Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್​ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !

ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್​​ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ.

ಮುಂಬೈನಲ್ಲಿ 185 ಕೋಟಿ ರೂ.ಬೆಲೆಯ ಬಂಗಲೆ ಖರೀದಿ ಮಾಡಿದ ಸೂರತ್​ನ ವಜ್ರದ ವ್ಯಾಪಾರಿ; ಇದು ಅವರಿಗಲ್ಲವಂತೆ !
ವರ್ಲಿಯಲ್ಲಿ ಬಂಗಲೆ ಖರೀದಿ ಮಾಡಿದ ಸೂರತ್​ ವಜ್ರದ ವ್ಯಾಪಾರಿ
Follow us
TV9 Web
| Updated By: Lakshmi Hegde

Updated on: Aug 01, 2021 | 1:52 PM

ಸೂರತ್​: ಗುಜರಾತ್​ನ ಸೂರತ್​​ನ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಮತ್ತವರ ಕುಟುಂಬದವರು ಸೇರಿ ಮುಂಬೈನ ವರ್ಲಿಯಲ್ಲಿ, 185 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಈ ಬಂಗಲೆ ವರ್ಲಿಯಲ್ಲಿ ಕಡಲ ತೀರದಲ್ಲಿಯೇ ಇದೆ. ಒಟ್ಟು ಆರು ಅಂತಸ್ತಿನ ಬಂಗಲೆಯಾಗಿದ್ದು, 20 ಸಾವಿರ ಚದರ ಅಡಿ ಪ್ರದೇಶದಲ್ಲಿದೆ. ಈ ಹಿಂದೆ ಎಸ್ಸಾರ್ (Essar Group) ಗ್ರೂಪ್​ ಮಾಲೀಕತ್ವದಲ್ಲಿದ್ದ ಬಂಗಲೆ ಇದೀಗ ಸಾವ್ಜಿ ಧೋಲಾಕಿಯಾ ತಮ್ಮ ಘನಶ್ಯಾಮ ಧೋಲಾಕಿಯಾ ಹೆಸರಿಗೆ ರಿಜಿಸ್ಟರ್ ಆಗಿದೆ. ಅಂದರೆ ಬಂಗಲೆ ಮಾಲೀಕರು ಘನಶ್ಯಾಮ ಅವರಾಗಿದ್ದಾರೆ.

ನಾವು ನಮ್ಮಲ್ಲಿ ಕೆಲಸ ಮಾಡುವ ಕೆಲಸಗಾರರು ಮತ್ತು ಅವರ ಕುಟುಂಬಗಳು ಉಳಿಯಲೆಂದು ಒಂದು ವಸತಿ ಕಟ್ಟಡವನ್ನು ಹುಡುಕುತ್ತಿದ್ದೆವು. ನಾವೀಗ ಅದನ್ನು ಖರೀದಿಸಿದ್ದೇವೆ. ಈ ಬಂಗಲೆ ನಮ್ಮ ಕೆಲಸದ ಸ್ಥಳ ಮತ್ತು ಕಚೇರಿಗೆ ಹತ್ತಿರದಲ್ಲೇ ಇದ್ದು, ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಿದೆ ಎಂದು ಧೋಲಾಕಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಧೋಲಾಕಿಯಾ ಕುಟುಂಬದವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಾಲಾ ಮೂಲದವರು. ಆಭರಣ ತಯಾರಿಕೆ, ವಜ್ರ ರಫ್ತು ಉದ್ಯಮ ನಡೆಸುವ ಒಡೆತನದ ಹರೇ ಕೃಷ್ಣಾ ಎಕ್ಸಪೋರ್ಟ್​​ ವಾರ್ಷಿಕ 7000 ಕೋಟಿ ರೂ.ವಹಿವಾಟು ನಡೆಸುತ್ತದೆ. ಕಳೆದ 30ವರ್ಷಗಳಲ್ಲಿ ಇದೇ ಉದ್ಯಮದಲ್ಲೇ ತೊಡಗಿದ್ದಾರೆ. ತಮ್ಮಲ್ಲಿ ಕೆಲಸ ಮಾಡುವವರಿಗೆ ಪ್ರತಿವರ್ಷವೂ ಬೋನಸ್​ ನೀಡುವ ಸಾವ್ಜಿ ಧೋಲಾಕಿಯಾ ಕುಟುಂಬ ಅತ್ಯುತ್ತಮವಾಗಿ ಕೆಲಸ ಮಾಡುವವರಿಗೆ ಕಾರು, ಮನೆಗಳನ್ನೆಲ್ಲ ಉಡುಗೋರೆ ರೂಪದಲ್ಲಿ ಕೊಡುತ್ತದೆ.

ಇದನ್ನೂ ಓದಿ: ಪೊಲೀಸರು ನನ್ನಿಂದ ಬಲವಂತವಾಗಿ ರಾಜ್​ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ

Surat diamantaire Savji Dholakia buys Rs 185 crore Bungalow In Mumbai

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ