Narendra Modi Speech Highlights: ಆಪರೇಷನ್ ಸಿಂದೂರ ನಿಂತಿಲ್ಲ: ಉಗ್ರರು, ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ
Narendra Modi speech on Operation Sindoor: ನರೇಂದ್ರ ಮೋದಿ ಅವರು ಪಾಕಿಸ್ತಾನ ಹಾಗೂ ಪಾಕ್ ಪ್ರೇರಿತ ಉಗ್ರರ ವಿರುದ್ಧ ಇಂದು ಸೋಮವಾರ ಹರಿಹಾಯ್ದರು. ಆಪರೇಷನ್ ಸಿಂದೂರ ಇನ್ನೂ ನಿಂತಿಲ್ಲ. ಉಗ್ರರು ಮತ್ತೆ ಕೆಣಕಿದರೆ ಕಾರ್ಯಾಚರಣೆ ತಪ್ಪಿದ್ದಲ್ಲ ಎಂದು ಎಚ್ಚರಿಕೆಯ ಮೆಸೇಜ್ ರವಾನಿಸಿದ್ದಾರೆ. ಪಾಕಿಸ್ತಾನದಲ್ಲಿ ಉಗ್ರರು ಎಲ್ಲೇ ಅಡಗಿದರೂ ಭಾರತೀಯ ಸೇನೆ ಕಣ್ಣಿಂದ ತಪ್ಪಿಸಿಕೊಳ್ಳಲು ಆಗಲ್ಲ ಎಂದರು.

ನವದೆಹಲಿ, ಮೇ 12: ನರೇಂದ್ರ ಮೋದಿ ಇವತ್ತು ಪಾಕಿಸ್ತಾನ ಹಾಗೂ ಉಗ್ರಗಾಮಿಗಳ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು. ಭಾರತ ಆರಂಭಿಸಿದ ಆಪರೇಷನ್ ಸಿಂದೂರ (Operation Sindoor) ಇನ್ನೂ ಅಂತ್ಯವಾಗಿಲ್ಲ. ಭಯೋತ್ಪಾದನೆ ಮತ್ತು ಅದರ ಪ್ರಾಯೋಜಕರಿಗೆ ಅವರದ್ದೇ ಭಾಷೆಯಲ್ಲಿ ಭಾರತ ಉತ್ತರ ನೀಡುತ್ತದೆ ಎಂದು ಪ್ರಧಾನಿಗಳು ಹೇಳಿದರು. ಆಪರೇಷನ್ ಸಿಂದೂರ ಶುರುವಾದ ಬಳಿಕ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಭಾಷಣ ಮಾಡಿರುವುದು. ಈ ಭಾಷಣದಲ್ಲಿ ಅವರು, ಪಾಕಿಸ್ತಾನವನ್ನು ತೀವ್ರ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡರು. ಭಾರತದ ಮಿಲಿಟರಿ ಕಾರ್ಯಾಚರಣೆಗೆ ತತ್ತರಗೊಂಡು ಪಾಕಿಸ್ತಾನ ಶಾಂತಿಗಾಗಿ ವಿಶ್ವ ನಾಯಕರ ಬಳಿಕ ಬಿಕ್ಷೆ ಕೇಳಬೇಕಾಗಿ ಬಂದು ಎಂದು ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣದ ಹೈಲೈಟ್ಸ್
- ಆಪರೇಷನ್ ಸಿಂದೂರದ ಯಶಸ್ವಿಯು ಭಾರತದ ನಾರಿ ಶಕ್ತಿಗೆ ಮುಡಿಪು
- ಬಹವಾಲಪುರ್ ಮತ್ತು ಮುರಿಡ್ಕೆಯು ಭಯೋತ್ಪಾದನೆಯ ವಿಶ್ವವಿದ್ಯಾಲಯ. ಇಡೀ ಪಾಕಿಸ್ತಾನವು ಉಗ್ರ ಕಾರ್ಯಾಲಯ.
- ಪಾಕಿಸ್ತಾನ ನಮ್ಮ ಹೆಣ್ಮಕ್ಕಳ ಸಿಂದೂರ ಅಳಿಸಲು ಯತ್ನಿಸಿತು. ನಾವು ಅವರ ಭಯೋತ್ಪಾದನಾ ಕೇಂದ್ರಗಳನ್ನೇ ಬುಡಮೇಲು ಮಾಡಿದೆವು.
- ಭಾರತದ ಸೇನಾ ಪಡೆಗಳ ಗುರಿ ಶತಕ ದಾಟಿದೆ. ಪಾಕಿಸ್ತಾನಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಲಾಗಿದೆ.
- ಪಾಕಿಸ್ತಾನದ ಸೇನೆಯು ಭಾರತದ ಸೇನೆಗೆ ಯಾವ ಸಾಟಿಯೂ ಅಲ್ಲ.
- ಪಾಕಿಸ್ತಾನವು ಬೆಂಬಲಿಸುವ ಉಗ್ರರ ಪ್ರತಿಯೊಂದು ಜಾಗವನ್ನೂ ಭಾರತದ ಸೇನಾ ಪಡೆಗಳು ತಲುಪಬಲ್ಲುವು.
- ಪಾಕಿಸ್ತಾನವು ಭಾರತದ ದಾಳಿ ತಡೆಯಲಾಗದೆ ಶಾಂತಿಗಾಗಿ ಬೇಡುವ ಪರಿಸ್ಥಿತಿ ಬಂತು.
- ಪಾಕಿಸ್ತಾನದ ಪರಮಾಣು ಬೆದರಿಕೆ ನಡೆಯಲ್ಲ. ಭಾರತವು ಉತ್ತರ ಕೊಟ್ಟೇ ಕೊಡುತ್ತದೆ. ಇದು ಹೊಸ ನಿಯಮ.
- ಭಯೋತ್ಪಾದಕರಿಗೂ, ಅವರನ್ನು ಬೆಂಬಲಿಸುವವರಿಗೂ ಯಾವ ವ್ಯತ್ಯಾಸ ಇಲ್ಲ.
- ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಸಾಧ್ಯವಿಲ್ಲ.
- ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ.
ಇದನ್ನೂ ಓದಿ: ರಕ್ತ, ನೀರು ಒಟ್ಟಿಗೆ ಹರಿಯಲ್ಲ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ
ಈ ಮೇಲಿನವು ನರೇಂದ್ರ ಮೋದಿ ಅವರ ಭಾಷಣದ ಕೆಲ ಪ್ರಮುಖ ಅಂಶಗಳು. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಬರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರಧಾನಿಗಳು ಪಾಕಿಸ್ತಾನಕ್ಕೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಮಾತುಕತೆ ಬೇಕೆಂದರೆ ಭಯೋತ್ಪಾದನೆಗೆ ಬೆಂಬಲ ನಿಲ್ಲಿಸಿ ಎನ್ನುವ ಖಡಕ್ ಸಂದೇಶ ಅದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ