AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ; ಇದು ದೀಪಾವಳಿ ಕಲೆಕ್ಷನ್​ ಅಲ್ಲವೆಂದ ಕಂಪನಿ !

Fabindia: ಫ್ಯಾಬ್​ ಇಂಡಿಯಾ ಕಂಪನಿ ಪ್ರತಿ 15ದಿನಗಳಿಗೊಮ್ಮೆ ಹೊಸ ಕಲೆಕ್ಷನ್​ ಬಿಡುಗಡೆ ಮಾಡುತ್ತದೆ ಎಂದೂ ಹೇಳಲಾಗಿದೆ. ಅಂದರೆ ನಿನ್ನೆ ಬಿಡುಗಡೆಯಾಗಿದ್ದು ದೀಪಾವಳಿ ಕಲೆಕ್ಷನ್​ ಆಗಿರಲಿಲ್ಲ.

ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ; ಇದು ದೀಪಾವಳಿ ಕಲೆಕ್ಷನ್​ ಅಲ್ಲವೆಂದ ಕಂಪನಿ !
ಫ್ಯಾಬ್​ ಇಂಡಿಯಾ ಬಿಡುಗಡೆ ಮಾಡಿದ್ದ ಜಾಹೀರಾತು
TV9 Web
| Edited By: |

Updated on:Oct 19, 2021 | 2:54 PM

Share

ದೆಹಲಿ: ಜನಪ್ರಿಯ ವಸ್ತ್ರ ಬ್ರ್ಯಾಂಡ್​ ಫ್ಯಾಬ್​ ಇಂಡಿಯಾ (Fabindia) ಇದೀಗ ಭರ್ಜರಿ ಸುದ್ದಿಯಲ್ಲಿದೆ. ಒಂದೇ ಒಂದು ಜಾಹಿರಾತಿನಿಂದ ಸಿಕ್ಕಾಪಟೆ ಟ್ರೋಲ್​ ಆಗಿ, ಇದೀಗ ಆ ಜಾಹೀರಾತನ್ನೇ ಹಿಂಪಡೆದಿದೆ. ಹಿಂದುಗಳ ಹಬ್ಬ ದೀಪಾವಳಿಗೆ ಉರ್ದು ಲಿಂಕ್​ ಮಾಡಿ, ಜೈಷ್ನ್​ ಎ ರಿವಾಜ್ (Jashn-e-Riwaaz)​ ಎಂದು ಕರೆದಿತ್ತು. ಅಂದರೆ ದೀಪಾವಳಿಯ ಹೊಸ ಬಟ್ಟೆ ಕಲೆಕ್ಷನ್​​ಗೆ ಉರ್ದುವಿನಲ್ಲಿ ಜೈಷ್ನ್​ ಎ ರಿವಾಜ್​ ಎಂದು ಹೆಸರಿಟ್ಟಿತ್ತು. ಆದರೆ ಅದು ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟೆ ಆಕ್ರೋಶಕ್ಕೆ ಕಾರಣವಾದ ನಂತರ ತನ್ನ ಟ್ವೀಟ್ ಡಿಲೀಟ್​ ಮಾಡಿ, ಜಾಹೀರಾತನ್ನೇ ಹಿಂಪಡೆದಿದೆ. 

ಜಾಹೀರಾತು ಹಿಂಪಡೆದ ಕಂಪನಿ ಇದೀಗ ಒಂದು ಸ್ಪಷ್ಟೀಕರಣ ಬಿಡುಗಡೆ ಮಾಡಿದೆ.  ಜೈಷ್ನ್​ ಎ ರಿವಾಜ್​ ಎಂಬುದು ಕಂಪನಿಯು ದೀಪಾವಳಿ ಬಟ್ಟೆ ಕಲೆಕ್ಷನ್​​ಗೆ ಇಟ್ಟಿದ್ದ ಹೆಸರಲ್ಲ. ದೀಪಾವಳಿ ಕಲೆಕ್ಷನ್​ ಝಿಲ್​ ಮಿಲ್​ ಸೆ ದಿವಾಲಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ಹೇಳಿಕೊಂಡಿದೆ.  ಈ ಫ್ಯಾಬ್​ ಇಂಡಿಯಾ ಕಂಪನಿ ಪ್ರತಿ 15ದಿನಗಳಿಗೊಮ್ಮೆ ಹೊಸ ಕಲೆಕ್ಷನ್​ ಬಿಡುಗಡೆ ಮಾಡುತ್ತದೆ ಎಂದೂ ಹೇಳಲಾಗಿದೆ. ಅಂದರೆ ನಿನ್ನೆ ಬಿಡುಗಡೆಯಾಗಿದ್ದು ದೀಪಾವಳಿ ಕಲೆಕ್ಷನ್​ ಆಗಿರಲಿಲ್ಲ ಎಂಬುದು ಕಂಪನಿಯ ಸ್ಪಷ್ಟನೆ.

ದೆಹಲಿಯ ಪ್ರಸಿದ್ಧ ವಸ್ತ್ರದ ಬ್ರ್ಯಾಂಡ್​ ಆಗಿರುವ ಫ್ಯಾಬ್​ ಇಂಡಿಯಾ ನಿನ್ನೆ ಈ ಜಾಹಿರಾತು ಬಿಡುಗಡೆ ಮಾಡುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದರು. ದೀಪಾವಳಿಗಾಗಿ ಬಿಡುಗಡೆ ಮಾಡಿದ ಬಟ್ಟೆಯ ಕಲೆಕ್ಷನ್​ಗೆ ಜೈಷ್ನ್​ ಎ ರಿವಾಜ್​ ಎಂದು ಯಾಕೆ ಹೆಸರಿಡಬೇಕು ಎಂಬುದು ಪ್ರಶ್ನೆ. ಇನ್ನು ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ದೀಪಾವಳಿಯೆಂಬುದು ಜೈಷ್ನ್​ ಎ ರಿವಾಜ್​ ಅಲ್ಲ. ಹೀಗೆ ಉದ್ದೇಶಪೂರ್ವಕವಾಗಿ ಮಾಡುವ ದುಷ್ಕೃತ್ಯಗಳಿಗಾಗಿ  ಫ್ಯಾಬ್​ ಇಂಡಿಯಾ ಆರ್ಥಿಕ ವೆಚ್ಚ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು. ತೇಜಸ್ವಿ ಸೂರ್ಯನಷ್ಟೇ ಅಲ್ಲದೆ ಇನ್ನೂ ಹಲವರು ವಿರೋಧ ವ್ಯಕ್ತಪಡಿಸಿದ್ದರು.  ಟ್ವಿಟರ್​ನಲ್ಲಿ Boycott Fabindia ಹ್ಯಾಷ್​ಟ್ಯಾಗ್​ ಟ್ರೆಂಡ್​ ಕೂಡ ಆಗಿತ್ತು.

ಇದನ್ನೂ ಓದಿ: ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಸಿಎಎಗೆ ತಿದ್ದುಪಡಿ ಮಾಡಿ: ಕಾಂಗ್ರೆಸ್ ನಾಯಕ ಮಿಲಿಂದ್ ದೆವರಾ

ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ; ಚಿಂತಾಮಣಿಯಲ್ಲಿ ಮೂವರು ಬಾಲಕರು ಕೆರೆಪಾಲು

Published On - 2:52 pm, Tue, 19 October 21

Follow Us
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್