AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಿಷಕ್ಕೆ 8,000 ಸಿರಿಂಜ್ ಉತ್ಪಾದಿಸಿದರೂ ಪೂರೈಕೆ ಮಾಡಲಾಗದಷ್ಟು ಬೇಡಿಕೆ; ಕೊವಿಡ್ ಲಸಿಕೆ ಅಭಿಯಾನಕ್ಕೆ ಸಿರಿಂಜ್ ಬೇಕು

ಕೊರೊನಾ ಲಸಿಕೆ ವಿತರಣಾ ಅಭಿಯಾನ ವಿಶ್ವದ ವಿವಿಧ ದೇಶಗಳಲ್ಲಿ ಆರಂಭವಾಗುವ ಮೊದಲು ಸಿರಿಂಜ್​ನ ಪ್ರಾಮುಖ್ಯತೆ ಅಷ್ಟಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ, ಸಿರಿಂಜ್​ಗಳ ಕೊರತೆಯಿಂದಾಗಿಯೇ ಕೊವಿಡ್-19 ಲಸಿಕೆ ಅಭಿಯಾನಕ್ಕೆ ತಡೆಯಾದಾಗ ಸಿರಿಂಜ್ ಪ್ರಾಮುಖ್ಯತೆ ತಿಳಿದುಬಂತು.

ನಿಮಿಷಕ್ಕೆ 8,000 ಸಿರಿಂಜ್ ಉತ್ಪಾದಿಸಿದರೂ ಪೂರೈಕೆ ಮಾಡಲಾಗದಷ್ಟು ಬೇಡಿಕೆ; ಕೊವಿಡ್ ಲಸಿಕೆ ಅಭಿಯಾನಕ್ಕೆ ಸಿರಿಂಜ್ ಬೇಕು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Apr 06, 2022 | 7:06 PM

Share

ಚಂಡೀಗಡ: ನಿಮಿಷಕ್ಕೆ ಸುಮಾರು 8,000 ಸಿರಿಂಜ್​ಗಳ ಉತ್ಪಾದನೆ ಮಾಡಿದರೂ ಪೂರೈಕೆ ಮಾಡಲಾಗದಷ್ಟು ಬೇಡಿಕೆ ಇದೆ ಎನ್ನುತ್ತಿರುವ ಹರ್ಯಾಣ ಮೂಲದ ಸಿರಿಂಜ್ ತಯಾರಕ ಸಂಸ್ಥೆ ಹಿಂದೂಸ್ತಾನ್ ಸಿರಿಂಜ್ಸ್ ಮತ್ತು ಮೆಡಿಕಲ್ ಡಿವೈಸಸ್ (HMD), ‘ಕೊವಿಡ್ ಲಸಿಕೆ ನೀಡಲು ಸೂಕ್ತ ಸಿರಿಂಜ್ ನೀಡಿ’ ಎಂದು ಕೇಳಿ, ವಿದೇಶಗಳಿಂದ ಪ್ರತಿನಿತ್ಯ ಬರುವ ಸುಮಾರು 40 ಇಮೇಲ್​ಗಳನ್ನು ತಿರಸ್ಕರಿಸುತ್ತಿದೆ.  ಭಾರತದಲ್ಲಿ ತಯಾರಾಗುತ್ತಿರುವ ಸಿರಿಂಜ್​ಗೆ ಜಾಗತಿಕ ಮಟ್ಟದಲ್ಲಿ ಎಷ್ಟು ಬೇಡಿಕೆ ಇದೆ ಎಂದು ಇದರಿಂದ ತಿಳಿಯಬಹುದು.

ಕೊರೊನಾ ಲಸಿಕೆ ವಿತರಣಾ ಅಭಿಯಾನ ವಿಶ್ವದ ವಿವಿಧ ದೇಶಗಳಲ್ಲಿ ಆರಂಭವಾಗುವ ಮೊದಲು ಸಿರಿಂಜ್​ನ ಪ್ರಾಮುಖ್ಯತೆ ಅಷ್ಟಾಗಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ, ಸಿರಿಂಜ್​ಗಳ ಕೊರತೆಯಿಂದಾಗಿಯೇ ಕೊವಿಡ್-19 ಲಸಿಕೆ ಅಭಿಯಾನಕ್ಕೆ ತಡೆಯಾದಾಗ ಸಿರಿಂಜ್ ಪ್ರಾಮುಖ್ಯತೆ ತಿಳಿದುಬಂತು. ಅಸೋಸಿಯೇಷನ್ ಆಫ್ ಇಂಡಿಯನ್ ಮೆಡಿಕಲ್ ಡಿವೈಸ್ ಇಂಡಸ್ಟ್ರಿ (AIMED) ಮಾಹಿತಿಯಂತೆ, ಸದ್ಯ ಜಾಗತಿಕ ಮಟ್ಟದಲ್ಲಿ 800 ರಿಂದ 1,000 ಕೋಟಿ ಸಿರಿಂಜ್​ಗಳ ಅಗತ್ಯವಿದೆ. ವಿಶ್ವದ ಶೇ. 60ರಷ್ಟು ಜನರಿಗೆ ಕೊರೊನಾ ಲಸಿಕೆ ವಿತರಿಸಲು ಇಷ್ಟು ಪ್ರಮಾಣದ ಸಿರಿಂಜ್ ಬೇಕಾಗಿದೆ.

ನಮ್ಮ ಸಂಸ್ಥೆಯ ರಫ್ತು ವಿಭಾಗ 40ಕ್ಕೂ ಅಧಿಕ ಇಮೈಲ್​ಗಳನ್ನು ಪ್ರತಿನಿತ್ಯ ಪಡೆಯುತ್ತಿದೆ. ಯುಎಸ್, ಜರ್ಮನಿ, ಇಟೆಲಿ, ಸ್ಪೈನ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳಿಂದ ಸಿರಿಂಜ್​ಗೆ ಬೇಡಿಕೆ ಬರುತ್ತಿದೆ ಎಂದು HMD ವ್ಯವಸ್ಥಾಪಕ ನಿರ್ದೇಶಕ ರಾಜೀವ್ ನಾಥ್ ತಿಳಿಸಿದ್ದಾರೆ. ಬ್ರೆಜಿಲ್ ಮತ್ತು ಜಪಾನ್ ದೇಶಗಳೂ ಕಡಿಮೆ ಪ್ರಮಾಣದಲ್ಲಿ ಲಸಿಕೆ ನಷ್ಟವಾಗುವಂಥ ಸಿರಿಂಜ್​ಗಳಿಗೆ ಬೇಡಿಕೆ ಇಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.

ಸಿರಿಂಜ್ ತಯಾರಿಸುವ ವಿಶ್ವದ ವಿವಿಧ ಹೆಸರಾಂತ ಕಂಪೆನಿಗಳು ತಮ್ಮ ಹಳೆಯ ಕ್ಲೈಂಟ್​ಗಳಿಗೆ ಮಾತ್ರ ಸಿರಿಂಜ್ ರಫ್ತು ಮಾಡುತ್ತಿವೆ. ಬೇಡಿಕೆ ಅಧಿಕವಾಗಿರುವುದರಿಂದ ಇತರ ದೇಶಗಳಿಗೆ ಸಿರಿಂಜ್ ಪೂರೈಕೆ ಮಾಡಲಾಗುತ್ತಿಲ್ಲ ಎಂದು ವಿಷಾದಿಸುತ್ತಿವೆ. ಹರ್ಯಾಣ ಫರಿದಾಬಾದ್ ಬಲ್ಲಭ್​ಘರ್​ನಲ್ಲಿರುವ HMD ಸಂಸ್ಥೆ ಭಾರತ ಸಿರಿಂಜ್ ವಿಚಾರದಲ್ಲಿ ಚಿಂತೆ ಮಾಡಬೇಕಾದ್ದಿಲ್ಲ. ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಕನಿಷ್ಠ ಪಕ್ಷ ಈ ವರ್ಷದ ಮಧ್ಯಾವಧಿಯ ವರೆಗೆ ಪೂರೈಕೆ ಮಾಡುವಷ್ಟು ಸಿರಿಂಜ್​ಗಳು ತಯಾರಾಗಿವೆ ಎಂದು ರಾಜೀವ್ ನಾಥ್ ಹೇಳಿದ್ದಾರೆ.

ಸಿರಿಂಜ್ ಸಂಗ್ರಹ ಪ್ರಮಾಣ ಇನ್ನಷ್ಟು ಹೆಚ್ಚಿಸಲು, ಲಸಿಕೆ ವಿತರಣಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಕಂಪೆನಿ ನಿಮಿಷಕ್ಕೆ 8,200 ಸಿರಿಂಜ್ ಉತ್ಪಾದಿಸಲು ಯೋಜನೆ ಹಾಕಿಕೊಂಡಿದೆ. ಸದ್ಯ 5,900 ಸಿರಿಂಜ್​ಗಳು ನಿಮಿಷಕ್ಕೆ ತಯಾರಾಗುತ್ತಿದ್ದು ಶೇ 40 ರಷ್ಟು ವೇಗದ ಗತಿ ಹೆಚ್ಚಾಗಬೇಕಿದೆ.

ಜಾಗತಿಕ ಬೇಡಿಕೆ ಈಡೇರಿಸಲು ಗಂಟೆಗೆ 5.25 ಲಕ್ಷ ಸಿರಿಂಜ್ ತಯಾರಿಗೆ ಸಿದ್ಧತೆ ಕೊವಿಡ್ ಪೂರ್ವ ಕಾಲದಲ್ಲಿ HMD ಕಂಪೆನಿಯು 70ರಿಂದ 80 ಶೇಕಡಾ ಉತ್ಪಾದನಾ ಸಾಮರ್ಥ್ಯ ಬಳಸಿ ವಾರ್ಷಿಕ 200ರಿಂದ 250 ಕೋಟಿ ಸಿರಿಂಜ್​ಗಳನ್ನು ತಯಾರಿಸುತ್ತಿತ್ತು. ಆದರೆ, ಈ ವರ್ಷ ಸಂಸ್ಥೆ 270 ಕೋಟಿ ಸಿರಿಂಜ್​ಗಳನ್ನು ಉತ್ಪಾದಿಸಿದೆ. ಜುಲೈ ಒಳಗಾಗಿ 300 ಕೋಟಿ ಸಿರಿಂಜ್​ಗಳನ್ನು ತಯಾರಿಸಲು ಬಯಸುತ್ತದೆ ಎಂದು ರಾಜೀವ್ ನಾಥ್ ತಿಳಿಸಿದ್ದಾರೆ.

HMD ಕಂಪೆನಿ ಯುನೈಟೆಡ್ ನೇಷನ್ಸ್ ಏಜೆನ್ಸಿ ಫಾರ್ ಚಿಲ್ಡ್ರನ್​ಗೆ ನಿಯಮಿತವಾಗಿ ಸಿರಿಂಜ್ ಸರಬರಾಜು ಮಾಡುತ್ತಿರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಭಿವೃದ್ಧಿ ಹೊಂದದ ದೇಶದ UNICEFನ ಕೆಲವಾರು ಯೋಜನೆಗಳಿಗೆ ಸಹಕಾರ ನೀಡುತ್ತದೆ. ಈ ಸೇವೆಯ ಆಧಾರದ ಮೇರೆಗೆ, ಕಳೆದ ನವೆಂಬರ್​ನಲ್ಲಿ HMD ಕಂಪೆನಿಗೆ UNICEFನಿಂದ 14 ಕೋಟಿ ವಿಶೇಷ ಸಿರಿಂಜ್​ಗೆ ಬೇಡಿಕೆ ಬಂದಿತ್ತು. ಯಾವತ್ತಿನ ಗ್ರಾಹಕರನ್ನು ಹೊರತುಪಡಿಸಿ HMD ಕಂಪೆನಿಗೆ, ಸಪ್ಟೆಂಬರ್ ಒಳಗಾಗಿ 26.5 ಕೋಟಿ ಸಿರಿಂಜ್ ನೀಡುವಂತೆ ಕೇಂದ್ರ ಸರ್ಕಾರದಿಂದ ಬೇಡಿಕೆ ಬಂದಿತ್ತು.

ಈ ಎಲ್ಲಾ ಬೇಡಿಕೆಗಳನ್ನು ಗಮನಿಸಿ, HMD ಕಂಪೆನಿ ಸಿರಿಂಜ್ ತಯಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ಪ್ರಯತ್ನಿಸುತ್ತಿದೆ. ನಿಮಿಷಕ್ಕೆ 8,200 ಸಿರಿಂಜ್​ಗಳನ್ನು ಉತ್ಪಾದಿಸಲು ತಯಾರಿ ನಡೆಸುತ್ತಿದೆ. ಗಂಟೆಗೆ 3.75 ಲಕ್ಷ ಸಿರಿಂಜ್​ಗಳನ್ನು ಉತ್ಪಾದಿಸುತ್ತಿದ್ದೇವೆ. ಆದರೆ, ಈ ಪ್ರಮಾಣದಲ್ಲಿ ಸಪ್ಟೆಂಬರ್ ಒಳಗಾಗಿ ಶೇ. 25ರಿಂದ 40ರಷ್ಟು ಏರಿಕೆ ಕಾಣಲಿದೆ. ಅಂದರೆ, ಗಂಟೆಗೆ 4.68 ಲಕ್ಷ ಸಿರಿಂಜ್​ಗಳು ಉತ್ಪಾದನೆ ಆಗಲಿವೆ. ಭಾರತಕ್ಕೆ ಸಿರಿಂಜ್ ಪೂರೈಕೆ ಮಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ರಾಜೀವ್ ನಾಥ್ ಹೇಳಿದ್ದಾರೆ.

ಮೂರನೇ ಎರಡು ಭಾಗದಷ್ಟು ಸಿರಿಂಜ್​ಗಳನ್ನು ಭಾರತಕ್ಕೆ ನೀಡುತ್ತೇವೆ. ಮೂರರಲ್ಲಿ ಒಂದು ಭಾಗದಷ್ಟು ಜಾಗತಿಕ ಮಟ್ಟದಲ್ಲಿ ಬೇಡಿಕೆ ಇರುವಲ್ಲಿಗೆ ಸಿರಿಂಜ್ ನೀಡುತ್ತೇವೆ. ಕೊರೊನಾ ಲಸಿಕೆ ಅಭಿಯಾನ ಹೊರತಾಗಿ ಹಳದಿ ಜ್ವರ, ಮತ್ತಿತರ ಖಾಯಿಲೆಗಳಿಗೂ ಸಿರಿಂಜ್ ನೀಡುತ್ತೇವೆ ಎಂದು ನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ಕೊರೊನಾ ಹಬ್ಬಲು ಮುಖ್ಯ ಕಾರಣವೆಂದರೆ…’: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

ವ್ಯಾಕ್ಸಿನ್ ಹಾಕಿದ್ರಾ?.. ಗೊತ್ತೇ ಆಗ್ಲಿಲ್ಲ -ಕೊರೊನಾ ಲಸಿಕೆ ಪಡೆದ ಬಳಿಕ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

Published On - 8:39 pm, Mon, 15 March 21

Follow Us
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ