AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್​ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !

ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್​​ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ.

ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್​ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !
ವರ್ಲಿಯಲ್ಲಿ ಬಂಗಲೆ ಖರೀದಿ ಮಾಡಿದ ಸೂರತ್​ ವಜ್ರದ ವ್ಯಾಪಾರಿ
TV9 Web
| Edited By: |

Updated on: Aug 01, 2021 | 1:52 PM

Share

ಸೂರತ್​: ಗುಜರಾತ್​ನ ಸೂರತ್​​ನ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಮತ್ತವರ ಕುಟುಂಬದವರು ಸೇರಿ ಮುಂಬೈನ ವರ್ಲಿಯಲ್ಲಿ, 185 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಈ ಬಂಗಲೆ ವರ್ಲಿಯಲ್ಲಿ ಕಡಲ ತೀರದಲ್ಲಿಯೇ ಇದೆ. ಒಟ್ಟು ಆರು ಅಂತಸ್ತಿನ ಬಂಗಲೆಯಾಗಿದ್ದು, 20 ಸಾವಿರ ಚದರ ಅಡಿ ಪ್ರದೇಶದಲ್ಲಿದೆ. ಈ ಹಿಂದೆ ಎಸ್ಸಾರ್ (Essar Group) ಗ್ರೂಪ್​ ಮಾಲೀಕತ್ವದಲ್ಲಿದ್ದ ಬಂಗಲೆ ಇದೀಗ ಸಾವ್ಜಿ ಧೋಲಾಕಿಯಾ ತಮ್ಮ ಘನಶ್ಯಾಮ ಧೋಲಾಕಿಯಾ ಹೆಸರಿಗೆ ರಿಜಿಸ್ಟರ್ ಆಗಿದೆ. ಅಂದರೆ ಬಂಗಲೆ ಮಾಲೀಕರು ಘನಶ್ಯಾಮ ಅವರಾಗಿದ್ದಾರೆ.

ನಾವು ನಮ್ಮಲ್ಲಿ ಕೆಲಸ ಮಾಡುವ ಕೆಲಸಗಾರರು ಮತ್ತು ಅವರ ಕುಟುಂಬಗಳು ಉಳಿಯಲೆಂದು ಒಂದು ವಸತಿ ಕಟ್ಟಡವನ್ನು ಹುಡುಕುತ್ತಿದ್ದೆವು. ನಾವೀಗ ಅದನ್ನು ಖರೀದಿಸಿದ್ದೇವೆ. ಈ ಬಂಗಲೆ ನಮ್ಮ ಕೆಲಸದ ಸ್ಥಳ ಮತ್ತು ಕಚೇರಿಗೆ ಹತ್ತಿರದಲ್ಲೇ ಇದ್ದು, ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಿದೆ ಎಂದು ಧೋಲಾಕಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್​​ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ. ಕಳೆದ 30ವರ್ಷಗಳಲ್ಲಿ ಇದೇ ಉದ್ಯಮದಲ್ಲೇ ತೊಡಗಿದ್ದಾರೆ. ತಮ್ಮಲ್ಲಿ ಕೆಲಸ ಮಾಡುವವರಿಗೆ ಪ್ರತಿವರ್ಷವೂ ಬೋನಸ್​ ನೀಡುವ ಸಾವ್ಜಿ ಧೋಲಾಕಿಯಾ ಕುಟುಂಬ ಅತ್ಯುತ್ತಮವಾಗಿ ಕೆಲಸ ಮಾಡುವವರಿಗೆ ಕಾರು, ಮನೆಗಳನ್ನೆಲ್ಲ ಉಡುಗೋರೆ ರೂಪದಲ್ಲಿ ಕೊಡುತ್ತದೆ.

ಇದನ್ನೂ ಓದಿ: ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ

Surat diamantaire Savji Dholakia buys Rs 185 crore Bungalow In Mumbai

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ