AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್​ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !

ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್​​ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ.

ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್​ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !
ವರ್ಲಿಯಲ್ಲಿ ಬಂಗಲೆ ಖರೀದಿ ಮಾಡಿದ ಸೂರತ್​ ವಜ್ರದ ವ್ಯಾಪಾರಿ
TV9 Web
| Edited By: |

Updated on: Aug 01, 2021 | 1:52 PM

Share

ಸೂರತ್​: ಗುಜರಾತ್​ನ ಸೂರತ್​​ನ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಮತ್ತವರ ಕುಟುಂಬದವರು ಸೇರಿ ಮುಂಬೈನ ವರ್ಲಿಯಲ್ಲಿ, 185 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಈ ಬಂಗಲೆ ವರ್ಲಿಯಲ್ಲಿ ಕಡಲ ತೀರದಲ್ಲಿಯೇ ಇದೆ. ಒಟ್ಟು ಆರು ಅಂತಸ್ತಿನ ಬಂಗಲೆಯಾಗಿದ್ದು, 20 ಸಾವಿರ ಚದರ ಅಡಿ ಪ್ರದೇಶದಲ್ಲಿದೆ. ಈ ಹಿಂದೆ ಎಸ್ಸಾರ್ (Essar Group) ಗ್ರೂಪ್​ ಮಾಲೀಕತ್ವದಲ್ಲಿದ್ದ ಬಂಗಲೆ ಇದೀಗ ಸಾವ್ಜಿ ಧೋಲಾಕಿಯಾ ತಮ್ಮ ಘನಶ್ಯಾಮ ಧೋಲಾಕಿಯಾ ಹೆಸರಿಗೆ ರಿಜಿಸ್ಟರ್ ಆಗಿದೆ. ಅಂದರೆ ಬಂಗಲೆ ಮಾಲೀಕರು ಘನಶ್ಯಾಮ ಅವರಾಗಿದ್ದಾರೆ.

ನಾವು ನಮ್ಮಲ್ಲಿ ಕೆಲಸ ಮಾಡುವ ಕೆಲಸಗಾರರು ಮತ್ತು ಅವರ ಕುಟುಂಬಗಳು ಉಳಿಯಲೆಂದು ಒಂದು ವಸತಿ ಕಟ್ಟಡವನ್ನು ಹುಡುಕುತ್ತಿದ್ದೆವು. ನಾವೀಗ ಅದನ್ನು ಖರೀದಿಸಿದ್ದೇವೆ. ಈ ಬಂಗಲೆ ನಮ್ಮ ಕೆಲಸದ ಸ್ಥಳ ಮತ್ತು ಕಚೇರಿಗೆ ಹತ್ತಿರದಲ್ಲೇ ಇದ್ದು, ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಿದೆ ಎಂದು ಧೋಲಾಕಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್​​ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ. ಕಳೆದ 30ವರ್ಷಗಳಲ್ಲಿ ಇದೇ ಉದ್ಯಮದಲ್ಲೇ ತೊಡಗಿದ್ದಾರೆ. ತಮ್ಮಲ್ಲಿ ಕೆಲಸ ಮಾಡುವವರಿಗೆ ಪ್ರತಿವರ್ಷವೂ ಬೋನಸ್​ ನೀಡುವ ಸಾವ್ಜಿ ಧೋಲಾಕಿಯಾ ಕುಟುಂಬ ಅತ್ಯುತ್ತಮವಾಗಿ ಕೆಲಸ ಮಾಡುವವರಿಗೆ ಕಾರು, ಮನೆಗಳನ್ನೆಲ್ಲ ಉಡುಗೋರೆ ರೂಪದಲ್ಲಿ ಕೊಡುತ್ತದೆ.

ಇದನ್ನೂ ಓದಿ: ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ

Surat diamantaire Savji Dholakia buys Rs 185 crore Bungalow In Mumbai

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ