AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್​ ಇಂಗ್ಲಿಷ್​​ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ

ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್​ ಹಿಂದೆಯೇ ಸಚಿವ ರಾಮದಾಸ್​ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್​ ಟ್ವೀಟ್ ಮಾಡಿದ್ದಾರೆ.

ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್​ ಇಂಗ್ಲಿಷ್​​ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ
ಶಶಿ ತರೂರ್ ಮತ್ತು ರಾಮದಾಸ್​ ಅಠಾವಳೆ
TV9 Web
| Edited By: |

Updated on: Feb 13, 2022 | 9:36 AM

Share

ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor)​ ಅವರಿಗೆ ಇಂಗ್ಲಿಷ್ ಭಾಷೆ ಮೇಲೆ ಅಪಾರ ಹಿಡಿತವಿದೆ. ಹೊಸ ಶಬ್ದಗಳನ್ನು ಪರಿಚಯಿಸುತ್ತಾರೆ. ಇಂಗ್ಲಿಷ್​​ನಲ್ಲಿ ಅಗಾಧ ಪಾಂಡಿತ್ಯ ಹೊಂದಿರುವವರು ಎಂದೇ ಖ್ಯಾತರಾಗಿದ್ದಾರೆ.  ಆದರೆ ಅಂಥ ಶಶಿ ತರೂರ್​ ಕೂಡ ಇಂಗ್ಲಿಷ್​ನಲ್ಲಿ ಈಗ ತಪ್ಪು ಮಾಡಿದ್ದಾರೆ ಮತ್ತು ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆ (Ramdas Athawale)ಅದನ್ನು ತಿದ್ದಿದ್ದಾರೆ.  ಅಷ್ಟಕ್ಕೂ ಇದೆಲ್ಲ ಆಗಿದ್ದು, ರಾಜಕೀಯ ಸಂಘರ್ಷದಲ್ಲಿ.  

ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್​ ಭಾರತದ ಆರ್ಥಿಕತೆ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್​ ಹಿಂದೆಯೇ ಸಚಿವ ರಾಮದಾಸ್​ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್​ ಟ್ವೀಟ್ ಮಾಡಿಕೊಂಡಿದ್ದು, ಅದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾತುಗಳನ್ನು ಸ್ವತಃ ಅಠಾವಳೆಯವರೇ ನಂಬುತ್ತಿಲ್ಲ ಎಂದು ಕ್ಯಾಪ್ಷನ್​ ಕೊಟ್ಟಿದ್ದರು. Nearly two-hour rely to the Bydget debate. The stunned and incredulous expression on Minister Ramdas Athawale’s face says it all: even the Treasury benches can’t believe FinMin Nirmala Sitharaman’s claims about the economy and her Budget! ಎಂದು ಇಂಗ್ಲಿಷ್​​ನಲ್ಲಿ ಟ್ವೀಟ್​ ಮಾಡಿದ್ದರು. ಇದರ ಅರ್ಥ ಬಜೆಟ್​​ ಡಿಬೇಟ್​​ನಲ್ಲಿ ನಿರ್ಮಲಾ ಸೀತಾರಾಮನ್​ ಅವರು ಸುಮಾರು ಎರಡು ತಾಸುಗಳ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಅಠಾವಳೆಯವರ ಮುಖದ ಮೇಲೆ ಮೂಡಿದ ದಿಗ್ಭ್ರಮೆ ಮತ್ತು ಅಪನಂಬಿಕೆಯೆಂಬ ಭಾವ ಎಲ್ಲವನ್ನೂ ಹೇಳುತ್ತಿದೆ. ಸಂಸತ್ತಿನಲ್ಲಿ ಮುಂದೆ ಕುಳಿತುಕೊಳ್ಳುವ ಸಚಿವರೂ ಕೂಡ ನಿರ್ಮಲಾ ಸೀತಾರಾಮನ್​​ರ ಬಜೆಟ್​ ಮತ್ತು ಆರ್ಥಿಕತೆಯ ಮೇಲಿನ ಅವರ ಪ್ರತಿಪಾದನೆಯನ್ನು ನಂಬುತ್ತಿಲ್ಲ ಎಂದು ಶಶಿ ತರೂರ್​ ಹೇಳಿದ್ದಾರೆ.

ಆದರೆ ಶಶಿ ತರೂರ್​ ಟ್ವೀಟ್​​ನಲ್ಲಿ ತಪ್ಪಿದೆ ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ. ಅಷ್ಟೇ ಅಲ್ಲ ಅದನ್ನು ತಿದ್ದುವ ಪ್ರಯತ್ನವನ್ನೂ ಮಾಡಿದ್ದಾರೆ. ಶಶಿ ತರೂರ್​ ಜೀ, ಅನಗತ್ಯ ಹೇಳಿಕೆಗಳು, ಪ್ರತಿಪಾದನೆಗಳನ್ನು ಮಾಡುವಾಗ ತಪ್ಪಾಗುವುದು ಹೆಚ್ಚು ಎಂದು ದೊಡ್ಡವರು ಹೇಳುತ್ತಾರೆ. ಹಾಗೇ, ನೀವು ಮಾಡಿದ ಟ್ವೀಟ್​​ನಲ್ಲಿ Bydget ಎಂದು ಬರೆದಿದ್ದೀರಿ, ಆದರೆ ಅದು BUDGET. ಹಾಗೇ, ಇನ್ನೊಂದೆಡೆ rely ಎಂದು ಬರೆದುಕೊಂಡಿದ್ದೀರಿ, ಅದು Reply ಎಂಬುದು ಸರಿಯಾದ ಪ್ರಯೋಗ. ಇರಲಿ ಬಿಡಿ, ನಾವು ಅರ್ಥ ಮಾಡಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು