ಯಾರು ಸತ್ತರೂ ಪ್ರಧಾನಿ ಮೋದಿ ಮೇಲೆ ಪರಿಣಾಮ ಬೀರುವುದಿಲ್ಲ: ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತಮ್ಮ ಟ್ವೀಟಾಸ್ರ ಮುಂದುವರಿಸಿದ್ದಾರೆ. ಆದರೆ, ಅವರೀಗ ಭಾರತದಲ್ಲಿಲ್ಲ ಅನ್ನೋದು ಬೇರೆ ಮಾತು. ನಾನೆಲ್ಲಿದ್ದರೂ ಟ್ವೀಟಿಸುವುದನ್ನು ಬಿಡಲಾರೆ ಎನ್ನುವಂತಿದೆ ರಾಹುಲ್​ರ ಧೋರಣೆ. ಇಂದಿನ ಟ್ವೀಟ್​ನಲ್ಲಿ ಅವರು ಲಾಕ್​ಡೌನ್ ಅವಧಿಯಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಮೃತಪಟ್ಟರೆನ್ನುವ ಬಗ್ಗೆ ಗೊತ್ತಿದೆಯೇ ಅಂತ ಪ್ರಧಾನಿಯವರನ್ನು ಕೇಳಿದ್ದಾರೆ. ‘‘ಲಾಕ್‌ಡೌನ್ ವೇಳೆ ಎಷ್ಟು ವಲಸೆ ಕಾರ್ಮಿಕರು ಮರಣ ಹೊಂದಿದರು, ಎಷ್ಟು ಜನ ಉದ್ಯೋಗ ಕಳೆದುಕೊಂಡರೆಂಬ ಅರಿವು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕಿಲ್ಲ್ಲ. […]

ಯಾರು ಸತ್ತರೂ ಪ್ರಧಾನಿ ಮೋದಿ ಮೇಲೆ ಪರಿಣಾಮ ಬೀರುವುದಿಲ್ಲ: ರಾಹುಲ್ ಗಾಂಧಿ
ಅರುಣ್​ ಕುಮಾರ್​ ಬೆಳ್ಳಿ

Updated on: Sep 15, 2020 | 7:32 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತಮ್ಮ ಟ್ವೀಟಾಸ್ರ ಮುಂದುವರಿಸಿದ್ದಾರೆ. ಆದರೆ, ಅವರೀಗ ಭಾರತದಲ್ಲಿಲ್ಲ ಅನ್ನೋದು ಬೇರೆ ಮಾತು. ನಾನೆಲ್ಲಿದ್ದರೂ ಟ್ವೀಟಿಸುವುದನ್ನು ಬಿಡಲಾರೆ ಎನ್ನುವಂತಿದೆ ರಾಹುಲ್​ರ ಧೋರಣೆ. ಇಂದಿನ ಟ್ವೀಟ್​ನಲ್ಲಿ ಅವರು ಲಾಕ್​ಡೌನ್ ಅವಧಿಯಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಮೃತಪಟ್ಟರೆನ್ನುವ ಬಗ್ಗೆ ಗೊತ್ತಿದೆಯೇ ಅಂತ ಪ್ರಧಾನಿಯವರನ್ನು ಕೇಳಿದ್ದಾರೆ.

‘‘ಲಾಕ್‌ಡೌನ್ ವೇಳೆ ಎಷ್ಟು ವಲಸೆ ಕಾರ್ಮಿಕರು ಮರಣ ಹೊಂದಿದರು, ಎಷ್ಟು ಜನ ಉದ್ಯೋಗ ಕಳೆದುಕೊಂಡರೆಂಬ ಅರಿವು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕಿಲ್ಲ್ಲ. ಸಾವುಗಳ ಬಗ್ಗೆ ಕೇಂದ್ರ ಸರ್ಕಾರ ಲೆಕ್ಕ ಹಾಕದಿದ್ದರೆ ಅವು ಸಾವೆನಿಸಲಾರವೇ? ಯಾರೇ ಸತ್ತರೂ ಮೋದಿ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ, ಇದಕ್ಕಿಂತ ದುಃಖದ ವಿಷಯ ಮತ್ತೊಂದಿಲ್ಲ’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ವಲಸೆ ಕಾರ್ಮಿಕರು ಮೃತಪಟ್ಟಿದ್ದನ್ನು ಇಡೀ ವಿಶ್ವವೇ ಕಂಡಿದೆ ಆದರೆ ಆ ಸಾವುಗಳು ಕೇವಲ ಮೋದಿ ಸರ್ಕಾರಕ್ಕೆ ಮಾತ್ರ ಕಂಡಿಲ್ಲ ಅಂತ ರಾಹುಲ್ ಕಟಕಿಯಾಡಿದ್ದಾರೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us