Sign In

By signing in or creating an account, you agree with Associated Broadcasting Company's Terms & Conditions and Privacy Policy.

New Labour Codes: ವಾರದ ನಾಲ್ಕು ದಿನ ಕೆಲಸ, ಈ ನಾಲ್ಕು ದಿನ ಕೆಲಸದ ಅವಧಿ ದೀರ್ಘ; ಶೀಘ್ರದಲ್ಲೇ ಬರಲಿದೆ ನೂತನ ಕಾರ್ಮಿಕ ಸಂಹಿತೆ

Union Ministry of Labour and Employment: ಕೇಂದ್ರ ಕಾರ್ಮಿಕ ಮತ್ತು ನೌಕರರ ಸಚಿವಾಲಯ ಜಾರಿಗೆ ತರಲಿರುವ ಹೊಸ ಕಾರ್ಮಿಕ ಸಂಹಿತೆಯಲ್ಲಿ ಕಾರ್ಮಿಕರಿಗೆ ವಾರದ ನಾಲ್ಕು ದಿನ ಕೆಲಸ ಮಾಡುವ ಅವಕಾಶವಿದ್ದು, ಕೆಲಸದ ಅವಧಿ ದೀರ್ಘವಾಗಿರಲಿದೆ.

New Labour Codes: ವಾರದ ನಾಲ್ಕು ದಿನ ಕೆಲಸ, ಈ ನಾಲ್ಕು ದಿನ ಕೆಲಸದ ಅವಧಿ ದೀರ್ಘ; ಶೀಘ್ರದಲ್ಲೇ ಬರಲಿದೆ ನೂತನ ಕಾರ್ಮಿಕ ಸಂಹಿತೆ
ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Feb 10, 2021 | 3:38 PM

ನವದೆಹಲಿ: ಕೇಂದ್ರ ಕಾರ್ಮಿಕ ಮತ್ತು ನೌಕರರ ಸಚಿವಾಲಯವು ನೂತನ ಕಾರ್ಮಿಕ ಸಂಹಿತೆ ಹೊರಡಿಸುವ ಸಿದ್ದತೆ ನಡೆಸುತ್ತಿದ್ದು ವಾರದ ನಾಲ್ಕು ದಿನ ಮಾತ್ರ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿ ಮಾಡಲಿದೆ. ಕಂಪನಿಗಳಲ್ಲಿ ನೌಕರರು ವಾರದ ನಾಲ್ಕು ದಿನ ಮಾತ್ರ ಕೆಲಸ ಮಾಡುತ್ತಿದ್ದರೆ ಕೆಲಸದ ಅವಧಿಯೂ ದೀರ್ಘವಾಗಿರುತ್ತದೆ. ವಾರದಲ್ಲಿ 48 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಷ್ಟೇ ಅಲ್ಲದೆ ರಾಜ್ಯ ವಿಮೆ ಪ್ರಕಾರ ನೌಕರರಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ನೀಡುವ ವ್ಯವಸ್ಥೆಯನ್ನೂ ಸಂಹಿತೆಯಲ್ಲಿ ಸೇರಿಸಲಾಗಿದೆ.

ನೌಕರರ ಅನುಮತಿ ಪಡೆದು ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡಲು ಕಂಪನಿಗಳು ನೌಕರರಿಗೆ ಹೇಳಬಹುದು. ಇದರ ಜತೆಗೆ ನೌಕರರಿಗೆ 3 ದಿನ ಸಂಬಳ ಸಹಿತ ರಜೆ (paid leaves) ಇರುತ್ತದೆ ಎಂದು ಕಾರ್ಮಿಕ ಮತ್ತು ನೌಕರರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ.

ನಾವು ಈ ರೀತಿ ಕೆಲಸ ಮಾಡಬೇಕು ಎಂದು ನೌಕರರನ್ನು ಅಥವಾ ಕಂಪನಿಯವರನ್ನು ಒತ್ತಾಯಿಸುವುದಿಲ್ಲ. ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದೇವೆ. ಕಾರ್ಮಿಕರ ಸಂಹಿತೆಯ ಕರಡು ಪ್ರತಿ ಈಗ ಅಂತಿಮ ಘಟ್ಟದಲ್ಲಿದ್ದು ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ಮೊದಲಾದ ರಾಜ್ಯಗಳು ಈ ವಾರ ಕರಡು ಪ್ರತಿ ಸಿದ್ಧಪಡಿಸಲಿವೆ.

ಕೆಲಸದ ದಿನಗಳು 5 ದಿನಕ್ಕಿಂತ ಕಡಿಮೆ ಇರಬೇಕು. ಕೆಲಸದ ದಿನ ನಾಲ್ಕು ಆಗಿದ್ದರೆ ಕಂಪನಿಯು ನೌಕರರಿಗೆ ಮೂರು ದಿನ ಸಂಬಳ ಸಹಿತ ರಜೆ ನೀಡಬೇಕು. ಉದ್ಯೋಗದ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ರೀತಿ ಸಂಹಿತೆ 2020 ಕರಡು ಪ್ರಕಾರ ವಾರದಲ್ಲಿನ ಕೆಲಸದ ಅವಧಿ 48 ಗಂಟೆಗಳು ಆಗಿರುತ್ತದೆ. ಕೆಲಸದ ದಿನಗಳ ಬದಲಾವಣೆಗೆ ಕಂಪನಿ ಮತ್ತು ನೌಕರರು ಒಪ್ಪಿರಬೇಕು. ಇದಕ್ಕೆ ಒತ್ತಾಯ ಮಾಡಬಾರದು ಎಂದು ಚಂದ್ರ ಹೇಳಿದ್ದಾರೆ.

ಇದನ್ನೂ ಓದಿ:  ಕಾರ್ಮಿರನ್ನು ವಜಾ ಮಾಡಲು ವಿಚಾರಣೆ ಪ್ರಕ್ರಿಯೆ ಕಡ್ಡಾಯವಲ್ಲ: ಸುಪ್ರೀಂಕೋರ್ಟ್

ಆಹಾರ ವಸ್ತುಗಳನ್ನು ಗ್ರಾಹಕರಿಗೆ ಪೂರೈಸುವ ಸ್ವಿಗಿ, ಜೊಮ್ಯಾಟೊ ಮೊದಲಾದ ಕಂಪನಿಗಳ ನೌಕರರು, ಪ್ಲಾಟ್​ಫಾರಂ ಕಾರ್ಯಕರ್ತರು, ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಮತ್ತು ಇತರ ವ್ಯವಸ್ಥೆಗಳನ್ನು ನೀಡುವುದಕ್ಕಾಗಿ ಕಾರ್ಮಿಕರ ಸಚಿವಾಲಯ ಜೂನ್ 2021ರಲ್ಲಿ ವೆಬ್ ಪೋರ್ಟಲ್ ಅನಾವರಣ ಮಾಡಲಿದೆ. ಹೊಸ ನಿಯಮಗಳನ್ನು ರೂಪಿಸುವ ಕೆಲಸ ನಡೆದುಬರುತ್ತಿದ್ದು ಮುಂದಿನ ವಾರ ಅದು ಪೂರ್ಣಗೊಳ್ಳಲಿದೆ. ವೇತನ ಸಂಹಿತೆ, ಕೈಗಾರಿಕಾ ವ್ಯವಹಾರ, ಉದ್ಯೋಗದ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ರೀತಿ (OSH) ಮತ್ತು ಸಾಮಾಜಿಕ ಸುರಕ್ಷಾ ಸಂಹಿತೆ ಮೊದಲಾದ ಸಂಹಿತೆಗಳನ್ನು ಸಚಿವಾಲಯ ಶೀಘ್ರದಲ್ಲಿಯೇ ಪ್ರಕಟಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರ ಹೇಳಿದ್ದಾರೆ.

Published On - 6:45 pm, Tue, 9 February 21

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ