AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Danish Siddiqui ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಶ್ ಸಿದ್ಧಿಕಿ ಅಂತ್ಯ ಸಂಸ್ಕಾರ

ಸಿದ್ದಿಕಿ ಅವರ ಕುಟುಂಬವು ಜಾಮಿಯಾ ಅವರೊಂದಿಗೆ ಸುದೀರ್ಘ ಕಾಲದಿಂದ ಸಂಪರ್ಕವನ್ನು ಹೊಂದಿದೆ. ಅವರ ತಂದೆ ಮೊಹಮ್ಮದ್ ಅಖ್ತರ್ ಸಿದ್ದಿಕಿ ಜಾಮಿಯಾ ಶಿಕ್ಷಣ ವಿಭಾಗದಲ್ಲಿ ಮಾಜಿ ಪ್ರಾಧ್ಯಾಪಕರಾಗಿದ್ದರು ಮತ್ತು ಜಾಮಿಯಾ ನಗರದಲ್ಲಿ ತಂಗಿದ್ದಾರೆ.

Danish Siddiqui ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಮಶಾನದಲ್ಲಿ ಡ್ಯಾನಿಶ್ ಸಿದ್ಧಿಕಿ ಅಂತ್ಯ ಸಂಸ್ಕಾರ
ಡ್ಯಾನಿಶ್ ಸಿದ್ಧಿಕಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 18, 2021 | 4:54 PM

Share

ದೆಹಲಿ: ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ  ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ (Danish Siddiqui) ಅವರ ಮೃತದೇಹವನ್ನು ಜಾಮಿಯಾ ಸ್ಮಶಾನದಲ್ಲಿ ಸಮಾಧಿ ಮಾಡಲಾಗುವುದು ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಭಾನುವಾರ ತಿಳಿಸಿದೆ. ಸ್ಮಶಾನವನ್ನು ಸಾಮಾನ್ಯವಾಗಿ ಜಾಮಿಯಾ ಸಿಬ್ಬಂದಿಗಳು ಅವರ ಸಂಗಾತಿಗಳು ಮತ್ತು ಅಪ್ರಾಪ್ತ ಮಕ್ಕಳ ಅಂತ್ಯ ಸಂಸ್ಕಾರಕ್ಕಾಗಿ ಕಾಯ್ದಿರಿಸಲಾಗಿದೆ. ಆದರೆ ಸಿದ್ದಿಕಿಗಾಗಿ ವಿನಾಯಿತಿ ನೀಡಲಾಗುವುದು ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಹೇಳಿದ್ದಾರೆ. ಸುದ್ದಿ ಸಂಸ್ಥೆ ರಾಯಿಟರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಿಕಿ (39) ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. “ಅವರ ದೇಹವನ್ನು ಜಾಮಿಯಾ ಸ್ಮಶಾನದಲ್ಲಿ ಹೂಳಬೇಕೆಂದು ಸಿದ್ದಿಕಿ ಅವರ ಕುಟುಂಬವು ಮಾಡಿದ ಮನವಿಯನ್ನು ಉಪಕುಲಪತಿ ಸ್ವೀಕರಿಸಿದ್ದಾರೆ ಇದನ್ನು ವಿಶ್ವವಿದ್ಯಾಲಯದ ನೌಕರರು, ಅವರ ಸಂಗಾತಿಗಳು ಮತ್ತು ಅಪ್ರಾಪ್ತ ಮಕ್ಕಳ ಮೃತದೇಹದ ಅಂತ್ಯಸಂಸ್ಕಾರಕ್ಕ ಮಾತ್ರ ಬಳಸಲಾಗುತ್ತದೆ” ಎಂದು ಪಿಆರ್​​ಒ ಅಹ್ಮದ್ ಅಜೀಮ್ ಹೇಳಿದರು.

ಸಿದ್ದಿಕಿ ಅವರ ಕುಟುಂಬವು ಜಾಮಿಯಾ ಅವರೊಂದಿಗೆ ಸುದೀರ್ಘ ಕಾಲದಿಂದ ಸಂಪರ್ಕವನ್ನು ಹೊಂದಿದೆ. ಅವರ ತಂದೆ ಮೊಹಮ್ಮದ್ ಅಖ್ತರ್ ಸಿದ್ದಿಕಿ ಜಾಮಿಯಾ ಶಿಕ್ಷಣ ವಿಭಾಗದಲ್ಲಿ ಮಾಜಿ ಪ್ರಾಧ್ಯಾಪಕರಾಗಿದ್ದರು ಮತ್ತು ಜಾಮಿಯಾ ನಗರದಲ್ಲಿ ತಂಗಿದ್ದಾರೆ.

ಸಿದ್ದಿಕಿ ಸ್ವತಃ ಜಾಮಿಯಾದಿಂದ ಶಾಲಾ ಶಿಕ್ಷಣವನ್ನು ಮಾಡಿದ್ದರು, ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶನಿವಾರ ಉಪ ಕುಲಪತಿ ನಜ್ಮಾ ಅಖ್ತರ್ ಕುಟುಂಬಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದರು.

ವಿಶ್ವವಿದ್ಯಾನಿಲಯವು ಮಂಗಳವಾರ ಕ್ಯಾಂಪಸ್‌ನಲ್ಲಿ ಸಂತಾಪ ಸಭೆಯನ್ನು ಆಯೋಜಿಸಲಿದೆ ಮತ್ತು ವಿದ್ಯಾರ್ಥಿಗಳಿಗೆ “ಸ್ಫೂರ್ತಿ” ನೀಡಲು ಕ್ಯಾಂಪಸ್‌ನಲ್ಲಿ ” in due course of time ” ಸಿದ್ದಿಕಿ ಅವರ ಕೆಲಸದ ಪ್ರದರ್ಶನವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಅಫ್ಘಾನಿಸ್ತಾನದ ಪಾಕಿಸ್ತಾನದ ಗಡಿಯ ಸಮೀಪವಿರುವ ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫಘಾನ್ ಭದ್ರತಾ ಪಡೆ ಮತ್ತು ತಾಲಿಬಾನ್ ನಡುವಿನ ಘರ್ಷಣೆಯನ್ನು ಒಳಗೊಂಡ ಸಂದರ್ಭದಲ್ಲಿ ಸಿದ್ದಿಕಿ ಶುಕ್ರವಾರ ಕೊಲ್ಲಲ್ಪಟ್ಟರು.

ಈ ವಾರದ ಆರಂಭದಲ್ಲಿ ಅವರು ಕಂದಹಾರ್ ಮೂಲದ ಅಫ್ಘಾನ್ ವಿಶೇಷ ಪಡೆಗಳೊಂದಿಗೆ ಪತ್ರಕರ್ತರಾಗಿ ವರದಿಗಾರಿಕೆಗೆ ಹೋಗಿದ್ದರು. ಅವರು “ಅಫ್ಘಾನ್ ಕಮಾಂಡೋಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವಿನ ಹೋರಾಟದ ಬಗ್ಗೆ ವರದಿ ಮಾಡುತ್ತಿದ್ದರು” ಎಂದು ರಾಯಿಟರ್ಸ್ ಹೇಳಿದೆ. ಸಿದ್ದಿಕಿ ಪತ್ನಿ ರೈಕ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ: Danish Siddiqui: ಭಾರತದ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿ ಹತ್ಯೆಗೆ ಹೊಸ ಟ್ವಿಸ್ಟ್​; ಈ ಸಾವಿಗೆ ನಾವು ಕಾರಣವಲ್ಲ ಎಂದ ತಾಲಿಬಾನ್

ಇದನ್ನೂ ಓದಿ: Danish Siddiqui: ಅಫ್ಘಾನ್ ಸೇನೆ- ತಾಲಿಬಾನ್ ಉಗ್ರರ ಸಂಘರ್ಷದಲ್ಲಿ ಭಾರತದ ಫೋಟೋ ಜರ್ನಲಿಸ್ಟ್​ ಡ್ಯಾನಿಶ್​ ಸಿದ್ಧಿಕಿ ಹತ್ಯೆ

(Pulitzer Prize-winning photojournalist who was killed in Afghanistan Danish Siddiqui’s body will be buried at the Jamia graveyard)

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ