AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್​ ಇಂಗ್ಲಿಷ್​​ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ

ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್​ ಹಿಂದೆಯೇ ಸಚಿವ ರಾಮದಾಸ್​ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್​ ಟ್ವೀಟ್ ಮಾಡಿದ್ದಾರೆ.

ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್​ ಇಂಗ್ಲಿಷ್​​ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ
ಶಶಿ ತರೂರ್ ಮತ್ತು ರಾಮದಾಸ್​ ಅಠಾವಳೆ
TV9 Web
| Edited By: |

Updated on: Feb 13, 2022 | 9:36 AM

Share

ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor)​ ಅವರಿಗೆ ಇಂಗ್ಲಿಷ್ ಭಾಷೆ ಮೇಲೆ ಅಪಾರ ಹಿಡಿತವಿದೆ. ಹೊಸ ಶಬ್ದಗಳನ್ನು ಪರಿಚಯಿಸುತ್ತಾರೆ. ಇಂಗ್ಲಿಷ್​​ನಲ್ಲಿ ಅಗಾಧ ಪಾಂಡಿತ್ಯ ಹೊಂದಿರುವವರು ಎಂದೇ ಖ್ಯಾತರಾಗಿದ್ದಾರೆ.  ಆದರೆ ಅಂಥ ಶಶಿ ತರೂರ್​ ಕೂಡ ಇಂಗ್ಲಿಷ್​ನಲ್ಲಿ ಈಗ ತಪ್ಪು ಮಾಡಿದ್ದಾರೆ ಮತ್ತು ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆ (Ramdas Athawale)ಅದನ್ನು ತಿದ್ದಿದ್ದಾರೆ.  ಅಷ್ಟಕ್ಕೂ ಇದೆಲ್ಲ ಆಗಿದ್ದು, ರಾಜಕೀಯ ಸಂಘರ್ಷದಲ್ಲಿ.  

ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್​ ಭಾರತದ ಆರ್ಥಿಕತೆ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್​ ಹಿಂದೆಯೇ ಸಚಿವ ರಾಮದಾಸ್​ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್​ ಟ್ವೀಟ್ ಮಾಡಿಕೊಂಡಿದ್ದು, ಅದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾತುಗಳನ್ನು ಸ್ವತಃ ಅಠಾವಳೆಯವರೇ ನಂಬುತ್ತಿಲ್ಲ ಎಂದು ಕ್ಯಾಪ್ಷನ್​ ಕೊಟ್ಟಿದ್ದರು. Nearly two-hour rely to the Bydget debate. The stunned and incredulous expression on Minister Ramdas Athawale’s face says it all: even the Treasury benches can’t believe FinMin Nirmala Sitharaman’s claims about the economy and her Budget! ಎಂದು ಇಂಗ್ಲಿಷ್​​ನಲ್ಲಿ ಟ್ವೀಟ್​ ಮಾಡಿದ್ದರು. ಇದರ ಅರ್ಥ ಬಜೆಟ್​​ ಡಿಬೇಟ್​​ನಲ್ಲಿ ನಿರ್ಮಲಾ ಸೀತಾರಾಮನ್​ ಅವರು ಸುಮಾರು ಎರಡು ತಾಸುಗಳ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಅಠಾವಳೆಯವರ ಮುಖದ ಮೇಲೆ ಮೂಡಿದ ದಿಗ್ಭ್ರಮೆ ಮತ್ತು ಅಪನಂಬಿಕೆಯೆಂಬ ಭಾವ ಎಲ್ಲವನ್ನೂ ಹೇಳುತ್ತಿದೆ. ಸಂಸತ್ತಿನಲ್ಲಿ ಮುಂದೆ ಕುಳಿತುಕೊಳ್ಳುವ ಸಚಿವರೂ ಕೂಡ ನಿರ್ಮಲಾ ಸೀತಾರಾಮನ್​​ರ ಬಜೆಟ್​ ಮತ್ತು ಆರ್ಥಿಕತೆಯ ಮೇಲಿನ ಅವರ ಪ್ರತಿಪಾದನೆಯನ್ನು ನಂಬುತ್ತಿಲ್ಲ ಎಂದು ಶಶಿ ತರೂರ್​ ಹೇಳಿದ್ದಾರೆ.

ಆದರೆ ಶಶಿ ತರೂರ್​ ಟ್ವೀಟ್​​ನಲ್ಲಿ ತಪ್ಪಿದೆ ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ. ಅಷ್ಟೇ ಅಲ್ಲ ಅದನ್ನು ತಿದ್ದುವ ಪ್ರಯತ್ನವನ್ನೂ ಮಾಡಿದ್ದಾರೆ. ಶಶಿ ತರೂರ್​ ಜೀ, ಅನಗತ್ಯ ಹೇಳಿಕೆಗಳು, ಪ್ರತಿಪಾದನೆಗಳನ್ನು ಮಾಡುವಾಗ ತಪ್ಪಾಗುವುದು ಹೆಚ್ಚು ಎಂದು ದೊಡ್ಡವರು ಹೇಳುತ್ತಾರೆ. ಹಾಗೇ, ನೀವು ಮಾಡಿದ ಟ್ವೀಟ್​​ನಲ್ಲಿ Bydget ಎಂದು ಬರೆದಿದ್ದೀರಿ, ಆದರೆ ಅದು BUDGET. ಹಾಗೇ, ಇನ್ನೊಂದೆಡೆ rely ಎಂದು ಬರೆದುಕೊಂಡಿದ್ದೀರಿ, ಅದು Reply ಎಂಬುದು ಸರಿಯಾದ ಪ್ರಯೋಗ. ಇರಲಿ ಬಿಡಿ, ನಾವು ಅರ್ಥ ಮಾಡಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು