AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರ್ಷಿದಾಬಾದ್ ಹಿಂಸಾಚಾರ; ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಬೇಕು: ಅತಿದೊಡ್ಡ ಐವಿಆರ್​​ಎಸ್ ಸಮೀಕ್ಷೆಯಲ್ಲಿ ಜನಾಭಿಪ್ರಾಯ

59% people wants President's rule in West Bengal, says Survey: ಮುರ್ಷಿದಾಬಾದ್ ಹಿಂಸಾಚಾರದ ಬಳಿಕ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕು ಎಂದು ಶೇ. 59 ಮಂದಿ ಅಭಿಪ್ರಾಪಟ್ಟಿದ್ದಾರೆ. ಕಳೆದ 2-3 ದಿನದಲ್ಲಿ ಬಂಗಾಳ ರಾಜ್ಯದ ಜನರ ಅಭಿಪ್ರಾಯವನ್ನು ಐವಿಆರ್​​ಎಸ್ ಮೂಲಕ ಪಡೆಯಲಾಗಿದೆ. ಮುರ್ಷಿದಾಬಾದ್ ಕೋಮುಗಲಭೆ ಘಟನೆ ಬಳಿಕ ಸಿಎಂ ಮಮತಾ ಬ್ಯಾನರ್ಜಿ ಹಿಂದೂಗಳ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೆಚ್ಚಿನ ಜನರು ಹೇಳಿದ್ದಾರೆ.

ಮುರ್ಷಿದಾಬಾದ್ ಹಿಂಸಾಚಾರ; ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಬೇಕು: ಅತಿದೊಡ್ಡ ಐವಿಆರ್​​ಎಸ್ ಸಮೀಕ್ಷೆಯಲ್ಲಿ ಜನಾಭಿಪ್ರಾಯ
ಮುರ್ಷಿದಾಬಾದ್ ಹಿಂಸಾಚಾರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 20, 2025 | 1:00 PM

Share

ನವದೆಹಲಿ, ಏಪ್ರಿಲ್ 20: ಮುರ್ಷಿದಾಬಾದ್ ಹಿಂಸಾಚಾರದಿಂದ ನಲುಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ (Presdent’s Rule) ಜಾರಿಯಾಗಬೇಕೆಂಬ ಆಗ್ರಹ ಕೇಳಿಬಂದಿದೆ. ಇಂಕ್ ಇನ್​ಸೈಟ್ (InkInsight) ಐವಿಆರ್​​ಎಸ್ ಮೂಲಕ ನಡೆಸಿದ ವ್ಯಾಪಕ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಇಂದು ಭಾನುವಾರ ಬಿಡುಗಡೆ ಆದ ಸಮೀಕ್ಷಾ ವರದಿ ಪ್ರಕಾರ, ಮುರ್ಷಿದಾಬಾದ್ ಘಟನೆ ಬಳಿಕ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕೋ ಬೇಡವೋ ಎನ್ನುವ ಪ್ರಶ್ನೆಗೆ ಶೇ. 59ರಷ್ಟು ಜನರು ಹೌದು ಎಂದಿದ್ದಾರೆ. ಶೇ. 28ರಷ್ಟು ಜನರು ರಾಷ್ಟ್ರಪತಿ ಆಳ್ವಿಕೆ ಬೇಡ ಎಂದಿದ್ದಾರೆ.

ಇಂಕ್ ಇನ್​​ಸೈಟ್ ಸಂಸ್ಥೆ ಪಶ್ಚಿಮ ಬಂಗಾಳದೊಳಗೆ ಫೋನ್ ಮೂಲಕ ಕಳೆದ ಎರಡು ಮೂರು ದಿನದಲ್ಲಿ ಈ ಸಮೀಕ್ಷೆ ನಡೆಸಿದೆ. 8,954 ಮಂದಿಯ ಅಭಿಪ್ರಾಯ ಪಡೆಯಲಾಗಿದೆ.

ಸಿಎಂ ಬ್ಯಾನರ್ಜಿ ಇಮೇಜ್​​ಗೆ ಧಕ್ಕೆ ಆಗಿದೆಯಾ?

ಮುರ್ಷಿದಾಬಾದ್ ಹಿಂಸಾಚಾರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಹಿಂದೂಗಳ ವಿಶ್ವಾಸ ಕುಸಿದಿದೆಯಾ ಎನ್ನುವ ಪ್ರಶ್ನೆಗೆ, ಶೇ. 58 ಮಂದಿ ಹೌದು ಎಂದಿದ್ದಾರೆ. ಶೇ. 22 ಮಂದಿ ಇಲ್ಲ ಎಂದಿದ್ದಾರೆ. ಗೊತ್ತಿಲ್ಲ ಎಂದವರ ಸಂಖ್ಯೆ ಶೇ. 20 ಇದೆ.

ಇದನ್ನೂ ಓದಿ
Image
ಗಾಂಧಿ, ನೆಹರು ಬಗ್ಗೆಯೇ ತಪ್ಪು ಹೇಳಿದ ರಾಹುಲ್ ಗಾಂಧಿ;ಬಿಜೆಪಿ ಸಂಸದ ವ್ಯಂಗ್ಯ
Image
ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ ಬೆಂಬಲಕ್ಕೆ ನಿಂತ ಖರ್ಗೆ
Image
ದೆಹಲಿ ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
Image
ಕೆನಡಾದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಗುಂಡೇಟಿನಿಂದ ಸಾವು

ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಇತಿಹಾಸ ಕಲಿಯಬೇಡಿ; ನೆಹರು ಬಗ್ಗೆಯೇ ತಪ್ಪು ಹೇಳಿದ್ದಕ್ಕೆ ಬಿಜೆಪಿ ಸಂಸದ ವ್ಯಂಗ್ಯ

ಈ ವಿಚಾರದಲ್ಲಿ ಪುರುಷರು ಮತ್ತು ಮಹಿಳೆಯರ ಅಭಿಪ್ರಾಯ ವರ್ಗೀಕರಿಸಿದರೆ, ಪುರುಷರು ಹೆಚ್ಚು ಹೌದು ಎಂದಿದ್ದಾರೆ. ಅಂದರೆ, ಹಿಂದೂಗಳ ಭಾವನೆಗೆ ಮಮತಾ ಬ್ಯಾನರ್ಜಿ ಧಕ್ಕೆ ತಂದಿದ್ದಾರೆ ಎಂದು ಶೇ. 61.24 ಪುರುಷರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಬಂಗಾಳ ಪ್ರದೇಶದಲ್ಲಿ…

ಮುರ್ಷಿದಾಬಾದ್ ಹಿಂಸಾಚಾರದ ಬಳಿಕ ಮಮತಾ ಬ್ಯಾನರ್ಜಿ ಬಗ್ಗೆ ಹಿಂದೂಗಳ ವಿಶ್ವಾಸ ಕಡಿಮೆ ಆಗಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಬಂಗಾಳದ ಶೇ. 80.85 ಜನರು ಹೌದು ಎಂದಿದ್ದಾರೆ.

ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಇಲ್ಲಿನ ಶೇ. 70.73 ಮಂದಿಯ ಅನಿಸಿಕೆ.

ಪ್ರೆಸಿಡೆನ್ಸಿ ಪ್ರದೇಶದಲ್ಲಿ ಜನಾಭಿಪ್ರಾಯ

ಮಮತಾ ಬ್ಯಾನರ್ಜಜಿ ಬಗ್ಗೆ ಹಿಂದೂಗಳ ವಿಶ್ವಾಸ ಧಕ್ಕೆಯಾಗಿದೆ ಎಂದು ಪ್ರೆಸಿಡೆನ್ಸಿ ಪ್ರದೇಶದ ಶೇ. 54.29 ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕು ಎಂಬುದು ಇಲ್ಲಿನ ಶೇ. 55.29 ಮಂದಿಯ ಅನಿಸಿಕೆಯಾಗಿದೆ.

ಬರ್ಧಮಾನ್ ಜಿಲ್ಲೆಯ ಜನರ ಅನಿಸಿಕೆ

ಮಮತಾ ಬ್ಯಾನರ್ಜಿ ಬಗ್ಗೆ ಹಿಂದೂಗಳ ವಿಶ್ವಾಸ ಕಡಿಮೆ ಆಗಿರಬಹುದು ಎಂದು ಬರ್ಧಮಾನ್ ಜಿಲ್ಲೆಯ ಶೇ. 55.88 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇ. 17.65 ಮಂದಿ ತದ್ವಿರುದ್ಧದ ಅನಿಕೆ ನೀಡಿದ್ದಾರೆ.

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ; ರಾಜಕೀಯ ಪಿತೂರಿಯಿಂದ ನಮ್ಮನ್ನು ಹೆದರಿಸಲಾಗದು ಎಂದ ಖರ್ಗೆ

ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕಾ ಬೇಡವಾ ಎನ್ನುವ ಪ್ರಶ್ನೆಗೆ ಬರ್ಧಮಾನ್​​ನ ಶೇ. 52.38 ಮಂದಿ ಹೌದು ಎಂದರೆ, ಶೇ. 33.33 ಮಂದಿ ಇಲ್ಲ ಎಂದಿದ್ದಾರೆ.

ಜಂಗಲ್​​ಮಹಲ್ ಪ್ರದೇಶದ ಜನರ ಅನಿಸಿಕೆ

ಮುರ್ಷಿದಾಬಾದ್ ಹಿಂಸಾಚಾರದ ಬಳಿಕ ಸಿಎಂ ಮಮತಾ ಬ್ಯಾನರ್ಜಿ ಹಿಂದೂಗಳ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಜಂಗಲ್​​ಮಹಲ್​ನ ಶೇ. 57.14 ಮಂದಿ ಒಪ್ಪಿಕೊಂಡಿದ್ದಾರೆ. ಹಾಗೇನೂ ಆಗಿಲ್ಲ ಎಂದು ಶೇ. 17.58 ಮಂದಿ ಮಾತ್ರ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರಪತಿ ಆಳ್ವಿಕೆ ಹೇರಬೇಕೆನ್ನುವ ಬಗ್ಗೆ ಶೇ. 65.52 ಮಂದಿ ಹೌದು ಎಂದಿದ್ದಾರೆ. ಶೇ. 20.69 ಮಂದಿ ರಾಷ್ಟ್ರಪತಿ ಆಳ್ವಿಕೆ ಬೇಡ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Sun, 20 April 25

Follow Us
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ