ಮುರ್ಷಿದಾಬಾದ್ ಗಲಭೆ: ಹಿಂದೂಗಳನ್ನು ಗುರಿಯಾಗಿಸಲಾಗಿತ್ತು, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು

ಮುರ್ಷಿದಾಬಾದ್​ನಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಹಿಂದೂಗಳೇ ದಾಳಿಕೋರರ ಪ್ರಮುಖ ಗುರಿಯಾಗಿತ್ತು ಎನ್ನುವ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಸಮಿತಿಯ ವರದಿ ಪ್ರಕಾರ ತೃಣಮೂಲ ನಾಯಕರು ಕೂಡ ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ. ಹಿಂಸಾಚಾರದ ಸಮಯದಲ್ಲಿ ರಾಜ್ಯ ಪೊಲೀಸರು ಕೂಡ ಮೂಕ ಪ್ರೇಕ್ಷಕರಾಗಿ ಎಲ್ಲವನ್ನು ನೋಡುತ್ತಿದ್ದರೇ ವಿನಃ ಯಾರ ಸಹಾಯಕ್ಕೂ ಧಾವಿಸಲಿಲ್ಲ. ಶಾಸಕರ ಎದುರೇ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮುರ್ಷಿದಾಬಾದ್ ಗಲಭೆ: ಹಿಂದೂಗಳನ್ನು ಗುರಿಯಾಗಿಸಲಾಗಿತ್ತು, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು
ಮುರ್ಷಿದಾಬಾದ್ ಹಿಂಸಾಚಾರ

Updated on: May 22, 2025 | 7:58 AM

ಕೋಲ್ಕತ್ತಾ, ಮೇ 22: ಪಶ್ಚಿಮ ಬಂಗಾಳ(West Bengal) ದಲ್ಲಿ ವಕ್ಫ್(Waqf)​ ಕಾಯ್ದೆಯ ವಿರುದ್ಧವಾಗಿ ಏಪ್ರಿಲ್​ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ವರದಿ ಹೊರಬಿದ್ದಿದೆ. ಹಿಂಸಾಚಾರದ ಸಂದರ್ಭದಲ್ಲಿ ಹಿಂದೂಗಳನ್ನು ಗುರಿಯಾಗಿದಲಾಗಿತ್ತು ಎಂದು ಹೈಕೋರ್ಟ್​ ರಚಿಸಿದ್ದ ತನಿಖಾ ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. ಸಮಿತಿಯ ವರದಿ ಪ್ರಕಾರ, ತೃಣಮೂಲ ನಾಯಕರು ಕೂಡ ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ. ಹಿಂಸಾಚಾರದ ಸಮಯದಲ್ಲಿ ರಾಜ್ಯ ಪೊಲೀಸರು ಕೂಡ ಮೂಕ ಪ್ರೇಕ್ಷಕರಾಗಿ ಎಲ್ಲವನ್ನು ನೋಡುತ್ತಿದ್ದರೇ ವಿನಃ ಯಾರ ಸಹಾಯಕ್ಕೂ ಧಾವಿಸಲಿಲ್ಲ. ಶಾಸಕರ ಎದುರೇ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಿಂಸಾಚಾರದ ಸಮಯದಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗಿತ್ತು. ಹಿಂಸಾಚಾರದ ತನಿಖೆಗಾಗಿ ಕೋಲ್ಕತ್ತಾ ಹೈಕೋರ್ಟ್ ರಚಿಸಿದ್ದ ಮೂವರು ಸದಸ್ಯರ ತನಿಖಾ ಸಮಿತಿಯು ತನ್ನ ವರದಿಯಲ್ಲಿ ಈ ವಿಷಯಗಳನ್ನು ಹೇಳಿದೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಈ ಹಿಂಸಾಚಾರ ಭುಗಿಲೆದ್ದಿತ್ತು.

ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ರಾಜಾ ಬಸು ಚೌಧರಿ ಅವರ ವಿಭಾಗೀಯ ಪೀಠದ ಮುಂದೆ ಮಂಗಳವಾರ ಮಂಡಿಸಲಾದ ವರದಿಯು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಏಪ್ರಿಲ್ 11, ಶುಕ್ರವಾರ ಮಧ್ಯಾಹ್ನ 2.30 ರ ನಂತರ ಸ್ಥಳೀಯ ಕೌನ್ಸಿಲರ್ ಮೆಹಬೂಬ್ ಆಲಂ ನೇತೃತ್ವದಲ್ಲಿ ಮುಖ್ಯ ದಾಳಿ ನಡೆದಿದೆ ಎಂದು ವರದಿಯಾಗಿದೆ. ಅವರ ಜೊತೆ ಸಾವಿರಾರು ಜನ ಇದ್ದರು. ಬೇಡವನ ಗ್ರಾಮದಲ್ಲಿ 113 ಮನೆಗಳು ತೀವ್ರವಾಗಿ ಹಾನಿಗೊಳಗಾಗಿದ್ದು ಅದು ಈಗ ವಾಸಕ್ಕೆ ಯೋಗ್ಯವಿಲ್ಲ.

ಇದನ್ನೂ ಓದಿ
ಗಾಂಧಿ, ನೆಹರು ಬಗ್ಗೆಯೇ ತಪ್ಪು ಹೇಳಿದ ರಾಹುಲ್ ಗಾಂಧಿ;ಬಿಜೆಪಿ ಸಂಸದ ವ್ಯಂಗ್ಯ
ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ ಬೆಂಬಲಕ್ಕೆ ನಿಂತ ಖರ್ಗೆ
ದೆಹಲಿ ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಕೆನಡಾದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಗುಂಡೇಟಿನಿಂದ ಸಾವು

ಮತ್ತಷ್ಟು ಓದಿ: ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ

ಏಪ್ರಿಲ್ 17ರಂದು ಹೈಕೋರ್ಟ್​ ಸಮಿತಿ ರಚಿಸಿತ್ತು
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ನ್ಯಾಯಾಂಗ ಸೇವೆಗಳ ಸದಸ್ಯರನ್ನು ಒಳಗೊಂಡ ಈ ಸಮಿತಿಯು ತನ್ನ ವರದಿಯಲ್ಲಿ ಹಿಂಸಾಚಾರದ ಗುರಿ ಹಿಂದೂ ಸಮುದಾಯ ಎಂದು ಸ್ಪಷ್ಟವಾಗಿ ಹೇಳಿದೆ. ತೃಣಮೂಲ ಶಾಸಕ ಅಮೀರುಲ್ ಇಸ್ಲಾಂ ಕೂಡ ಬೇದ್ವಾನಾ ಗ್ರಾಮಕ್ಕೆ ಬಂದು ಯಾವ ಮನೆಗಳ ಮೇಲೆ ದಾಳಿ ನಡೆದಿಲ್ಲ ಎಂದು ನೋಡಿದರು, ನಂತರ ದಾಳಿಕೋರರು ಆ ಮನೆಗಳಿಗೆ ಬೆಂಕಿ ಹಚ್ಚಿದರು. ಇದೆಲ್ಲವೂ ಶಾಸಕರ ಮುಂದೆಯೇ ನಡೆಯಿತು, ಆದರೆ ಅವರು ಏನೂ ಮಾಡದೆ ಸ್ಥಳದಿಂದ ಹೊರಟುಹೋದರು. ಸಂತ್ರಸ್ತರು ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ನೀರಿನ ಸಂಪರ್ಕ ಕಡಿತಗೊಳಿಸಿದ್ದರು

ವರದಿಯ ಪ್ರಕಾರ, ಆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹಚ್ಚುವಿಕೆ, ಲೂಟಿ ಮತ್ತು ಅಂಗಡಿಗಳು ಮತ್ತು ಮಾಲ್‌ಗಳ ಧ್ವಂಸ ನಡೆದಿದೆ. ದಾಳಿಕೋರರು ಶಂಶೇರ್‌ಗಂಜ್, ಹಿಜಲ್ತಲಾ, ಶಿಯುಲಿತಲಾಲಾ, ದಿಗ್ರಿ ನಿವಾಸಿಗಳಾಗಿದ್ದು, ಮುಖ ಮುಚ್ಚಿಕೊಂಡು ಬಂದಿದ್ದರು. ಬೆಂಕಿಯನ್ನು ನಂದಿಸಲು ಸಾಧ್ಯವಾಗದಂತೆ ದಾಳಿಕೋರರು ನೀರಿನ ಸಂಪರ್ಕಗಳನ್ನು ಸಹ ಕಡಿತಗೊಳಿಸಿದ್ದರು. ಈ ದಾಳಿಯು ಗ್ರಾಮದ ಮಹಿಳೆಯರಲ್ಲಿ ಭೀತಿಯನ್ನು ಉಂಟುಮಾಡಿತು ಮತ್ತು ಅವರು ತಮ್ಮ ಸಂಬಂಧಿಕರೊಂದಿಗೆ ಬೇರೆಡೆ ಆಶ್ರಯ ಪಡೆದರು.

ದೇವಾಲಯಗಳಿಗೂ ಹಾನಿಯಾಗಿದೆ
ಹಿಂಸಾಚಾರದ ಸಮಯದಲ್ಲಿ ದಾಳಿಕೋರರು ಸಾಕಷ್ಟು ಅವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ತನಿಖಾ ಸಮಿತಿ ಹೇಳಿದೆ. ದಿನಸಿ, ಹಾರ್ಡ್‌ವೇರ್, ವಿದ್ಯುತ್ ಮತ್ತು ಬಟ್ಟೆ ಅಂಗಡಿಗಳು ಹಾಗೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಲಾಯಿತು. ಇದೆಲ್ಲವೂ ಪೊಲೀಸ್ ಠಾಣೆಯಿಂದ 300 ಮೀಟರ್ ವ್ಯಾಪ್ತಿಯಲ್ಲಿ ನಡೆದಿದೆ. ಘೋಷ್‌ಪದ ಪ್ರದೇಶವೊಂದರಲ್ಲೇ 29 ಅಂಗಡಿಗಳು ಹಾನಿಗೊಳಗಾಗಿವೆ. ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದ ನಂತರ ಸಮಿತಿ ಈ ವರದಿಯನ್ನು ಸಿದ್ಧಪಡಿಸಿದೆ.

ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದ ಹೈಕೋರ್ಟ್​
ಹಿಂಸಾಚಾರ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪುನರ್ವಸತಿ ಪ್ಯಾಕೇಜ್ ಒದಗಿಸುವ ಅಗತ್ಯವನ್ನು ಸಮಿತಿಯು ತನ್ನ ವರದಿಯಲ್ಲಿ ಸೂಚಿಸಿದೆ ಎಂದು ಪೀಠ ಹೇಳಿದೆ. ನಾಗರಿಕರ ಒಂದು ವರ್ಗಕ್ಕೆ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಸರಿದೂಗಿಸಲು ಇದೊಂದೇ ಮಾರ್ಗ ಎಂದು ಅದು ಹೇಳಿದೆ.

ಮಮತಾ ಸರ್ಕಾರವೂ ವರದಿ ಸಲ್ಲಿಸಿದೆ
ಹೈಕೋರ್ಟ್ ರಚಿಸಿದ ಸಮಿತಿಯ ಹೊರತಾಗಿ, ಪಶ್ಚಿಮ ಬಂಗಾಳ ಸರ್ಕಾರವೂ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವರದಿಯನ್ನು ಸಲ್ಲಿಸಿದೆ. ಪೊಲೀಸರು ಮತ್ತು ಜಿಲ್ಲಾಡಳಿತದ ಹಸ್ತಕ್ಷೇಪದ ನಂತರ ಸುತಿ, ಧುಲಿಯನ್, ಶಂಶೇರ್‌ಗಂಜ್ ಮತ್ತು ಜಂಗೀಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅದು ಹೇಳಿದೆ. ವರದಿಗಳ ಪ್ರಕಾರ, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಏಪ್ರಿಲ್ 4 ರಿಂದಲೇ ಮುರ್ಷಿದಾಬಾದ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಏಪ್ರಿಲ್ 12 ರಂದು, ಶಂಶೇರ್‌ಗಂಜ್‌ನಲ್ಲಿ ಹರಗೋಬಿಂದ್ ದಾಸ್ ಮತ್ತು ಅವರ ಮಗ ಚಂದನ್ ದಾಸ್ ಅವರನ್ನು ಗುಂಪೊಂದು ಕೊಂದಿತ್ತು. ಏಪ್ರಿಲ್ 11 ರಂದು ಶಂಶೇರ್‌ಗಂಜ್‌ನಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು. ಹೈಕೋರ್ಟ್ ಆದೇಶದ ಮೇರೆಗೆ, ಏಪ್ರಿಲ್ 12 ರಂದು ನಿಯೋಜನೆಯನ್ನು ಹೆಚ್ಚಿಸಲಾಯಿತು ಎಂದು ತಿಳಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ