ ಸೇರ್ಪಡೆಯಾಗಿದ್ದು, ನಿನ್ನೆ ಮುಂಬೈನಲ್ಲಿ ಇಡೀ ದಿನ ವಿಚಾರಣೆ ನಡೆಸಿರುವ ಎನ್​ಸಿಬಿ ಅಧಿಕಾರಿಗಳು ಆ ನಟಿಯನ್ನ ಅರೆಸ್ಟ್ ಮಾಡಿದ್ದಾರೆ. ಹಾಗಾದ್ರೆ ಯಾರು ಆ ನಟಿ..? ಅದರ ಡೀಟೇಲ್ಸ್ ಇಲ್ಲಿದೆ.

ಮುಂಬೈ ಡ್ರಗ್ಸ್ ಮಾಫಿಯಾ ಕೇಸ್: ನಟಿಯೊಬ್ಬರನ್ನ ಬಂಧಿಸಿದ NCB
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on:Jan 05, 2021 | 7:36 AM

Share

ದೆಹಲಿ: ಡ್ರಗ್ಸ್ ದಂಧೆ ಎಲ್ಲೆಲ್ಲಿ ಬೇರು ಬಿಟ್ಟಿದೆ ಅನ್ನೋದೇ ತನಿಖಾಧಿಕಾರಿಗಳಿಗೆ ತಿಳಿಯದಾಗಿದೆ. ಯಾಕೆಂದರೆ ಬಗೆದಷ್ಟು ಈ ಮಾಫಿಯಾ ಆಳಕ್ಕೆ ಹೋಗುತ್ತಿದೆ. ಒಬ್ಬೊಬ್ಬರೇ ಈ ದಂಧೆಯಲ್ಲಿ ಲಾಕ್ ಆಗ್ತಿದ್ದಾರೆ. ಹೀಗೆ ಮತ್ತೊಬ್ಬ ನಟಿ ಎನ್​ಸಿಬಿ ಬಲೆಗೆ ಬಿದ್ದಿದ್ದು, ಇನ್ನಷ್ಟು ದಂಧೆಕೋರರಿಗೆ ಎನ್​ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಡ್ರಗ್ಸ್ ಕೇಸ್ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಸಿನಿ ಜಗತ್ತನ್ನೇ ನಡುಗಿಸಿತ್ತು. ಈ ಕೇಸ್​ನಲ್ಲಿ ಹೆಸರಾಂತ ನಟ, ನಟಿಯರು ಜೈಲು ಸೇರಿದ್ದಾರೆ. ಸ್ಯಾಂಡಲ್​ವುಡ್ ನಟಿಯರು ಜೈಲೂಟ ಸವಿದಿದ್ದಾರೆ. ಇದೀಗ ಶ್ವೇತಾ ಕುಮಾರಿ ಎಂಬ ನಟಿಯನ್ನು ಡ್ರಗ್ಸ್ ಕೇಸ್​ನಲ್ಲಿ ಅರೆಸ್ಟ್ ಮಾಡಲಾಗಿದೆ.

NCB ಬಲೆಗೆ ಮತ್ತೋರ್ವ ನಟಿ ಅಷ್ಟಕ್ಕೂ ನಾಲ್ಕೈದು ತಿಂಗಳಿಂದ NCB ಅಧಿಕಾರಿಗಳು ಮಾಯಾನಗರಿ ಮುಂಬೈನ ಗಲ್ಲಿ ಗಲ್ಲಿಗಳನ್ನೂ ಜಾಲಾಡಿ ಡ್ರಗ್ಸ್ ಜಾಲದಲ್ಲಿರುವ ಕಿರಾತಕರನ್ನ ಮಟ್ಟ ಹಾಕುತ್ತಿದ್ದಾರೆ. ಮುಂಬೈ ಪೆಡ್ಲರ್ ಕರೀಂ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನ ಬಂಧಿಸಿದ್ದ NCB ಅಧಿಕಾರಿಗಳು ಆತ ನೀಡಿದ ಮಾಹಿತಿ ಆಧಾರದ ಮೇಲೆ ನಟಿ ಶ್ವೇತಾ ಕುಮಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

ನಟಿ ಶ್ವೇತಾ ಡ್ರಗ್ಸ್ ಪಡೆಯುತ್ತಿದ್ದರಲ್ಲದೆ, ಡ್ರಗ್ಸ್ ಮಾರಾಟದಲ್ಲೂ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ ಸಹ ಹೊಂದಿದ್ದರೆನ್ನಲಾಗಿದೆ. ನಟಿಯ ಬಂಧನದ ಸಂದರ್ಭದಲ್ಲಿ 10 ಲಕ್ಷ ನಗದು, 10 ಗ್ರಾಂ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ನಟಿಯ ಮೊಬೈಲ್ ಅನ್ನು ಎನ್‌ಸಿಬಿ ವಶಪಡಿಸಿಕೊಂಡಿದ್ದು, ಮೊಬೈಲ್‌ ಕಾಲ್‌ ಡಿಟೇಲ್ಸ್, ಮೊಬೈಲ್‌ ನಂಬರ್ಸ್, ವಾಟ್ಸಾಪ್‌ ಚಾಟ್‌ ಜಾಲಾಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಒಟ್ನಲ್ಲಿ ಡ್ರಗ್ಸ್ ಜಾಲ ಬಗೆದಷ್ಟು ಆಳಕ್ಕೆ ಹಬ್ಬಿರುವುದು ನಟಿ ಶ್ವೇತಾ ಕುಮಾರಿ ಬಂಧನದಿಂದ ಸ್ಪಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ NCB ಲಿಸ್ಟ್​ನಲ್ಲಿ ಯಾರಿದ್ದಾರೆ, ಇನ್ನೂ ಯಾಱರು ಈ ಬಲೆಯಲ್ಲಿ ಲಾಕ್ ಆಗಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

NCB ಯಿಂದ ನಾಳೆ ಅರ್ಜುನ್ ರಾಮ್ ಪಾಲ್ ಎರಡನೇ ಬಾರಿ ವಿಚಾರಣೆ

Published On - 7:35 am, Tue, 5 January 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!