AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ವಾಜೆ ಪ್ರಕರಣ: ಪ್ರತಿ ತಿಂಗಳು ಲಂಚ ಸ್ವೀಕರಿಸುತ್ತಿದ್ದ ಬಗ್ಗೆ ಎನ್​ಐಎಗೆ ಸಿಕ್ತು ಮಹತ್ವದ ದಾಖಲೆಗಳು

ಅಗತ್ಯವಿದ್ದರೆ, ಉನ್ನತ ತನಿಖೆಗಾಗಿ ದಾಖಲೆಗಳನ್ನು ಆದಾಯ ತೆರಿಗೆ ಅಥವಾ ಸಿಬಿಐ ಅಧಿಕಾರಿಗಳ ಬಳಿಯೂ ಹಂಚಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.

ಸಚಿನ್ ವಾಜೆ ಪ್ರಕರಣ: ಪ್ರತಿ ತಿಂಗಳು ಲಂಚ ಸ್ವೀಕರಿಸುತ್ತಿದ್ದ ಬಗ್ಗೆ ಎನ್​ಐಎಗೆ ಸಿಕ್ತು ಮಹತ್ವದ ದಾಖಲೆಗಳು
ಸಚಿನ್ ವಾಜೆ
TV9 Web
| Edited By: |

Updated on:Apr 05, 2022 | 12:49 PM

Share

ದೆಹಲಿ: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಉದ್ಯಮಿ ಮನ್​ಸುಖ್ ಹಿರೇನ್ ಪ್ರಕರಣಕ್ಕೆ ಸಂಬಂಧಿಸಿ ಅಚ್ಚರಿಯ ಬೆಳವಣಿಗೆಗಳು ಘಟಿಸಿದ್ದವು. ಶಿವಸೇನೆ-ಎನ್​ಸಿಪಿ-ಬಿಜೆಪಿ, ಪೊಲೀಸ್ ಅಧಿಕಾರಿಗಳಾದ ಸಚಿನ್ ವಾಜೆ, ಪರಮ್​ವೀರ್ ಸಿಂಗ್ ಮುಂತಾದವರ ಹಿಂದಿನ ಘಟನೆಗಳು ಈ ಪ್ರಕರಣದ ಬೆನ್ನಲ್ಲಿ ಹಂತಹಂತವಾಗಿ ಪದರ ಕಳಚಿಕೊಳ್ಳುವಂತಾಗಿತ್ತು. ಈ ಕೇಸ್​ಗೆ ಸಂಬಂಧಿಸಿ ಹೊಸ ತನಿಖಾ ಮಾಹಿತಿಯೊಂದು ಇದೀಗ ಬಹಿರಂಗವಾಗಿದೆ.

ಸದ್ಯ ಗೃಹ ರಕ್ಷಕ ದಳದ ಪೊಲೀಸ್ ಅಧಿಕಾರಿ ಆಗಿರುವ ಹಾಗೂ ಈ ಹಿಂದೆ ಮುಂಬೈ ಪೊಲೀಸ್ ಅಧಿಕಾರಿಯಾಗಿದ್ದ ಪರಮ್​ವೀರ್ ಸಿಂಗ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ತಿಂಗಳಿಗೆ ಮುಂಬೈ ನಗರದ ಬಾರ್, ಪಬ್​ಗಳಿಂದ 100 ಕೋಟಿ ಲಂಚ ಸಂಗ್ರಹಿಸುವಂತೆ ಈಗ ಅಮಾನತು ಆಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಗುರಿ ನೀಡಿದ್ದರು ಎಂದು ಆರೋಪಿಸಿದ್ದರು.

ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ಹೇಳುವಂತೆ, ಹಣ ಪಾವತಿಯ ದಾಖಲೆಗಳು ಲಂಚದ ಹಣ ಆಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಗುರುವಾರ ದಕ್ಷಿಣ ಮುಂಬೈನ ಗಿರ್​ಗಾಂವ್​ನ ಕ್ಲಬ್ ಒಂದಕ್ಕೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದ ಎನ್​ಐಎ ಈ ಮಾಹಿತಿ ಬಹಿರಂಗಪಡಿಸಿದೆ.

ಕ್ಲಬ್​ನಿಂದ ಎನ್​ಐಎ ವಶಪಡಿಸಿಕೊಂಡಿರುವ ದಾಖಲೆಯು, ಕಚೇರಿಯ ಹೆಸರು ಹಾಗೂ ಸಿಬ್ಬಂದಿಯ ಹೆಸರು ಮತ್ತು ಸ್ಥಾನವನ್ನು ಹಾಗೂ ಅವರ ಹೆಸರಿನ ಬಳಿ ಪಡೆದ ಹಣದ ವಿವರಗಳನ್ನು ತೋರಿಸುತ್ತದೆ ಎಂದು ತಿಳಿದುಬಂದಿದೆ. ಇದೇ ದಾಖಲೆಯು ಪ್ರತಿ ತಿಂಗಳುಗಳಲ್ಲಿ ಕಂಡುಬಂದಿರುವುದರಿಂದ ಅದು ಲಂಚದ ಮೊತ್ತವಾಗಿರಬಹುದು ಎಂದು ತನಿಖಾ ತಂಡ ಅಂದಾಜಿಸಿದೆ.

ಅಗತ್ಯವಿದ್ದರೆ, ಉನ್ನತ ತನಿಖೆಗಾಗಿ ದಾಖಲೆಗಳನ್ನು ಆದಾಯ ತೆರಿಗೆ ಅಥವಾ ಸಿಬಿಐ ಅಧಿಕಾರಿಗಳ ಬಳಿಯೂ ಹಂಚಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ಸದ್ಯ ಸಚಿನ್ ವಾಜೆ ಅಮಾನತು ಆಗಿದ್ದು, ತನಿಖೆ ಎದುರಿಸುತ್ತಿದ್ದಾರೆ. ಜತೆಗೆ ನರೇಶ್ ಗೋರ್ ಹಾಗೂ ವಿನಾಯಕ್ ಶಿಂಧೆ ಕೂಡ ಎನ್​ಐಎ ತನಿಖೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಸಸ್ಪೆಂಡ್ ಆಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸಿದ 8 ದುಬಾರಿ, ಐಷಾರಾಮಿ ಕಾರುಗಳು ಯಾವುವು?

ಇದನ್ನೂ ಓದಿ: ಮೀಠೀ ನದಿಗೆ ಸಚಿನ್ ವಾಜೆಯನ್ನು ಕರೆದೊಯ್ದ ಎನ್​ಐಎ: ಹಾರ್ಡ್​ಡಿಸ್ಕ್, ವಾಹನದ ನಂಬರ್​ ಪ್ಲೇಟ್ ಪತ್ತೆ

Published On - 11:23 pm, Sun, 4 April 21

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್