ಜಲಂಧರ್: ಹರಿತವಾದ ಆಯುಧದಿಂದ ಇರಿದು ಬಿಜೆಪಿಯ ಮಾಜಿ ಶಾಸಕನ ಸೋದರಳಿಯನ ಬರ್ಬರ ಹತ್ಯೆ

ಮಾಜಿ ಶಾಸಕ, ಬಿಜೆಪಿ ನಾಯಕ ಶೀತಲ್ ಅಂಗುರ್ ಅವರ ಸೋದರಳಿಯನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಲಂಧರ್​ನಲ್ಲಿ ನಡೆದಿದೆ. ಮೃತ ಬಾಲಕನಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಶುಕ್ರವಾರ ಈ ಘಟನೆ ನಡೆದಿದೆ. ಬಸ್ತಿ ದನಿಷ್ಮಂದನ್ ಪ್ರದೇಶದ ಶಿವಾಜಿ ನಗರದಲ್ಲಿ ನಡೆದ ವಾಗ್ವಾದದ ಬಳಿಕ ವಿಕಾಸ್ ಎಂಬುವವನ ಮೇಲೆ ಮೂವರು ಯುವಕರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ದಾಳಿಕೋರರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುತ್ತಿದ್ದಂತೆ ಎದೆಗೆ ಹರಿತವಾದ ಆಯುಧದಿಂದ ಆರೋಪಿಗಳು ತಿವಿದಿದ್ದಾರೆ.

ಜಲಂಧರ್: ಹರಿತವಾದ ಆಯುಧದಿಂದ ಇರಿದು ಬಿಜೆಪಿಯ ಮಾಜಿ ಶಾಸಕನ ಸೋದರಳಿಯನ ಬರ್ಬರ ಹತ್ಯೆ
ಬಿಜೆಪಿ ನಾಯಕನ ಸೋದರಳಿಯ

Updated on: Dec 14, 2025 | 10:28 AM

ಜಲಂಧರ್, ಡಿಸೆಂಬರ್ 14: ಮಾಜಿ ಶಾಸಕ, ಬಿಜೆಪಿ ನಾಯಕ ಶೀತಲ್ ಅಂಗುರ್ ಅವರ ಸೋದರಳಿಯನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ(Murder) ಮಾಡಿರುವ ಘಟನೆ ಜಲಂಧರ್​ನಲ್ಲಿ ನಡೆದಿದೆ. ಮೃತ ಬಾಲಕನಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಶುಕ್ರವಾರ ಈ ಘಟನೆ ನಡೆದಿದೆ. ಬಸ್ತಿ ದನಿಷ್ಮಂದನ್ ಪ್ರದೇಶದ ಶಿವಾಜಿ ನಗರದಲ್ಲಿ ನಡೆದ ವಾಗ್ವಾದದ ಬಳಿಕ ವಿಕಾಸ್ ಎಂಬುವವನ ಮೇಲೆ ಮೂವರು ಯುವಕರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ದಾಳಿಕೋರರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುತ್ತಿದ್ದಂತೆ ಎದೆಗೆ ಹರಿತವಾದ ಆಯುಧದಿಂದ ಆರೋಪಿಗಳು ತಿವಿದಿದ್ದಾರೆ.

ಗಾಯಗಳ ಹೊರತಾಗಿಯೂ, ವಿಕಾಸ್ ಹತ್ತಿರದ ಮನೆಯನ್ನು ತಲುಪಿ ಒಬ್ಬ ಮಹಿಳೆಯ ಬಳಿ ನೀರು ಕೇಳಿದ್ದ. ಆಕೆ ಹಿಂದಿರುಗುವ ಮೊದಲೇ ಆತ ಕುಸಿದುಬಿದ್ದಿದ್ದ. ಕೂಡಲೇ ಆಕೆ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿದ್ದಳು, ಬಳಿಕ ಪೊಲೀಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಲಾಯಿತು. ಕೂಡಲೇ ಆಸ್ಪತ್ರೆಗೆ ಕಳುಹಿಸಲಾಯಿತು ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆಂದು ಘೋಷಿಸಿದರು.

ಘಟನೆ ನಡೆದ ಸಮಯದಲ್ಲಿ ಸಂತ್ರಸ್ತೆಯ ಕುಟುಂಬ ಜಮ್ಮುವಿನಲ್ಲಿತ್ತು ಎಂದು ವರದಿಯಾಗಿದೆ. ಅವರು ಶನಿವಾರ ಬೆಳಗ್ಗೆ ಹಿಂತಿರುಗಿದ್ದಾರೆ, ನಂತರ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು. ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ, ಪ್ರಮುಖ ಆರೋಪಿ ಧಾರಿವಾಲ್ ಕಡಿಯನ್ ಗ್ರಾಮದ ರವಿ ಕುಮಾರ್ ಅಲಿಯಾಸ್ ಕಾಲು, ಪರಾರಿಯಾಗುವ ಮುನ್ನ ತಾನು ಬೀಳಿಸಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಹುಡುಕಲು ಸ್ಥಳಕ್ಕೆ ಹಿಂತಿರುಗಿದ್ದಾನೆ ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: ಸ್ವಿಟ್ಜರ್​ಲೆಂಡ್​ನಲ್ಲಿ ಮಾಡೆಲ್​ ಕ್ರಿಸ್ಟಿನಾ ಬರ್ಬರ ಹತ್ಯೆ ಕೇಸ್, ಆಕೆಯ ದೇಹದಿಂದ ಗರ್ಭಕೋಶ ಹೊರ ತೆಗೆದಿದ್ದ ಪತಿ

ನಿವಾಸಿಗಳು ಪೊಲೀಸರಿಗೆ ಹಸ್ತಾಂತರಿಸಲು ಫೋನ್‌ಗಳನ್ನು ಎತ್ತಿಕೊಂಡಿದ್ದಾರೆ ಎಂದು ತಿಳಿದಾಗ,ಆತ ಅವರನ್ನು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕಾಲುವಿಗೆ ಕಾನೂನಿನ ಭಯವಿರಲಿಲ್ಲ ಏಕೆಂದರೆ ಪೊಲೀಸರು ಆತನನ್ನು ಹುಡುಕುತ್ತಿದ್ದಾಗಲೂ ಇಂದು ಮಧ್ಯಾಹ್ನ ಮಹಿಳಾ ಮಾಹಿತಿದಾರರ ಮನೆಗೆ ಬಂದು ಬೆದರಿಕೆ ಹಾಕಿದ್ದ.ಬಿಎನ್‌ಎಸ್‌ನ ಸೆಕ್ಷನ್ 103(1), 351(3) ಮತ್ತು 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us