AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಿಂಜ್​ನಲ್ಲಿ ಲಸಿಕೆ ತುಂಬಿಸಿಕೊಳ್ಳದೆ ವ್ಯಕ್ತಿಯ ಭುಜಕ್ಕೆ ಚುಚ್ಚಿದ ನರ್ಸ್, ವಿಡಿಯೋ ನೋಡಿದ ನಂತರವೇ ಮೋಸ ಗೊತ್ತಾಗಿದ್ದು!

ನರ್ಸ್​ಳಂತೆ ಕಾಣುವ ಮಹಿಳೆಯೊಬ್ಬಳು ಅಷ್ಟೇನೂ ಅಮಾಯಕನಲ್ಲದ ವ್ಯಕ್ತಿಗೆ ಕೋವಿಡ್ ಲಸಿಕೆ ನೊಡುವ ನೆಪದಲ್ಲಿ ಖಾಲಿ ಸಿರಿಂಜ್ ಭುಜಕ್ಕೆ ಚುಚ್ಚಿದ್ದಾಳೆ. ತಾನು ಮಾಡುತ್ತಿರುವುದು ಬಹು ದೊಡ್ಡ ಪ್ರಮಾದ ಎನ್ನುವ ಅರಿವು ಸಹ ಆಕೆಗಿಲ್ಲ

ಸಿರಿಂಜ್​ನಲ್ಲಿ ಲಸಿಕೆ ತುಂಬಿಸಿಕೊಳ್ಳದೆ ವ್ಯಕ್ತಿಯ ಭುಜಕ್ಕೆ ಚುಚ್ಚಿದ ನರ್ಸ್, ವಿಡಿಯೋ ನೋಡಿದ ನಂತರವೇ ಮೋಸ ಗೊತ್ತಾಗಿದ್ದು!
ಲಸಿಕೆ ಹಾಕುವುದರಲ್ಲೂ ಮೋಸ!
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jun 25, 2021 | 6:33 PM

Share

ಪಾಟ್ನಾ: ಕೋವಿಡ್​ ಲಸಿಕೆ ನೀಡುವಂಥ ಅತ್ಯಂತ ಸೂಕ್ಷ್ಮ ವಿಷಯದಲ್ಲೂ ಮೋಸದಾಟಗಳು ಆರಂಭವಾಗಿವೆ. ಸೋಂಕಿನಿಂದ ಬಚಾವಾಗುವ ಉದ್ದೇಶದಿಂದ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ಬರುವ ಅಮಾಯಕ ಜನರಿಗೆ ಖಾಲಿ ಸಿರಿಂಜ್ ಚುಚ್ಚಿ ಕಳಿಸಿರುವ ಘಟನೆಯೊಂದು ಬಿಹಾರ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಸದರಿ ಘಟನೆಯು ರಾಜ್ಯದ ಛಾಪ್ರಾ ಎಂಬಲ್ಲಿ ನಡೆದಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದಲ್ಲಿ ಬೆಳಕಿಗೆ ಬಂದಿರುವ ಮೊದಲ ಘಟನೆ ಇದಾಗಿದೆಯಾದರೂ ಇಂಥ ವಂಚನೆಗಳು ಬೇರೆ ಕಡೆ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ನಗರ ಪ್ರದೇಶಗಳಲ್ಲಿ ಜನರನ್ನು ಯಾಮಾರಿಸುವುದು ಭ್ರಷ್ಟ ಮತ್ತು ಮಾನವೀಯತೆ ಕಳೆದುಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ (ಅದು ವೈದ್ಯನಾಗಿರಬಹುದು ಇಲ್ಲವೇ ನರ್ಸ್ ಅಥವಾ ಪ್ಯಾರಾ ಮೆಡಿಕಲ್ ವರ್ಕರ್) ಕಷ್ಟವಾಗಬಹುದು, ಆದರೆ, ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಓದಿರದ ಅಥವಾ ಅನಕ್ಷರಸ್ಥ ಜನ ಸುಲಭವಾಗಿ ಮೋಸ ಹೋಗಿಬಿಡುತ್ತಾರೆ.

ಇಲ್ಲಿರುವ ಚಿತ್ರವನ್ನೇ ನೋಡಿ. ನರ್ಸ್​ಳಂತೆ ಕಾಣುವ ಮಹಿಳೆಯೊಬ್ಬಳು ಅಷ್ಟೇನೂ ಅಮಾಯಕನಲ್ಲದ ವ್ಯಕ್ತಿಗೆ ಕೋವಿಡ್ ಲಸಿಕೆ ನೊಡುವ ನೆಪದಲ್ಲಿ ಖಾಲಿ ಸಿರಿಂಜ್ ಭುಜಕ್ಕೆ ಚುಚ್ಚಿದ್ದಾಳೆ. ತಾನು ಮಾಡುತ್ತಿರುವುದು ಬಹು ದೊಡ್ಡ ಪ್ರಮಾದ ಎನ್ನುವ ಅರಿವು ಸಹ ಆಕೆಗಿಲ್ಲ. ಅದರರ್ಥ ಈ ಮೋಸದ ಕಸುಬಿನಲ್ಲಿ ಆಕೆ ನಿಷ್ಣಾತಳು, ಹಿಂದೆಯೂ ಆಕೆ ಅದೆಷ್ಟು ಜನರಿಗೆ ಹೀಗೆ ಖಾಲಿ ಸಿರಂಜ್ ಚುಚ್ಚಿ ಕಳಿಸಿದ್ದಾಳೋ? ಮೂಲಗಳ ಪ್ರಕಾರ ಆಕೆಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ.

ಮೊಬೈಲ್ ಫೋನ್ ಒಂದರ ಮೂಲಕ ಶೂಟ್ ಮಾಡಿರುವ ಈ ವಿಡಿಯೋನಲ್ಲಿ, ಈ ನರ್ಸ್ ಪ್ಯಾಕೆಟ್​ನಿಂದ ಹೊಸ ಸಿರಿಂಜೊಂದನ್ನು ತೆಗೆದು ಲಸಿಕೆ ಇರುವ ವಾಯಲ್​ನಿಂದ ದ್ರಾವಣ ತುಂಬಿಸಿಕೊಳ್ಳದೆ ನೇರವಾಗಿ ವ್ಯಕ್ತಿಯ ಭುಜಕ್ಕೆ ಚುಚ್ಚುತ್ತಾಳೆ.

ಸೋಜಿಗದ ಸಂಗತಿಯೆಂದರೆ ಲಸಿಕೆ ಹಾಕಿಸಿಕೊಂಡವನಿಗೆ ಅದರ ಪರಿವೆಯೇ ಇಲ್ಲ. ಅದನ್ನು ಹಾಕಿಸಿಕೊಂಡ ಸ್ನೇಹಿತ ಅವನ ಗಮನಕ್ಕೆ ವಿಷಯವನ್ನು ತಂದ ನಂತರವೇ ಅದು ಗೊತ್ತಾಗಿದ್ದು.

ಸುದ್ದಿ ಸಂಸ್ಥೆಯೊಂದರ ಜತೆ ಮಾತಾಡಿರುವ ಅವನು ಸ್ನೇಹಿತ ತಿಳಿಸಿ ನಂತರವೇ ನರ್ಸ್​ ಮೋಸ ಮಾಡಿದ್ದು ಗೊತ್ತಾಗಿದೆ ಎಂದು ಹೇಳಿದ್ದಾನೆ.

‘ನರ್ಸ್ ಮಾಡಿದ ಪ್ರಮಾದ ಸ್ನೇಹಿತ ತಿಳಿಸಿದ ನಂತರವೇ ಗೊತ್ತಾಗಿದ್ದು, ಆ ವಿಡಿಯೋವನನ್ನು ನೋಡಿದ ನಂತರ ನಾನು ಗಾಬರಿಗೊಳಗಾದೆ,’ ಎಂದು ಅವನು ಹೇಳಿದ್ದಾನೆ.

ಅದಾದ ಮೇಲೆ ಆತ ಮತ್ತೊಮ್ಮೆ ಲಸಿಕೆ ಹಾಕಿಸಿಕೊಂಡನೇ ಎಂದು ಕೇಳಿದ ಪ್ರಶ್ನೆಗೆ ಇಲ್ಲವೆಂದು ಉತ್ತರಿಸಿರುವ ಅವನು, ಖಾಲಿ ಸಿರಿಂಜ್ ಚುಚ್ಚಿಸಿಕೊಂಡ ನಂತರ ತನಗೆ ತಲೆನೋವು ಬರಲಾರಂಭಿಸಿತ್ತು ಎಂದು ಹೇಳಿದ್ದಾನೆ. ವಿಡಿಯೋ ಶೂಟ್​ ಮಾಡಿದ ಸ್ನೇಹಿತ ಸಹ ಆ ಮಾಧ್ಯಮದವರೊಂದಿಗೆ ಮಾತಾಡಿದ್ದು, ಲಸಿಕೆ ತೆಗೆದುಕೊಳ್ಳುವಾಗ ಅವನ ಮುಖಭಾವ ಹೇಗಿರುತ್ತದೆ ಅಂತ ನೋಡುವುದಕ್ಕೋಸ್ಕರ ಶೂಟ್​ ಮಾಡಿದ್ದು ಎಂದಿದ್ದಾನೆ.

‘ಕೇವಲ ತಮಾಷೆಗೋಸ್ಕರ ನಾನು ಈ ವಿಡಿಯೋ ಶೂಟ್​ ಮಾಡಿದೆ. ನನಗೆ ಮತ್ತು ಇತರ ಸ್ನೇಹಿತರಿಗೆ ಲಸಿಕೆ ತೆಗೆದುಕೊಳ್ಳುವಾಗ ಅವನ ಮುಖಭಾವ ಹೇಗಿರುತ್ತದೆ ಅಂತ ನೋಡುವ ತವಕವಿತ್ತು. ವಿಡಿಯೋವನ್ನು ಸಾಯಂಕಾಲ ನೋಡುವಾಗ ಆ ನರ್ಸ್ ಪ್ಲಾಸ್ಟಿಕ್ ಕವರ್​ನಿಂದ ಸಿರಿಂಜ್ ತೆಗೆದು ಅದರಲ್ಲಿ ಲಸಿಕೆ ತುಂಬಿಸಿಕೊಳ್ಳದೆ ಅವನಿಗೆ ಚುಚ್ಚಿದ್ದು ನಮ್ಮ ಗಮನಕ್ಕೆ ಬಂತು,’ ಎಂದು ಅವನು ಹೇಳಿದ್ದಾನೆ.

ಲಸಿಕಾ ಕೇಂದ್ರದಲ್ಲಿದ್ದ ಇತರ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ ಮತ್ತು ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆಂದು ಅವನು ಹೇಳಿದ್ದಾನೆ.

ಬಿಹಾರದ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ 18-44 ವಯೋಮಾನದವರಲ್ಲಿ 10 ಲಕ್ಷ ಜನಕ್ಕೆ ಇದುವರೆಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: COVID19 Vaccination ‘ಮನೆಯಿಲ್ಲದವರಿಗೆ ಕೊವಿಡ್ ಲಸಿಕೆ ನೋಂದಣಿ ನಿರ್ಬಂಧಿಸಲಾಗಿದೆ’ ಮಾಧ್ಯಮ ವರದಿ ಆಧಾರ ರಹಿತ: ಕೇಂದ್ರ ಆರೋಗ್ಯ ಸಚಿವಾಲಯ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!