AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದಿತ ಮಗಳ ಹಕ್ಕುಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಅವಿವಾಹಿತ ಮಗಳು ಕುಟುಂಬ ಪಿಂಚಣಿಗೆ ಅರ್ಹಳಾಗಿರುವಂತೆಯೇ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಅಥವಾ ಅಂಗವಿಕಲನಾದ ವ್ಯಕ್ತಿಯ ವಿಚ್ಛೇದಿತ ಮಗಳು ಕೂಡ ಪಿಂಚಣಿಗೆ ಅರ್ಹಳಾಗಿರುತ್ತಾಳೆ ಎಂದು ವಕೀಲರು ತಮ್ಮ ವಾದದಲ್ಲಿ ಹೇಳಿದರು.

ವಿಚ್ಛೇದಿತ ಮಗಳ ಹಕ್ಕುಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ಸುಪ್ರೀಂ ಕೋರ್ಟ್​
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Mar 08, 2021 | 7:44 PM

Share

ಸ್ವಾತಂತ್ರ್ಯ ಹೋರಾಟಗಾರನ ವಿಚ್ಛೇದಿತ ಮಗಳು ತನ್ನದೇ ಆದ ಸ್ವತಂತ್ರ ಆದಾಯದ ಮೂಲವನ್ನು ಹೊಂದಿಲ್ಲದೇ ಇದ್ದರೆ, ಆಗ ಆಕೆ ಕುಟುಂಬದ ಪಿಂಚಣಿ ಪಡೆಯಲು ಅರ್ಹಳಾಗಿರುತ್ತಾಳೆ ಎಂಬ ವಿಷಯವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವ್ಯಕ್ತಿಯ ವಿಚ್ಛೇದಿತ ಮಗಳು ಅವಿವಾಹಿತ ಮಗಳಿಗಿಂತ ಭಿನ್ನವಾಗಿಲ್ಲ. ಹೀಗಾಗಿ ಆಕೆಗೂ ಕುಟುಂಬ ಪಿಂಚಣಿಯಲ್ಲಿ ಪಾಲು ದೊರೆಯುವುದು ಅಗತ್ಯವಿದೆ ಎಂದು ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠದ ಮುಂದೆ ವಕೀಲರಾದ ದುಶ್ಯಂತ್ ಪರಾಶರ್ ವಾದ ಮಂಡಿಸಿದ್ದಾರೆ.

ಅವಿವಾಹಿತ ಮಗಳು ಕುಟುಂಬ ಪಿಂಚಣಿಗೆ ಅರ್ಹಳಾಗಿದ್ದಾಳೆ ಅಂತೆಯೇ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಅಥವಾ ಅಂಗವಿಕಲನಾದ ವ್ಯಕ್ತಿಯ ವಿಚ್ಛೇದಿತ ಮಗಳು ಕೂಡ ಪಿಂಚಣಿಗೆ ಅರ್ಹಳಾಗಿರುತ್ತಾಳೆ. ಒಂದು ವೇಳೆ ಈ ರೀತಿ ವಿಚ್ಛೇದಿತ ಮಗಳಿಗೆ ಪಿಂಚಣಿ ನೀಡಿದರೆ ಅದು ಪ್ರಗತಿಪರ ಮತ್ತು ಸಾಮಾಜಿಕವಾಗಿ ರಚನಾತ್ಮಕವಾಗಿರುತ್ತದೆ ಎಂದು ಪರಾಶರ್ ವಾದಿಸಿದರು.

ತಮ್ಮ ಕಕ್ಷಿದಾರರಾದ ತುಳಸಿ ದೇವಿ ಪರವಾಗಿ ಪರಾಶರ್ ವಾದ ಮಂಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ಗೋಪಾಲ್ ರಾಮ್ ಅವರ ವಿಚ್ಛೇದಿತ ಮಗಳು ತುಳಸಿ ದೇವಿ, ಜೀವನ ನಿರ್ವಹಣೆಗಾಗಿ ಹೆತ್ತವರ ಮೇಲೆ ಸಂಪೂರ್ಣವಾಗಿ ಅವಲಂಬಿತಳಾಗಿದ್ದೇನೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ತಂದೆಯ ಮರಣದ ನಂತರ ಅನಾರೋಗ್ಯ ಪೀಡಿತರಾದ ನನ್ನ ತಾಯಿ 2018ರ ಜನವರಿಯಲ್ಲಿ ಪ್ರಧಾನ ಮಂತ್ರಿಗೆ ಸ್ವಾತಂತ್ರ್ಯ ಹೋರಾಟ ಯೋಜನೆಯಡಿ ಕುಟುಂಬ ಪಿಂಚಣಿ ನೀಡುವುದನ್ನು ಮುಂದುವರಿಸಬೇಕು ಎಂದು ಪತ್ರ ಬರೆದಿದ್ದರು, ಏಕೆಂದರೆ ಇದು ನನಗೆ ಆರ್ಥಿಕ ನೆರವು ನೀಡುವ ಸಾಧನವಾಗಿದೆ ಎಂದು ತುಳಸಿ ದೇವಿ ತಿಳಿಸಿದ್ದಾರೆ.

2016ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ಪರಾಶರ್ ಇದು ತುಳಸಿ ದೇವಿಯವರ ವ್ಯಕ್ತಿಗತ ಜೀವನದ ಸಂಗತಿಗಳನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ. ವಿಚ್ಛೇದಿತ ಮಗಳನ್ನು ಪಿಂಚಣಿ ವ್ಯವಸ್ಥೆಯಿಂದ ಹೊರಗಿಡುವುದು ವಿಪರ್ಯಾಸ ಎಂದು ಹೈಕೋರ್ಟ್ ಹೇಳಿತ್ತು. ಈ ನೆಲೆಗಟ್ಟಿನಲ್ಲಿ ಅವಿವಾಹಿತ ಮಗಳನ್ನು ಅರ್ಹ ಅವಲಂಬಿತರ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು ಎಂದಾದರೆ ವಿಚ್ಛೇದಿತ ಮಗಳನ್ನು ಈ ಸೌಲಭ್ಯದಿಂದ ಹೊರಗಿಡುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ತುಳಸಿ ದೇವಿ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ ಮುಂದಿನ ತಿಂಗಳು ಅಂದರೆ ಎಪ್ರಿಲ್ ಎರಡನೇ ವಾರದಲ್ಲಿ ವಿವರವಾದ ವಿಚಾರಣೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: Women’s Day Special: ಟೇಬಲ್​ ಟೆನ್ನಿಸ್​​ನ ಮಿನುಗುತಾರೆ ಅರ್ಚನಾ ಕಾಮತ್​; ಬೆನ್ನೆಲುಬಾಗಿ ನಿಂತ ತಾಯಿಯ ಹೆಮ್ಮೆಯ ನುಡಿಗಳಿವು..

Published On - 7:43 pm, Mon, 8 March 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ