Sign In

By signing in or creating an account, you agree with Associated Broadcasting Company's Terms & Conditions and Privacy Policy.

Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?

ಆರೋಗ್ಯ ವಿಮೆ ಖರೀದಿ ಬಗ್ಗೆ ಮಾರ್ಗದರ್ಶನ ನೀಡುವಂತಹ ಲೇಖನ ಇದು. ಅಯ್ಯೋ, ಹೆಲ್ತ್ ಇನ್ಷೂರೆನ್ಸ್ ಮೊತ್ತ ಪೂರ್ತಿ ಬಳಸಿಕೊಂಡಿವಿ, ಮುಂದೇನು ದಾರಿ ಅಂತ ಗೊತ್ತಾಗ್ತಿಲ್ಲ ಅನ್ನುವವರಂತೂ ಈ ಲೇಖನ ಕಡ್ಡಾಯವಾಗಿ ಓದಬೇಕು.

Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 09, 2021 | 12:52 PM

ಒಂದು ವರ್ಷದ ಕೆಲವೇ ತಿಂಗಳಲ್ಲಿ ಪೂರ್ಣವಾಗಿ ಬಳಸಲಾದ ಆರೋಗ್ಯ ವಿಮೆ ಪಾಲಿಸಿಯ ಮೊತ್ತವನ್ನು ಮತ್ತೆ ಅದೇ ಸಮವಾದ ಮೊತ್ತಕ್ಕೆ ಪಡೆದುಕೊಳ್ಳುವ ವೈಶಿಷ್ಟ್ಯವು ಈಗ ಹಲವರನ್ನು ಸೆಳೆಯುತ್ತಿದೆ. ಈ ಫೀಚರ್ ಅಡಿಯಲ್ಲಿ, ಇನ್ಷೂರೆನ್ಸ್ ಮೊತ್ತ ಪೂರ್ಣವಾಗಿ ಬಳಸಿಕೊಂಡ ಮೇಲೂ ಮತ್ತೆ ಆ ಮೊತ್ತದ ಆರೋಗ್ಯ ವಿಮೆಯು ದೊರೆಯುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಫ್ಯಾಮಿಲಿ ಫ್ಲೋಟರ್ ಪಾಲಿಸಿ ಮಾಡಿಸಿದ್ದಾರೆ ಅಂತಿಟ್ಟುಕೊಳ್ಳಿ. ಕುಟುಂಬ ಸದಸ್ಯರ ಪೈಕಿ ಒಬ್ಬರಿಗೆ ಅನಾರೋಗ್ಯವಾಗಿ, ಪಾಲಿಸಿ ವರ್ಷದ ಶುರುವಿನಲ್ಲೇ ಪೂರ್ಣ ಮೊತ್ತವನ್ನು ಬಳಸಿಕೊಂಡಿರುತ್ತಾರೆ. ಒಂದು ವೇಳೆ ಕುಟುಂಬದ ಮತ್ತೊಬ್ಬ ಸದಸ್ಯರು ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರುವಂತಾದರೆ ಸಂಪೂರ್ಣ ಮೊತ್ತವನ್ನು ಸ್ವಂತವಾಗಿ ಭರಿಸಬೇಕಾಗುತ್ತದೆ.

ಈ ಮೇಲ್ಕಂಡ ಸನ್ನಿವೇಶದಲ್ಲಿ “ರೀಸ್ಟೋರ್” ವೈಶಿಷ್ಟ್ಯವು ನೆರವಿಗೆ ಬರುತ್ತದೆ. ಈ ಫೀಚರ್ ಆಯ್ಕೆ ಮಾಡಿಕೊಂಡಲ್ಲಿ ಇನ್ಷೂರೆನ್ಸ್ ಮಾಡಿಸಿಕೊಂಡವರಿಗೆ ಬ್ಯಾಕ್​ಅಪ್ ಪ್ಲ್ಯಾನ್​ನಂತೆ ಬಳಕೆಯಾಗುತ್ತದೆ. ಈ ಅನುಕೂಲ ಪಡೆಯುವುದಕ್ಕೆ ಮುಂಚೆ ಕೆಲವು ಪೂರ್ವ ಷರತ್ತುಗಳನ್ನು ತಿಳಿದುಕೊಂಡಿರಬೇಕು. ಆಗಷ್ಟೇ ಈ ಅನುಕೂಲ ಪಡೆಯುವುದಕ್ಕೆ ಸಾಧ್ಯ. ಉದಾಹರಣೆಗೆ, ಕೆಲವು ಪಾಲಿಸಿಗಳ ಪ್ರಕಾರವಾಗಿ, ಅನುಕೂಲ ಪಡೆಯಬೇಕು ಎಂದಾದಲ್ಲಿ ಇನ್ಷೂರ್ಡ್ ಮೊತ್ತ ಸಂಪೂರ್ಣವಾಗಿ ಬಳಸಿಕೊಂಡಿರಬೇಕು. ಈಗ 10 ಲಕ್ಷ ಮೊತ್ತಕ್ಕೆ ಆರೋಗ್ಯ ವಿಮೆ ಮಾಡಿಸಿದ ವ್ಯಕ್ತಿಯು ಆ ಪೈಕಿ 9 ಲಕ್ಷ ರೂಪಾಯಿಯನ್ನು ಆಸ್ಪತ್ರೆ ವೆಚ್ಚಕ್ಕಾಗಿ ಬಳಕೆ ಮಾಡಿದ್ದಾರೆ ಎಂದಾದರೆ ಅಂಥವರಿಗೆ ಈ ಅನುಕೂಲ ಸಿಗಲ್ಲ. ಈ ಪ್ರಕರಣದಲ್ಲಿ ಮತ್ತೊಂದು ಸಲ ಆಸ್ಪತ್ರೆಗೆ ಆ ವ್ಯಕ್ತಿ ಸೇರುವಂತಾದರೆ 1 ಲಕ್ಷ ರೂಪಾಯಿ ಮೇಲ್ಪಟ್ಟ ವೆಚ್ಚವನ್ನು ಪಾಲಿಸಿ ಮೂಲಕ ಪಾವತಿಸುವುದಿಲ್ಲ, ಅಷ್ಟೇ.

ಇನ್ನು, ಮುಂಚಿತವಾಗಿ ಯಾವ ಕಾಯಿಲೆಗಾಗಿ ಕ್ಲೇಮ್ ಮಾಡಲಾಗಿರುತ್ತದೋ ಅದೇ ಉದ್ದೇಶಕ್ಕೆ ಈ ರೀಸ್ಟೋರ್ ಅನುಕೂಲ ಪಡೆಯುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಪಾಲಿಸಿಬಜಾರ್.ಕಾಮ್ ಹೆಲ್ತ್ ಇನ್ಷೂರೆನ್ಸ್ ವಿಭಾಗದ ಮುಖ್ಯಸ್ಥ ಅಮಿತ್ ಛಬ್ರಾ ಮಾತನಾಡಿ, ಮೂಲ ಆರೋಗ್ಯ ವಿಮೆ ಜತೆಗೆ ರೀಸ್ಟೋರೇಷನ್ ಪಾಲಿಸಿ ಖರೀದಿ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಆರೋಗ್ಯ ವಿಮೆ ಮೊತ್ತದ ವಿಸ್ತರಣೆಗೆ ಸಹಾಯ ಮಾಡುತ್ತದೆ. ಈ ರೀಸ್ಟೋರೇಷನ್ ಅನುಕೂಲ ದೊರೆಯುವುದು ಸಹ ಬೇರೆ ಕಾಯಿಲೆಗೆ ಮಾತ್ರ ಮತ್ತು ಪಾಲಿಸಿ ಅವಧಿಯ ಅದೇ ಕಾಯಿಲೆ ಅಥವಾ ಗಾಯಕ್ಕೆ ಅಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದು ಯಾವಾಗ ಬೇಕಾದರೂ ಯಾರನ್ನಾದರೂ ಬಾಧಿಸಬಹುದು. ಆದ್ದರಿಂದ ಸೂಕ್ತ ಪ್ರಮಾಣದಲ್ಲಿ ಇನ್ಷೂರೆನ್ಸ್ ಹೊಂದಿರುವುದು ಉತ್ತಮ. ಕಡಿಮೆ ಮೊತ್ತದ ಇನ್ಷೂರ್ಡ್ ಮೊತ್ತ ಹೊಂದಿರುವ ಕೆಲವರಲ್ಲಿ ಕೋವಿಡ್ ಕ್ಲೇಮ್​ಗಳು 15ರಿಂದ 20 ಲಕ್ಷ ರೂಪಾಯಿ ಆಗಿರುವುದು ಸಹ ನೋಡಿದ್ದೇವೆ. ಈಚೆಗಂತೂ ಕಡಿಮೆ ಮೊತ್ತದ ಇನ್ಷೂರೆನ್ಸ್​ನಿಂದ ಹೆಚ್ಚಿನ ಮೊತ್ತಕ್ಕೆ ಬದಲಿಸಿಕೊಳ್ಳುತ್ತಿರುವ ಪ್ರಮಾಣ ಶೇಕಡಾ 150ರಷ್ಟು ಕಾಣುತ್ತಿದ್ದೇವೆ ಎನ್ನುತ್ತಾರೆ.

ಇನ್ಷೂರೆನ್ಸ್ ರೀಸ್ಟೋರ್ ಮಾಡಬೇಕಾ ಅಥವಾ ಹೆಚ್ಚಿನ ಮೊತ್ತದ ಇನ್ಷೂರೆನ್ಸ್ ಖರೀದಿಸಬೇಕಾ? ಇನ್ಷೂರೆನ್ಸ್ ಖರೀದಿ ಮಾಡುತ್ತಿರುವವರ ವಯಸ್ಸು ಹಾಗೂ ಯಾವ ನಗರದಲ್ಲಿ ವಾಸವಿದ್ದಾರೆ ಎಂಬುದರ ಆಧಾರದ ಮೇಲೆ ಅಗತ್ಯ ಪ್ರಮಾಣದಲ್ಲಿ ಇನ್ಷೂರ್ಡ್ ಮೊತ್ತ ಆರಿಸಿಕೊಳ್ಳಬೇಕು. ರೀಸ್ಟೋರ್ ಅನುಕೂಲ ಉತ್ತಮ ಆಯ್ಕೆ ಎಂಬುದೇನೋ ನಿಜ. ಆದರೆ ಅದರ ಜತೆಗೆ ಕೆಲವು ಷರತ್ತುಗಳು ಇರುತ್ತವೆ. ಆದ್ದರಿಂದ ಇಡೀ ಕುಟುಂಬದ ಸುರಕ್ಷತೆಗೆ ರೀಸ್ಟೋರ್ ಅನುಕೂಲದ ಮೇಲೆ ಅವಲಂಬನೆ ಆಗುವುದು ಸರಿಯಲ್ಲ. ಇನ್ನು ಹೆಚ್ಚಿನ ಕವರ್​​ಗೆ ಹೆಚ್ಚುವರಿಯಾಗಿ ಎಷ್ಟು ಮೊತ್ತ ಆಗುತ್ತದೆ ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ಹೆಚ್ಚಿನ ಮೊತ್ತದ ಇನ್ಷೂರೆನ್ಸ್ ಪಾಲಿಸಿಗಳು ದುಬಾರಿ ಆಗಿರಲೇಬೇಕು ಎಂದೇನೂ ಇಲ್ಲ.

1 ಕೋಟಿ ರೂಪಾಯಿ ಮೊತ್ತದ ಇನ್ಷೂರೆನ್ಸ್​ಗೂ ಹಾಗೂ 10 ಲಕ್ಷ ರೂಪಾಯಿ ಇನ್ಷೂರ್ಡ್ ಮೊತ್ತಕ್ಕೂ 500ರಿಂದ 1000 ರೂಪಾಯಿ ಹೆಚ್ಚಾಗಬಹುದು, ಅಷ್ಟೇ. ಈ 1 ಕೋಟಿ ರೂಪಾಯಿ ಕವರೇಜ್ ಇರುವ ಪಾಲಿಸಿಗಳು ಸೂಪರ್ ಟಾಪ್-ಅಪ್ ಅನುಕೂಲ ಒದಗಿಸುತ್ತದೆ. ಈ ಟಾಪ್-ಅಪ್ ಪ್ಲ್ಯಾನ್ ಅಡಿಯಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ವಿಮಾದಾರರು ಬಳಕೆ ಮಾಡಿಕೊಂಡ ನಂತರವಷ್ಟೇ ಹೆಚ್ಚಿನ ಮೊತ್ತವು ನೆರವಿಗೆ ಬರುತ್ತದೆ.

ಇದನ್ನೂ ಓದಿ: Income tax deductions: ಆರೋಗ್ಯ ವಿಮೆ ಮೂಲಕ ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು?

(Whether you should purchase higher sum health insurance or restore sum assured? Here is the explainer.)

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್