AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

80ಸಾವಿರ ರೂ. ಕದಿಯಲು ಹೋಗಿ 2 ಲಕ್ಷ ರೂ ಮೌಲ್ಯದ ಬೈಕ್ ಕಳೆದುಕೊಂಡ ಕಳ್ಳರು

ಕೆಟ್ಟ ಕೆಲಸ ಮಾಡುವವರಿಗೆ ಒಂದಲ್ಲಾ ಒಂದು ದಿನ ಪೆಟ್ಟು ಬಿದ್ದೇ ಬೀಳುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 80 ಸಾವಿರ ರೂ. ಕದಿಯಲು ಹೋಗಿ ಕಳ್ಳರು 2 ಲಕ್ಷ ರೂ. ಮೌಲ್ಯದ ಬೈಕ್ ಕಳೆದುಕೊಂಡಿರುವ ಘಟನೆ ಭೋಪಾಲ್​​ನಲ್ಲಿ ನಡೆದಿದೆ.ದರೋಡೆಕೋರರ ಗುಂಪೊಂದು ಗಳಿಸಿದ್ದಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿತ್ತು. ವ್ಯಾಪಾರಿಯಿಂದ 80,000 ರೂ.ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುವಾಗ, ಆ ಗ್ಯಾಂಗ್ ಅಪರಾಧದ ಸ್ಥಳದಲ್ಲಿ 2 ಲಕ್ಷ ರೂ. ಮೌಲ್ಯದ ತಮ್ಮದೇ ಆದ ಮೋಟಾರ್‌ಸೈಕಲ್ ಅನ್ನು ಬಿಟ್ಟು ಓಡಬೇಕಾಯಿತು.

80ಸಾವಿರ ರೂ. ಕದಿಯಲು ಹೋಗಿ 2 ಲಕ್ಷ ರೂ ಮೌಲ್ಯದ ಬೈಕ್ ಕಳೆದುಕೊಂಡ ಕಳ್ಳರು
ಕಳ್ಳImage Credit source: Adobe Stock
ನಯನಾ ರಾಜೀವ್
|

Updated on: Sep 07, 2025 | 10:10 AM

Share

ಭೋಪಾಲ್, ಸೆಪ್ಟೆಂಬರ್ 07: ಕೆಟ್ಟ ಕೆಲಸ ಮಾಡುವವರಿಗೆ ಒಂದಲ್ಲಾ ಒಂದು ದಿನ ಪೆಟ್ಟು ಬಿದ್ದೇ ಬೀಳುತ್ತೆ ಎಂಬುದಕ್ಕೆ ಘಟನೆಯೇ ಸಾಕ್ಷಿ. 80 ಸಾವಿರ ರೂ. ಕದಿಯಲು ಹೋಗಿ ಕಳ್ಳ(Thief)ರು 2 ಲಕ್ಷ ರೂ. ಮೌಲ್ಯದ ಬೈಕ್ ಕಳೆದುಕೊಂಡಿರುವ ಘಟನೆ ಭೋಪಾಲ್​​ನಲ್ಲಿ ನಡೆದಿದೆ.ದರೋಡೆಕೋರರ ಗುಂಪೊಂದು ಗಳಿಸಿದ್ದಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿತ್ತು.

ವ್ಯಾಪಾರಿಯಿಂದ 80,000 ರೂ.ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುವಾಗ, ಆ ಗ್ಯಾಂಗ್ ಅಪರಾಧದ ಸ್ಥಳದಲ್ಲಿ 2 ಲಕ್ಷ ರೂ. ಮೌಲ್ಯದ ತಮ್ಮದೇ ಆದ ಮೋಟಾರ್‌ಸೈಕಲ್ ಅನ್ನು ಬಿಟ್ಟು ಓಡಬೇಕಾಯಿತು. ಗುರುವಾರ ತಡರಾತ್ರಿ ಅಯೋಧ್ಯಾ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ರಾತ್ರಿ 11 ಗಂಟೆ ಸುಮಾರಿಗೆ ದಿನಸಿ ವ್ಯಾಪಾರಿ ನೀರಜ್ ಕಳೆದ ಕೆಲವು ದಿನಗಳಲ್ಲಿ ಗಳಿಸಿದ ಹಣವನ್ನು ಹಿಡಿದು ಮನೆಗೆ ಹಿಂದಿರುಗುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಖಾಸಗಿ ಶಾಲೆಯ ಬಳಿ ಅವರ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.

ಮತ್ತಷ್ಟು ಓದಿ:

ಇಂದೋರ್: ಕಳ್ಳತನ ಆರೋಪ, ಗುಂಪಿನಿಂದ ಹಲ್ಲೆ, 40 ಮೂಳೆಗಳು ಮುರಿತ, ವ್ಯಕ್ತಿ ಸಾವು

ವೇಳೆ ಗಲಾಟೆ ನಡೆದು, ನೀರಜ್ ಅವರ ಸ್ಕೂಟರ್ ಉರುಳಿ ಬಿದ್ದು, ಹಣವಿದ್ದ ಬ್ಯಾಗ್ ಅವರ ಕೈಯಿಂದ ಜಾರಿತು. ದಾಳಿಕೋರರು ಬ್ಯಾಗ್ ಕಸಿದುಕೊಂಡರು ಆದರೆ ಅವರು ತಮ್ಮ ಬೈಕ್​​ ಸ್ಟಾರ್ಟ್ಮಾಡಲು ಯತ್ನಿಸಿದಾಗ ಅದು ಸ್ಟಾರ್ಟ್ಆಗಲೇ ಇಲ್ಲ. ನೀರಜ್ ಸಹಾಯಕ್ಕಾಗಿ ಕೂಗಿಕೊಂಡ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಓಡಿ ಬಂದಾಗ, ದರೋಡೆಕೋರರು ಭಯಭೀತರಾಗಿ ತಮ್ಮ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.

ನಂತರ ಪೊಲೀಸರು ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಸುಮಾರು 2 ಲಕ್ಷ ರೂ.ಗಳಾಗಿದ್ದು, ಅದರ ನೋಂದಣಿ ಸಂಖ್ಯೆಯ ಮೂಲಕ ಗ್ಯಾಂಗ್ ಅನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಹೇಳಿದರು. ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಡಿಕೆಶಿ ಹುಟ್ಟುಹಬ್ಬದಂದು ಹೈಕಮಾಂಡ್​​ ನೀಡಲಿದೆ ಬಿಗ್​​​​ ಗಿಫ್ಟ್​?
ಡಿಕೆಶಿ ಹುಟ್ಟುಹಬ್ಬದಂದು ಹೈಕಮಾಂಡ್​​ ನೀಡಲಿದೆ ಬಿಗ್​​​​ ಗಿಫ್ಟ್​?
ಸಚಿವ ಡಿ.ಸುಧಾಕರ್ ಅವರ ಆರೋಗ್ಯ ವಿಚಾರಿಸಿ ಡಿಕೆ ಶಿವಕುಮಾರ್
ಸಚಿವ ಡಿ.ಸುಧಾಕರ್ ಅವರ ಆರೋಗ್ಯ ವಿಚಾರಿಸಿ ಡಿಕೆ ಶಿವಕುಮಾರ್
ಉಡುಪಿ: ಸಿಟಿ ಬಸ್ ನಿಲ್ದಾಣದ ಮುಂದೆಯೇ ಹೊತ್ತಿ ಉರಿದ ಕಟ್ಟಡ
ಉಡುಪಿ: ಸಿಟಿ ಬಸ್ ನಿಲ್ದಾಣದ ಮುಂದೆಯೇ ಹೊತ್ತಿ ಉರಿದ ಕಟ್ಟಡ
ಪಂಚಮಸಾಲಿ ಪೀಠ ಸಂಘರ್ಷ: 3 ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ
ಪಂಚಮಸಾಲಿ ಪೀಠ ಸಂಘರ್ಷ: 3 ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ
ನನ್ನ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಐರನ್ ಲೇಡಿ
ನನ್ನ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಐರನ್ ಲೇಡಿ
ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ
ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ
ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು
ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು
ಅಭಿಮಾನಿ ಸಂಘದ ಹೆಸರಲ್ಲಿ ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ: ಚೇತನ್
ಅಭಿಮಾನಿ ಸಂಘದ ಹೆಸರಲ್ಲಿ ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ: ಚೇತನ್
ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಚಿಲ್ ಬಿಯರ್‌ಗೆ ಭಾರಿ ಡಿಮ್ಯಾಂಡ್
ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಚಿಲ್ ಬಿಯರ್‌ಗೆ ಭಾರಿ ಡಿಮ್ಯಾಂಡ್
ಡಾ. ರಾಜ್ ಸಮಾಧಿ ವಿವಾದ: ನಾನು ಹೇಳಿದ ವಿಚಾರ ಸುಳ್ಳಲ್ಲ ಎಂದ ಚೇತನ್ ಅಹಿಂಸಾ
ಡಾ. ರಾಜ್ ಸಮಾಧಿ ವಿವಾದ: ನಾನು ಹೇಳಿದ ವಿಚಾರ ಸುಳ್ಳಲ್ಲ ಎಂದ ಚೇತನ್ ಅಹಿಂಸಾ