AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೇಥಿ ಆಯ್ತು, ವಯನಾಡ್​ನಲ್ಲೂ ವಂಚಿಸ್ತಾರೆ: ರಾಹುಲ್ ಗಾಂಧಿಯನ್ನು ಕುಟುಕಿದ ಸ್ಮೃತಿ ಇರಾನಿ

Smriti Irani Lashes out Against Rahul Gandhi at Wayanad: ಅಮೇಥಿ ಜನರಿಗೆ ಕೈಕೊಟ್ಟಂತೆ ವಯ್ನಾಡ್ ಜನರಿಗೂ ರಾಹುಲ್ ಗಾಂಧಿ ದ್ರೋಹ ಎಸಗುತ್ತಾರೆ ಎಂದು ಸ್ಮೃತಿ ಇರಾನಿ ಆರೋಪ ಮಾಡಿದ್ದಾರೆ. ಅಮೇಥಿಯಲ್ಲಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ರಾಹುಲ್ ಅಭಿವೃದ್ಧಿ ಮಾಡಲಿಲ್ಲ. ವಯ್ನಾಡ್ ಕ್ಷೇತ್ರಕ್ಕೂ ಅವರು ಸಮಯ ಕೊಟ್ಟಿದ್ದು ಕಡಿಮೆ. ಇಲ್ಲಿಂದಲೂ ಅವರು ನಿರ್ಗಮಿಸುವ ಸಾಧ್ಯತೆ ಇದೆ ಎಂದು ವಯ್ನಾಡ್​ನಲ್ಲಿ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಸಚಿವೆ ಹೇಳಿದ್ದಾರೆ.

ಅಮೇಥಿ ಆಯ್ತು, ವಯನಾಡ್​ನಲ್ಲೂ ವಂಚಿಸ್ತಾರೆ: ರಾಹುಲ್ ಗಾಂಧಿಯನ್ನು ಕುಟುಕಿದ ಸ್ಮೃತಿ ಇರಾನಿ
ಸ್ಮೃತಿ ಇರಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 04, 2024 | 4:56 PM

ತಿರುವನಂತಪುರಂ, ಏಪ್ರಿಲ್ 4: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದೀಗ ವಯ್ನಾಡ್​ಗೆ (Wayanad constituency) ಹೋಗಿ ರಾಹುಲ್​ರನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ರಾಹುಲ್ ಗಾಂಧಿ ಸ್ಪರ್ಧಿಸಿರುವ ಕೇರಳದ ವಯ್ನಾಡು ಕ್ಷೇತ್ರದಲ್ಲಿ ಸ್ಮೃತಿ ಇರಾನಿ (Smriti Irani) ಪ್ರಚಾರ ನಡೆಸುತ್ತಿದ್ದಾರೆ. ಅಲ್ಲಿಯ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಪಲಾಯನವಾದಿ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದ ಜನರಿಗೆ ವಂಚಿಸಿ ವಯ್ನಾಡಿಗೆ ಪಲಾಯನ ಮಾಡಿ ಬಂದಿದ್ದಾರೆ. ಈಗ ವಯ್ನಾಡ್ ಜನರಿಗೂ ಇವರು ಮೋಸ ಮಾಡಲಿದ್ದಾರೆ ಎಂದು ಕೇಂದ್ರ ಸಚಿವೆ ಆರೋಪಿಸಿದ್ದಾರೆ.

‘ಮೋದಿ ಪ್ರಧಾನಿ ಆದ ಬಳಿಕ ಅಮೇಥಿಯಲ್ಲಿ ನಾಲ್ಕು ಲಕ್ಷ ಕುಟುಂಬಗಳು ಮೊದಲ ಬಾರಿಗೆ ಶೌಚಾಲಯ ಪಡೆದವು. ಕಾಂಗ್ರೆಸ್ ಅಲ್ಲಿ 50 ವರ್ಷ ಅಧಿಕಾರದಲ್ಲಿದ್ದರೂ ಬಹಳಷ್ಟು ಜನರು ಮೋದಿ ಪ್ರಧಾನಿ ಆದ ಬಳಿಕವೇ ಮನೆಗಳನ್ನು ಪಡೆದದ್ದು. ಈಗ ರಾಹುಲ್ ಗಾಂಧಿ ಈ ವಯ್ನಾಡನ್ನು ತನ್ನ ಕುಟುಂಬ ಎನ್ನುತ್ತಿದ್ದಾರೆ. ಬಹಳ ಕಾಲ ಪ್ರತಿನಿಧಿಸುತ್ತಿದ್ದ ಅಮೇಥಿಯನ್ನು ತೊರೆದರು. ಅಲ್ಲಿಯ ಕುಟುಂಬದಿಂದ ಪಲಾಯನ ಮಾಡಿದರು. ಈಗ ವಯ್ನಾಡ್​ನಲ್ಲೂ ಅದೇ ಕೆಲಸ ಮಾಡುತ್ತಿದ್ದರೆ. ಈ ಕ್ಷೇತ್ರದಲ್ಲಿ ಅವರ ಅನುಪಸ್ಥಿತಿಯೇ ಇದನ್ನು ಹೇಳುತ್ತಿದೆ,’ ಎಂದು ಸ್ಮೃತಿ ಇರಾನಿ ಸಿಡಿಗುಟ್ಟಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದ ಗೌರವ್​ ವಲ್ಲಭ್​ ಬಿಜೆಪಿ ಸೇರ್ಪಡೆ

ಅಮೇಥಿಯಲ್ಲಿ ಗಾಂಧಿ ಶಕ್ತಿ ಕೆಡವಿದ್ದ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿರುತೆರೆ ನಟಿ ಕಮ್ ರಾಜಕೀಯ ತಾರೆ. ಕೇಂದ್ರ ಸಚಿವೆಯಾಗಿ ಮಾಡಿದ ಹೆಸರಿಗಿಂತ ರಾಹುಲ್ ಗಾಂಧಿ ವಿರುದ್ಧ ಗೆಲುವು ಸಾಧಿಸಿ ಹೆಚ್ಚು ಹೆಸರುವಾಸಿಯಾದವರು. ರಾಹುಲ್ ಗಾಂಧಿಗೆ ಅಭೇದ್ಯ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅದ್ಭುತ ರೀತಿಯಲ್ಲಿ ಗೆಲುವು ಸಾಧಿಸಿದ್ದರು. 2014ರ ಚುನಾವಣೆಯಲ್ಲೇ ಅಮೇಥಿಯ ಕಾಂಗ್ರೆಸ್ ಭದ್ರಕೋಟೆಯಲ್ಲಿ ಇರಾನಿ ಬಿರುಕು ಮೂಡಿಸಿದ್ದರು.

2009ರ ಚುನಾವಣೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿಯ ಗೆಲುವಿನ ಅಂತರ 2014ರ ಚುನಾವಣೆಯಲ್ಲಿ ಒಂದು ಲಕ್ಷಕ್ಕೆ ಕುಸಿಯಿತು. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಸೋಲಿನ ಮುನ್ಸೂಚನೆ ಇದ್ದಂತೆ ಅಮೇಥಿ ಮತ್ತು ವಯ್ನಾಡ್ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ಸೋತರು. ವಯ್ನಾಡ್​ನಲ್ಲಿ ದೊಡ್ಡ ಅಂತರದಿಂದ ಗೆದ್ದರು.

ಇದನ್ನೂ ಓದಿ: ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್​ಮೆಂಟ್ ಇದೆ ನೋಡಿ

ವಯ್ನಾಡ್ ಕೈ ಭದ್ರಕೋಟೆ

ಕೇರಳದ ವಯ್ನಾಡ್ ಕ್ಷೇತ್ರವೂ ಕೂಡ ಕಾಂಗ್ರೆಸ್​ನ ಭದ್ರಕೋಟೆಯೇ. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ 4 ಲಕ್ಷಕ್ಕೂ ಹೆಚ್ಚು ಅಂತರದ ಭಾರೀ ಗೆಲುವು ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್​ಗೆ ಪ್ರಮುಖ ಎದುರಾಳಿ ಸಿಪಿಐ ಪಕ್ಷ. ಈ ಕ್ಷೇತ್ರದಲ್ಲಿ ಬಿಜೆಪಿ ಉಪಸ್ಥಿತಿ ನಗಣ್ಯ. ಕೇರಳದ ಬಿಜೆಪಿ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಈ ಬಾರಿ ಇಲ್ಲಿ ಸ್ಪರ್ಧಿಸಿರುವುದು ಕುತೂಹಲ. ಸಿಪಿಐನಿಂದ ಆ್ಯನೀ ರಾಜಾ ಅವರು ಸ್ಪರ್ಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 4 April 24

ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳೋದು ನಮ್ಮ ಧರ್ಮ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳೋದು ನಮ್ಮ ಧರ್ಮ: ಸಾ.ರಾ. ಗೋವಿಂದು
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹವಣಿಕೆಯಲ್ಲಿದೆ: ಅಶೋಕ
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹವಣಿಕೆಯಲ್ಲಿದೆ: ಅಶೋಕ
ಲಿಸ್ಟ್​ನಲ್ಲಿ ಹೆಸರಿಲ್ಲ, ಒಳಗೆ ಬಿಡಲ್ಲ ಅಂತ ಪೊಲೀಸ್ ಹೇಳಿದ್ದಕ್ಕೆ ಸಿಟ್ಟು
ಲಿಸ್ಟ್​ನಲ್ಲಿ ಹೆಸರಿಲ್ಲ, ಒಳಗೆ ಬಿಡಲ್ಲ ಅಂತ ಪೊಲೀಸ್ ಹೇಳಿದ್ದಕ್ಕೆ ಸಿಟ್ಟು
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ