AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ನನ್ನ ತಂದೆಯನ್ನು ಕುತಂತ್ರದಿಂದ ಕೊಲ್ಲಲಾಯಿತು; ಕೆಸಿಆರ್​ ವಿರುದ್ಧ ವೈಎಸ್​ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ

YS Sharmila: ನನ್ನ ತಂದೆ ರಾಜಶೇಖರ್ ರೆಡ್ಡಿಯವರನ್ನು ಕುತಂತ್ರದಿಂದ ಕೊಂದರು. ಈಗ ನನ್ನನ್ನು ಕೂಡ ಕೊಲ್ಲುವ ಸಾಧ್ಯತೆ ಇದೆ ಎಂದು ಕೆಸಿಆರ್ ಮೇಲೆ ವೈಎಸ್ ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ.

Big News: ನನ್ನ ತಂದೆಯನ್ನು ಕುತಂತ್ರದಿಂದ ಕೊಲ್ಲಲಾಯಿತು; ಕೆಸಿಆರ್​ ವಿರುದ್ಧ ವೈಎಸ್​ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ
ವೈಎಸ್​ ಶರ್ಮಿಳಾ
TV9 Web
| Updated By: ಸುಷ್ಮಾ ಚಕ್ರೆ|

Updated on:Sep 18, 2022 | 2:06 PM

Share

ಹೈದರಾಬಾದ್: ಕೆಲವು ದಿನಗಳ ಹಿಂದೆ ಟಿಆರ್‌ಎಸ್ ಶಾಸಕರು ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ವೈಎಸ್​ ಶರ್ಮಿಳಾ ಅಸಭ್ಯ ಭಾಷೆ ಬಳಸಿರುವ ಬಗ್ಗೆ ಸ್ಪೀಕರ್‌ಗೆ ದೂರು ನೀಡಿದ್ದರು. ಇದನ್ನೇ ಬಳಸಿಕೊಂಡು ತೆಲಂಗಾಣ ರಾಜಕಾರಣದಲ್ಲಿ ಶರ್ಮಿಳಾ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾರೆ. ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈಎಸ್​ ಶರ್ಮಿಳಾ ಈಗ ತನ್ನ ತಂದೆಯ ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದು, ಇದು ತೀವ್ರ ಚರ್ಚೆಗೀಡಾಗಿದೆ.

ನನ್ನ ತಂದೆ ರಾಜಶೇಖರ್ ರೆಡ್ಡಿಯವರನ್ನು ಕುತಂತ್ರದಿಂದ ಸಾಯಿಸಲಾಗಿದೆ ಎಂದು ಕೆಸಿಆರ್ ಮೇಲೆ ವೈಎಸ್ ಆರ್ ಪುತ್ರಿ ಶರ್ಮಿಳಾ ಗಂಭೀರ ಆರೋಪ ಮಾಡಿದ್ದಾರೆ. ನನ್ನನ್ನು ಕೂಡ ಕೊಲ್ಲುವ ಸಾಧ್ಯತೆ ಇದೆ. ಆದರೆ, ನಾನು ಬದುಕಿರುವವರೆಗೂ, ನನ್ನ ಉಸಿರು ಇರುವವರೆಗೂ ಜನರಿಂದ ನನ್ನನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಅರಾಜಕತೆ ಬಗ್ಗೆ ನಾನು ಮಾತಾಡಿದ್ದೇನೆ. ನನ್ನ ಕತ್ತು ಹಿಸುಕುವುದು ನಿಮಗೆ ತರವಲ್ಲ. ಪೊಲೀಸರು ನಿಮ್ಮ ಪರವಾಗಿದ್ದಾರೆ. ಪೊಲೀಸರನ್ನು ನಿಮ್ಮ ಮನೆ ಕೆಲಸದವರಂತೆ ಬಳಸಿಕೊಳ್ಳುತ್ತಿದ್ದೀರಿ ಎಂದು ವೈಎಸ್ ಶರ್ಮಿಳಾ ಟೀಕಾ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ: ಆಂಧ್ರ ಮುಖ್ಯಮಂತ್ರಿ ಜಗನ್​ರೆಡ್ಡಿ ಚಿಕ್ಕಪ್ಪ ಹತ್ಯೆಯಾಗಿ 2ವರ್ಷದ ಬಳಿಕ ಸಿಕ್ಕಿಬಿದ್ದ ಆರೋಪಿ; ಗೋವಾದಲ್ಲಿ ಸೆರೆ ಹಿಡಿದ ಸಿಬಿಐ

ಅವರು ನನ್ನ ತಂದೆ (ವೈಎಸ್‌ಆರ್) ವಿರುದ್ಧ ಸಂಚು ರೂಪಿಸಿ ಕೊಂದರು. ಅವರು ಈಗ ನನ್ನನ್ನು ಕೂಡ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ನಾನು ವೈಎಸ್ಆರ್ ಅವರ ಮಗಳು. ನಾನು ಯಾರಿಗೂ ಹೆದರುವುದಿಲ್ಲ ಎಂದು ಶರ್ಮಿಳಾ ಹೇಳಿದ್ದಾರೆ. ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಜಗನ್ ಕೂಡ ವೈಎಸ್‌ಆರ್ ಸಾವಿನ ಬಗ್ಗೆ ಇದೇ ರೀತಿಯ ಆರೋಪ ಮಾಡಿದ್ದರು. ವೈಎಸ್ಆರ್ ಸಾವಿನ ಹಿಂದೆ ಅಂಬಾನಿ ಕೈವಾಡವಿದೆ ಎಂದು ಆರೋಪಿಸಿ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ರಿಲಯನ್ಸ್ ಮಾರ್ಟ್ಸ್ ಮೇಲೆ ದಾಳಿ ಮಾಡಿದ್ದರು. ಆದರೆ ಜಗನ್ ಅಧಿಕಾರಕ್ಕೆ ಬಂದ ನಂತರ ಅಂಬಾನಿ ಅವರ ಆಪ್ತ ಸಹಾಯಕರಾದ ಪರಿಮಳಾ ನಾಥ್ವಾನಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು.

ಕೆಸಿಆರ್​ಗೆ ಬಹಿರಂಗ ಸವಾಲ್ ಹಾಕಿರುವ ವೈಎಸ್​ಆರ್ ಪುತ್ರಿ ವೈಎಸ್​​ ಶರ್ಮಿಳಾ, ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್​ ಅವರೇ ನನಗೇನೂ ಬೇಡಿ (ಕೈಕೋಳ) ಎಂದರೆ ಭಯವಿಲ್ಲ. ನಿಮಗೆ ಧಮ್ ಇದ್ದರೆ ನನ್ನನ್ನು ಅರೆಸ್ಟ್ ಮಾಡಿಸಿ. ನನ್ನ ಹೆಸರು ವೈ.ಎಸ್. ಶರ್ಮಿಳಾ. ನಾನು ವೈ.ಎಸ್ ರಾಜಶೇಖರ್ ರೆಡ್ಡಿಯವರ ಪುತ್ರಿ. ನಾನು ಹುಲಿ ಮರಿ. ಕೈ ಕೋಳಗಳು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಇ.ಟಿ.ಸಿ.ಎಂ. ಆಸ್ಪತ್ರೆ ಲೆಕ್ಕಾಧಿಕಾರಿ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ: ಪಾದ್ರಿ ಸೇರಿ ನಾಲ್ವರು ಅರೆಸ್ಟ್

ನಿಮ್ಮ ಕಡೆ ಪೊಲೀಸರಿದ್ದರೆ ನನಗೆ ಜನರ ಬಲವಿದೆ. ನಾನು ಇಲ್ಲೇ ಜನರ ಮಧ್ಯೆ ಪಾದಯಾತ್ರೆಯಲ್ಲಿ ಇದ್ದೇನೆ, ಜನರಿಗೋಸ್ಕರ ಹೋರಾಡುತ್ತೇನೆ. ನನ್ನ ವಿರುದ್ಧ ಕೇಸ್ ಫೈಲ್ ಮಾಡಿದ್ದೀರ ಅಲ್ಲವೇ? ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ವೈಎಸ್​ ಶರ್ಮಿಳಾ ಬಹಿರಂಗ ಸವಾಲು ಹಾಕಿದ್ದಾರೆ.

ಅಂದಹಾಗೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖಮ್ಮಂ ಜಿಲ್ಲೆ ಪಾಲೇರು ಕ್ಷೇತ್ರದಿಂದ ಸ್ಪರ್ಧಿಸಲು ಶರ್ಮಿಳಾ ಸಜ್ಜಾಗಿದ್ದಾರೆ. ಪಾಲೇರು ಕ್ಷೇತ್ರವು ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಇಲ್ಲಿ ರೆಡ್ಡಿ ಸಮುದಾಯದವರೇ ಪ್ರಬಲರು. 2016ರಲ್ಲಿ ಟಿಆರ್‌ಎಸ್‌ನ ತುಮ್ಮಲ ನಾಗೇಶ್ವರ ರಾವ್ ಗೆದ್ದ ಉಪಚುನಾವಣೆ ಹೊರತುಪಡಿಸಿ 1999ರಿಂದ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಂದಾಳ ಉಪೇಂದರ್‌ ರೆಡ್ಡಿ ಗೆಲುವು ಸಾಧಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Sun, 18 September 22

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ