AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂಕೋರ್ಟ್ ‘ತಾರೀಖ್ ಪೇ ತಾರೀಖ್’ ನ್ಯಾಯಾಲಯ ಆಗಲು ಸಾಧ್ಯವಿಲ್ಲ: ಸಿಜೆಐ

ನ್ಯಾಯಮೂರ್ತಿ ಚಂದ್ರಚೂಡ್ ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸುವ ಮತ್ತು ಪೀಠದ ಮುಂದೆ ಅದರ ವಿಚಾರಣೆ ನಡುವಿನ ಸಮಯದ ವಿಳಂಬವನ್ನು ಕಡಿಮೆ ಮಾಡಲಾಗಿದೆ. ಎಲ್ಲಾ ಹೊಸ ಪ್ರಕರಣಗಳನ್ನು ದಾಖಲಾದ ಒಂದು ವಾರದಲ್ಲಿ ವಿಚಾರಣೆ ಮಾಡಲಾಗಿದೆ ಎಂದು ಹೈಲೈಟ್ ಮಾಡಿದ್ದಾರೆ.

ಸುಪ್ರೀಂಕೋರ್ಟ್ 'ತಾರೀಖ್ ಪೇ ತಾರೀಖ್' ನ್ಯಾಯಾಲಯ ಆಗಲು ಸಾಧ್ಯವಿಲ್ಲ: ಸಿಜೆಐ
ಸುಪ್ರೀಂಕೋರ್ಟ್
ರಶ್ಮಿ ಕಲ್ಲಕಟ್ಟ
|

Updated on: Nov 03, 2023 | 1:55 PM

Share

ದೆಹಲಿ ನವೆಂಬರ್ 03: ಸುಪ್ರೀಂಕೋರ್ಟ್ (Supreme Court) “ತಾರೀಖ್ ಪೇ ತಾರೀಖ್” (ಈ ದಿನ ಅಲ್ಲ ಮತ್ತೊಂದು ದಿನ ಎಂದು ಮುಂದೂಡುವ ) ನ್ಯಾಯಾಲಯವಾಗಬಾರದು ಎಂದು ಶುಕ್ರವಾರ ಒತ್ತಿ ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ (Dhananjaya Y Chandrachud), ಕಳೆದ ಎರಡು ತಿಂಗಳಲ್ಲಿ 3,688 ಪ್ರಕರಣಗಳಲ್ಲಿ ವಕೀಲರು ಮುಂದೂಡುವಂತೆ ಕೇಳಿದ್ದಾರೆ. ಇವುಗಳಲ್ಲಿ ಹೆಚ್ಚಿನವು ತುರ್ತು ವಿಚಾರಣೆಗಾಗಿರುವ ಪ್ರಕರಣಗಳಾಗಿದ್ದವು ಎಂದಿದ್ದಾರೆ. ಇದು ‘ತಾರೀಖ್ ಪೇ ತಾರೀಖ್’ ನ್ಯಾಯಾಲಯವಾಗುವುದು ನಮಗೆ ಇಷ್ಟವಿಲ್ಲ. ಇದು ನ್ಯಾಯಾಲಯದ ಮೇಲಿನ ನಾಗರಿಕರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಹಲವು ಪ್ರಕರಣಗಳನ್ನು ಮುಂದೂಡುವಂತೆ ಕೇಳಿಕೊಂಡಿರುವುದರಿಂದ ಈ ನ್ಯಾಯಾಲಯದ ಬಗ್ಗೆ ಉತ್ತಮ ಚಿತ್ರಣವನ್ನು ತೋರಿಸುವುದಿಲ್ಲ ಎಂದು ಸಿಜೆಐ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರನ್ನು ಉದ್ದೇಶಿಸಿ ಹೇಳಿದರು.

ನ್ಯಾಯಮೂರ್ತಿ ಚಂದ್ರಚೂಡ್ ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸುವ ಮತ್ತು ಪೀಠದ ಮುಂದೆ ಅದರ ವಿಚಾರಣೆ ನಡುವಿನ ಸಮಯದ ವಿಳಂಬವನ್ನು ಕಡಿಮೆ ಮಾಡಲಾಗಿದೆ. ಎಲ್ಲಾ ಹೊಸ ಪ್ರಕರಣಗಳನ್ನು ದಾಖಲಾದ ಒಂದು ವಾರದಲ್ಲಿ ವಿಚಾರಣೆ ಮಾಡಲಾಗಿದೆ ಎಂದು ಹೈಲೈಟ್ ಮಾಡಿದ್ದಾರೆ.

ಅವಧಿಯನ್ನು ಕನಿಷ್ಠಕ್ಕೆ ಇಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವಿಷಯಗಳ ಮೊದಲ ವಿಚಾರಣೆಗೆ ಫೈಲಿಂಗ್ ಮಾಡುವುದನ್ನು ನಾನು ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಅದೇ ಸಮಯದಲ್ಲಿ, ನಾನು ಹೊಂದಿರುವ ಡೇಟಾದೊಂದಿಗೆ ಇದನ್ನು ಹೋಲಿಸೋಣ. ಇಂದು 178 ಮುಂದೂಡಿಕೆ ಪತ್ರಗಳು ಸಲ್ಲಿಕೆಯಾಗಿವೆ. ಸರಾಸರಿ, ವಿವಿಧ ದಿನಕ್ಕೆ, 154 ಮುಂದೂಡಿಕೆಗಳು ಆಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ಒಟ್ಟು 3,688 ಮುಂದೂಡಿಕೆಗಳು ನಡೆದಿವೆ. ಇದು ಫೈಲಿಂಗ್ ಮತ್ತು ಲಿಸ್ಟ್ ಮಾಡುವ ಉದ್ದೇಶವನ್ನು ವಿಫಲಗೊಳಿಸುತ್ತದೆ ಎಂದು ಸಿಜೆಐ ಹೇಳಿದ್ದಾರೆ.

ವಿಚಾರಣೆಯ ಆರಂಭಿಕ ದಿನಾಂಕಗಳನ್ನು ನಿಯೋಜಿಸಲು ವಕೀಲರು ಉಲ್ಲೇಖಿಸಿರುವ 2,361 ಪ್ರಕರಣಗಳಿವೆ ಆದರೆ ಅವುಗಳಲ್ಲಿ ಹೆಚ್ಚಿನವು ಸಂಬಂಧಿಸಿದ ಪೀಠಗಳ ಮುಂದೆ ಬಂದಾಗ ಮುಂದೂಡುವಂತೆ ವಿನಂತಿಸಲಾಗಿದೆ ಎಂದು ಸಿಜೆಐ ಹೇಳಿದರು. ಮುಂದೂಡಲಾದ ವಿಷಯಗಳ ಸಂಖ್ಯೆಯು ಈ ಅವಧಿಯಲ್ಲಿ ವಿಚಾರಣೆ ಮಾಡಲಾದ ವಿಷಯಗಳ ಸಂಖ್ಯೆಗಿಂತ ಸುಮಾರು ಮೂರು ಪಟ್ಟು ಹೆಚ್ಚು. ವಿಷಯಗಳನ್ನು ತ್ವರಿತಗೊಳಿಸುವುದಕ್ಕಾಗಿ ಉಲ್ಲೇಖಿಸಲಾಗಿದೆ ಆದರೆ ನಂತರ ಅದೇ ವಿಷಯಗಳಲ್ಲಿ ಮುಂದೂಡಿಕೆಗಳನ್ನು ಕೇಳಲಾಗುತ್ತದೆ ಎಂದು ಸಿಜೆಐ ಹೇಳಿದ್ದಾರೆ.

ಇದನ್ನೂ ಓದಿ: ಮೈ ಲಾರ್ಡ್ ಅಂತ ಹೇಳ್ಬೇಡಿ, ನನ್ನ ಅರ್ಧ ಸಂಬಳ ನಿಮಗೆ ಕೊಡ್ತೀನಿ: ಸುಪ್ರೀಂಕೋರ್ಟ್ ನ್ಯಾಯಾಧೀಶ

ನಿಜವಾಗಿಯೂ ಅಗತ್ಯವಿದ್ದರೆ ಮಾತ್ರ ಮುಂದೂಡಿಕೆಗಳನ್ನು ಕೇಳಿ ಎಂದು ನಾನು ಬಾರ್‌ನ ಸದಸ್ಯರನ್ನು ವಿನಂತಿಸುತ್ತೇನೆ. ಇದು ‘ತಾರೀಖ್ ಪೇ ತಾರೀಖ್’ ನ್ಯಾಯಾಲಯ ಆಗಲು ಸಾಧ್ಯವಿಲ್ಲಎಂದು ನ್ಯಾಯಾಧೀಶರು ಒತ್ತಿ ಹೇಳಿದರು.

1993ರಲ್ಲಿ ತೆರೆಕಂಡ ಬಾಲಿವುಡ್ ಚಿತ್ರ ‘ದಾಮಿನಿ’ಯಲ್ಲಿ ವಕೀಲ ಪಾತ್ರದಲ್ಲಿರುವ ನಟ ಸನ್ನಿ ಡಿಯೋಲ್, ನ್ಯಾಯಾಲಯದಲ್ಲಿ ಪ್ರಕರಣ ಮುಂದೂಡಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿ ತಾರೀಖ್ ಪೇ ತಾರೀಖ್, ತಾರೀಖ್ ಪೇ ತಾರೀಖ್ ಮಿಲ್ತಿ ಗಯೀ ಮೈ ಲಾರ್ಡ್, ಪರ್ ಇನ್ಸಾಫ್ ನಹೀ ಮಿಲಾ ಎಂದು ಹೇಳುತ್ತಾರೆ. ಆ ಸಿನಿಮಾದ ಡೈಲಾಗ್ ನ್ನೇ ಸಿಜೆಐ ಇಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ; ಕ್ಯಾಮೆರಾ ನೋಡಿ ಪ್ರತಿಕ್ರಿಯೆ
ದರ್ಶನ್ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ; ಕ್ಯಾಮೆರಾ ನೋಡಿ ಪ್ರತಿಕ್ರಿಯೆ
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್
ಐಪಿಎಲ್‌ನಲ್ಲಿ ವಿಶೇಷ ಶತಕ ಪೂರೈಸಿದ ಅರ್ಶ್‌ದೀಪ್ ಸಿಂಗ್
ಮಂತ್ರಾಲಯ ಬಳಿ ಅಪಘಾತ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಗಾಯಾಳು
ಮಂತ್ರಾಲಯ ಬಳಿ ಅಪಘಾತ: ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಗಾಯಾಳು
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?