AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ; ಇದು ದೀಪಾವಳಿ ಕಲೆಕ್ಷನ್​ ಅಲ್ಲವೆಂದ ಕಂಪನಿ !

Fabindia: ಫ್ಯಾಬ್​ ಇಂಡಿಯಾ ಕಂಪನಿ ಪ್ರತಿ 15ದಿನಗಳಿಗೊಮ್ಮೆ ಹೊಸ ಕಲೆಕ್ಷನ್​ ಬಿಡುಗಡೆ ಮಾಡುತ್ತದೆ ಎಂದೂ ಹೇಳಲಾಗಿದೆ. ಅಂದರೆ ನಿನ್ನೆ ಬಿಡುಗಡೆಯಾಗಿದ್ದು ದೀಪಾವಳಿ ಕಲೆಕ್ಷನ್​ ಆಗಿರಲಿಲ್ಲ.

ದೀಪಾವಳಿ ಜಾಹೀರಾತಿನಿಂದ ವಿವಾದಕ್ಕೀಡಾದ ಫ್ಯಾಬ್ ​ಇಂಡಿಯಾದಿಂದ ಸ್ಪಷ್ಟನೆ; ಇದು ದೀಪಾವಳಿ ಕಲೆಕ್ಷನ್​ ಅಲ್ಲವೆಂದ ಕಂಪನಿ !
ಫ್ಯಾಬ್​ ಇಂಡಿಯಾ ಬಿಡುಗಡೆ ಮಾಡಿದ್ದ ಜಾಹೀರಾತು
TV9 Web
| Updated By: Lakshmi Hegde|

Updated on:Oct 19, 2021 | 2:54 PM

Share

ದೆಹಲಿ: ಜನಪ್ರಿಯ ವಸ್ತ್ರ ಬ್ರ್ಯಾಂಡ್​ ಫ್ಯಾಬ್​ ಇಂಡಿಯಾ (Fabindia) ಇದೀಗ ಭರ್ಜರಿ ಸುದ್ದಿಯಲ್ಲಿದೆ. ಒಂದೇ ಒಂದು ಜಾಹಿರಾತಿನಿಂದ ಸಿಕ್ಕಾಪಟೆ ಟ್ರೋಲ್​ ಆಗಿ, ಇದೀಗ ಆ ಜಾಹೀರಾತನ್ನೇ ಹಿಂಪಡೆದಿದೆ. ಹಿಂದುಗಳ ಹಬ್ಬ ದೀಪಾವಳಿಗೆ ಉರ್ದು ಲಿಂಕ್​ ಮಾಡಿ, ಜೈಷ್ನ್​ ಎ ರಿವಾಜ್ (Jashn-e-Riwaaz)​ ಎಂದು ಕರೆದಿತ್ತು. ಅಂದರೆ ದೀಪಾವಳಿಯ ಹೊಸ ಬಟ್ಟೆ ಕಲೆಕ್ಷನ್​​ಗೆ ಉರ್ದುವಿನಲ್ಲಿ ಜೈಷ್ನ್​ ಎ ರಿವಾಜ್​ ಎಂದು ಹೆಸರಿಟ್ಟಿತ್ತು. ಆದರೆ ಅದು ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟೆ ಆಕ್ರೋಶಕ್ಕೆ ಕಾರಣವಾದ ನಂತರ ತನ್ನ ಟ್ವೀಟ್ ಡಿಲೀಟ್​ ಮಾಡಿ, ಜಾಹೀರಾತನ್ನೇ ಹಿಂಪಡೆದಿದೆ. 

ಜಾಹೀರಾತು ಹಿಂಪಡೆದ ಕಂಪನಿ ಇದೀಗ ಒಂದು ಸ್ಪಷ್ಟೀಕರಣ ಬಿಡುಗಡೆ ಮಾಡಿದೆ.  ಜೈಷ್ನ್​ ಎ ರಿವಾಜ್​ ಎಂಬುದು ಕಂಪನಿಯು ದೀಪಾವಳಿ ಬಟ್ಟೆ ಕಲೆಕ್ಷನ್​​ಗೆ ಇಟ್ಟಿದ್ದ ಹೆಸರಲ್ಲ. ದೀಪಾವಳಿ ಕಲೆಕ್ಷನ್​ ಝಿಲ್​ ಮಿಲ್​ ಸೆ ದಿವಾಲಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ಹೇಳಿಕೊಂಡಿದೆ.  ಈ ಫ್ಯಾಬ್​ ಇಂಡಿಯಾ ಕಂಪನಿ ಪ್ರತಿ 15ದಿನಗಳಿಗೊಮ್ಮೆ ಹೊಸ ಕಲೆಕ್ಷನ್​ ಬಿಡುಗಡೆ ಮಾಡುತ್ತದೆ ಎಂದೂ ಹೇಳಲಾಗಿದೆ. ಅಂದರೆ ನಿನ್ನೆ ಬಿಡುಗಡೆಯಾಗಿದ್ದು ದೀಪಾವಳಿ ಕಲೆಕ್ಷನ್​ ಆಗಿರಲಿಲ್ಲ ಎಂಬುದು ಕಂಪನಿಯ ಸ್ಪಷ್ಟನೆ.

ದೆಹಲಿಯ ಪ್ರಸಿದ್ಧ ವಸ್ತ್ರದ ಬ್ರ್ಯಾಂಡ್​ ಆಗಿರುವ ಫ್ಯಾಬ್​ ಇಂಡಿಯಾ ನಿನ್ನೆ ಈ ಜಾಹಿರಾತು ಬಿಡುಗಡೆ ಮಾಡುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದರು. ದೀಪಾವಳಿಗಾಗಿ ಬಿಡುಗಡೆ ಮಾಡಿದ ಬಟ್ಟೆಯ ಕಲೆಕ್ಷನ್​ಗೆ ಜೈಷ್ನ್​ ಎ ರಿವಾಜ್​ ಎಂದು ಯಾಕೆ ಹೆಸರಿಡಬೇಕು ಎಂಬುದು ಪ್ರಶ್ನೆ. ಇನ್ನು ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ದೀಪಾವಳಿಯೆಂಬುದು ಜೈಷ್ನ್​ ಎ ರಿವಾಜ್​ ಅಲ್ಲ. ಹೀಗೆ ಉದ್ದೇಶಪೂರ್ವಕವಾಗಿ ಮಾಡುವ ದುಷ್ಕೃತ್ಯಗಳಿಗಾಗಿ  ಫ್ಯಾಬ್​ ಇಂಡಿಯಾ ಆರ್ಥಿಕ ವೆಚ್ಚ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು. ತೇಜಸ್ವಿ ಸೂರ್ಯನಷ್ಟೇ ಅಲ್ಲದೆ ಇನ್ನೂ ಹಲವರು ವಿರೋಧ ವ್ಯಕ್ತಪಡಿಸಿದ್ದರು.  ಟ್ವಿಟರ್​ನಲ್ಲಿ Boycott Fabindia ಹ್ಯಾಷ್​ಟ್ಯಾಗ್​ ಟ್ರೆಂಡ್​ ಕೂಡ ಆಗಿತ್ತು.

ಇದನ್ನೂ ಓದಿ: ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಲು ಸಿಎಎಗೆ ತಿದ್ದುಪಡಿ ಮಾಡಿ: ಕಾಂಗ್ರೆಸ್ ನಾಯಕ ಮಿಲಿಂದ್ ದೆವರಾ

ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ; ಚಿಂತಾಮಣಿಯಲ್ಲಿ ಮೂವರು ಬಾಲಕರು ಕೆರೆಪಾಲು

Published On - 2:52 pm, Tue, 19 October 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?