Viral News: ಈ ಗ್ರಾಮದಲ್ಲಿ ರಾತ್ರಿ ಮನೆಯಿಂದ ಹೊರಗೆ ಕಾಲಿಟ್ಟರೆ ನಿಗೂಢ ಹಾವಿನ ಕಾಟ!

ಹಾಪುರ್ ಜಿಲ್ಲೆಯ ಸದರ್‌ಪುರ ಗ್ರಾಮ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಇಲ್ಲಿ ಮನೆಯವರನ್ನು ಹಿಂಬಾಲಿಸುವ ಹಾವು 5 ದಿನದಲ್ಲಿ 5 ಮಂದಿಗೆ ಕಚ್ಚಿದೆ. ಇವರಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಇಡೀ ಗ್ರಾಮವೇ ಆತಂಕದಲ್ಲಿದೆ. ಗ್ರಾಮಕ್ಕೆ ಬಂದಿರುವ ನಿಗೂಢ ಹಾವು ಕತ್ತಲಾದ ನಂತರ ಗ್ರಾಮಸ್ಥರ ಮೇಲೆ ದಾಳಿ ನಡೆಸಿ ನಂತರ ಕಣ್ಮರೆಯಾಗುತ್ತದೆ. ನಿಗೂಢ ಹಾವಿನ ಕಡಿತದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

Viral News: ಈ ಗ್ರಾಮದಲ್ಲಿ ರಾತ್ರಿ ಮನೆಯಿಂದ ಹೊರಗೆ ಕಾಲಿಟ್ಟರೆ ನಿಗೂಢ ಹಾವಿನ ಕಾಟ!
ಹಾಪುರ್ ಜಿಲ್ಲೆಯ ಗ್ರಾಮದಲ್ಲಿ ಹಾವಿನ ಕಾಟ
Follow us
|

Updated on: Oct 23, 2024 | 7:49 PM

ಹಾಪುರ್: ಉತ್ತರಪ್ರದೇಶದ ಹಾಪುರ್ ಜಿಲ್ಲೆಯ ಸದರ್‌ಪುರ ಗ್ರಾಮದಲ್ಲಿ ನಿಗೂಢ ಹಾವೊಂದು ಕಾಣಿಸಿಕೊಂಡಿದ್ದು ಈ ಘಟನೆ ಸಂಚಲನ ಮೂಡಿಸಿದೆ. ನಿಗೂಢ ಹಾವು ಕತ್ತಲೆಯಲ್ಲಿ ಗ್ರಾಮಸ್ಥರ ಮೇಲೆ ದಾಳಿ ಮಾಡಿ ನಂತರ ಕಣ್ಮರೆಯಾಗುತ್ತದೆ. ಹಾವು ಕಡಿತದಿಂದ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಭಯ ಆವರಿಸಿದೆ. ಹಾವು ಇದುವರೆಗೆ ಐದು ಜನರಿಗೆ ಕಚ್ಚಿದ್ದು, ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ.

ಹಾಪುರ್ ಜಿಲ್ಲೆಯ ಸದರ್‌ಪುರ ಗ್ರಾಮ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಗ್ರಾಮಕ್ಕೆ ಬಂದಿರುವ ನಿಗೂಢ ಹಾವು ಕತ್ತಲಾದ ನಂತರ ಗ್ರಾಮಸ್ಥರ ಮೇಲೆ ದಾಳಿ ನಡೆಸಿ ನಂತರ ಕಣ್ಮರೆಯಾಗುತ್ತದೆ ಎಂದು ಜನರು ಹೇಳಿದ್ದಾರೆ. ನಿಗೂಢ ಹಾವಿನ ಕಡಿತದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ರಾತ್ರಿಯಾದರೆ ಗ್ರಾಮಸ್ಥರು ಮನೆಯಿಂದ ಹೊರಗೆ ಬರುತ್ತಿಲ್ಲ. ನಿಗೂಢ ಹಾವು ಗ್ರಾಮದಲ್ಲಿ ಇದುವರೆಗೆ 5 ಮಂದಿಗೆ ಕಚ್ಚಿದೆ. 5 ಜನರಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Viral: ಆಶ್ರಮದ ಅನ್ನದಾತನ ಹುಟ್ಟುಹಬ್ಬವನ್ನು ಸರ್ಪ್ರೈಸ್‌ ಆಗಿ ಆಚರಿಸಿದ ಯುವಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌

ನಿಗೂಢ ಹಾವನ್ನು ಹಿಡಿಯಲು ಅರಣ್ಯ ಇಲಾಖೆಯ ಹಲವು ತಂಡಗಳನ್ನು ನಿಯೋಜಿಸಲಾಗಿದೆ. ಸೋಮವಾರ ರಾತ್ರಿ ಹಾವು ಯುವಕನೊಬ್ಬನಿಗೆ ಕಚ್ಚಿದ್ದು, ಮಂಗಳವಾರ ರಾತ್ರಿ ಆತನ ಪತ್ನಿ ಮಮತಾಗೆ ಹಾವು ಕಚ್ಚಿದೆ. ಮನೆಯೊಳಗೆ ಮಲಗಿದ್ದ ಮಹಿಳೆಗೆ ಹಾವು ಕಚ್ಚಿದೆ. ಮಹಿಳೆಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪ್ರಾಣ ಉಳಿದಿದೆ.

ಹಾವಿನ ಭಯದಿಂದ ಗ್ರಾಮಸ್ಥರು ಕುಟುಂಬಸ್ಥರನ್ನು ಸಂಬಂಧಿಕರ ಮನೆಗೆ ಕಳುಹಿಸುತ್ತಿದ್ದಾರೆ. ಹಾವಿನ ಭಯದಿಂದ ಈ ಗ್ರಾಮದಲ್ಲಿ ವಾಸಿಸುವ ಜನರು ತಮ್ಮ ಕುಟುಂಬದ ಸದಸ್ಯರನ್ನು ದೂರದ ಸಂಬಂಧಿಕರಿಗೆ ಕಳುಹಿಸಲು ಪ್ರಾರಂಭಿಸಿದ್ದಾರೆ. ಹಾವು ಇನ್ನೂ ಸಿಕ್ಕಿಲ್ಲ. ಹಾಗಾಗಿ ಕುಟುಂಬದ ಇತರ ಸದಸ್ಯರನ್ನು ಕಚ್ಚಬಹುದು ಎಂದು ಜನರು ಭಯಪಡುತ್ತಿದ್ದಾರೆ. ಈ ಗ್ರಾಮದ ಜನರಲ್ಲಿ ಹಾವಿನ ಭಯ ಹಾಗೆಯೇ ಉಳಿದಿದೆ. ಹಾವಿನ ಭಯದಿಂದ ರಾತ್ರಿ ವೇಳೆ ಜನರು ಮನೆಯಿಂದ ಹೊರಬರುತ್ತಿಲ್ಲ. ಅರಣ್ಯ ಇಲಾಖೆ ತಂಡಕ್ಕೆ ಇನ್ನೂ ಹಾವನ್ನು ಹಿಡಿಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್

ಈ ಹಾವು ಕ್ರೈಟ್ ಹಾವು ಆಗಿರಬಹುದು ಎಂದು ಅರಣ್ಯ ಇಲಾಖೆ ಹಾಗೂ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾತ್ರಿಯ ಕತ್ತಲಲ್ಲಿ ಕ್ರೈಟ್ ಹಾವುಗಳು ಹೊರಬಂದು ಜನರ ಮನೆಗಳಿಗೆ ನುಗ್ಗುತ್ತವೆ. ಅದರ ನಂತರ ನೆಲದ ಮೇಲೆ ಮಲಗುವ ಜನರನ್ನು ಕಚ್ಚುತ್ತದೆ. ಸ್ವಲ್ಪ ಸಮಯದ ನಂತರ ಜನರು ಸಾಯುತ್ತಾರೆ. ಈ ಹಾವು ವಿಷಪೂರಿತವಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಸಾವು ಖಚಿತ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು