
ಕೋಲ್ಕತ್ತಾ, ಜೂನ್ 15: ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಮತ್ತು ನಾಟಕೀಯ ರಾಜಕೀಯ ಬೆಳವಣಿಗೆಯೊಂದಕ್ಕೆ ದೇಶದ ಸಂಸತ್ತು ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ಭಿನ್ನಮತವು ಹೊಸ ಮೈಲಿಗಲ್ಲು ತಲುಪಿದ್ದು, ಬರೋಬ್ಬರಿ 20 ಬಂಡಾಯ ಸಂಸದರು ಒಟ್ಟಾಗಿ ಬಂದು, ನೋಂದಾಯಿತ ರಾಜಕೀಯ ಪಕ್ಷವಾದ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಜೊತೆ ತಾವೂ ಅಧಿಕೃತವಾಗಿ ವಿಲೀನಗೊಂಡಿರುವುದಾಗಿ ಘೋಷಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎರಡೂ ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಎನ್ಸಿಪಿಐ ಇತ್ತೀಚಿನ ವರ್ಷಗಳಲ್ಲಿ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಸಕ್ರಿಯವಾಗಿದೆ.
ಬಂಡಾಯ ಸಂಸದರ ತಂತ್ರ: ತೃಣಮೂಲ ಕಾಂಗ್ರೆಸ್ನ (TMC) 20 ಬಂಡಾಯ ಸಂಸದರು ‘ಎನ್ಸಿಪಿಐ’ ಪಕ್ಷದ ಜೊತೆ ವಿಲೀನವಾಗಿರುವುದು ತಾವೇ “ನಿಜವಾದ ಟಿಎಂಸಿ” ಎಂದು ಸಾಬೀತುಪಡಿಸಲು ಸಮಯ ಕೇಳುವ ಒಂದು ಕಾನೂನು ತಂತ್ರವಾಗಿದೆ. ಹೀಗೆ ಮಾಡುವುದರಿಂದ ಅವರು ಸಂಸದ ಸ್ಥಾನದಿಂದ ಅನರ್ಹಗೊಳ್ಳುವುದನ್ನು ಸದ್ಯಕ್ಕೆ ತಪ್ಪಿಸಿಕೊಳ್ಳಬಹುದು.
ಮ್ಮ ಸಂವಿಧಾನದ ಕಾನೂನಿನ ಪ್ರಕಾರ, ಒಂದು ಪಕ್ಷದ ಒಟ್ಟು ಸಂಸದರ ಪೈಕಿ ಮೂರನೇ ಎರಡರಷ್ಟು ಸದಸ್ಯರು ಒಟ್ಟಾಗಿ ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಂಡರೆ, ಅವರ ಮೇಲೆ ಪಕ್ಷಾಂತರ ವಿರೋಧಿ ಕಾನೂನು ಅನ್ವಯಿಸುವುದಿಲ್ಲ. ನಮ್ಮ ಬಳಿ ಮೂರನೇ ಎರಡರಷ್ಟು ಬಹುಮತ ಇರುವುದರಿಂದ ಜುಲೈನಲ್ಲಿ ಸಂಸತ್ತು ಆರಂಭವಾದಾಗ ‘ತೃಣಮೂಲ ಕಾಂಗ್ರೆಸ್’ ಹೆಸರನ್ನು ನಮಗೇ ನೀಡುವಂತೆ ಸ್ಪೀಕರ್ ಬಳಿ ಬೇಡಿಕೆ ಇಡುತ್ತೇವೆ. ಆಮೇಲೆ ನ್ಯಾಯಾಲಯವೇ ನಿಜವಾದ ಟಿಎಂಸಿ ಯಾವುದು ಎಂದು ನಿರ್ಧರಿಸುತ್ತದೆ.
ಎನ್ಡಿಎಗೆ ಈ ಹೊಸ ಬಣ ಬೆಂಬಲ ಸೂಚಿಸುವುದಾಗಿ ಘೋಷಿಸಿದೆ, ಜತೆಗೆ ಈಗಾಗಲೇ ಎನ್ಡಿಎ ಜತೆಗಿರುವ ಟಿಡಿಪಿ ಪಕ್ಷದಲ್ಲಿ 20 ಸಂಸದರಿದ್ದಾರೆ. ಹಾಗೆಯೇ ಸಣ್ಣ ಪಕ್ಷವಾದರೂ ಹೆಚ್ಚಿನ ಸಂಸದರಿರುವ ಎರಡನೇ ಪಕ್ಷವಾಗಿ ಎನ್ಸಿಪಿಐ ಗುರುತಿಸಿಕೊಳ್ಳಲಿದೆ.
ಟಿಎಂಸಿ ಮುಖ್ಯಸ್ಥರು ಸುಪ್ರೀಂ ಕೋರ್ಟ್ನ ಹಳೆಯ ತೀರ್ಪನ್ನು ಉಲ್ಲೇಖಿಸಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಕೇವಲ ಸಂಸತ್ತಿನಲ್ಲಿರುವ ಸಂಸದರು ವಿಲೀನಗೊಂಡರೆ ಸಾಲದು, ಮೂಲ ರಾಜಕೀಯ ಪಕ್ಷವೇ ಸಂಪೂರ್ಣವಾಗಿ ವಿಲೀನಗೊಳ್ಳಬೇಕು. ಹಾಗಾಗದಿದ್ದರೆ ಈ ಬಂಡಾಯಗಾರರ ಸಂಸದ ಸ್ಥಾನ ರದ್ದಾಗುತ್ತದೆ.
ಮತ್ತಷ್ಟು ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಟಿಎಂಸಿ? ಮಮತಾ ಬ್ಯಾನರ್ಜಿಗೆ ದೊಡ್ಡ ಹುದ್ದೆಯ ಆಫರ್
ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ: ಪಕ್ಷಾಂತರ ವಿರೋಧಿ ಕಾನೂನಿಗೆ ತಡೆ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ ಬಂಡಾಯ ಸಂಸದರ ನಿಯೋಗವು, ಸದನದಲ್ಲಿ ತಮಗೆ ಪ್ರತ್ಯೇಕ ಬಣವಾಗಿ ಆಸನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅಧಿಕೃತ ಪತ್ರ ಸಲ್ಲಿಸಿದೆ. ಬಂಡಾಯ ಸಂಸದರ ಪ್ರಮುಖ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಮಾತನಾಡಿ, ಲೋಕಸಭೆಯಲ್ಲಿರುವ ಒಟ್ಟು ಟಿಎಂಸಿ ಸಂಸದರ ಪೈಕಿ ಮೂರನೇ ಎರಡರಷ್ಟು ಸದಸ್ಯರು ಒಟ್ಟಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ. ಈ ಪಕ್ಷದಲ್ಲಿ ಒಂದೇ ಒಂದು ಸಂಸದರಿಲ್ಲ.
ನಾವು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿದ್ದು, ಕೇಂದ್ರದ ಎನ್ಡಿಎ (NDA) ಸರ್ಕಾರಕ್ಕೆ ನಮ್ಮ ಬೆಂಬಲವನ್ನು ಘೋಷಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಮೂರನೇ ಎರಡರಷ್ಟು ಸಂಸದರು ಒಟ್ಟಾಗಿ ವಿಲೀನಗೊಂಡಿರುವುದರಿಂದ ಇವರ ವಿರುದ್ಧ ಯಾವುದೇ ಪಕ್ಷಾಂತರ ವಿರೋಧಿ ಕಾನೂನು ಅನ್ವಯಿಸುವುದಿಲ್ಲ ಎಂಬುದು ಈ ಬಣದ ವಿಶ್ವಾಸವಾಗಿದೆ.
ಪ್ರಾದೇಶಿಕ ಮಟ್ಟದಿಂದ ರಾಷ್ಟ್ರೀಯ ಸ್ಪಾಟ್ಲೈಟ್ಗೆ ಬಂದ ‘ಎನ್ಸಿಪಿಐ’
2023 ರ ತ್ರಿಪುರಾ ವಿಧಾನಸಭಾ ಚುನಾವಣೆಗೆ ಮುನ್ನ ಸಾಮಾಜಿಕ ಕಾರ್ಯಕರ್ತರಾದ ಶಿಯುಲಿ ಕುಂಡು ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಎನ್ಸಿಪಿಐ (NCPI), ಭಾರತೀಯ ಚುನಾವಣಾ ಆಯೋಗದಲ್ಲಿ ನೋಂದಾಯಿತ (ಮಾನ್ಯತೆ ಪಡೆಯದ) ಪಕ್ಷವಾಗಿ ದಾಖಲಾಗಿದೆ.
2023 ರಲ್ಲಿ ಈ ಪಕ್ಷದಿಂದ ಸ್ಪರ್ಧಿಸಿದ್ದ ಸಾಮಾನ್ಯ ದಿನಗೂಲಿ ಕಾರ್ಮಿಕ ಹಾಗೂ ಸಮಾಜ ಸೇವಕ ಬರ್ಜೇಡಾ ತ್ರಿಪುರಾ (62) ಅವರಂತಹ ನಾಯಕರಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿದೆ. ತಾವು ಸ್ಪರ್ಧಿಸಿದ್ದ ಪಕ್ಷಕ್ಕೆ ದೇಶದ 20 ಪ್ರಭಾವಿ ಸಂಸದರು ಸೇರ್ಪಡೆಯಾಗಿರುವ ವಿಷಯ ತಿಳಿದು ಅವರು ಅಪಾರ ಆಶ್ಚರ್ಯ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. 2023 ರ ಚುನಾವಣೆಯಲ್ಲಿ ಕೇವಲ 822 ಒಟ್ಟು ಮತಗಳನ್ನು ಗಳಿಸಿದ್ದ ಈ ಮುಗ್ಧ ಪಕ್ಷ, ಇಂದು ಭಾರತದ ಸಂಸತ್ತನ್ನು ನಿಯಂತ್ರಿಸುವ ಶಕ್ತಿಯಾಗಿ ಹೊರಹೊಮ್ಮಿರುವುದು ಪ್ರಜಾಪ್ರಭುತ್ವದ ಸುಂದರ ವಿಸ್ಮಯವಾಗಿದೆ.
ಬಂಡಾಯ ಟಿಎಂಸಿ ಸಂಸದರಾದ ಶತಾಬ್ದಿ ರಾಯ್ ಮತ್ತು ಸುದೀಪ್ ಬಂಡೋಪಾಧ್ಯಾಯ ಅವರ ಪ್ರಕಾರ, ಈ ವಿಲೀನವು ಕೇಂದ್ರದಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಮತ್ತಷ್ಟು ಸ್ಥಿರತೆಯನ್ನು ಒದಗಿಸಲಿದೆ. ಸದ್ಯಕ್ಕೆ ಚುನಾವಣಾ ಚಿಹ್ನೆಯ ಹಕ್ಕನ್ನು ಸ್ಪೀಕರ್ ಅವರ ವಿವೇಚನೆಗೆ ಬಿಡಲಾಗಿದ್ದು, ಮುಂಬರುವ ದಿನಗಳಲ್ಲಿ ಸಂಸತ್ತಿನ ಒಳಗೆ ಎನ್ಸಿಪಿಐ ಬಣವು ಪ್ರಮುಖ ನೀತಿ ನಿರೂಪಣೆಗಳಲ್ಲಿ ಮಹತ್ವದ ರಾಜಕೀಯ ಪಾತ್ರ ವಹಿಸಲಿದೆ. ಇದು ಭಾರತೀಯ ಪ್ರಜಾಪ್ರಭುತ್ವದಲ್ಲಿ ಪ್ರಾದೇಶಿಕ ಧ್ವನಿಗಳಿಗೆ ಸಿಕ್ಕ ಹೊಸ ವೇದಿಕೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Mon, 15 June 26