ದೇಶದ ಸರಕು ಸಾಗಣೆಗೆ ಹೊಸ ಶಕ್ತಿ, 2,800 ಕಿ.ಮೀ. ಮೀಸಲಾದ ಸರಕು ಕಾರಿಡಾರ್ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ 2,800 ಕಿ.ಮೀ. ಮೀಸಲಾದ ಸರಕು ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದು ದೇಶದ ಆರ್ಥಿಕತೆ ಮತ್ತು ಸಾರಿಗೆ ವ್ಯವಸ್ಥೆಗೆ ಹೊಸ ಶಕ್ತಿ ನೀಡುತ್ತದೆ. ಈ ಮಹತ್ವದ ಯೋಜನೆಯಿಂದ ಸರಕು ಸಾಗಣೆ ವೆಚ್ಚ ಮತ್ತು ಸಮಯ ಗಣನೀಯವಾಗಿ ಕಡಿಮೆಯಾಗಿ, ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯ ತಗ್ಗುತ್ತದೆ. ಹಿಂದಿನ ಯುಪಿಎ ಆಡಳಿತದ ವಿಳಂಬ ಧೋರಣೆಗಳನ್ನು ಟೀಕಿಸಿದ ಮೋದಿ, ಇದು ಭಾರತದ ವ್ಯಾಪಾರ-ವಾಣಿಜ್ಯ ಕ್ಷೇತ್ರಕ್ಕೆ ಹೊಸ ಬೆನ್ನೆಲುಬು ಎಂದರು.

ದೇಶದ ಸರಕು ಸಾಗಣೆಗೆ ಹೊಸ ಶಕ್ತಿ, 2,800 ಕಿ.ಮೀ. ಮೀಸಲಾದ ಸರಕು ಕಾರಿಡಾರ್ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Image Credit source: PTI

Updated on: Sep 08, 2026 | 1:16 PM

ವಡೋದರಾ, ಸೆಪ್ಟೆಂಬರ್ 08: ದೇಶದ ಆರ್ಥಿಕತೆ ಮತ್ತು ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡುವ ಒಟ್ಟು 2,800 ಕಿಲೋಮೀಟರ್ ಉದ್ದದ ‘ಮೀಸಲಾದ ಸರಕು ಸಾಗಣೆ ಕಾರಿಡಾರ್’ ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ 20,700 ಕೋಟಿ ರೂ. ವೆಚ್ಚದ ಪಶ್ಚಿಮ ಕಾರಿಡಾರ್‌ನ ಅಂತಿಮ ವಿಭಾಗಗಳನ್ನು ಲೋಕಾರ್ಪಣೆ ಮಾಡಿದ ಅವರು, ದಶಕಗಳ ಕಾಲ ಕಡತಗಳಲ್ಲೇ ಉಳಿದಿದ್ದ ಯೋಜನೆಗೆ ಈಗ ಮುಕ್ತಿ ಸಿಕ್ಕಿದ್ದು, ಸರಕು ಸಾಗಣೆ ವೆಚ್ಚ ಮತ್ತು ಸಮಯ ಎರಡೂ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.

2,800 ಕಿ.ಮೀ. ಮಹಾ ಯೋಜನೆ ಪೂರ್ಣ: ಪೂರ್ವ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ಗಳ ಸಂಪೂರ್ಣ ಜಾಲ ಈಗ ಸಿದ್ಧವಾಗಿದ್ದು, ಭಾರತದ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಇದು ಹೊಸ ಬೆನ್ನೆಲುಬಾಗಿ ಪರಿಣಮಿಸಿದೆ.

ದಿನಕ್ಕೆ 430 ಕ್ಕೂ ಹೆಚ್ಚು ಸರಕು ರೈಲುಗಳ ಓಡಾಟ: ಈ ಕಾರಿಡಾರ್‌ಗಳಲ್ಲಿ ಪ್ರತಿದಿನ 430ಕ್ಕೂ ಅಧಿಕ ಗೂಡ್ಸ್ ರೈಲುಗಳು ಸಂಚರಿಸುತ್ತಿವೆ. ಈ ಹಿಂದೆ 100 ಕಿ.ಮೀ. ಕ್ರಮಿಸಲು 6.5 ಗಂಟೆ ತೆಗೆದುಕೊಳ್ಳುತ್ತಿದ್ದ ಸರಕು ರೈಲುಗಳು, ಈಗ ಅರ್ಧಕ್ಕಿಂತ ಕಡಿಮೆ ಸಮಯದಲ್ಲಿ ಗಮ್ಯ ತಲುಪುತ್ತಿವೆ.

ವಿಡಿಯೋ

ಸಮಯ ಮತ್ತು ಇಂಧನ ಉಳಿತಾಯ: ರಸ್ತೆ ಮಾರ್ಗದಲ್ಲಿ ಟ್ರಕ್‌ಗಳ ಮೂಲಕ ಸಾಗಿಸಲು ಸುಮಾರು ೩೦ ಗಂಟೆ ಬೇಕಾಗುವ ದೂರವನ್ನು, ಈ ಪ್ರತ್ಯೇಕ ರೈಲು ಕಾರಿಡಾರ್ ಕೇವಲ 10 ರಿಂದ 12 ಗಂಟೆಗಳಲ್ಲಿ ಕ್ರಮಿಸುತ್ತಿದೆ. ಇದರಿಂದ ಸಾರಿಗೆ ವೆಚ್ಚ ತಗ್ಗಿ, ಇಂಧನ ಉಳಿತಾಯವಾಗುವುದರ ಜೊತೆಗೆ ಪರಿಸರ ಮಾಲಿನ್ಯವೂ ಗಣನೀಯವಾಗಿ ಕಡಿಮೆಯಾಗಲಿದೆ.

ಮತ್ತಷ್ಟು ಓದಿ:

ಎಲ್ಲ ಕ್ಷೇತ್ರಗಳ ಸಹಭಾಗಿತ್ವವೇ ಪ್ರಗತಿಯ ಶಕ್ತಿ: ‘ನಮೋ ಫಾರ್ ವಿಕಸಿತ ಭಾರತ’ ಸಮಾವೇಶದಲ್ಲಿ ಪಿಎಂ ಮೋದಿ ಮಾತು

 

ಹಿಂದಿನ ಸರ್ಕಾರಗಳ ವಿಳಂಬಕ್ಕೆ ಚಾಟಿ: “2004ರಲ್ಲೇ ಪ್ರಸ್ತಾಪವಾಗಿ, 2006ರಲ್ಲಿ ಕಂಪನಿ ಸ್ಥಾಪನೆಯಾಗಿದ್ದರೂ 2014ರವರೆಗೆ ಕಡತಗಳು ಕೇವಲ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಓಡಾಡುತ್ತಿದ್ದವು. ಕಡೆಪಕ್ಷ ಆ ಫೈಲ್‌ಗಳಿಗೂ ಒಂದು ಪ್ರತ್ಯೇಕ ಕಾರಿಡಾರ್ ಸಿಗಲಿಲ್ಲ” ಎಂದು ಹಿಂದಿನ ಯುಪಿಎ ಆಡಳಿತದ ವಿಳಂಬ ನೀತಿಯನ್ನು ಪ್ರಧಾನಿ ವ್ಯಂಗ್ಯವಾಗಿ ಟೀಕಿಸಿದರು.

ವಿಡಿಯೋ

ಲೋಕಾರ್ಪಣೆಯಾದ 3 ವಿಭಾಗಗಳು: ಸನಂದ್-ಮಕರಪುರ, ನ್ಯೂ ಉಂಬರ್ಗಾಂವ್-ನ್ಯೂ ಸಫಲೆ ಮತ್ತು ನ್ಯೂ ಸಫಲೆ-ಜೆಎನ್‌ಪಿಟಿ (JNPT) ಒಳಗೊಂಡ ಒಟ್ಟು 326 ಕಿ.ಮೀ. ಮಾರ್ಗವನ್ನು ಸಮರ್ಪಿಸಲಾಗಿದ್ದು, ಇದರಿಂದ ದೇಶದ ಅತಿದೊಡ್ಡ ಕಂಟೈನರ್ ಬಂದರಾದ ಜೆಎನ್‌ಪಿಟಿಗೆ ನೇರ ಹಾಗೂ ಅಡೆತಡೆಯಿಲ್ಲದ ಸರಕು ರೈಲು ಸಂಪರ್ಕ ಸಿಕ್ಕಂತಾಗಿದೆ.

ವಿಡಿಯೋ

ಪ್ರಯಾಣಿಕರ ರೈಲುಗಳಿಗೂ ಅನುಕೂಲ: ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ಹಳಿಗಳನ್ನು ನಿರ್ಮಿಸಿರುವುದರಿಂದ ಸಾಮಾನ್ಯ ರೈಲ್ವೆ ಹಳಿಗಳ ಮೇಲಿನ ಒತ್ತಡ ಕಡಿಮೆಯಾಗಿದೆ. ಇದರಿಂದಾಗಿ ಪ್ರಯಾಣಿಕರ ಎಕ್ಸ್‌ಪ್ರೆಸ್ ರೈಲುಗಳ ವೇಗ ಮತ್ತು ಸಮಯಪಾಲನೆಯಲ್ಲೂ ದೊಡ್ಡ ಮಟ್ಟದ ಸುಧಾರಣೆ ಕಂಡುಬರಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us