ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​​ನಲ್ಲಿ ಇನ್ಫೋಸಿಸ್​​​ ಫೌಂಡೇಶನ್​​ ನಿರ್ಮಿಸಿರುವ 806 ಬೆಡ್​​ಗಳ ವಿಶ್ರಾಮ ಸದನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

| Updated By: Lakshmi Hegde

Updated on: Oct 21, 2021 | 11:06 AM

ಕ್ಯಾನ್ಸರ್​ ರೋಗಿಗಳ ಆರೈಕೆಗಾಗಿ ಅವರೊಟ್ಟಿಗೆ ಆಸ್ಪತ್ರೆಗೆ ಬಂದು ಉಳಿಯುವವರ ಅನುಕೂಲಕ್ಕಾಗಿ ಈ 806 ಬೆಡ್​​ಗಳ ವಿಶ್ರಾಮ ಸದನನ್ನು ಇನ್ಫೋಸಿಸ್​ ನಿರ್ಮಿಸಿದೆ. ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ.

ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​​ನಲ್ಲಿ ಇನ್ಫೋಸಿಸ್​​​ ಫೌಂಡೇಶನ್​​ ನಿರ್ಮಿಸಿರುವ 806 ಬೆಡ್​​ಗಳ ವಿಶ್ರಾಮ ಸದನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಇನ್ಫೋಸಿಸ್​ ಪ್ರತಿಷ್ಠಾನದ ವಿಶ್ರಾಮ ಸದನ ಉದ್ಘಾಟಿಸಿದ ಪ್ರಧಾನಿ ಮೋದಿ
Follow us on

ದೆಹಲಿಯ ಏಮ್ಸ್​​ನ ಝಜರ್​ ಕ್ಯಾಂಪಸ್​​​ನಲ್ಲಿರುವ ರಾಷ್ಟ್ರೀಯ ಕ್ಯಾನ್ಸರ್​ ಸಂಸ್ಥೆ (National Cancer Institute(NCI)ಯಲ್ಲಿ ಇನ್ಫೋಸಿಸ್​ ಫೌಂಡೇಶನ್​​​ನಿಂದ ನಿರ್ಮಾಣವಾಗಿರುವ 806 ಬೆಡ್​​ಗಳ ವಿಶ್ರಾಮ ಸದನವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟಿಸಿದರು.  ಈ 806 ಬೆಡ್​​ಗಳ ವಿಶ್ರಾಮ ಸದನವನ್ನು ಇನ್ಫೋಸಿಸ್​ ಪ್ರತಿಷ್ಠಾನ ಅದರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (Corporate Social Responsibility (CSR) ಉಪಕ್ರಮದ ಒಂದು ಭಾಗವಾಗಿ ನಿರ್ಮಾಣ ಮಾಡಿದೆ. 

ಕ್ಯಾನ್ಸರ್​ ರೋಗಿಗಳು ಬಹುಕಾಲದವರೆಗೆ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ಹಾಗೇ, ಅವರನ್ನು ನೋಡಿಕೊಳ್ಳಲು ಜತೆಗೆ ಬರುವವರೂ ಕೂಡ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆ. ಹೀಗೆ ಕ್ಯಾನ್ಸರ್​ ರೋಗಿಗಳ ಆರೈಕೆಗಾಗಿ ಅವರೊಟ್ಟಿಗೆ ಆಸ್ಪತ್ರೆಗೆ ಬಂದು ಉಳಿಯುವವರ ಅನುಕೂಲಕ್ಕಾಗಿ ಈ 806 ಬೆಡ್​​ಗಳ ವಿಶ್ರಾಮ ಸದನನ್ನು ಇನ್ಫೋಸಿಸ್​ ನಿರ್ಮಿಸಿದೆ. ಇದು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಇನ್ಫೋಸಿಸ್​ ಫೌಂಡೇಶನ್​ ಇದನ್ನು 93 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ಇಂದು ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಇನ್ಫೋಸಿಸ್​ ಫೌಂಡೇಶನ್​ ಮುಖ್ಯಸ್ಥೆ ಸುಧಾಮೂರ್ತಿ, ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಹರ್ಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್ ಖಟ್ಟರ್​ ಇತರರು ಇದ್ದರು. ಪ್ರಾರಂಭದಲ್ಲಿ ಸುಧಾಮೂರ್ತಿ ಸ್ವಾಗತ ಭಾಷಣ ಮಾಡಿದರು. ನಂತರ ಮಾತನಾಡಿದ ಮನ್​ಸುಖ್​ ಮಾಂಡವಿಯಾ, ಕೊವಿಡ್​ 19 ಲಸಿಕೆ ಅಭಿಯಾನದಲ್ಲಿ ಭಾರತ 100 ಕೋಟಿ ಡೋಸ್​ ನೀಡಿಕೆ ದಾಖಲೆ ಮಾಡಿದ್ದನ್ನು ಉಲ್ಲೇಖಿಸಿ ಮಾತನಾಡಿದರು.

ಏಮ್ಸ್​ನ ಜಝರ್​ (ಹರ್ಯಾಣ) ಆವರಣದಲ್ಲಿ ಇರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ದೆಹಲಿಯಲ್ಲಿರುವ ಏಮ್ಸ್​ನ ಒಂದು ಭಾಗವೇ ಆಗಿದೆ.   ಇಲ್ಲಿ 710 ಬೆಡ್​ಗಳಿದ್ದು ಕ್ಯಾನ್ಸರ್​ ರೋಗಿಗಳ ಚಿಕಿತ್ಸೆ, ನಿಯಂತ್ರಣ, ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ.

ಇದನ್ನೂ ಓದಿ: ಇವರೇ ಟಿ20 ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡ: ಪಾಕ್ ಮಾಜಿ ನಾಯಕನ ಅಚ್ಚರಿಯ ಹೇಳಿಕೆ

Shah Rukh Khan: ಕೊನೆಗೂ ‘ಮನ್ನತ್​’ನಿಂದ ಹೊರಬಂದ ಶಾರುಖ್; ಆರ್ಥರ್ ರೋಡ್ ಜೈಲಿನಲ್ಲಿ ಪುತ್ರನನ್ನು ಭೇಟಿಯಾದ ನಟ