AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರದ್ ಪವಾರ್ ಡಬಲ್ ಗೇಮ್ ಆಡಿದ್ದಾರೆ ಎಂದ ಫಡ್ನವಿಸ್; ಅವರಿಗೆ ಪ್ರಚಾರ ಬೇಕಿತ್ತು ಎಂದು ತಿರುಗೇಟು ನೀಡಿದ ಎನ್​​ಸಿಪಿ

ಅಜಿತ್ ಪವಾರ್ ಇನ್ನೇನು ಮಾಡಲು ಸಾಧ್ಯ? ನಾವು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದಂತೆ ಅವರು ನನ್ನೊಂದಿಗೆ ಬರಬೇಕಾಗಿತ್ತು. ನಾವು ಪ್ರಮಾಣ ವಚನ ಸ್ವೀಕರಿಸಿದ್ದೇವೆ, ನಾವು ಹಲವಾರು ಸಭೆಗಳನ್ನು ನಡೆಸಿದ್ದರಿಂದ ಪವಾರ್ ಸಾಹಬ್ ನಮ್ಮೊಂದಿಗೆ ಇರುತ್ತಾರೆ ಎಂದು ಅಜಿತ್ ಪವಾರ್ ಯೋಚಿಸುತ್ತಿದ್ದರು

ಶರದ್ ಪವಾರ್ ಡಬಲ್ ಗೇಮ್ ಆಡಿದ್ದಾರೆ ಎಂದ ಫಡ್ನವಿಸ್; ಅವರಿಗೆ ಪ್ರಚಾರ ಬೇಕಿತ್ತು ಎಂದು ತಿರುಗೇಟು ನೀಡಿದ ಎನ್​​ಸಿಪಿ
ದೇವೇಂದ್ರ ಫಡ್ನವಿಸ್
ರಶ್ಮಿ ಕಲ್ಲಕಟ್ಟ
|

Updated on:Jun 29, 2023 | 2:33 PM

Share

ಮಹಾರಾಷ್ಟ್ರದ(Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಬುಧವಾರ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, 2019 ರಲ್ಲಿ ಬಿಜೆಪಿ-ಎನ್‌ಸಿಪಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಮತ್ತು ಅಜಿತ್ ಪವಾರ್ (Ajit Pawar) ಉಪ ಮುಖ್ಯಮಂತ್ರಿಯಾಗಿದ್ದರು.  ನವೆಂಬರ್ 23 ರಂದು ಪ್ರಮಾಣವಚನ ನಡೆಯಬೇಕಿತ್ತು. ಇದಕ್ಕಿಂತ ಮೂರು ನಾಲ್ಕು ದಿನಗಳ ಮುಂಚೆ ಶರದ್ ಪವಾರ್  ಹಿಂದೆ ಸರಿದರು ಹೇಳಿದ್ದಾರೆ.ಏತನ್ಮಧ್ಯೆ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, ಫಡ್ನವಿಸ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಇದೀಗ ಫಡ್ನವೀಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದು, ಶರದ್ ಪವಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ರಿಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫಡ್ನವಿಸ್, ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸುವುದು ಅವರ ಮಾವ ಶರದ್ ಪವಾರ್ ಅವರ ಒಪ್ಪಿಗೆಯ ನಂತರವೇ ಎಂದು ಹೇಳಿದ್ದಾರೆ. ನೀವು ಶರದ್ ಪವಾರ್ ಅವರ ರಹಸ್ಯವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ನೀವು ಅವರ ಇತಿಹಾಸವನ್ನು ಪರಿಶೀಲಿಸಬೇಕು ಎಂದಿದ್ದಾರೆ ಫಡ್ನವಿಸ್. ಸಿಎಂ ಕುರ್ಚಿ ಅವರನ್ನು ಕೈಬೀಸಿ ಕರೆಯುತ್ತಿದೆ ಎಂದು ಉದ್ಧವ್ ಜೀ ನಮ್ಮ ಕರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರು.

ಉದ್ಧವ್ ಜಿ ನಮ್ಮ ಕರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಅವರು ಸಿಎಂ ಕುರ್ಚಿಯ ಹಿಂದೆ ಬಿದ್ದಿದ್ದಾರೆ. ಅವರು ನಮ್ಮತ್ತ ಬರುವುದಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಂಡೆವು. ಆ ಸಮಯದಲ್ಲಿ, ಕೆಲವು ಎನ್‌ಸಿಪಿ ಜನರು ಎನ್‌ಸಿಪಿ ಪಕ್ಷ ನಮ್ಮೊಂದಿಗೆ ಬರಲು ಬಯಸುತ್ತಿದೆ ಎಂದು ಹೇಳಿದರು. ನಾನು ಇದನ್ನು ಒತ್ತಿಹೇಳಲು ಬಯಸುತ್ತೇನೆ. ಶರದ್ ಪವಾರ್ ಅವರನ್ನು ಭೇಟಿ ಮಾಡಿ ಬಿಜೆಪಿ ಮತ್ತು ಎನ್‌ಸಿಪಿ ಸರ್ಕಾರ ರಚಿಸುವುದು ಎಂದು ನಿರ್ಧರಿಸಲಾಯಿತು. ಅಜಿತ್ ಪವಾರ್ ಮತ್ತು ನಾನು ಸರ್ಕಾರದ ನೇತೃತ್ವ ವಹಿಸುತ್ತೇವೆ ಎಂದು ನಿರ್ಧರಿಸಲಾಯಿತು. ಆದರೆ ಇದ್ದಕ್ಕಿದ್ದಂತೆ ಪವಾರ್ ಸಾಹಬ್ ಹಿಂದೆ ಸರಿದರು ಎಂದು ಫಡ್ನವಿಸ್ ಹೇಳಿದ್ದಾರೆ.

ಇದನ್ನೂ ಓದಿ:Manipur Violence: ಮಣಿಪುರದ ಹಿಂಸಾಚಾರ ಸ್ಥಳಕ್ಕೆ ರಾಹುಲ್​​ ಭೇಟಿ, ಬೆಂಗಾವಲು ಪಡೆ ವಾಹನ ತಡೆದ ಪೊಲೀಸರು

ಅಜಿತ್ ಪವಾರ್​​ಗೆ ಬೇರೆ ದಾರಿ ಇರಲಿಲ್ಲ

ಅಜಿತ್ ಪವಾರ್ ಇನ್ನೇನು ಮಾಡಲು ಸಾಧ್ಯ? ನಾವು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದಂತೆ ಅವರು ನನ್ನೊಂದಿಗೆ ಬರಬೇಕಾಗಿತ್ತು. ನಾವು ಪ್ರಮಾಣ ವಚನ ಸ್ವೀಕರಿಸಿದ್ದೇವೆ, ನಾವು ಹಲವಾರು ಸಭೆಗಳನ್ನು ನಡೆಸಿದ್ದರಿಂದ ಪವಾರ್ ಸಾಹಬ್ ನಮ್ಮೊಂದಿಗೆ ಇರುತ್ತಾರೆ ಎಂದು ಅಜಿತ್ ಪವಾರ್ ಯೋಚಿಸುತ್ತಿದ್ದರು. ನಾನು ಆ ಸಮಯದಲ್ಲಿ ಶರದ್ ಪವಾರ್ ಅವರೇ ಸರ್ಕಾರ ರಚನೆಗೆ ನೇತೃತ್ವ ವಹಿಸಿದರು ಎಂದು ಪುನರುಚ್ಚರಿಸುತ್ತೇನೆ.

ಇದನ್ನೂ ಓದಿ: ರಾತ್ರಿ ಹೊತ್ತು ಭಯೋತ್ಪಾದನೆ, ಹಗಲು ವ್ಯಾಪಾರ: ಪಾಕಿಸ್ತಾನ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ವಾಗ್ದಾಳಿ

ಉದ್ಧವ್ ದ್ರೋಹ ಮಾಡಿದ್ರು, ಶರದ್ ಪವಾರ್ ಡಬಲ್ ಗೇಮ್ ಆಡಿದ್ರು

ಶರದ್ ಪವಾರ್ ಅವರ ಕ್ರಮವನ್ನು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳುವುದಿಲ್ಲ ಎಂದ ಫಡ್ನವಿಸ್,  ಅವರು ಡಬಲ್ ಗೇಮ್ ಆಡಿದ್ದಾರೆ.ಅದೇ ವೇಳೆ ಉದ್ಧವ್ ನಮಗೆ ದ್ರೋಹ ಮಾಡಿದರು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 29 June 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ