AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic day 2023 Awards: ಕರ್ನಾಟಕದ ಮೂವರು ಸೇರಿದಂತೆ ಒಟ್ಟು 140 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ

140 ಮಂದಿ ಪೊಲೀಸ್ ಸಿಬ್ಬಂದಿಗೆ ಪ್ರಶಸ್ತಿ, 93 ಮಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಹಾಗೂ 668 ಮಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕ ನೀಡಲಾಗುತ್ತದೆ.

Republic day 2023 Awards: ಕರ್ನಾಟಕದ ಮೂವರು ಸೇರಿದಂತೆ ಒಟ್ಟು 140 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jan 25, 2023 | 5:29 PM

Share

ಗಣರಾಜ್ಯೋತ್ಸವದಂದು ಶೌರ್ಯಕ್ಕಾಗಿ ಪೊಲೀಸ್ ಪದಕ (ಪಿಎಂಜಿ), ರಾಷ್ಟ್ರಪತಿಗಳ ಪೊಲೀಸ್ ಮೆಡಲ್ ಫಾರ್ ಡಿಸ್ಟಿಂಗ್ವಿಶ್ಡ್ ಸೇವೆ (ಪಿಪಿಎಂ) ಮತ್ತು ಮೆರಿಟೋರಿಯಸ್ ಸೇವೆಗಾಗಿ ಪೊಲೀಸ್ ಪದಕ (ಪಿಎಂ) ನೀಡಲಾಗುವ 901 ಪೊಲೀಸ್ ಸಿಬ್ಬಂದಿಯ ಹೆಸರನ್ನು ಕೇಂದ್ರ ಗೃಹ ಸಚಿವಾಲಯ ಬುಧವಾರ ಪ್ರಕಟಿಸಿದೆ. 140 ಮಂದಿ ಪೊಲೀಸ್ ಸಿಬ್ಬಂದಿಗೆ ಶೌರ್ಯ 93 ಮಂದಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಹಾಗೂ 668 ಮಂದಿಗೆ ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕ ನೀಡಲಾಗುತ್ತದೆ. ಸೆಂಟ್ರಲ್ ರಿಸರ್ವ್ ಫೋರ್ಸ್ (CRPF) 48, ಶೌರ್ಯ ಪದಕಗಳನ್ನು ಪಡೆದರು. ಮೂವತ್ತೊಂದು ಶೌರ್ಯ ಪ್ರಶಸ್ತಿಗಳು ಮಹಾರಾಷ್ಟ್ರದಿಂದ, 25 ಜಮ್ಮು ಮತ್ತು ಕಾಶ್ಮೀರ ಪೋಲಿಸ್‌ನಿಂದ, ಒಂಬತ್ತು ಜಾರ್ಖಂಡ್‌ನಿಂದ, ತಲಾ ಏಳು ದೆಹಲಿ, ಛತ್ತೀಸ್‌ಗಢ ಪೊಲೀಸ್ ಮತ್ತು ಬಿಎಸ್‌ಎಫ್‌ನಿಂದ, ಮತ್ತು ಉಳಿದವು ಇತರ ರಾಜ್ಯಗಳು/ಯುಟಿಗಳು ಮತ್ತು ಸಿಎಪಿಎಫ್‌ಗಳಿಂದ ಬಂದಿದೆ.

140 ಶೌರ್ಯ ಪ್ರಶಸ್ತಿಗಳಲ್ಲಿ 80 ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳ ಸಿಬ್ಬಂದಿಗೆ ಮತ್ತು 45 ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳ ಸಿಬ್ಬಂದಿಗೆ ನೀಡಲಾಗಿದೆ.

ಇದನ್ನು ಓದಿ:Republic Day 2023: ಗಣರಾಜ್ಯೋತ್ಸವದ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷರನ್ನು ಸ್ವಾಗತಿಸಿದ ಮೋದಿ

ಪ್ರಶಸ್ತಿಗಳ ಮಹತ್ವ:

ಶೌರ್ಯ ಪ್ರಶಸ್ತಿ: ಜೀವ ಮತ್ತು ಆಸ್ತಿಯನ್ನು ಉಳಿಸುವಲ್ಲಿ ಅಥವಾ ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ಎದ್ದುಕಾಣುವ ಶೌರ್ಯದ ಆಧಾರದ ಮೇಲೆ ಇದನ್ನು ನೀಡಲಾಗುತ್ತದೆ.

ರಾಷ್ಟ್ರಪತಿ ಪದಕ: ಪೊಲೀಸ್ ಸೇವೆಯಲ್ಲಿ ವಿಶೇಷ ದಾಖಲೆಗಾಗಿ ಪ್ರಶಸ್ತಿ ನೀಡಲಾಗಿದೆ.

ಪೊಲೀಸ್ ಪದಕ: ಸಂಪನ್ಮೂಲ ಮತ್ತು ಕರ್ತವ್ಯದ ಭಕ್ತಿಯಿಂದ ನಿರೂಪಿಸಲ್ಪಟ್ಟ ಅಮೂಲ್ಯ ಸೇವೆಗಾಗಿ ಇದನ್ನು ನೀಡಲಾಗುತ್ತದೆ.

ಕರ್ನಾಟಕದ 20 ಮಂದಿ ಪೊಲೀಸರಿಗೆ ಪದಕ

ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಬೆಂಗಳೂರಿನ ಕೆ.ವಿ.ಶರತ್​ ಚಂದ್ರ (ಎಡಿಜಿಪಿ-ಸಿಐಡಿ), ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಲಾಭುರಾಮ್​ (ಹೆಚ್ಚುವರಿ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ-ಬೆಂಗಳೂರು) ಸೇರಿದಂತೆ ಕರ್ನಾಟಕದ 20 ಮಂದಿ ಆಯ್ಕೆ ಆಗಿದ್ದಾರೆ.

ನಾಳೆ (ಜನವರಿ 26) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜಪಥದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವುದರೊಂದಿಗೆ 74ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಚಾಲನೆ ಸಿಗುತ್ತದೆ. ಈ ಸಮಾರಂಭದ ಬಳಿಕ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆಯುತ್ತದೆ. ಇದಲ್ಲದೆ, ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸುತ್ತಾರೆ. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Wed, 25 January 23