Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣದಲ್ಲಿ ನಡೆಯಬೇಕಿದ್ದ ಸನ್​ ಬರ್ನ್​ ಫೆಸ್ಟಿವಲ್ ರದ್ದು

ಹೊಸ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಸನ್‌ಬರ್ನ್ ಫೆಸ್ಟಿವಲ್(Sunburn Festival)​ ಅನ್ನು ರದ್ದುಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ಹೇಳಿರುವ ಕಾರಣ, ಇದೀಗ ಬುಕ್ ಮೈ ಶೋ ಕಂಪನಿಯು ಟಿಕೆಟ್ ಮಾರಾಟವನ್ನು ನಿಲ್ಲಿಸಿದೆ. ಅನುಮತಿ ಇಲ್ಲದೇ ಟಿಕೆಟ್ ಮಾರಾಟ ಮಾಡುತ್ತಿದ್ದ ಬುಕ್ ಮೈ ಶೋ ವಿರುದ್ಧ ಪ್ರಕರಣ ದಾಖಲಾಗಿದೆ.

ತೆಲಂಗಾಣದಲ್ಲಿ ನಡೆಯಬೇಕಿದ್ದ ಸನ್​ ಬರ್ನ್​ ಫೆಸ್ಟಿವಲ್ ರದ್ದು
ಸನ್​ಬರ್ನ್​ ಫೆಸ್ಟಿವಲ್ Image Credit source: Eenadu.com
Follow us
ನಯನಾ ರಾಜೀವ್
|

Updated on: Dec 26, 2023 | 2:17 PM

ಹೊಸ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಸನ್‌ಬರ್ನ್ ಫೆಸ್ಟಿವಲ್(Sunburn Festival)​ ಅನ್ನು ರದ್ದುಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಪೊಲೀಸರು ಹೇಳಿರುವ ಕಾರಣ, ಇದೀಗ ಬುಕ್ ಮೈ ಶೋ ಕಂಪನಿಯು ಟಿಕೆಟ್ ಮಾರಾಟವನ್ನು ನಿಲ್ಲಿಸಿದೆ. ಅನುಮತಿ ಇಲ್ಲದೇ ಟಿಕೆಟ್ ಮಾರಾಟ ಮಾಡುತ್ತಿದ್ದ ಬುಕ್ ಮೈ ಶೋ ವಿರುದ್ಧ ಪ್ರಕರಣ ದಾಖಲಾಗಿದೆ.

ಬುಕ್ ಮೈ ಶೋ ಮತ್ತು ಸನ್ ಬರ್ನ್ ಆಯೋಜಕರಿಗೆ ಪೊಲೀಸರು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಪೊಲೀಸ್ ಪ್ರಕರಣದ ನಂತರ, ಹೈದರಾಬಾದ್ ಕಾರ್ಯಕ್ರಮವು ಬುಕ್ ಮೈ ಶೋನಲ್ಲಿ ಕಾಣಿಸಿಲ್ಲ. ಹೊಸ ವರ್ಷದ ನೆಪದಲ್ಲಿ ನಡೆಯುವ ಕಾರ್ಯಕ್ರಮಗಳ ಮೇಲೆ ನಿಗಾ ಇಡುವಂತೆ ತೆಲಂಗಾಣ ಸಿಎಂ ರೇವಂತ್ ಆದೇಶ ನೀಡಿದ್ದರು.

ಹೀಗಾಗಿ ಸನ್‌ಬರ್ನ್ ಮತ್ತು ಬುಕ್‌ಮೈಶೋನಂತಹ ಟಿಕೆಟ್‌ಗಳನ್ನು ಮಾರಾಟ ಮಾಡುವ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಗಳಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕಡ್ಡಾಯವಾಗಿದೆ ಎಂದು ಸೈಬರಾಬಾದ್ ಸಿಪಿ ಮಹಂತಿ ಹೇಳಿದ್ದಾರೆ. ಸನ್‌ಬರ್ನ್‌ಗೆ ಯಾವುದೇ ಪರವಾನಗಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸನ್​ ಬರ್ನ್​ ಫೆಸ್ಟಿವಲ್ ವಿದೇಶಿ ಹಬ್ಬ, ಇದೊಂದು ಸಂಗೀತ ನೃತ್ಯೋತ್ಸವ, ಜನರು ಮನ ಬಂದಂತೆ ನೃತ್ಯ ಮಾಡುತ್ತಾರೆ. 2007ರಲ್ಲಿ ಈ ಫೆಸ್ಟಿವಲ್ ಗೋವಾವನ್ನು ಪ್ರವೇಶಿಸಿತ್ತು. ವರ್ಷದಲ್ಲಿ ಮೂರು ದಿನಗಳ ಕಾಲ ಇದು ನಡೆಯುತ್ತಿತ್ತು.

ಮತ್ತಷ್ಟು ಓದಿ: TV9 Festival Of India: ನಾಲ್ಕನೇ ದಿನಕ್ಕೆ ಕಾಲಿಟ್ಟ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ, ವರ್ಣರಂಚಿತ ಕಾರ್ಯಕ್ರಮಗಳ ವೈಭವ

ಕಾರ್ಯಕ್ರಮದಲ್ಲಿ ಆಹಾರ ಮತ್ತು ಪಾನೀಯಗಳು ಸಹ ಬಹಳ ವಿಶೇಷವಾಗಿವೆ. ತಿಂಡಿ-ತಿನಿಸು ಮಳಿಗೆಗಳ ಜತೆಗೆ ಶಾಪಿಂಗ್ ಸ್ಟಾಲ್ ಗಳನ್ನೂ ಹಾಕಲಾಗುತ್ತದೆ.

2007 ರಿಂದ 2015 ರವರೆಗೆ ನಿರಂತರವಾಗಿ ನಡೆದ ಸನ್ ಬರ್ನ್ ಈವೆಂಟ್ ಅಡೆತಡೆಗಳನ್ನು ಎದುರಿಸಿತು. 2016 ರಲ್ಲಿ, ಗೋವಾ ಸರ್ಕಾರವು ಸನ್‌ಬರ್ನ್ ಶೋಗೆ ಅನುಮತಿಯನ್ನು ರದ್ದುಗೊಳಿಸಿತು. ಸನ್ ಬರ್ನ್ ಕಾರ್ಯಕ್ರಮ ನಡೆಯಬಾರದು ಎಂದು ಆದೇಶ ಹೊರಡಿಸಿದೆ. ಇದರಿಂದಾಗಿ 2016 ಮತ್ತು 2017ರಲ್ಲಿ ಪುಣೆಯಲ್ಲಿ ಸನ್ ಬರ್ನ್ ನಡೆದಿತ್ತು. ಗೋವಾದಲ್ಲಿ ಸರ್ಕಾರ ಬದಲಾವಣೆಯೊಂದಿಗೆ, ಅದು 2019 ರಲ್ಲಿ ಗೋವಾಕ್ಕೆ ಮರಳಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ