Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ವಿಮೆ ಪಾಲಿಸಿದಾರರಿಗೆ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್​ಲೆಸ್ ಸೇವೆ ನಿರಾಕರಿಸುವಂತಿಲ್ಲ: ಐಆರ್​ಡಿಎಐ

ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಆರೋಗ್ಯ ವಿಮೆದಾರರಿಗೆ ನಗದುರಹಿತ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಐಆರ್​ಡಿಎಐ ಹೇಳಿದೆ.

ಆರೋಗ್ಯ ವಿಮೆ ಪಾಲಿಸಿದಾರರಿಗೆ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್​ಲೆಸ್ ಸೇವೆ ನಿರಾಕರಿಸುವಂತಿಲ್ಲ: ಐಆರ್​ಡಿಎಐ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 23, 2021 | 3:36 PM

ನವದೆಹಲಿ: ಇನ್ಷೂರೆನ್ಸ್ ಮಾಡಿಸಿಕೊಂಡಂಥವರಿಗೆ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್​ಲೆಸ್ ಸೇವೆ ಒದಗಿಸುವಂತೆ ಸೂಚಿಸಿ ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್​ಡಿಎಐ) ಹೇಳಿದೆ. ಒಂದು ವೇಳೆ ನೆಟ್​ವರ್ಕ್ ಆಸ್ಪತ್ರೆಗಳು ಕ್ಯಾಶ್​ಲೆಸ್ ವ್ಯವಸ್ಥೆ ಒದಗಿಸುವುದಕ್ಕೆ ನಿರಾಕರಿಸಿದಲ್ಲಿ ಮತ್ತು ಈಗಾಗಲೇ ಒಪ್ಪಿಕೊಂಡಿರುವಂಥ ಷರತ್ತು, ನಿಬಂಧನೆಗಳಿಂದ ದೂರ ಸರಿದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಟ್ವೀಟ್ ಮಾಡಿ, ಕೆಲವು ಆಸ್ಪತ್ರೆಗಳು ಕ್ಯಾಶ್​ಲೆಸ್​ ಚಿಕಿತ್ಸೆಗೆ ನಿರಾಕರಿಸುತ್ತಿರುವ ಬಗ್ಗೆ ವರದಿಗಳು ಬಂದಿವೆ. ಐಆರ್​ಡಿಎಐ ಅಧ್ಯಕ್ಷ ಎಸ್​.ಸಿ.ಕುಂಠಿಯಾ ಜತೆ ಮಾತನಾಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. 2020ರ ಮಾರ್ಚ್​ನಲ್ಲಿ ಕೋವಿಡ್​ ಅನ್ನು ಕಾಂಪ್ರಹೆನ್ಸಿವ್ ಆರೋಗ್ಯ ವಿಮೆಯಲ್ಲಿ ಸೇರಿಸಲಾಗಿದೆ. ನೆಟ್​ವರ್ಕ್ ಅಥವಾ ತಾತ್ಕಾಲಿಕ ಆಸ್ಪತ್ರೆಗಳಲ್ಲೂ ಕ್ಯಾಶ್​ಲೆಸ್ ದೊರೆಯುತ್ತದೆ ಎಂದಿದ್ದರು.

ಎಲ್ಲಿ ಇನ್ಷೂರೆನ್ಸ್ ಮಾಡಿಸಿಕೊಂಡವರಿಗೆ ಆಸ್ಪತ್ರೆಯಲ್ಲಿ ಕ್ಯಾಶ್​ಲೆಸ್ ವ್ಯವಸ್ಥೆಗೆ ಅನುಕೂಲ ಇರುತ್ತದೋ, ಅಂಥ ನೆಟ್​ವರ್ಕ್ ಆಸ್ಪತ್ರೆಗಳು ಕೋವಿಡ್- 19 ಸೇರಿದಂತೆ ಎಲ್ಲ ಚಿಕಿತ್ಸೆಗೂ ಕ್ಯಾಶ್​ಲೆಸ್ ವ್ಯವಸ್ಥೆ ಒದಗಿಸಬೇಕು. ಎಂದು ಐಆರ್​ಡಿಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂದಹಾಗೆ, ನೆಟ್​ವರ್ಕ್ ಆಸ್ಪತ್ರೆಗಳು ಅಂದರೆ, ಜನರಲ್ ಮತ್ತು ಹೆಲ್ತ್ ಇನ್ಷೂರೆನ್ಸ್ ಕಂಪೆನಿಗಳ ಜತೆಗೆ ಸರ್ವೀಸ್ ಲೆವೆಲ್ ಅಗ್ರಿಮೆಂಟ್ಸ್ (SLA)ಸಹಿ ಮಾಡಿದ ಆಸ್ಪತ್ರೆಗಳು ಎಂದರ್ಥ. ಇವುಗಳು ಒಪ್ಪಂದದ ಪ್ರಕಾರವಾಗಿ, ಪಾಲಿಸಿದಾರರಿಗೆ ಕೋವಿಡ್​- 19 ಸೇರಿದಂತೆ ಇತರ ಕಾಯಿಲೆಗಳಿಗೆ ಕಡ್ಡಾಯವಾಗಿ ಕ್ಯಾಶ್​ಲೆಸ್ ವ್ಯವಸ್ಥೆ ಒದಗಿಸಬೇಕು ಎಂದು ಐಆರ್​ಡಿಎಐ ಹೇಳಿದೆ.

ಎಲ್ಲ ನೆಟ್​ವರ್ಕ್ ಆಸ್ಪತ್ರೆಗಳಿಂದಲೂ ಪ್ರಾಮಾಣಿಕವಾಗಿ ನಗದುರಹಿತ ಸೇವೆ ಖಾತ್ರಿಯಾಗುವಂತೆ ನಿರ್ದೇಶನ ನೀಡಬೇಕು ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ಸೂಚಿಸಲಾಗಿದೆ. ಜತೆಗೆ ಆಸ್ಪತ್ರೆಗಳ ಜತೆಗೆ ಸಂವಹನ ನಡೆಸುವುದಕ್ಕೆ ಸೂಕ್ತ ಸಂವಹನ ಚಾನೆಲ್ ರಚಿಸಬೇಕು ಅಂತಲೂ ತಿಳಿಸಲಾಗಿದೆ. ಒಂದು ವೇಳೆ ಯಾವುದೇ ಲಿಸ್ಟೆಡ್ ನೆಟ್​ವರ್ಕ್ ಆಸ್ಪತ್ರೆಯು ನಗದುರಹಿತ ವ್ಯವಸ್ಥೆಯನ್ನು ಒದಗಿಸುವುದಕ್ಕೆ ನಿರಾಕರಿಸಿದಲ್ಲಿ ಪಾಲಿಸಿದಾರರು ಈ ಬಗ್ಗೆ ಸಂಬಂಧಪಟ್ಟ ಇನ್ಷೂರೆನ್ಸ್ ಕಂಪೆನಿಗಳಿಗೆ ದೂರು ನೀಡಬಹುದು.

ಇದನ್ನೂ ಓದಿ: ಕೋವಿಡ್- 19 ಕ್ಲೇಮ್​ಗೆ ಆದ್ಯತೆ ನೀಡುವಂತೆ ನಿರ್ದೇಶಿಸಲು ಐಆರ್​ಡಿಎಐಗೆ ಸೂಚಿಸಿದ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?

(Network hospitals should not deny cashless facility to policyholders, said IRDAI)

ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ