AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕಿಗೆ ಹೋಳಿ ರಂಗು ಖುಷಿ ತರಲಿ: ಪ್ರಧಾನಿ ನರೇಂದ್ರ ಮೋದಿ ಹಾರೈಕೆ

ಹಬ್ಬದ ಬಣ್ಣಗಳು ಜನರ ಬದುಕಿಗೆ ಹೊಸ ಬಣ್ಣಗಳನ್ನು ನೀಡಲಿ. ಪರಸ್ಪರ ಪ್ರೀತಿ, ಭ್ರಾತೃತ್ವ ಮತ್ತು ವಿಶ್ವಾಸ ಎಲ್ಲರ ಬಾಳಿನಲ್ಲೂ ಬೆಳಗಬೇಕು. ಪ್ರತಿ ಬಣ್ಣವೂ ಬದುಕಿಗೆ ಸಂತಸ ತರಲಿ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಬದುಕಿಗೆ ಹೋಳಿ ರಂಗು ಖುಷಿ ತರಲಿ: ಪ್ರಧಾನಿ ನರೇಂದ್ರ ಮೋದಿ ಹಾರೈಕೆ
ಪ್ರಧಾನಿ ಮೋದಿ
TV9 Web
| Edited By: |

Updated on: Mar 18, 2022 | 8:34 AM

Share

ದೆಹಲಿ: ಹೋಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಜನರಿಗೆ ಶುಕ್ರವಾರ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಹಬ್ಬವು ಜನರ ಬದುಕಿನಲ್ಲಿ ವೈವಿಧ್ಯಮಯ ರಂಗು ತರಲಿ ಎಂದು ಕೋರಿದ್ದಾರೆ. ‘ನಿಮ್ಮೆಲ್ಲರಿಗೂ ಹೋಳಿ ಶುಭಾಶಯಗಳು. ಹಬ್ಬದ ಬಣ್ಣಗಳು ಜನರ ಬದುಕಿಗೆ ಹೊಸ ಬಣ್ಣಗಳನ್ನು ನೀಡಲಿ. ಪರಸ್ಪರ ಪ್ರೀತಿ, ಭ್ರಾತೃತ್ವ ಮತ್ತು ವಿಶ್ವಾಸ ಎಲ್ಲರ ಬಾಳಿನಲ್ಲೂ ಬೆಳಗಬೇಕು. ಪ್ರತಿ ಬಣ್ಣವೂ ಬದುಕಿಗೆ ಸಂತಸ ತರಲಿ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ವಸಂತಋತುವಿನ ಆಗಮನವನ್ನು ಸಾರುವ ಹೋಳಿ ಹಬ್ಬವು ಕೆಡುಕಿನ ವಿರುದ್ಧ ಒಳಿತು ಗೆದ್ದ ಸಂಭ್ರಮವನ್ನು ಸಾರಿ ಹೇಳುತ್ತದೆ. ಹಿಂದೂಗಳ ಸಾಂಪ್ರದಾಯಿಕ ಹಬ್ಬವೇ ಆಗಿದ್ದರೂ ಇತರ ಧರ್ಮ ಮತ್ತು ಮತಗಳ ಜನರೂ ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಚಳಿಗಾಲದ ಬೆಳೆಗಳ ಕೊಯ್ಲು ಸಹ ಹೋಳಿಯ ನಂತರ ಆರಂಭವಾಗುತ್ತದೆ. ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವ ಮೂಲಕ, ಬಣ್ಣಗಳನ್ನು ಎರಚುವ ಮೂಲಕ ಹೋಳಿ ಆಚರಿಸುವುದು ವಾಡಿಕೆ.

ಬಣ್ಣಗಳ ಅರ್ಥವೇನು? ಹೋಳಿ ಎಂದರೇ ಬಣ್ಣಗಳ ಹಬ್ಬ. ವಿವಿಧ ಬಣ್ಣಗಳಿಗೆ ವಿವಿಧ ಅರ್ಥಗಳೂ ಇರುವುದು ವಿಶೇಷ. ಕೆಂಪನ್ನು ಪ್ರೀತಿ, ಉತ್ಸಾಹ ಮತ್ತು ಫಲವತ್ತತೆಯ ಪ್ರತೀಕ ಎನ್ನಲಾಗುತ್ತದೆ. ಕೇಸರಿಯು ಹೊಸ ಆರಂಭದ ಸಂಕೇತವಾಗಿದೆ. ಹಳದಿಯು ಸಂತೋಷ, ಶಾಂತಿ, ಆನಂದ, ಧ್ಯಾನ, ಜ್ಞಾನ ಮತ್ತು ಕಲಿಕೆಯನ್ನು ಪ್ರತಿನಿಧಿಸುತ್ತದೆ. ಗುಲಾಬಿಯು ದಯೆ, ಸಹಾನುಭೂಮಿ ಮತ್ತು ಸಕಾರಾತ್ಮಕತೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಪ್ರಕೃತಿ, ಜೀವನ ಮತ್ತು ಸುಗ್ಗಿಯ ದ್ಯೋತಕವಾಗಿದೆ. ನೇರಳೆ ಬಣ್ಣವು ರಹಸ್ಯದ ಸಂಕೇತ. ಕಡು ನೀಲಿ ಬಣ್ಣವು ಕೃಷ್ಣ ವರ್ಣ ಎಂದೇ ಹೆಸರುವಾಸಿ. ಇದು ಅಧ್ಯಾತ್ಮ ಪ್ರಗತಿಯ ಸಂಕೇತವಾಗಿದೆ.

ಇದನ್ನೂ ಓದಿ: ಹೋಳಿ ಹಬ್ಬದ ಆಫರ್; ತನ್ನ ಫಾರ್ಮ್​ಹೌಸ್​ನಲ್ಲಿ ಬೆಳೆದ ಹಣ್ಣುಗಳನ್ನು ಕೊಳ್ಳುವವರಿಗೆ ವಿಶೇಷ ರಿಯಾಯಿತಿ ಕೊಟ್ಟ ಧೋನಿ!

ಇದನ್ನೂ ಓದಿ: Holi 2022: ಅಕ್ಬರನ ಆಸ್ಥಾನದಿಂದ ಬುಲ್ಲೆಹ್ ಷಾ ವರೆಗೆ; ಹೋಳಿಯಲ್ಲಿ ಬೆರತ ಭಾರತದ ಅನೇಕ ಧರ್ಮಗಳ ಬಣ್ಣಗಳು

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ