AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nipah Virus: ನಿಫಾ ವೈರಸ್​​ನಿಂದ ಸಾವುಗಳು ಹೆಚ್ಚುತ್ತಿವೆ.. ದೇಶದಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬರುತ್ತಿದೆಯಾ?

ಡೌನ್ 2 ವೇರಿಯಂಟ್ ಸೋಂಕಿತ ಡೆಂಗ್ಯೂ ರೋಗಿಗಳಿಗೆ ತಲೆನೋವು, ಸ್ನಾಯು ನೋವು, ವಾಂತಿ, ವಾಕರಿಕೆ, ಕೀಲು ನೋವು, ಕಣ್ಣುಗಳ ಉರಿ, ತುರಿಕೆ ಇದ್ದರೆ ಸ್ಕ್ರಬ್ ಟೈಫಸ್ ಸೋಂಕಿತರಿಗೆ ತೀವ್ರ ಜ್ವರ, ಶೀತ, ತೀವ್ರ ತಲೆನೋವು, ಕೆಮ್ಮು, ಗಂಟಲು ನೋವು, ಸ್ನಾಯು ನೋವು, ದೇಹದಲ್ಲಿ ತುರಿಕೆ, ಕೆಂಪು ಕಲೆಗಳು, ಕಣ್ಣಿನ ಉರಿಯೂತ ಮತ್ತು ಕೋಮಾ ಲಕ್ಷಣ ಕಂಡುಬರುತ್ತದೆ.

Nipah Virus: ನಿಫಾ ವೈರಸ್​​ನಿಂದ ಸಾವುಗಳು ಹೆಚ್ಚುತ್ತಿವೆ.. ದೇಶದಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬರುತ್ತಿದೆಯಾ?
ನಿಫಾ ವೈರಸ್​​ನಿಂದ ಸಾವುಗಳು ಹೆಚ್ಚುತ್ತಿವೆ.. ದೇಶದಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬರುತ್ತಿದೆಯಾ?
Follow us
ಸಾಧು ಶ್ರೀನಾಥ್​
|

Updated on: Sep 15, 2023 | 3:49 PM

ಕೇರಳದಲ್ಲಿ (Kerala) ನಿಫಾ ವೈರಸ್ ಪ್ರಕರಣಗಳು ಮತ್ತು ಅದರಿಂದಾಗುತ್ತಿರುವ ಸಾವುಗಳು ಹೆಚ್ಚಳವಾಗಿದ್ದು, ದೇಶವು ಮತ್ತೊಮ್ಮೆ ಆತಂಕದ ಮಡುವಿಗೆ ತಳ್ಳಲ್ಪಟ್ಟಿದೆ. ನೋಯ್ಡಾದಲ್ಲಿ ಡೌನ್ 2 ಡೆಂಗ್ಯೂ ವೇರಿಯಂಟ್ ಪತ್ತೆಯಾಗಿದೆ. ಒಡಿಶಾ ಮತ್ತು ಹಿಮಾಚಲ ಪ್ರದೇಶದಲ್ಲಿ ಹೊಸ ರೀತಿಯ ಸ್ಕ್ರಬ್ ಟೈಫಸ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಕೆಲವೇ ವಾರಗಳಲ್ಲಿ, ಮಳೆಗಾಲ ಮುಗಿಯುತ್ತಿದ್ದಂತೆ ಡೆಂಗ್ಯೂ, ಸ್ಕ್ರಬ್ ಟೈಫಸ್ ಪ್ರಕರಣಗಳು ಸಂಚಲನ ಮೂಡಿಸಲಿವೆ. ನೋಯಿಡಾದಲ್ಲಿ ಡೆಂಗ್ಯೂ 2 (ಡೆಂಗ್ಯೂ) ಸೋಂಕಿತ ಜನರಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳು ಕುಸಿಯುತ್ತಿವೆ ಮತ್ತು ದೇಹದ ಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ.

ಇದು ಈಡಿಸ್ ಈಜಿಪ್ಟಿ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಮತ್ತೊಂದೆಡೆ, ಒರಿಯೆಂಟಾ ಟ್ಸುಟ್ಸುಗಮುಶಿ ಬ್ಯಾಕ್ಟೀರಿಯಾದ ಕಡಿತದಿಂದ ಹರಡುವ ಸ್ಕ್ರಬ್ ಟೈಫಸ್‌ನಿಂದ (Nipah Virus, Dengue And Scrub Typhus Diseases) ಒಡಿಶಾದಲ್ಲಿ ಐದು ಮತ್ತು ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಒರಿಯೆಂಟಾ ಸುತ್ಯುಗಮುಶಿ ಬ್ಯಾಕ್ಟೀರಿಯಾ ಹುಲ್ಲು, ಪೊದೆಗಳು ಮತ್ತು ಇಲಿಗಳು, ಮೊಲಗಳು ಮತ್ತು ಹಸುಗಳ ಚರ್ಮದ ಮೇಲೆ ಬೆಳೆಯುತ್ತದೆ ಎಂದು ತಜ್ಞರು ಹೇಳುತ್ತಾರೆ (Health).

ಡೌನ್ 2 ವೇರಿಯಂಟ್ ಸೋಂಕಿತ ಡೆಂಗ್ಯೂ ರೋಗಿಗಳಿಗೆ ತಲೆನೋವು, ಸ್ನಾಯು ನೋವು, ವಾಂತಿ, ವಾಕರಿಕೆ, ಕೀಲು ನೋವು, ಕಣ್ಣುಗಳ ಉರಿ, ತುರಿಕೆ ಇದ್ದರೆ ಸ್ಕ್ರಬ್ ಟೈಫಸ್ ಸೋಂಕಿತರಿಗೆ ತೀವ್ರ ಜ್ವರ, ಶೀತ, ತೀವ್ರ ತಲೆನೋವು, ಕೆಮ್ಮು, ಗಂಟಲು ನೋವು, ಸ್ನಾಯು ನೋವು, ದೇಹದಲ್ಲಿ ತುರಿಕೆ, ಕೆಂಪು ಕಲೆಗಳು, ಕಣ್ಣಿನ ಉರಿಯೂತ ಮತ್ತು ಕೋಮಾದಂತಹ ಲಕ್ಷಣಗಳು ಕಂಡುಬರುತ್ತವೆ ಎಂದು ವೈದ್ಯರು ಹೇಳುತ್ತಾರೆ.

also read: Nipah Virus: ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ

ಕೇರಳದಲ್ಲಿ ನಿಫಾ ವೈರಸ್‌ನಿಂದ ಈಗಾಗಲೇ ಐವರು ಸಾವನ್ನಪ್ಪಿದ್ದರೆ, ಇಂದು ಮತ್ತೊಬ್ಬ 39 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಿಫಾದಿಂದ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೆ ತಲುಪಿದೆ ಎಂದು ಕೇರಳ ಆರೋಗ್ಯ ಸಚಿವ ವಿನಾ ಜಾರ್ಜ್ ಹೇಳಿದ್ದಾರೆ. ಅನಗತ್ಯ ಪ್ರಯಾಣ ಮಾಡದಂತೆ ಕೇರಳ ಸರ್ಕಾರ ಜನರನ್ನು ಕೋರಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ