ಅಂಫಾನ್ ಸಂತ್ರಸ್ತ ಪ್ರದೇಶಕ್ಕೆ ಇಂದು ಮೋದಿ ವಿಸಿಟ್..

ದೆಹಲಿ: ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಪ್ರಧಾನಿ ಮೋದಿ ದೆಹಲಿ ಬಿಟ್ಟು ಎಲ್ಲಿಯೂ ಕದಲೇ ಇಲ್ಲ. ಲಾಕ್‌ಡೌನ್‌ ನಡುವೆಯೂ ಇಂದು ಪ್ರಧಾನಿ ನರೇಂದ್ರ ಮೋದಿ 2 ರಾಜ್ಯಗಳ ಪ್ರವಾಸ ಹಮ್ಮಿಕೊಂಡಿದ್ದಾರೆ. ಅಂಫಾನ್‌ ಚಂಡಮಾರುತದ ಹೊಡೆತಕ್ಕೆ ಸಿಲುಕಿರೋ ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಅಂಫಾನ್‌ ಚಂಡಮಾರುತ.. ಈ ಹೆಸ್ರು ಕೇಳಿದ್ರೆ ಸಾಕು ಆ ಎರಡು ರಾಜ್ಯಗಳು ಬೆಚ್ಚಬೀಳ್ತಿವೆ. ಅಷ್ಟರ ಮಟ್ಟಿಗೆ ಸೈಕ್ಲೋನ್ ಅಬ್ಬರಕ್ಕೆ ಪಶ್ಚಿಮ ಬಂಗಾಳ ಹಾಗೂ ಒಡಿಶಾ ತತ್ತರಿಸಿ ಹೋಗಿವೆ. ಎರಡು […]

ಅಂಫಾನ್ ಸಂತ್ರಸ್ತ ಪ್ರದೇಶಕ್ಕೆ ಇಂದು ಮೋದಿ ವಿಸಿಟ್..
ಆಯೇಷಾ ಬಾನು

Updated on: May 22, 2020 | 12:20 PM

ದೆಹಲಿ: ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಪ್ರಧಾನಿ ಮೋದಿ ದೆಹಲಿ ಬಿಟ್ಟು ಎಲ್ಲಿಯೂ ಕದಲೇ ಇಲ್ಲ. ಲಾಕ್‌ಡೌನ್‌ ನಡುವೆಯೂ ಇಂದು ಪ್ರಧಾನಿ ನರೇಂದ್ರ ಮೋದಿ 2 ರಾಜ್ಯಗಳ ಪ್ರವಾಸ ಹಮ್ಮಿಕೊಂಡಿದ್ದಾರೆ. ಅಂಫಾನ್‌ ಚಂಡಮಾರುತದ ಹೊಡೆತಕ್ಕೆ ಸಿಲುಕಿರೋ ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಅಂಫಾನ್‌ ಚಂಡಮಾರುತ.. ಈ ಹೆಸ್ರು ಕೇಳಿದ್ರೆ ಸಾಕು ಆ ಎರಡು ರಾಜ್ಯಗಳು ಬೆಚ್ಚಬೀಳ್ತಿವೆ. ಅಷ್ಟರ ಮಟ್ಟಿಗೆ ಸೈಕ್ಲೋನ್ ಅಬ್ಬರಕ್ಕೆ ಪಶ್ಚಿಮ ಬಂಗಾಳ ಹಾಗೂ ಒಡಿಶಾ ತತ್ತರಿಸಿ ಹೋಗಿವೆ. ಎರಡು ರಾಜ್ಯಗಳು ಅಕ್ಷರಶಃ ನೆಲಕಚ್ಚಿಹೋಗಿವೆ. ದೀದಿ ನಾಡು ಪಶ್ಚಿಮ ಬಂಗಾಳದಲ್ಲಿ ಕಂಡು ಕೇಳರಿಯದ ಅನಾಹುತವನ್ನ ಅಂಫಾನ್‌ ಚಂಡಮಾರುತ ಸೃಷ್ಟಿಸಿಬಿಟ್ಟಿದೆ. ಒಡಿಶಾ ಕೂಡ ಚಂಡಮಾರುತಕ್ಕೆ ತತ್ತರಿಸಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಎರಡೂ ರಾಜ್ಯಗಳಲ್ಲಿ ಒಂದು ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ 2 ರಾಜ್ಯಗಳಿಗೆ ಪ್ರಧಾನಿ ಮೋದಿ ಇಂದು ಭೇಟಿ ನೀಡ್ತಿದ್ದಾರೆ.

2 ರಾಜ್ಯಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿರುವ ಪಿಎಂ!
ಎರಡೂ ರಾಜ್ಯಗಳಲ್ಲಿ ಅಂಫಾನ್‌ ಚಂಡಮಾರುತಕ್ಕೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಹೀಗಾಗಿ ಸೈಕ್ಲೋನ್‌ನಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಪ್ರಧಾನಿ ಮೋದಿ ವಿಸಿಟ್ ಮಾಡ್ತಿದ್ದು, ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿ ಪಡೆಯಲಿದ್ದಾರೆ. ಪರಿಸ್ಥಿತಿಯನ್ನ ಅವಲೋಕಿಸಿದ ಬಳಿಕ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಪರಿಹಾರ ಕಾರ್ಯದ ಬಗ್ಗೆ ತೀರ್ಮಾನಿಸಲಿದ್ದಾರೆ.

ಮೋದಿ ಪ್ರವಾಸದ ಡಿಟೇಲ್ಸ್!
ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ಹೊರಡಲಿರುವ ಪಿಎಂ ಮೋದಿ, ಬೆಳಗ್ಗೆ 10.30ಕ್ಕೆ ಕೋಲ್ಕತ್ತಾ ತಲುಪಲಿದ್ದಾರೆ. ನಂತ್ರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜತೆಗೂಡಿ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ದೀದಿ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ಪರಿಹಾರ ಘೋಷಿಸುವ ನಿರೀಕ್ಷೆ ಇದೆ. ಇದಾದ ಬಳಿಕ ಮಧ್ಯಾಹ್ನ 1ಕ್ಕೆ ಒಡಿಶಾಗೆ ತೆರಳಲಿದ್ದು, ಸಿಎಂ ನವೀನ್ ಪಟ್ನಾಯಕ್‌ ಜತೆಗೂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಆನಂತ್ರ ಅಧಿಕಾರಿಗಳ ಜತೆ ಸಭೆ ನಡೆಸಿ ನಂತ್ರ ದೆಹಲಿಗೆ ವಾಪಸ್ ತೆರಳಲಿದ್ದಾರೆ.

ಒಟ್ನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್‌ಡೌನ್ ಹೇರಿದ ಬಳಿಕ ಪ್ರಧಾನಿ ದೆಹಲಿ ಬಿಟ್ಟು ಎಲ್ಲಿಗೂ ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಒಂದೇ ದಿನ ಎರಡು ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ.

Published On - 6:43 am, Fri, 22 May 20

Loading...
Unable to load recommendations.
Follow Us