AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಾರಿ ಸೀರೆಯುಟ್ಟು ಮೋಟಾರ್​ಸೈಕಲ್​ನಲ್ಲಿ ವಿಶ್ವಪರ್ಯಟನೆಗೆ ಹೊರಟ ಪುಣೆ ಯುವತಿ

ನವಾರಿ ಸೀರೆಯುಟ್ಟು ಯುವತಿಯೊಬ್ಬಳು ಮೋಟಾರ್​ಸೈಕಲ್​ನಲ್ಲಿ ವಿಶ್ವಪರ್ಯಟನೆಗೆ ಹೊರಟಿದ್ದಾರೆ. ವೃತ್ತಿ ಜೀವನದ ಜತೆಗೆ ತಮ್ಮ ಹವ್ಯಾಸವನ್ನು ಮುಂದುವರೆಸುವುದು ವ್ಯಕ್ತಿಯ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ.

ನವಾರಿ ಸೀರೆಯುಟ್ಟು ಮೋಟಾರ್​ಸೈಕಲ್​ನಲ್ಲಿ ವಿಶ್ವಪರ್ಯಟನೆಗೆ ಹೊರಟ ಪುಣೆ ಯುವತಿ
ರಮೀಳಾImage Credit source: Free Press Journal
ನಯನಾ ರಾಜೀವ್
|

Updated on:Mar 08, 2023 | 11:25 AM

Share

ನವಾರಿ ಸೀರೆಯುಟ್ಟು ಯುವತಿಯೊಬ್ಬಳು ಮೋಟಾರ್​ಸೈಕಲ್​ನಲ್ಲಿ ವಿಶ್ವಪರ್ಯಟನೆಗೆ ಹೊರಟಿದ್ದಾರೆ. ವೃತ್ತಿ ಜೀವನದ ಜತೆಗೆ ತಮ್ಮ ಹವ್ಯಾಸವನ್ನು ಮುಂದುವರೆಸುವುದು ವ್ಯಕ್ತಿಯ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ. ಭಾರತದ ಸಂಸ್ಕೃತಿ ಪರಂಪರೆಯನ್ನು ಸಾರಲು ಮುಂಬೈನ 27 ವರ್ಷದ ಯುವತಿ ರಮೀಳಾ 9 ಗಜದ ನವಾರಿ ಸೀರೆಯನ್ನು ತೊಟ್ಟು ವಿಶ್ವದಾದ್ಯಂತ ಸಂಚರಿಸಲು ಸಿದ್ಧರಾಗಿದ್ದಾರೆ. ನಾನು 20 ದೇಶಗಳಿಗೆ ಭೇಟಿ ನೀಡಲಿದ್ದೇನೆ, ಒಂದು ಲಕ್ಷ ಕಿಲೋಮೀಟರ್ ಕ್ರಮಿಸಲಿದ್ದೇನೆ, ನಾನು ಹೋಗುವ ಪ್ರತಿ ಸ್ಥಳದಲ್ಲೂ ಭಾರತೀಯ ಹಾಗೂ ಮಹಾರಾಷ್ಟ್ರದ ಸಂಸ್ಕೃತಿಯನ್ನು ಪಸರಿಸುವುದು ನನ್ನ ಉದ್ದೇಶ ಎಂದು ರಮೀಳಾ ಹೇಳಿದ್ದಾರೆ.

ರಮೀಳಾ ಅವರು 16 ವರ್ಷ ವಯಸ್ಸಿನವರಾಗಿದ್ದಾಗಿನಿಂದಲೂ ಒಬ್ಬರೇ ಪ್ರಯಾಣಿಸುತ್ತಿದ್ದರು. ಅವರ ತಂದೆ ತಾಯಿ ಪ್ರತಿ ವರ್ಷವೂ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮ ದೇಶದ ದೂರ ದೂರದ ಊರುಗಳಿಗೆ ಭೇಟಿ ನೀಡಿದ್ದೇನೆ.

ಭಾರತದ ಸಂಸ್ಕೃತಿ, ಸಂಪ್ರದಾಯ, ವೈವಿಧ್ಯತೆಗಳನ್ನು ಸಾರುವ ಪ್ರಯತ್ನದಲ್ಲಿದ್ದೇನೆ ಎಂದು ಹೇಳಿದ್ದಾರೆ. ಆಕೆ ತನ್ನ ಜತೆಗೆ 7 ಸೀರೆಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತಿದ್ದಾಳೆ. ಮಧ್ಯಪ್ರದೇಶದ ಮಹೇಶ್ವರಿ ರೇಷ್ಮೆ ಸೀರೆ, ಮಹಾರಾಷ್ಟ್ರದ ಪೈಥೈನಿ ಸೇರಿದಂತೆ ಅನೇಕ ಸೀರೆಗಳನ್ನು ತೆಗೆದುಕೊಂಡು ಹೋಗಲಿದ್ದಾರೆ.ಮುಂಬೈನಿಂದ ಮಾರ್ಚ್​ 9 ರಂದು ಬೆಳಗಿನ ಜಾವ 4.30ಕ್ಕೆ ಹೊರಡಲಿದ್ದಾರೆ.

ಜನವರಿಯಲ್ಲಿ ಮಹಾರಾಷ್ಟ್ರದ 8 ವರ್ಷದ ಬಾಲಕಿಯೊಬ್ಬಳು ನವಾರಿ ಸೀರೆಯುಟ್ಟು ಪರ್ವತ ಏರಿದ್ದಳು. ಸುಮಾರು 400 ರಿಂದ 450 ಅಡಿ ಎತ್ತರದ ಪರ್ವತದಲ್ಲಿ ಜಿಪ್ ಲೈನಿಂಗ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಮಾರು 365 ದಿನಗಳ ಪ್ರಯಾಣದ ನಂತರ ಮಾರ್ಚ್ 8, 2024 ರಂದು ಭಾರತಕ್ಕೆ ಹಿಂತಿರುಗುತ್ತದೆ.

ಅಲ್ಲದೆ, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಮಹಿಳೆಯರಲ್ಲಿ ಧೈರ್ಯ, ದೃಢತೆ ಮತ್ತು ಪರಿಶ್ರಮದ ಸಂದೇಶವನ್ನು ಸಾರಲು ಈ ವಿಶ್ವ ಪ್ರವಾಸವನ್ನು ಪ್ರಾರಂಭಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:20 am, Wed, 8 March 23

ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ