AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಜಾತ ಹೆಣ್ಣು ಶಿಶುವಿನ ಶವ ಕಚ್ಚಿಹಿಡಿದು ಸರ್ಕಾರಿ ಆಸ್ಪತ್ರೆ ಆವರಣದ ತುಂಬ ಓಡಾಡಿದ ಬೀದಿ ನಾಯಿ; ಭಯಾನಕ ದೃಶ್ಯ ನೋಡಿ ರೋಗಿಗಳು ಕಂಗಾಲು

ಅಷ್ಟಕ್ಕೂ ನಾಯಿ ಆಸ್ಪತ್ರೆಯ ಒಳಗೆ ಹೇಗೆ ಬಂತು? ಮಗು ಎಲ್ಲಿತ್ತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ಅವಧಿ ಪೂರ್ಣ ಆಗುವುದಕ್ಕೂ ಮೊದಲು ಜನಿಸಿದ ಮಗು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ ಸಂತೋಷ್​ ಕುಮಾರ್​ ಪಾತ್ರಾ ಹೇಳಿದ್ದಾರೆ.

ನವಜಾತ ಹೆಣ್ಣು ಶಿಶುವಿನ ಶವ ಕಚ್ಚಿಹಿಡಿದು ಸರ್ಕಾರಿ ಆಸ್ಪತ್ರೆ ಆವರಣದ ತುಂಬ ಓಡಾಡಿದ ಬೀದಿ ನಾಯಿ; ಭಯಾನಕ ದೃಶ್ಯ ನೋಡಿ ರೋಗಿಗಳು ಕಂಗಾಲು
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Mar 17, 2021 | 1:46 PM

Share

ಭದ್ರಕ್: ಬೀದಿ ನಾಯಿಯೊಂದು ಬಾಯಲ್ಲಿ ನವಜಾತ ಶಿಶುವಿನ ಮೃತದೇಹವನ್ನು ಕಚ್ಚಿಕೊಂಡು ಓಡುತ್ತಿರುವ ದೃಶ್ಯವನ್ನು ನೋಡಿದರೆ ಮನಸಿಗೆ ಅದೆಷ್ಟು ಸಂಕಟ ಆಗಬಹುದು? ಇಂಥ ಕಲ್ಪಿಸಿಕೊಳ್ಳಲೂ ಭಯಪಡುವಂತ ಘಟನೆ ಒಡಿಶಾದ ಭದ್ರಕ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಅಲ್ಲಿದ್ದ ಸಿಬ್ಬಂದಿ, ರೋಗಿಗಳು, ರೋಗಿಗಳನ್ನು ನೋಡಿಕೊಳ್ಳಲು ಇದ್ದವರು ಈ ದೃಶ್ಯವನ್ನು ನೋಡಿ ಹೌಹಾರಿದ್ದಾರೆ. ಬೀದಿನಾಯಿಗಳ ಹಾವಳಿ, ಕ್ರೌರ್ಯ ಇದೇ ಮೊದಲಲ್ಲ.. ಹಾಗೇ ಒಡಿಶಾದಲ್ಲಿ ಮಾತ್ರವಲ್ಲ. ದೇಶಾದ್ಯಂತ ಇರುವ ಸಮಸ್ಯೆ. ವಾಹನಗಳ ಮೇಲೆ ದಾಳಿ ಇಡುವುದು. ರಾತ್ರಿ ಗುಂಪುಗುಂಪಾಗಿ ಬಂದು ಮನುಷ್ಯರ ಮೇಲೆ ದಾಳಿ ಮಾಡುವುದು. ಚಿಕ್ಕ ಮಕ್ಕಳಿಗೆ ಕಚ್ಚಿ ಗಾಯಗೊಳಿಸುವುದು.. ಇಂಥ ಘಟನೆಗಳು ಬೇಕಾದಷ್ಟು ಸಲ ನಡೆದುಹೋಗಿವೆ.

ಆದರೆ ಹಾಡ ಹಗಲಲ್ಲಿ, ಅಷ್ಟೊಂದು ಜನರು ಇರುವಾಗಲೇ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬೀದಿನಾಯಿಯೊಂದು ಪುಟ್ಟ ಶಿಶುವಿನ ಶವ ಕಚ್ಚಿಕೊಂಡು ಓಡಿಹೋಗುತ್ತಿದ್ದುದು ನಿಜಕ್ಕೂ ಆತಂಕಕಾರಿ ವಿಚಾರ. ಆ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎಂದರೂ ತಪ್ಪಾಗಲಾರದೇನೋ.

ಶಿಶುವಿನ ಮೃತದೇಹವನ್ನು ನಾಯಿ ಎಲ್ಲಿಂದ ಎತ್ತಿಕೊಂಡು ಬಂತು ಎಂಬುದು ಗೊತ್ತಿಲ್ಲ. ಆದರೆ ಅದನ್ನು ಬಾಯಲ್ಲಿ ಕಚ್ಚಿ ಹಿಡಿದು ಸೀದಾ ಸರ್ಕಾರಿ ಆಸ್ಪತ್ರೆಯ ಆವರಣಕ್ಕೆ ಬಂದಿದೆ. ಅಲ್ಲೇ ಕೆಲಹೊತ್ತು ಅತ್ತಿಂದಿತ್ತ ಓಡಾಡಿದೆ. ಅದನ್ನು ನೋಡಿದ ಜನರು ನಾಯಿಯನ್ನು ಹೆದರಿಸಿದ ತಕ್ಷಣ, ಆ ಶವವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದೆ.

ಅದು ಹೆಣ್ಣುಮಗುವಿನ ಶವ. ನಾವು ಮೊದಲು ಜೀವಂತ ಶಿಶುವನ್ನೇ ಅದು ಕಚ್ಚಿಕೊಂಡು ಹೋಗುತ್ತಿದೆ ಎಂದು ಭಾವಿಸಿದೆವು. ಆದರೆ ಬಾಯಿಂದ ನೆಲಕ್ಕೆ ಬಿದ್ದಮೇಲೆ ಹೋಗಿ ನೋಡಿದಾಗ, ಅದು ಮೃತಪಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿತನವಿದೆ ಎಂದು ಗೊತ್ತಿರಲಿಲ್ಲ. ಈ ಆಸ್ಪತ್ರೆಯ ಮೇಲೆ ನಂಬಿಕೆಯೇ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ನಾಯಿ ಆಸ್ಪತ್ರೆಯ ಒಳಗೆ ಹೇಗೆ ಬಂತು? ಮಗು ಎಲ್ಲಿತ್ತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ಅವಧಿ ಪೂರ್ಣ ಆಗುವುದಕ್ಕೂ ಮೊದಲು ಜನಿಸಿದ ಮಗು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ ಸಂತೋಷ್​ ಕುಮಾರ್​ ಪಾತ್ರಾ ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ಯಾರದ್ದು ಎಂದು ಗೊತ್ತಾಗುತ್ತಿದ್ದಂತೆ ಕ್ರಮ ಕೈಗೊಳ್ಳುತ್ತೇವೆ ಎಂದೂ ತಿಳಿಸಿದ್ದಾರೆ. ಹಾಗೇ ಭದ್ರಕ್​ ಜಿಲ್ಲಾ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ಎರಡು ವರ್ಷದ ನಂತರ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಮೈಮುಲ್​ ಚುನಾವಣೆ ಹಿನ್ನಡೆ ಬೆನ್ನಲ್ಲೇ ಸಾ.ರಾ.ಮಹೇಶ್​ ಘೋಷಣೆ

ಮಗನ ಬಲವಾದ ಏಟಿಗೆ ತತ್ತರಿಸಿ ಬಿದ್ದು ಮೃತಪಟ್ಟ ವೃದ್ಧ ತಾಯಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಮನಕಲಕುವ ದೃಶ್ಯ

Published On - 1:43 pm, Wed, 17 March 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!