AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿನ ಶೆಲ್ ದಾಳಿಯಿಂದ ರಕ್ಷಣೆ ಪಡೆಯಲು ಭೂಗತ ಬಂಕರ್; ಶೇ 84ರಷ್ಟು ಕಾಮಗಾರಿ ಪೂರ್ಣ

Underground Bunkers: ಶೆಲ್ ಮತ್ತು ಗುಂಡುಗಳ ದಾಳಿ ನಡೆದಾಗ ಗಡಿಯಲ್ಲಿ ವಾಸಿಸುವ ಗ್ರಾಮಸ್ಥರು ಬಂಕರ್‌ಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಈ ಗಡಿಭಾಗವು 770 ಕಿ.ಮೀ. ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯ ಸುಮಾರು 220 ಕಿ.ಮೀ ಹೊಂದಿದೆ.

ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿನ ಶೆಲ್ ದಾಳಿಯಿಂದ ರಕ್ಷಣೆ ಪಡೆಯಲು ಭೂಗತ ಬಂಕರ್; ಶೇ 84ರಷ್ಟು ಕಾಮಗಾರಿ ಪೂರ್ಣ
ಮೊರ್ಟಾರ್ ಶೆಲ್ ನ ಬಿಡಿಭಾಗ (ಸಂಗ್ರಹ ಚಿತ್ರ)
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 07, 2021 | 12:28 PM

Share

ಶ್ರೀನಗರ: ಗಡಿಭಾಗದಲ್ಲಿ ಶೆಲ್ ದಾಳಿಯ ಸಮಯದಲ್ಲಿ ನಿವಾಸಿಗಳನ್ನು ರಕ್ಷಿಸಲು ಜಮ್ಮು ಮತ್ತು ಕಾಶ್ಮೀರ ಎಲ್‌ಒಸಿ ಉದ್ದಕ್ಕೂ ಶೇ 84ರಷ್ಟು ಭೂಗತ ಬಂಕರ್‌ಗಳನ್ನು ಪೂರ್ಣಗೊಳಿಸಿದೆ. ಈ ವರ್ಷ ಫೆಬ್ರವರಿ 25 ರಂದು ಗಡಿಗಳಲ್ಲಿ ಶಾಂತಿ ಕಾಪಾಡಿಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಹೊಸ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ದೊಡ್ಡ ಕದನ ವಿರಾಮ ಉಲ್ಲಂಘನೆ ನಡೆದಿಲ್ಲ. ಕಳೆದ ವರ್ಷ ಇಂಡೋ-ಪಾಕ್ ಗಡಿಯಲ್ಲಿ 5,133 ಕದನ ವಿರಾಮ ಉಲ್ಲಂಘನೆ ನಡೆದಿದ್ದು ಇದರಲ್ಲಿ 46 ಸಾವುಗಳು ಸಂಭವಿಸಿವೆ. ಶೆಲ್ ಮತ್ತು ಗುಂಡುಗಳ ದಾಳಿ ನಡೆದಾಗ ಗಡಿಯಲ್ಲಿ ವಾಸಿಸುವ ಗ್ರಾಮಸ್ಥರು ಬಂಕರ್‌ಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಈ ಗಡಿಭಾಗವು 770 ಕಿ.ಮೀ. ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯ ಸುಮಾರು 220 ಕಿ.ಮೀ ಹೊಂದಿದೆ.

2017 ರಲ್ಲಿ ಜಮ್ಮು ಮತ್ತು ಕಾಶ್ಮೀರ, ಜಮ್ಮು, ಕಥುವಾ ಮತ್ತು ಸಾಂಬಾ ಐದು ಗಡಿ ಜಿಲ್ಲೆಗಳಲ್ಲಿ ನಾಗರಿಕರಿಗೆ, ಅಂತಾರಾಷ್ಟ್ರೀಯ ಗಡಿಯಲ್ಲಿರುವ ಗ್ರಾಮಗಳು ಮತ್ತು ನಿಯಂತ್ರಣದಲ್ಲಿರುವ ಪೂಂಚ್ ಮತ್ತು ರಾಜೌರಿ ಗ್ರಾಮಗಳಿಗೆ 416 ಕೋಟಿ ರೂ.ಗಳ ವೆಚ್ಚದಲ್ಲಿ 14,460 ಬಂಕರ್ ನಿರ್ಮಾಣಕ್ಕೆ ಕೇಂದ್ರವು ಅನುಮತಿ ನೀಡಿತ್ತು. ನಂತರ ಹೆಚ್ಚುವರಿ 4,000 ಬಂಕರ್‌ಗಳನ್ನು ಮಂಜೂರು ಮಾಡಲಾಯಿತು.

ಆದರೆ ಕೆಲಸ ನಿಧಾನವಾಗಿದೆ. ಭಾನುವಾರ ಲಭಿಸಿದ ಮಾಹಿತಿ ಪ್ರಕಾರ 6,964 ವೈಯಕ್ತಿಕ ಬಂಕರ್‌ಗಳು ಮತ್ತು 959 ಸಮುದಾಯ ಬಂಕರ್‌ಗಳು ಸೇರಿದಂತೆ ಇದುವರೆಗೆ ಕೇವಲ 7,923 ಬಂಕರ್‌ಗಳು ಮಾತ್ರ ಪೂರ್ಣಗೊಂಡಿವೆ. 9,905 ಬಂಕರ್‌ಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.

2016 ರಲ್ಲಿ ಭಾರತವು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್‌ ನಡೆಸಿದಾಗ ಪಂಜಾಬ್‌ನ ಆರು ಗಡಿ ಜಿಲ್ಲೆಗಳಲ್ಲಿ ಸುಮಾರು 1,000 ಗ್ರಾಮಗಳನ್ನು ಸ್ಥಳಾಂತರಿಸಬೇಕಾಯಿತು. 15 ಲಕ್ಷಕ್ಕೂ ಹೆಚ್ಚು ಜೀವಗಳು, ಅವರ ಜೀವನೋಪಾಯ (30,000 ಹೆಕ್ಟೇರ್ ನಿಂತಿರುವ ಬೆಳೆ), ಅವರ ಭವಿಷ್ಯ (ಶಾಲೆಗಳನ್ನು 10 ದಿನಗಳವರೆಗೆ ಮುಚ್ಚಲಾಯಿತು) ಈ ಸಮಯದ ತುರ್ತು ಆಗಿತ್ತು.

ಶೆಲ್ ದಾಳಿ ಮತ್ತು ಗಡಿಯಾಚೆಗಿನ ಗುಂಡಿನ ದಾಳಿಯಿಂದ ಸಾವನ್ನಪ್ಪುವ (ಅಥವಾ 50% ಕ್ಕಿಂತ ಹೆಚ್ಚು ಅಂಗವೈಕಲ್ಯದಿಂದ ಉಳಿದಿರುವ) ನಾಗರಿಕರ ಕುಟುಂಬಗಳಿಗೆ 5 ಲಕ್ಷ ರೂ. ನೀಡಲಾಗುತ್ತದೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ 9,905 ಬಂಕರ್‌ಗಳ ಕೆಲಸವೂ ಪ್ರಗತಿಯಲ್ಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಸಾಂಬಾದಲ್ಲಿ 1,592, ಜಮ್ಮುವಿನಲ್ಲಿ 1,228, ಕಥುವಾದಲ್ಲಿ 1,521, ರಾಜೌರಿಯಲ್ಲಿ 2,656 ಮತ್ತು ಪೂಂಚ್‌ನಲ್ಲಿ 926 ಬಂಕರ್‌ಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿರುವುದಾಗಿ   ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬಾಕಿ ಉಳಿದಿರುವ ಬಂಕರ್‌ಗಳ ಟೆಂಡರ್‌ ವಿಳಂಬದ ಬಗ್ಗೆ ಜಮ್ಮು ವಿಭಾಗೀಯ ಆಯುಕ್ತ ರಾಘವ್ ಲ್ಯಾಂಗರ್ ಗಮನ ಸೆಳೆದಿದ್ದು ಮತ್ತು ಬಂಕರ್‌ಗಳ ನಿರ್ಮಾಣಕ್ಕಾಗಿ ಟೆಂಡರ್‌ಗಳನ್ನು ಹೊಸದಾಗೀ ನೀಡುವಂತೆ ಸಂಬಂಧಪಟ್ಟ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು, ಇವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.

ಈಗಾಗಲೇ ಕಾರ್ಯರೂಪಕ್ಕೆ ಬಂದಿರುವ ಕೆಲಸವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ವಿಭಾಗೀಯ ಆಯುಕ್ತರು ಉಪ ಆಯುಕ್ತರಿಗೆ ನಿರ್ದೇಶನ ನೀಡಿದರೆ, ಕಾರ್ಯಗತಗೊಳಿಸುವ ಏಜೆನ್ಸಿಗಳಿಗೆ ಕೆಲಸದ ವೇಗವನ್ನು ತ್ವರಿತಗೊಳಿಸಲು ಮತ್ತು ಪೂರ್ಣಗೊಳ್ಳಲು ನಿಗದಿತ ಸಮಯವನ್ನು ಅನುಸರಿಸಲು ತಿಳಿಸಲಾಯಿತು.

ಇದನ್ನೂ ಓದಿ:  ರಾಜ್ಯದಲ್ಲಿ 18-44 ವಯೋಮಾನದ 8,606 ಜನರಿಗೆ ಮಾತ್ರ ಲಸಿಕೆ; ಕರ್ನಾಟಕಕ್ಕಿಂತ ಜಮ್ಮು ಕಾಶ್ಮೀರದಲ್ಲೇ ಹೆಚ್ಚು ಲಸಿಕೆ ವಿತರಣೆ

Published On - 12:25 pm, Mon, 7 June 21