AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆಗೆ ಮುನ್ನ ತೆರೆಯಲಿದೆ ಅಯೋಧ್ಯೆಯಲ್ಲಿನ ರಾಮ ಮಂದಿರ

Ram temple in Ayodhya: 47 ಪದರವೂ ಒಂದೊಂದು ಅಡಿ ಎತ್ತರವಿದೆ. ಸ್ತಂಭವು 60 ಅಡಿ ಎತ್ತರವಿರುತ್ತದೆ ಎಂದು ಅವರು ಹೇಳಿದರು. ಗರ್ಭಗುಡಿಯ ಮೇಲೆ 161 ಅಡಿ ಎತ್ತರದ ಕಟ್ಟಡಕ್ಕಾಗಿ ರಾಜಸ್ಥಾನದಿಂದ ಸುಮಾರು ನಾಲ್ಕು ಲಕ್ಷ ಘನ ಅಡಿ ಕಲ್ಲು ಮತ್ತು ಅಮೃತಶಿಲೆಯನ್ನು ಬಳಸಲಾಗುತ್ತದೆ. ಇಲ್ಲಿ ಉಕ್ಕು ಅಥವಾ ಇಟ್ಟಿಗೆಗಳ ಬಳಕೆ ಇರುವುದಿಲ್ಲ.

ಲೋಕಸಭಾ ಚುನಾವಣೆಗೆ ಮುನ್ನ ತೆರೆಯಲಿದೆ ಅಯೋಧ್ಯೆಯಲ್ಲಿನ ರಾಮ ಮಂದಿರ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಂತದಲ್ಲಿರುವುದು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 16, 2021 | 7:49 PM

Share

ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಮೊದಲ ಹಂತವು ಬಹುತೇಕ ಪೂರ್ಣಗೊಂಡಿದೆ.ಇದರ ಚಿತ್ರವನ್ನುರಾಮ ಜನ್ಮಭೂಮಿ ಟ್ರಸ್ಟ್ ಇಂದು ಮೊದಲ ಬಾರಿಗೆ ಪ್ರದರ್ಶಿಸಿತು. ನಿರ್ಮಾಣವು ಗಡುವನ್ನು ಪೂರೈಸುತ್ತದೆ ಮತ್ತು 2024 ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದೇವಾಲಯವು ಭಕ್ತರಿಗಾಗಿ ತೆರೆದಿರುತ್ತದೆ ಎಂದು ಟ್ರಸ್ಟ್‌ನ ಅಧಿಕಾರಿಗಳು ಹೇಳಿದ್ದಾರೆ. ಈ ದೇವಾಲಯವು ಕಳೆದ ವರ್ಷ ಆಗಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಶಂಕುಸ್ಥಾಪನೆಯೊಂದಿಗೆ ಪ್ರಾರಂಭವಾಯಿತು. ನಿರ್ಮಾಣ ಕಾರ್ಯ ಡಿಸೆಂಬರ್ 2023 ರ ವೇಳೆಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ನಿರ್ಮಾಣದ ಉಸ್ತುವಾರಿ ಅಧಿಕಾರಿಯೊಬ್ಬರು ಉತ್ಖನನದ ನಂತರ 47 ಪದರಗಳ ಕಾಂಕ್ರೀಟ್ ಅನ್ನು ಭರ್ತಿ ಮಾಡಲಾಗಿದ್ದು, ದೇವಾಲಯದ ಸಂಕೀರ್ಣದೊಳಗೆ 10 ಎಕರೆಗಳಷ್ಟು ಭೂಮಿಗೆ ಬರುವ ಮೂರು ಅಂತಸ್ತಿನ ರಚನೆಗೆ ಇದು ಬೆಂಬಲ ನೀಡುತ್ತದೆ.

“ಅಡಿಪಾಯ ಹಾಕುವ ಸಮಾರಂಭದ ನಂತರ ನಾವು ಸಡಿಲವಾದ ಮಣ್ಣು ಮತ್ತು ಕಸವನ್ನು ತೆಗೆಯಲು 40 ಅಡಿ ಅಗೆದಿದ್ದೇವೆ. ನಂತರ ಕಾಂಕ್ರೀಟ್‌ ಸುರಿಯುತ್ತೇವೆ” ಎಂದು ಲಾರ್ಸೆನ್ ಮತ್ತು ಟ್ಯೂಬ್ರೋದ ಪ್ರಾಜೆಕ್ಟ್ ಮ್ಯಾನೇಜರ್ ಬಿನೋದ್ ಮೆಹ್ತಾ ಹೇಳಿದರು.

47 ಪದರವೂ ಒಂದೊಂದು ಅಡಿ ಎತ್ತರವಿದೆ. ಸ್ತಂಭವು 60 ಅಡಿ ಎತ್ತರವಿರುತ್ತದೆ ಎಂದು ಅವರು ಹೇಳಿದರು ಗರ್ಭಗುಡಿಯ ಮೇಲೆ 161 ಅಡಿ ಎತ್ತರದ ಕಟ್ಟಡಕ್ಕಾಗಿ ರಾಜಸ್ಥಾನದಿಂದ ಸುಮಾರು ನಾಲ್ಕು ಲಕ್ಷ ಕ್ಯುಬಿಕ್ ಅಡಿ ಕಲ್ಲು ಮತ್ತು ಅಮೃತಶಿಲೆಯನ್ನು ಬಳಸಲಾಗುತ್ತದೆ. ಇಲ್ಲಿ ಉಕ್ಕು ಅಥವಾ ಇಟ್ಟಿಗೆಗಳ ಬಳಕೆ ಇರುವುದಿಲ್ಲ. 360 ಅಡಿX 235 ಅಡಿ ರಚನೆಯು ನೆಲ ಮಹಡಿಯಲ್ಲಿ 160 ಅಂಕಣಗಳನ್ನು, ಮೊದಲ ಮಹಡಿಯಲ್ಲಿ 132 ಅಂಕಣಗಳನ್ನು ಮತ್ತು ಎರಡನೇ ಮಹಡಿಯಲ್ಲಿ 74 ಅಂಕಣಗಳನ್ನು ಹೊಂದಿರುತ್ತದೆ. ಐದು “ಮಂಟಪಗಳು” ಇದರಲ್ಲಿರುತ್ತವೆ.

ದೇವಾಲಯದ ಸಂಕೀರ್ಣವು ಯಾತ್ರಾರ್ಥಿ ಸುಗಮ ಕೇಂದ್ರ, ಮ್ಯೂಸಿಯಂ, ಆರ್ಕೈವ್‌ಗಳು, ಸಂಶೋಧನಾ ಕೇಂದ್ರ, ಸಭಾಂಗಣ, ಜಾನುವಾರುಗಳ ಶೆಡ್, ಸಂಪ್ರದಾಯಆಚರಣೆಗಳ ಸ್ಥಳ, ಆಡಳಿತ ಕಟ್ಟಡ ಮತ್ತು ಅರ್ಚಕರಿಗೆ ಕೊಠಡಿಗಳನ್ನು ಒಳಗೊಂಡಿರುತ್ತದೆ. “ಕುಬೇರ್ ತಿಲಾ” ಮತ್ತು “ಸೀತಾ ಕೂಪ್” ನಂತಹ ಹತ್ತಿರದ ಪಾರಂಪರಿಕ ರಚನೆಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಯೋಜನೆಗಳೂ ಇವೆ.

ದಶಕಗಳಿಂದ ಕಾನೂನು ವಿವಾದದಲ್ಲಿ ಸಿಲುಕಿಕೊಂಡಿದ್ದ ರಾಮ ಮಂದಿರ ನಿರ್ಮಾಣದ ಕಾರ್ಯ ಸುಪ್ರೀಂ ಕೋರ್ಟ್ 2019 ರಲ್ಲಿ ದೇವಸ್ಥಾನಕ್ಕಾಗಿ ಭೂಮಿ ಹಸ್ತಾಂತರಿಸಿದ ನಂತರ ಪ್ರಾರಂಭವಾಯಿತು.

ಮೊಘಲ್ ಚಕ್ರವರ್ತಿ ಬಾಬರ್ ನಿರ್ಮಿಸಿದ 16 ನೇ ಶತಮಾನದ ಮಸೀದಿ ಭಗವಾನ್ ರಾಮನ ಜನ್ಮಸ್ಥಳವೆಂದು ನಂಬಿದ್ದರು.1992 ರಲ್ಲಿ ಬಾಬರ್ ಮಸೀದಿ ಧ್ವಂಸಗೊಳಿಸಲಾಯಿತು. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಮುಸ್ಲಿಮರಿಗೆ ಮಸೀದಿಗೆ ಪರ್ಯಾಯವಾದ ಭೂಮಿಯನ್ನು ನೀಡಬೇಕು ಎಂದು ಹೇಳಿದೆ.

ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿರುವ ಟ್ರಸ್ಟ್, ಈ ಹಿಂದೆ ದೇವಾಲಯದ ಸ್ಥಳದ ಸುತ್ತಲೂ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಂಚನೆಯ ಆರೋಪಗಳನ್ನು ಎದುರಿಸಿತು.  ಜೂನ್ ತಿಂಗಳಲ್ಲಿ, ಆಮ್ ಆದ್ಮಿ ಪಕ್ಷ ಮತ್ತು ಸಮಾಜವಾದಿ ಪಕ್ಷವು ಅಯೋಧ್ಯೆಯಲ್ಲಿ 890 ಚದರ ಮೀಟರ್ ಭೂಮಿಯನ್ನು20 ಲಕ್ಷಕ್ಕೆ ಖರೀದಿಸಿ ರಾಮ ಮಂದಿರ ಟ್ರಸ್ಟ್‌ಗೆ ₹ 2.5 ಕೋಟಿಗೆ ಮಾರಾಟ ಮಾಡಿ 79 ದಿನಗಳಲ್ಲಿ 1,250 ಪ್ರತಿಶತ ಲಾಭ ಗಳಿಸಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ಕೂಡ ಇದೇ ಆರೋಪ ಮಾಡಿತ್ತು.

“ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ ದೇಣಿಗೆಯ” ಲೂಟಿ “ಯಲ್ಲಿ ಬಿಜೆಪಿ ನಾಯಕರು ಸ್ಪಷ್ಟವಾಗಿ ಭಾಗಿಯಾಗಿದ್ದಾರೆ. ದೈನಂದಿನ ಬಹಿರಂಗಪಡಿಸುವಿಕೆಗಳು ಬಿಜೆಪಿ ಸರ್ಕಾರದ ಸಕ್ರಿಯ ಕುಮ್ಮಕ್ಕಿನಿಂದ ಕೋಟ್ಯಂತರ ದೇಣಿಗೆಗಳನ್ನು ಲೂಟಿ ಮಾಡುವುದನ್ನು ಪ್ರತಿಬಿಂಬಿಸುತ್ತವೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.

ಇದನ್ನೂ ಓದಿ:  Char Dham Yatra 2021: ಚಾರ್​ಧಾಮ್​ ಯಾತ್ರೆಯ ಮೇಲಿನ ನಿಷೇಧ ತೆರವುಗೊಳಿಸಿದ ಉತ್ತರಾಖಂಡ್ ಹೈಕೋರ್ಟ್​; ಈ ಷರತ್ತುಗಳ ಪಾಲನೆ ಕಡ್ಡಾಯ

(Ram temple in Ayodhya construction will meet the deadline and temple will be open before 2024 Lok Sabha polls)

Published On - 7:48 pm, Thu, 16 September 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ