8 ಸಂಪುಟ ಸಮಿತಿಗಳ ಪುನರ್​ರಚನೆ: ಎನ್​ಡಿಎ ಮಿತ್ರಪಕ್ಷಗಳಿಗೆ ಹೆಚ್ಚಿನ ಅವಕಾಶ

ಕೇಂದ್ರ ಸರ್ಕಾರವು ಸಂಪುಟ ಸಮಿತಿಗಳ ಪುನರ್​ರಚನೆ ಮಾಡಿದೆ. ಇದರಲ್ಲಿ ಎನ್​ಡಿಎ ಮಿತ್ರ ಪಕ್ಷಗಳಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ನೇಮಕಾತಿ ಕುರಿತ ಸಂಪುಟ ಸಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಪ್ರಧಾನಿ ಮೋದಿ, ಅಮಿತ್​ ಶಾ ಅವರಷ್ಟೇ ಸಮಿತಿಯಲ್ಲಿ ಇರಲಿದ್ದಾರೆ.

8 ಸಂಪುಟ ಸಮಿತಿಗಳ ಪುನರ್​ರಚನೆ: ಎನ್​ಡಿಎ ಮಿತ್ರಪಕ್ಷಗಳಿಗೆ ಹೆಚ್ಚಿನ ಅವಕಾಶ
ಸಂಪುಟ ಸಮಿತಿ

Updated on: Jul 04, 2024 | 8:44 AM

ಕೇಂದ್ರ ಸರ್ಕಾರವು ಎಂಟು ಸಂಪುಟ ಸಮಿತಿ(Cabinet Panel)ಗಳನ್ನು ಪುನರ್​ರಚನೆ ಮಾಡಿದ್ದು, ಆರ್ಥಿಕ ವ್ಯವಹಾರಗಳ ಎಲ್ಲಾ ಪ್ರಮುಖ ಸಂಪುಟ ಸಮಿತಿ ಹಾಗೂ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಗಳಲ್ಲಿ ಎನ್​ಡಿಎ ಮಿತ್ರಪಕ್ಷಗಳ ಸದಸ್ಯರಿಗೆ ಅವಕಾಶ ಕಲ್ಪಿಸಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈಶಂಕರ್​ ಅವರನ್ನು ಒಳಗೊಂಡ ಭದ್ರತೆಯ ಸಂಪುಟ ಸಮಿತಿಯು ಬದಲಾಗದೆ ಉಳಿದಿದೆ.

ಭದ್ರತಾ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ,ರಾಜಕೀಯ ವ್ಯವಹಾರಗಳ ಸಮಿತಿ,ಹೂಡಿಕೆ ಮತ್ತು ಪ್ರಗತಿ ಸಮಿತಿ, ಕೌಶಲ, ಉದ್ಯೋಗ ಹಾಗೂ ಜೀವನೋಪಾಯ ಸಂಪುಟ ಸಮಿತಿಯ ಪುನರ್​ರಚನೆಯಾಗಿದೆ.

ಸಿಸಿಇಎ ಸಮಿತಿಯಲ್ಲಿ ಭಾರಿ ಕೈಗಾರಿಕೆಗಳು ಮತ್ತು ಉಕ್ಕು ಖಾತೆ ಸಚಿವ ಎಚ್​ಡಿ ಕುಮಾರಸ್ವಾಮಿ ಮತ್ತು ಪಂಚಾಯತ್​ರಾಜ್ ಮತ್ತು ಪಶುಸಂಗೋಪನೆ ಖಾತೆ ಸಚಿವ ಲಲನ್ ಸಿಂಗ್​ ಸ್ಥಾನ ಪಡೆದಿದ್ದಾರೆ.
2019ರ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಸಂಪುಟ ಸಮಿತಿಗಳ ಪುನರ್​ರಚನೆ ನಡೆದಿದೆ. ಈ ಮೊದಲು ಆಗಸ್ಟ್ 2020ರಲ್ಲಿ ಅಕಾಲಿದಳ ಮುಖಂಡ ಹರ್​ಸಿಮ್ರತ್ ಕೌರ್ ಬಾದಲ್​ ಅವರನ್ನು ಸಮಿತಿಗೆ ನೇಮಕ ಮಾಡಿಕೊಳ್ಳಲಾಗಿತ್ತು.

ಪ್ರಲ್ಹಾದ್ ಜೋಶಿ, ಮನ್ಸುಖ್ ಮಾಂಡವಿಯಾ ಮತ್ತು ಗಿರಿರಾಜ್ ಸಿಂಗ್ – ಅವರ ಖಾತೆಗಳು ಬದಲಾದ ನಂತರ ಈ ಸಮಿತಿಯಿಂದ ವರ್ಗಾಯಿಸಲಾಯಿತು. ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಈ ಸಮಿತಿಯ ಭಾಗವಾಗಿದ್ದ ಸ್ಮೃತಿ ಇರಾನಿ ಅವರು 2024 ರ ಚುನಾವಣೆಯಲ್ಲಿ ಸೋತ ನಂತರ ಸಚಿವರಾಗಿ ಉಳಿದಿಲ್ಲ.

ಮತ್ತಷ್ಟು ಓದಿ: ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಂವಿಧಾನ ಲೈಟ್​ ಹೌಸ್​ನಂತೆ ಕಾರ್ಯನಿರ್ವಹಿಸುತ್ತೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ CCEA, ಕೈಗಾರಿಕಾ ನೀತಿಗಳು, ಪ್ರಮುಖ ಹೂಡಿಕೆಯ ಪ್ರಸ್ತಾಪಗಳು ಮತ್ತು ಅಣೆಕಟ್ಟುಗಳು ಮತ್ತು ವಿದ್ಯುತ್ ಸ್ಥಾವರಗಳಂತಹ ಮಹತ್ವದ ಮೂಲಸೌಕರ್ಯ ಯೋಜನೆಗಳ ನಿರ್ಧಾರಗಳಿಗೆ ಜವಾಬ್ದಾರರಾಗಿರುವ ಅತ್ಯುನ್ನತ ಕಾರ್ಯನಿರ್ವಾಹಕ ಸಂಸ್ಥೆಯಾಗಿದೆ.

ಇತರ ಸದಸ್ಯರೆಂದರೆ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್, ಪಿಯೂಷ್ ಗೋಯಲ್, ಮತ್ತು ಧರ್ಮೇಂದ್ರ ಪ್ರಧಾನ್.

ಪ್ರಧಾನಿ ನೇತೃತ್ವದ ಸಿಸಿಪಿಎ, ಸರ್ಕಾರಕ್ಕೆ ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ, ಎಚ್​ಎಎಂ ನಿಂದ ಎಂಎಸ್​ಎಂಇ ಸಚಿವ ಜಿತಿನ್ ರಾಮ್ ಮಾಝಿ ಮತ್ತು ತೆಲುಗು ದೇಶಂ ಪಕ್ಷದಿಂದ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಸಹ ಒಳಗೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us